ಸಂತೋಷವಾಗಿ ಸಂಸಾರ ನಡೆಸುತ್ತಿದ್ದ ದಂಪತಿಗಳ ಮಧ್ಯೆ ಬಿರುಕು
ವಿರಾಜಪೇಟೆ ತಾಲೂಕಿನ ಬೆಟೋಳಿ ಗ್ರಾಮದಲ್ಲಿ ನಡೆದ ಘಟನೆ
18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಶಿಲ್ಪ, ಬೋಪಣ್ಣ
ಮಡಿಕೇರಿ: ಅದು ಒಂದು ಸುಂದರ ಕುಟುಂಬದಲ್ಲಿ ಗಂಡ ಹೆಂಡತಿ ಎರಡು ಮುದ್ದಾದ ಮಕ್ಕಳು ಯಾವುದಕ್ಕೂ ಕೊರತೆ ಇರಲಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಆ ಕುಟುಂಬದಲ್ಲಿ ಬಿರುಗಾಳಿ ಎದ್ದು ಪತಿಯೇ ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಪರಿಣಾಮ ಸ್ಥಳದಲ್ಲೇ ಹೆಂಡತಿ ಕೊನೆಯುಸಿರೆಳೆದಿದ್ದಾಳೆ. ಘನ ಘೋರ ಘಟನೆ ನಡೆದಿರೋದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬೆಟೋಳಿ ಎಂಬ ಗ್ರಾಮದಲ್ಲಿ.
ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ
ಗಂಡನಿಂದಲೇ ಕೊಲೆಯಾದ ಶಿಲ್ಪ ಸೀತಮ್ಮ (34). 18 ವರ್ಷದ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ರು. ಅದ್ಯಾಕೋ ಗೊತ್ತಿಲ್ಲ ಅವರ ಕುಟುಂಬದಲ್ಲಿ ಬಿರುಗಾಳಿ ಎದ್ದಿತ್ತು. ಇಬ್ಬರು ಕೂಡ ಬೇರೆ ಬೇರೆ ಆಗಿದ್ರಂತೆ. ಇಬ್ಬರು ಕೂಡ ಒಂದೆ ಮನೆಯಲಿದ್ದರು ಬೇರೆ ಬೇರೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರಂತೆ. ಇಬ್ಬರ ಕುಟುಂಬದಲ್ಲಿ ಬಿರುಕು ಮೂಡಿದ್ದು ವಿಚ್ಛೇದನಕ್ಕೆ ಅರ್ಜಿ ಕೂಡ ಹಾಕಿದರಂತೆ. ನಿನ್ನೆ ರಾತ್ರಿ ಮೃತ ಶಿಲ್ಪ ಮೊಬೈಲ್ನಲ್ಲಿ ಬೇರೆ ವ್ಯಕ್ತಿಯ ಜೊತೆಯಲ್ಲಿ ಮಾತಾಡುತ್ತಿದ್ದರಂತೆ. ಬೆಳಗ್ಗೆ 8.45ರ ಸುಮಾರಿಗೆ ಮತ್ತೆ ಆ ವ್ಯಕ್ತಿಯ ಜೊತೆಯಲ್ಲಿ ಮಾತುಕತೆ ನಡೆಸುತ್ತಿದ್ದರಂತೆ.
ಅದೇ ವೇಳೆ ಅಡುಗೆ ಮನೆಗೆ ಕೋವಿ ಸಮೇತ ಆಗಮಿಸಿದ ಗಂಡ ಬೋಪಣ್ಣ ಶಿಲ್ಪಳ ಎದೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ. ನಂತರ ಕೋವಿ ಸಮೇತ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಶರಣಾಗಿದ್ದಾನೆ. ವಿರಾಜಪೇಟೆ ಮಲಬಾರ್ ರಸ್ತೆಯ ಅರ್ಜಿಯಲ್ಲಿ ಸ್ವಂತ ಸರ್ವೀಸ್ ಸ್ಟೇಷನ್ ಹೊಂದಿದ್ದ ಬೋಪಣ್ಣ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಶಿಲ್ಪಾಳಿಗೆ ಮೊದಲ ಪಿಯುಸಿ ಹಾಗೂ 7ನೇ ತರಗತಿ ಓದುವ ಎರಡು ಹೆಣ್ಣು ಮಕ್ಕಳು ಇದ್ದಾರೆ. ಅಮ್ಮನನ್ನು ಕಳೆದುಕೊಂಡು ಮಕ್ಕಳಿಬ್ಬರು ಒಬ್ಬಂಟಿಯಾಗಿದ್ದಾರೆ. ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾದ ಆಕೆ ಹೀಗೆ ದಾರುಣವಾಗಿ ಅಂತ್ಯ ಕಂಡಿರೋ ವಿಪರ್ಯಾಸವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಂತೋಷವಾಗಿ ಸಂಸಾರ ನಡೆಸುತ್ತಿದ್ದ ದಂಪತಿಗಳ ಮಧ್ಯೆ ಬಿರುಕು
ವಿರಾಜಪೇಟೆ ತಾಲೂಕಿನ ಬೆಟೋಳಿ ಗ್ರಾಮದಲ್ಲಿ ನಡೆದ ಘಟನೆ
18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಶಿಲ್ಪ, ಬೋಪಣ್ಣ
ಮಡಿಕೇರಿ: ಅದು ಒಂದು ಸುಂದರ ಕುಟುಂಬದಲ್ಲಿ ಗಂಡ ಹೆಂಡತಿ ಎರಡು ಮುದ್ದಾದ ಮಕ್ಕಳು ಯಾವುದಕ್ಕೂ ಕೊರತೆ ಇರಲಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಆ ಕುಟುಂಬದಲ್ಲಿ ಬಿರುಗಾಳಿ ಎದ್ದು ಪತಿಯೇ ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಪರಿಣಾಮ ಸ್ಥಳದಲ್ಲೇ ಹೆಂಡತಿ ಕೊನೆಯುಸಿರೆಳೆದಿದ್ದಾಳೆ. ಘನ ಘೋರ ಘಟನೆ ನಡೆದಿರೋದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬೆಟೋಳಿ ಎಂಬ ಗ್ರಾಮದಲ್ಲಿ.
ಇದನ್ನೂ ಓದಿ: 40 ದಿನಕ್ಕೆ 31 ಹತ್ಯೆ, 300 ಜನರ ಮೇಲೆ ಹಲ್ಲೆ.. ಆಂಧ್ರದಲ್ಲಿ ಮತ್ತೆ ರಕ್ತ ರಾಜಕೀಯ? ಸ್ಫೋಟಕ ಮಾಹಿತಿ ಇಲ್ಲಿದೆ
ಗಂಡನಿಂದಲೇ ಕೊಲೆಯಾದ ಶಿಲ್ಪ ಸೀತಮ್ಮ (34). 18 ವರ್ಷದ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ರು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ರು. ಅದ್ಯಾಕೋ ಗೊತ್ತಿಲ್ಲ ಅವರ ಕುಟುಂಬದಲ್ಲಿ ಬಿರುಗಾಳಿ ಎದ್ದಿತ್ತು. ಇಬ್ಬರು ಕೂಡ ಬೇರೆ ಬೇರೆ ಆಗಿದ್ರಂತೆ. ಇಬ್ಬರು ಕೂಡ ಒಂದೆ ಮನೆಯಲಿದ್ದರು ಬೇರೆ ಬೇರೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರಂತೆ. ಇಬ್ಬರ ಕುಟುಂಬದಲ್ಲಿ ಬಿರುಕು ಮೂಡಿದ್ದು ವಿಚ್ಛೇದನಕ್ಕೆ ಅರ್ಜಿ ಕೂಡ ಹಾಕಿದರಂತೆ. ನಿನ್ನೆ ರಾತ್ರಿ ಮೃತ ಶಿಲ್ಪ ಮೊಬೈಲ್ನಲ್ಲಿ ಬೇರೆ ವ್ಯಕ್ತಿಯ ಜೊತೆಯಲ್ಲಿ ಮಾತಾಡುತ್ತಿದ್ದರಂತೆ. ಬೆಳಗ್ಗೆ 8.45ರ ಸುಮಾರಿಗೆ ಮತ್ತೆ ಆ ವ್ಯಕ್ತಿಯ ಜೊತೆಯಲ್ಲಿ ಮಾತುಕತೆ ನಡೆಸುತ್ತಿದ್ದರಂತೆ.
ಅದೇ ವೇಳೆ ಅಡುಗೆ ಮನೆಗೆ ಕೋವಿ ಸಮೇತ ಆಗಮಿಸಿದ ಗಂಡ ಬೋಪಣ್ಣ ಶಿಲ್ಪಳ ಎದೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ. ನಂತರ ಕೋವಿ ಸಮೇತ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಶರಣಾಗಿದ್ದಾನೆ. ವಿರಾಜಪೇಟೆ ಮಲಬಾರ್ ರಸ್ತೆಯ ಅರ್ಜಿಯಲ್ಲಿ ಸ್ವಂತ ಸರ್ವೀಸ್ ಸ್ಟೇಷನ್ ಹೊಂದಿದ್ದ ಬೋಪಣ್ಣ 18 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಶಿಲ್ಪಾಳಿಗೆ ಮೊದಲ ಪಿಯುಸಿ ಹಾಗೂ 7ನೇ ತರಗತಿ ಓದುವ ಎರಡು ಹೆಣ್ಣು ಮಕ್ಕಳು ಇದ್ದಾರೆ. ಅಮ್ಮನನ್ನು ಕಳೆದುಕೊಂಡು ಮಕ್ಕಳಿಬ್ಬರು ಒಬ್ಬಂಟಿಯಾಗಿದ್ದಾರೆ. ಒಟ್ಟಿನಲ್ಲಿ ಪ್ರೀತಿಸಿ ಮದುವೆಯಾದ ಆಕೆ ಹೀಗೆ ದಾರುಣವಾಗಿ ಅಂತ್ಯ ಕಂಡಿರೋ ವಿಪರ್ಯಾಸವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ