ಪತ್ನಿಗೆ ಲೋಕ ಸಭಾ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಶಾಸಕ
ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಘೋಷಣೆಯಾದ 2ನೇ ದಿನಕ್ಕೆ ರಾಜೀನಾಮೆ
ಪತ್ನಿಗಾಗಿ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಬಿಗ್ ಶಾಕ್ ಕೊಟ್ಟ ಶಾಸಕ
ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದ್ದೇ ತಡ ಸದ್ಯ ಪಕ್ಷಗಳಲ್ಲಿ ನಾನಾ ಸರ್ಕಸ್ಗಳು ನಡೆಯುತ್ತಿವೆ. ಕೆಲವು ರಾಜಕಾರಣಿಗಳ ಪಕ್ಷ ಪರ್ಯಟನೆ ಮಾಡಿದರೆ, ಮತ್ತೊಂದೆಡೆ ಮಗನಿಗೆ ಸೀಟು ಸಿಕ್ಕಿಲ್ಲ, ಮಗಳಿಗೆ ಸೀಟು ಸಿಕ್ಕಿಲ್ಲ ಎಂದು ಬಂಡಾಯವೆದ್ದ ಘಟನೆಯು ಕಣ್ಣು ಮುಂದಿದೆ. ಇದೀಗ ಅಸ್ಸಾಂ ಲಖಿಂಪುರ ಜಿಲ್ಲೆಯ ನೌಬೋಯಿಜಾನ ಕಾಂಗ್ರೆಸ್ ಶಾಸಕರೊಬ್ಬರು ಪತ್ನಿಗೆ ಸೀಟು ಸಿಕ್ಕಿವೆಂದು ಪಕ್ಷಕ್ಕೆ ರಾಜೀನಾಮೆ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಶಾಸಕ ಭರತ್ ಚಂದ್ರ ನಾರಾ ತನ್ನ ಪತ್ನಿ ರಾಣಿ ನಾರಾಗೆ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಸೀಟು ನೀಡಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಲಖಿಂಪುರ ಲೋಕಸಭಾ ಕ್ಷೇತ್ರಕ್ಕೆ ಉದಯ್ ಶಂಕರ್ ಹಜಾರಿಕಾ ಅವರನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದ 2 ದಿನಗಳ ನಂತರ ಭರತ್ ಚಂದ್ರ ನಾರಾ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:VIDEO: ತೊಡೆ ಮೇಲೆ ಲ್ಯಾಪ್ಟಾಪ್ ಇರಿಸಿ ಸ್ಕೂಟರ್ ಸವಾರಿ ಮಾಡ್ತಿರೋ ಉದ್ಯೋಗಿ! ಇಂದು ಬೆಂಗಳೂರಿನ ಘಟನೆಯೇ?
ರಾಣಿ ನಾರಾ ಮಾಜಿ ಕೇಂದ್ರ ಸಚಿವೆಯಾಗಿದ್ದು, ಪತಿ ಭರತ್ ಚಂದ್ರ ನಾರಾ ಈ ಬಾರಿ ಅವರಿಗೆ ಸೀಟು ಸಿಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಸೀಟು ವಂಚಿತರಾದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಅದರಲ್ಲಿ ‘ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪತ್ನಿಗೆ ಲೋಕ ಸಭಾ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಶಾಸಕ
ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಘೋಷಣೆಯಾದ 2ನೇ ದಿನಕ್ಕೆ ರಾಜೀನಾಮೆ
ಪತ್ನಿಗಾಗಿ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಬಿಗ್ ಶಾಕ್ ಕೊಟ್ಟ ಶಾಸಕ
ಲೋಕಸಭಾ ಚುನಾವಣೆಯ ದಿನಾಂಕ ನಿಗದಿಯಾಗಿದ್ದೇ ತಡ ಸದ್ಯ ಪಕ್ಷಗಳಲ್ಲಿ ನಾನಾ ಸರ್ಕಸ್ಗಳು ನಡೆಯುತ್ತಿವೆ. ಕೆಲವು ರಾಜಕಾರಣಿಗಳ ಪಕ್ಷ ಪರ್ಯಟನೆ ಮಾಡಿದರೆ, ಮತ್ತೊಂದೆಡೆ ಮಗನಿಗೆ ಸೀಟು ಸಿಕ್ಕಿಲ್ಲ, ಮಗಳಿಗೆ ಸೀಟು ಸಿಕ್ಕಿಲ್ಲ ಎಂದು ಬಂಡಾಯವೆದ್ದ ಘಟನೆಯು ಕಣ್ಣು ಮುಂದಿದೆ. ಇದೀಗ ಅಸ್ಸಾಂ ಲಖಿಂಪುರ ಜಿಲ್ಲೆಯ ನೌಬೋಯಿಜಾನ ಕಾಂಗ್ರೆಸ್ ಶಾಸಕರೊಬ್ಬರು ಪತ್ನಿಗೆ ಸೀಟು ಸಿಕ್ಕಿವೆಂದು ಪಕ್ಷಕ್ಕೆ ರಾಜೀನಾಮೆ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಶಾಸಕ ಭರತ್ ಚಂದ್ರ ನಾರಾ ತನ್ನ ಪತ್ನಿ ರಾಣಿ ನಾರಾಗೆ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಸೀಟು ನೀಡಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಲಖಿಂಪುರ ಲೋಕಸಭಾ ಕ್ಷೇತ್ರಕ್ಕೆ ಉದಯ್ ಶಂಕರ್ ಹಜಾರಿಕಾ ಅವರನ್ನು ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದ 2 ದಿನಗಳ ನಂತರ ಭರತ್ ಚಂದ್ರ ನಾರಾ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:VIDEO: ತೊಡೆ ಮೇಲೆ ಲ್ಯಾಪ್ಟಾಪ್ ಇರಿಸಿ ಸ್ಕೂಟರ್ ಸವಾರಿ ಮಾಡ್ತಿರೋ ಉದ್ಯೋಗಿ! ಇಂದು ಬೆಂಗಳೂರಿನ ಘಟನೆಯೇ?
ರಾಣಿ ನಾರಾ ಮಾಜಿ ಕೇಂದ್ರ ಸಚಿವೆಯಾಗಿದ್ದು, ಪತಿ ಭರತ್ ಚಂದ್ರ ನಾರಾ ಈ ಬಾರಿ ಅವರಿಗೆ ಸೀಟು ಸಿಗಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಸೀಟು ವಂಚಿತರಾದ ಬಳಿಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಅದರಲ್ಲಿ ‘ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ