newsfirstkannada.com

VIDEOS: ಮದುವೆ ದಿಬ್ಬಣದಂದು ವರನ ಮೇಲೆ ಆ್ಯಸಿಡ್​ ದಾಳಿ.. ಪ್ರಿಯತಮೆಯನ್ನು ಥಳಿಸಿ, ಮೆರವಣಿಗೆ ಮಾಡಿದ ಸಂಬಂಧಿಕರು

Share :

Published April 25, 2024 at 9:29am

Update April 25, 2024 at 9:37am

    ವಧುನಿಂದ ಸಿಂಗಾರಗೊಂಡು ವರನ ಬಳಿ ಬಂದ ಲವ್ವರ್​

    ನೀನು ನನ್ನ ಗೆಳತಿ ಎಂದಿದ್ದಕ್ಕೆ ಆ್ಯಸಿಡ್ ಎರಚಿದ ಪ್ರಿಯತಮೆ​

    ಯುವತಿಯನ್ನು ಮೆರವಣಿಗೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​

ಮದುವೆ ಮೆರವಣಿಗೆ ವೇಳೆ ಪ್ರಿಯತಮೆಯೊಬ್ಬಳು ವರನ ಮೇಲೆ ಆ್ಯಸಿಡ್​​ ಎರಚಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬೆಳಕಿಗೆ ಬಂದಿದೆ. ವರನ ಸಂಬಂಧಿಕರು ಯುವತಿಯನ್ನು ಕೂಡಲೇ ಹಿಡಿದು ಆಕೆಗೆ ಸರಿಯಾಗಿ ಥಳಿಸಿದ್ದಾರೆ.

ಬಲ್ಲಿಯಾದಲ್ಲಿರುವ ದುಮರಿ ಗ್ರಾಮದಲ್ಲಿ ಮಂಗಳವಾರ ರಾಕೇಶ್​ ಬಿಂದ್​ ಎಂಬ ವರನ ಮದುವೆ ಮೆರವಣೆಗೆ ನಡೆಯುತ್ತಿತ್ತು. ಈ ವೇಳೆ ಆತನ ಲವ್ವರ್​ ವಧುವಿನಂತೆ ಸಿಂಗಾರಗೊಂಡು ಮೆರವಣಿಗೆ ಹೋಗುತ್ತಿದ್ದ ವರನ ಬಳಿ ಬಂದಿದ್ದಾಳೆ.

ಬಳಿಕ ಯುವತಿ ರಾಕೇಶ್​ ತನ್ನವನು. ಆತನನ್ನು ಯಾರಿಂದ ದೂರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಆದರೆ ಇದನ್ನು ಕೇಳಲು ರಾಕೇಶ್​ ನಿರಾಕರಿಸಿದ್ದಾನೆ. ನೀನು ನನ್ನ ಸ್ನೇಹಿತೆ ಎಂದಿದ್ದಾನೆ. ಅದಕ್ಕೆ ಯುವತಿ ತನ್ನ ಕೈಯಲ್ಲಿದ್ದ ಆ್ಯಸಿಡ್​ ಬಾಟಲಿಯಿಂದ ಆತನ ಮೇಲೆ ದಾಳಿ ನಡೆಸಿದ್ದಾಳೆ. ಪರಿಣಾಮ ಈ ದಾಳಿಯಿಂದ ವರನಿಗೆ ಸುಟ್ಟ ಗಾಯಗಳಾಗಿವೆ. ವರನ ಹತ್ತಿರವಿದ್ದ ಮೂವರು ಮಹಿಳೆಯರಿಗೂ ಕೂಡ ಇದರಿಂದ ಗಾಯಗಳಾಗಿವೆ.

 

ಯುವತಿಯನ್ನು ಕೂಡಲೇ ಬಂಧಿಸಿದ ರಾಕೇಶ್​​ ಸಂಬಂಧಿಕರು ಆಕೆಗೆ ಸರಿಯಾಗಿ ಥಳಿಸಿದ್ದಾರೆ. ಬಳಿಕ ಯುವತಿಯನ್ನು ಮೆರವಣಿಗೆ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.

ಇದನ್ನೂ ಓದಿ: ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಮಹಿಳೆ.. ಬೆಟ್ಟದಿಂದ ಬಿದ್ದು ಸಾವು

 

 

ಅತ್ತ ಆ್ಯಸಿಡ್​​ ದಾಳಿಯಿಂದ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ನಂತರ ವರನು ಮದುವೆ ಮನೆಗೆ ತೆರಳಿ ವಧುವಿಗೆ ತಾಳಿಕಟ್ಟಿದ್ದಾನೆ.

ಇನ್ನು ಯುವತಿಯ ಆ್ಯಸಿಡ್​ ದಾಳಿ ಖಂಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ವಿಚಾರಣೆ ನಡೆಸುತ್ತಿದ್ದಾರೆ. ಸೆಕ್ಷನ್​ 326 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEOS: ಮದುವೆ ದಿಬ್ಬಣದಂದು ವರನ ಮೇಲೆ ಆ್ಯಸಿಡ್​ ದಾಳಿ.. ಪ್ರಿಯತಮೆಯನ್ನು ಥಳಿಸಿ, ಮೆರವಣಿಗೆ ಮಾಡಿದ ಸಂಬಂಧಿಕರು

https://newsfirstlive.com/wp-content/uploads/2024/04/Acid-Attack.jpg

    ವಧುನಿಂದ ಸಿಂಗಾರಗೊಂಡು ವರನ ಬಳಿ ಬಂದ ಲವ್ವರ್​

    ನೀನು ನನ್ನ ಗೆಳತಿ ಎಂದಿದ್ದಕ್ಕೆ ಆ್ಯಸಿಡ್ ಎರಚಿದ ಪ್ರಿಯತಮೆ​

    ಯುವತಿಯನ್ನು ಮೆರವಣಿಗೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​

ಮದುವೆ ಮೆರವಣಿಗೆ ವೇಳೆ ಪ್ರಿಯತಮೆಯೊಬ್ಬಳು ವರನ ಮೇಲೆ ಆ್ಯಸಿಡ್​​ ಎರಚಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬೆಳಕಿಗೆ ಬಂದಿದೆ. ವರನ ಸಂಬಂಧಿಕರು ಯುವತಿಯನ್ನು ಕೂಡಲೇ ಹಿಡಿದು ಆಕೆಗೆ ಸರಿಯಾಗಿ ಥಳಿಸಿದ್ದಾರೆ.

ಬಲ್ಲಿಯಾದಲ್ಲಿರುವ ದುಮರಿ ಗ್ರಾಮದಲ್ಲಿ ಮಂಗಳವಾರ ರಾಕೇಶ್​ ಬಿಂದ್​ ಎಂಬ ವರನ ಮದುವೆ ಮೆರವಣೆಗೆ ನಡೆಯುತ್ತಿತ್ತು. ಈ ವೇಳೆ ಆತನ ಲವ್ವರ್​ ವಧುವಿನಂತೆ ಸಿಂಗಾರಗೊಂಡು ಮೆರವಣಿಗೆ ಹೋಗುತ್ತಿದ್ದ ವರನ ಬಳಿ ಬಂದಿದ್ದಾಳೆ.

ಬಳಿಕ ಯುವತಿ ರಾಕೇಶ್​ ತನ್ನವನು. ಆತನನ್ನು ಯಾರಿಂದ ದೂರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಆದರೆ ಇದನ್ನು ಕೇಳಲು ರಾಕೇಶ್​ ನಿರಾಕರಿಸಿದ್ದಾನೆ. ನೀನು ನನ್ನ ಸ್ನೇಹಿತೆ ಎಂದಿದ್ದಾನೆ. ಅದಕ್ಕೆ ಯುವತಿ ತನ್ನ ಕೈಯಲ್ಲಿದ್ದ ಆ್ಯಸಿಡ್​ ಬಾಟಲಿಯಿಂದ ಆತನ ಮೇಲೆ ದಾಳಿ ನಡೆಸಿದ್ದಾಳೆ. ಪರಿಣಾಮ ಈ ದಾಳಿಯಿಂದ ವರನಿಗೆ ಸುಟ್ಟ ಗಾಯಗಳಾಗಿವೆ. ವರನ ಹತ್ತಿರವಿದ್ದ ಮೂವರು ಮಹಿಳೆಯರಿಗೂ ಕೂಡ ಇದರಿಂದ ಗಾಯಗಳಾಗಿವೆ.

 

ಯುವತಿಯನ್ನು ಕೂಡಲೇ ಬಂಧಿಸಿದ ರಾಕೇಶ್​​ ಸಂಬಂಧಿಕರು ಆಕೆಗೆ ಸರಿಯಾಗಿ ಥಳಿಸಿದ್ದಾರೆ. ಬಳಿಕ ಯುವತಿಯನ್ನು ಮೆರವಣಿಗೆ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.

ಇದನ್ನೂ ಓದಿ: ಕೋತಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಮಹಿಳೆ.. ಬೆಟ್ಟದಿಂದ ಬಿದ್ದು ಸಾವು

 

 

ಅತ್ತ ಆ್ಯಸಿಡ್​​ ದಾಳಿಯಿಂದ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ನಂತರ ವರನು ಮದುವೆ ಮನೆಗೆ ತೆರಳಿ ವಧುವಿಗೆ ತಾಳಿಕಟ್ಟಿದ್ದಾನೆ.

ಇನ್ನು ಯುವತಿಯ ಆ್ಯಸಿಡ್​ ದಾಳಿ ಖಂಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ವಿಚಾರಣೆ ನಡೆಸುತ್ತಿದ್ದಾರೆ. ಸೆಕ್ಷನ್​ 326 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More