ನಿಜವಾಗಿಯೂ ಕೆ.ಎಲ್.ರಾಹುಲ್ ಕ್ಯಾಪ್ಟನ್ಸಿ ತೊರೆಯುತ್ತಾರಾ?
ಗೋಯೆಂಕಾ ಕಿತ್ತಾಡಿದ ನಂತರ ಹೆಚ್ಚಾದ ಕ್ಯಾಪ್ಟನ್ಸಿ ವಿಚಾರ
LSGಗೆ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನ
ಐಪಿಎಲ್-2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕಳಪೆ ಪ್ರದರ್ಶನ ನೀಡ್ತಿದೆ. ಮೊನ್ನೆ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ 10 ವಿಕೆಟ್ಗಳಿಂದ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 165 ರನ್ ಗಳಿಸಿದ್ದು, ಉತ್ತರವಾಗಿ ಹೈದರಾಬಾದ್ ಕೇವಲ 9.4 ಓವರ್ಗಳಲ್ಲಿ ಗುರಿ ಮುಟ್ಟಿತು. ಈ ಹೀನಾಯ ಸೋಲಿನ ನಂತರ ನಾಯಕ ಕೆ.ಎಲ್.ರಾಹುಲ್ ಅವರನ್ನು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ. ಬೆನ್ನಲ್ಲೇ ನಾಯಕ ಕೆ.ಎಲ್.ರಾಹುಲ್ಗೆ ಫ್ರಾಂಚೈಸಿಯಿಂದ ಕೊಕ್ ನೀಡಲಾಗುತ್ತದೆ ಎಂದ ವದಂತಿ ಶುರುವಾಗಿದೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ಕೆ.ಎಲ್.ರಾಹುಲ್ಗೆ ಮುಂದಿನ ಎರಡು ಪಂದ್ಯಗಳಿಗೆ ಕೊಕ್ ನೀಡಿ, ವೆಸ್ಟ್ ವಿಂಡೀಸ್ ಪ್ರತಿಭೆ ನಿಕೊಲಸ್ ಪೂರನ್ಗೆ ಕ್ಯಾಪ್ಟನ್ಸಿ ನೀಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ವದಂತಿಯನ್ನು ಎಲ್ಎಸ್ಜಿ ತಂಡದ ಅಧಿಕಾರಿಯೊಬ್ಬರು ತಳ್ಳಿ ಹಾಕಿದ್ದಾರೆ. ನಮ್ಮ ಬಳಿ ಅಂತಹ ಯಾವುದೇ ಯೋಜನೆಗಳು ಇಲ್ಲ ಎಂದಿದ್ದಾರೆ.
ಎಲ್ಎಸ್ಜಿ ಅಧಿಕಾರಿ ಹೇಳಿದ್ದೇನು..?
ರಾಹುಲ್ ನಾಯಕ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ ಎಂಬ ಮಾಹಿತಿಯೇ ತಪ್ಪಿದೆ. ಈ ಸಮಯದಲ್ಲಿ ನಾವು ನಾಯಕನನ್ನು ತೆಗೆದು ಹಾಕುವ ಬಗ್ಗೆ ಯೋಚನೆ ಮಾಡಿಲ್ಲ. ಪ್ಲೇ-ಆಫ್ ತಲುಪಲು ನಮಗೆ ಇನ್ನೂ ಅವಕಾಶ ಇದೆ. ನಾವು ಅದರ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ನಾವು ಮುಂದಿನ ಪಂದ್ಯದ ಬಗ್ಗೆ ಯೋಚನೆ ಮಾಡುತ್ತಿದ್ದೇವೆಯೇ ಹೊರತು, ನಾಯಕನನ್ನು ಕೆಳಗೆ ಇಳಿಸುವ ಬಗ್ಗೆ ಅಲ್ಲ. ಆ ಪ್ರಶ್ನೆಯೇ ಬರುವುದಿಲ್ಲ.
ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್ ಟೇಬಲ್ ಏನಾಯ್ತು..?
ಹಾಗೆ ನೋಡಿದ್ರೆ ಕೆಲವು ತಂಡಗಳು 10 ಮತ್ತು 9ನೇ ಸ್ಥಾನದಲ್ಲಿವೆ. ಅವರು ಕೂಡ ನಾಯಕತ್ವ ಬದಲಾವಣೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಹಾಗಿದ್ದ ಮೇಲೆ ನಾವ್ಯಾಕೆ ಆ ಬಗ್ಗೆ ಯೋಚನೆ ಮಾಡಬೇಕು. ನಾವು ಆರನೇ ಸ್ಥಾನದಲ್ಲಿರುವ ಕಾರಣ ಪ್ಲೇ-ಆಫ್ಗೆ ಹೋಗಲು ಇನ್ನೂ ಅವಕಾಶ ಇದೆ. ಪ್ರತಿ ತಂಡಕ್ಕೆ ಕೆಟ್ಟ ದಿನ ಇದೆ. ನಾಯಕತ್ವವೂ ಕೆಟ್ಟದಾಗಲೂಬಹುದು. ಇದರ್ಥ ನಾಯಕತ್ವ ಬದಲಾವಣೆ ಮಾಡಬೇಕು ಎಂದಲ್ಲ ಅಂತಾ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ನಿಜವಾಗಿಯೂ ಕೆ.ಎಲ್.ರಾಹುಲ್ ಕ್ಯಾಪ್ಟನ್ಸಿ ತೊರೆಯುತ್ತಾರಾ?
ಗೋಯೆಂಕಾ ಕಿತ್ತಾಡಿದ ನಂತರ ಹೆಚ್ಚಾದ ಕ್ಯಾಪ್ಟನ್ಸಿ ವಿಚಾರ
LSGಗೆ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನ
ಐಪಿಎಲ್-2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕಳಪೆ ಪ್ರದರ್ಶನ ನೀಡ್ತಿದೆ. ಮೊನ್ನೆ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ 10 ವಿಕೆಟ್ಗಳಿಂದ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 165 ರನ್ ಗಳಿಸಿದ್ದು, ಉತ್ತರವಾಗಿ ಹೈದರಾಬಾದ್ ಕೇವಲ 9.4 ಓವರ್ಗಳಲ್ಲಿ ಗುರಿ ಮುಟ್ಟಿತು. ಈ ಹೀನಾಯ ಸೋಲಿನ ನಂತರ ನಾಯಕ ಕೆ.ಎಲ್.ರಾಹುಲ್ ಅವರನ್ನು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ. ಬೆನ್ನಲ್ಲೇ ನಾಯಕ ಕೆ.ಎಲ್.ರಾಹುಲ್ಗೆ ಫ್ರಾಂಚೈಸಿಯಿಂದ ಕೊಕ್ ನೀಡಲಾಗುತ್ತದೆ ಎಂದ ವದಂತಿ ಶುರುವಾಗಿದೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ಕೆ.ಎಲ್.ರಾಹುಲ್ಗೆ ಮುಂದಿನ ಎರಡು ಪಂದ್ಯಗಳಿಗೆ ಕೊಕ್ ನೀಡಿ, ವೆಸ್ಟ್ ವಿಂಡೀಸ್ ಪ್ರತಿಭೆ ನಿಕೊಲಸ್ ಪೂರನ್ಗೆ ಕ್ಯಾಪ್ಟನ್ಸಿ ನೀಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ವದಂತಿಯನ್ನು ಎಲ್ಎಸ್ಜಿ ತಂಡದ ಅಧಿಕಾರಿಯೊಬ್ಬರು ತಳ್ಳಿ ಹಾಕಿದ್ದಾರೆ. ನಮ್ಮ ಬಳಿ ಅಂತಹ ಯಾವುದೇ ಯೋಜನೆಗಳು ಇಲ್ಲ ಎಂದಿದ್ದಾರೆ.
ಎಲ್ಎಸ್ಜಿ ಅಧಿಕಾರಿ ಹೇಳಿದ್ದೇನು..?
ರಾಹುಲ್ ನಾಯಕ ಸ್ಥಾನದಿಂದ ಕೆಳಗೆ ಇಳಿಸಲಾಗುತ್ತದೆ ಎಂಬ ಮಾಹಿತಿಯೇ ತಪ್ಪಿದೆ. ಈ ಸಮಯದಲ್ಲಿ ನಾವು ನಾಯಕನನ್ನು ತೆಗೆದು ಹಾಕುವ ಬಗ್ಗೆ ಯೋಚನೆ ಮಾಡಿಲ್ಲ. ಪ್ಲೇ-ಆಫ್ ತಲುಪಲು ನಮಗೆ ಇನ್ನೂ ಅವಕಾಶ ಇದೆ. ನಾವು ಅದರ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ನಾವು ಮುಂದಿನ ಪಂದ್ಯದ ಬಗ್ಗೆ ಯೋಚನೆ ಮಾಡುತ್ತಿದ್ದೇವೆಯೇ ಹೊರತು, ನಾಯಕನನ್ನು ಕೆಳಗೆ ಇಳಿಸುವ ಬಗ್ಗೆ ಅಲ್ಲ. ಆ ಪ್ರಶ್ನೆಯೇ ಬರುವುದಿಲ್ಲ.
ಇದನ್ನೂ ಓದಿ:RCB ಪ್ಲೇ ಆಫ್ ಕನಸು.. ನಿನ್ನೆ ಪಂಜಾಬ್ ವಿರುದ್ಧ ಗೆದ್ದ ಮೇಲೆ ಪಾಯಿಂಟ್ಸ್ ಟೇಬಲ್ ಏನಾಯ್ತು..?
ಹಾಗೆ ನೋಡಿದ್ರೆ ಕೆಲವು ತಂಡಗಳು 10 ಮತ್ತು 9ನೇ ಸ್ಥಾನದಲ್ಲಿವೆ. ಅವರು ಕೂಡ ನಾಯಕತ್ವ ಬದಲಾವಣೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಹಾಗಿದ್ದ ಮೇಲೆ ನಾವ್ಯಾಕೆ ಆ ಬಗ್ಗೆ ಯೋಚನೆ ಮಾಡಬೇಕು. ನಾವು ಆರನೇ ಸ್ಥಾನದಲ್ಲಿರುವ ಕಾರಣ ಪ್ಲೇ-ಆಫ್ಗೆ ಹೋಗಲು ಇನ್ನೂ ಅವಕಾಶ ಇದೆ. ಪ್ರತಿ ತಂಡಕ್ಕೆ ಕೆಟ್ಟ ದಿನ ಇದೆ. ನಾಯಕತ್ವವೂ ಕೆಟ್ಟದಾಗಲೂಬಹುದು. ಇದರ್ಥ ನಾಯಕತ್ವ ಬದಲಾವಣೆ ಮಾಡಬೇಕು ಎಂದಲ್ಲ ಅಂತಾ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್