ಕದನದಲ್ಲಿ 240 ಆಟಗಾರರು, 72 ಸ್ಲಾಟ್ , 6 ತಂಡಗಳ ಹಣಾಹಣಿ
ಬಿಡ್ಡಿಂಗ್ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲಾಗಿರುವ ವಿಕೆಟ್ ಕೀಪರ್ಸ್
ಲಕ್ಷ ಲಕ್ಷ ರೂಪಾಯಿ ಬಾಚಿಕೊಂಡ ಬ್ಯಾಟರ್ಸ್, ಆಲ್ರೌಂಡರ್ಸ್
ಮಹಾರಾಜ ಟ್ರೋಫಿಯಲ್ಲಿ ಕರುನಾಡ ಕಲಿಗಳಿಗೆ ಜಾಕ್ಪಾಟ್ ಹೊಡೆದಿದೆ. ನಿರೀಕ್ಷೆಯಂತೆ ಸ್ಟಾರ್ ಆಟಗಾರರಿಗೆ ಬಂಪರ್ ಫ್ರೈಜ್ ಸಿಕ್ಕಿದೆ. ಹಾಗಾದ್ರೆ, ಮಹಾರಾಜ ಬಿಡ್ಡಿಂಗ್ನಲ್ಲಿ ಯಾರಿಗೆ ಅದೃಷ್ಟದ ಬಾಗಿಲು ಬಡೆಯಿತು ಎನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ: ಮೊಬೈಲ್ ಬಳಸುವವರೇ ಎಚ್ಚರ.. ಒಂದು ಕಾಲ್ ರಿಸೀವ್ ಮಾಡಿದ್ದಕ್ಕೆ ₹1 ಕೋಟಿ ಮಾಯ; ಆಗಿದ್ದೇನು?
ಕದನದಲ್ಲಿ 240 ಆಟಗಾರರು, 72 ಸ್ಲಾಟ್ , 6 ತಂಡಗಳ ಹಣಾಹಣಿ..! ಯಾವ ತಂಡಕ್ಕೆ ಯಾರು ಪಾಲ್ತಾಗ್ತಾರೆ ? ಯಾರು ಬಿಡ್ ಕಿಂಗ್ ಅನ್ನಿಸಿಕೊಳ್ತಾರೆ ? ಅನ್ನೋ ಎಲ್ಲಾ ಕುತೂಹಲಕ್ಕೆ ಫೈನಲಿ ತೆರೆ ಬಿದ್ದಿದೆ. ಮಹಾರಾಜ ಟೂರ್ನಿ ಕೆಎಸ್ಸಿಎ ಟಿ20 3ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. ಬ್ಯಾಟರ್ಸ್, ಆಲ್ರೌಂಡರ್ಸ್ ಲಕ್ಷ ಲಕ್ಷ ಬಾಚಿಕೊಂಡ್ರೆ ಬೌಲರ್ಗಳು ನಿರೀಕ್ಷೆಗೂ ಮೀರಿ ಬಿಡ್ ಆದ್ರು. ವಿಕೆಟ್ ಕೀಪರ್ಗಳು ಸಹ ಅತ್ಯಧಿಕ ಮೊತ್ತಕ್ಕೆ ಸೇಲಾಗಿ ಎಲ್ಲರಿಗೂ ದಿಗಿಲು ಬಡಿಸಿದ್ರು.
ಇದನ್ನೂ ಓದಿ: ನೆಟ್ನಲ್ಲಿ ಅಬ್ಬರದ ಬ್ಯಾಟಿಂಗ್.. ಸಿಂಹಳೀಯರ ನಾಡಲ್ಲಿ ಘರ್ಜನೆ ಮಾಡ್ತಾರಾ KL ರಾಹುಲ್?
ವಿಕೆಟ್ ಕೀಪರ್ ಚೇತನ್ ಎಲ್.ಆರ್ಗೆ 8.60 ಲಕ್ಷ
ವಿಕೆಟ್ ಕೀಪರ್ ಆ್ಯಂಡ್ ಬ್ಯಾಟ್ಸ್ಮನ್ ಚೇತನ್ ಎಲ್.ಆರ್ಗೆ ಜಾಕ್ಪಾಟ್ ಹೊಡೆದಿದೆ. ಕಳೆದ ಸೀಸನ್ನಲ್ಲಿ ಗುಲ್ಬರ್ಗ ಪರವಾಗಿ ಆಡಿದ್ದ ಚೇತನ್ಗಾಗಿ ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರ್ಯಾಗನ್ ಮೊದಲಿನಿಂದಲೂ ಭಾರೀ ಪೈಪೋಟಿ ನಡೆಸಿದ್ವು. ಆದ್ರೆ, ಅಂತ್ಯದಲ್ಲಿ ಬಿಡ್ಡಿಂಗ್ ವಾರ್ಗೆ ಇಳಿದ ಬೆಂಗಳೂರು ಬ್ಲಾಸ್ಟರ್, 8.60 ಲಕ್ಷ ರೂಪಾಯಿಗೆ ತನ್ನ ತೆಕ್ಕೆಗೆ ತೆಗೆದುಕೊಳ್ತು.. ಆ ಮೂಲಕ ಮೋಸ್ಟ್ ಎಕ್ಸಾಂಪೆನ್ಸೀವ್ ಪ್ಲೇಯರ್ ಎನಿಸಿಕೊಂಡ್ರು.
ಮಂಗಳೂರು ಡ್ರ್ಯಾಗನ್ ಸೇರಿದ ಶ್ರೇಯಸ್..!
ಆಲ್ರೌಂಡರ್ ಶ್ರೇಯಸ್ ಗೋಪಾಲ್ ಖರೀದಿಗಾಗಿಯೂ ನಡೆದ ಬಿಡ್ಡಿಂಗ್ ವಾರ್ ಸಖತ್ ಆಗಿ ಇತ್ತು. ಮೈಸೂರ್ ವಾರಿಯರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ ನಾನಾ..? ನೀನಾ ಎಂಬಂತೆ ಬಿಡ್ ಮಾಡಿದ್ವು. ಆದ್ರೆ, ಈ ಬಿಡ್ಡಿಂಗ್ ವಾರ್ನಲ್ಲಿ ಮಂಗಳೂರು ಡ್ರ್ಯಾಗನ್ 7.60 ಲಕ್ಷ ರೂಪಾಯಿಗೆ ಖರೀದಿಸುವಲ್ಲಿ ಯಶಸ್ವಿಯಾಯ್ತು.
ಮೈಸೂರು ಪಾಲಾದ ಆಲ್ರೌಂಡರ್ ಕೆ.ಗೌತಮ್..!
ಕೃಷ್ಣಪ್ಪ ಗೌತಮ್ಗಾಗಿ ಗುಲ್ಬರ್ಗ ಮಿಸ್ಟಿಕ್ಸ್ ಆ್ಯಂಡ್ ಮೈಸೂರು ವಾರಿಯರ್ಸ್ ನೇರಾನೇರ ಪೈಪೋಟಿಗೆ ಇಳಿದಿತ್ತು. ಆದ್ರೆ, ಈ ಹಿಂದಿನ ಚೇತನ್.ಎಲ್.ಆರ್ ಆ್ಯಂಡ್ ಶ್ರೇಯಸ್ ಗೋಪಾಲ್ ಬಿಡ್ಡಿಂಗ್ನಲ್ಲಿ ಹಿಂದೆಜ್ಜೆ ಹಾಕಿದ ಮೈಸೂರು, ಈ ಸಲ ಕೃಷ್ಣಪ್ಪ ಗೌತಮ್ ವಿಚಾರದಲ್ಲಿ ಪಟ್ಟು ಸಡಿಲಿಸಲಿಲ್ಲ. ಪರಿಣಾಮವಾಗಿ 7.40 ಲಕ್ಷಕ್ಕೆ ತನ್ನ ತೆಕ್ಕೆಗೆ ತೆಗದುಕೊಳ್ತು.
ಆರ್ಸಿಬಿ ಮಾಜಿ ಆಟಗಾರರಿಗೆ ಅದೃಷ್ಟ!
ಆರ್ಸಿಬಿ ಮಾಜಿ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಆಗಿದ್ದ ಲವನೀತ್ ಸಿಸೊಡಿಯಾ, ಗುಲ್ಬರ್ಗ ಮಿಸ್ಟಿಕ್ಸ್ ಬರೋಬ್ಬರಿ 7.20 ಲಕ್ಷಕ್ಕೆ ಸೇರಿದ್ರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ನಲ್ಲಿರುವ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆಗೆ, 6.80 ಲಕ್ಷ ನೀಡಿ ಗುಲ್ಬರ್ಗ ಮಿಸ್ಟಿಕ್ಸ್ ಖರೀದಿಸಿದ್ದರು. ಇನ್ನು ಆರ್ಸಿಬಿಯ ಮಾಜಿ ಆಟಗಾರ ಅನೀಶ್ವರ್ ಗೌತಮ್, 6.20 ಲಕ್ಷ ರೂಪಾಯಿಗೆ ಹುಬ್ಬಳ್ಳಿ ಟೈಗರ್ಸ್ ಪಾಲಾದರು.
ಇದನ್ನೂ ಓದಿ: ಕಾರ್ಗಿಲ್ ಯುದ್ಧಕ್ಕೆ ಇಂದು ರಜತ ಮಹೋತ್ಸವ.. ‘ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತ್ತಿಲ್ಲ’; PM ಮೋದಿ
ಇವ್ರೇ ಅಲ್ಲ, ಮೊಹಮ್ಮದ್ ತಾಹಾ 6,60 ಲಕ್ಷಕ್ಕೆ ಹುಬ್ಬಳ್ಳಿ ಸೇರಿಕೊಂಡ್ರೆ. ವಿದ್ಯಾದರ್ ಪಾಟಿಲ್, 6.40 ಲಕ್ಷಕ್ಕೆ ಮೈಸೂರ್ ವಾರಿಯರ್ಸ್ ಮಣೆಹಾಕಿದರು. ಲೋಕಲ್ ಬಾಯ್ ಅಭಿಲಾಷ್ ಶೆಟ್ಟಿ ಮಂಗಳೂರು ಡ್ರ್ಯಾಗನ್ಗೆ 6.30 ಲಕ್ಷಕ್ಕೆ ಬಿಡ್ ಮಾಡ್ತು. ಇನ್ನು ಅವಿನಾಶ್, 5.40 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್ ಪಾಲಾದರು.
ಇದನ್ನೂ ಓದಿ: ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?
ಕೂಚ್ ಬಿಹಾರ್ ಗೆದ್ದ ಧೀರಜ್ & ದ್ರಾವಿಡ್ ಪುತ್ರನಿಗೆ ಗಿಫ್ಟ್..!
ಬಿಗ್ ಅಮೌಂಟ್ನ ನಿರೀಕ್ಷೆಯಲ್ಲಿದ್ದ ಜಗದೀಶ್ ಸುಚಿತ್ ₹4.80 ಲಕ್ಷಕ್ಕೆ ಮೈಸೂರು ಸೇರಿದ್ರೆ. ಕೆ.ಎಸಿ ಕಾರಿಯಪ್ಪ ₹4.20 ಲಕ್ಷಕ್ಕೆ ಹುಬ್ಬಳ್ಳಿ ಟೈಗರ್ಸ್ಗೆ ಎಂಟ್ರಿ ನೀಡಿದರು. ಇನ್ನು ಕೂಚ್ ಬಿಹಾರ್ ಟ್ರೋಫಿ ಗೆದ್ದು ಕೊಟ್ಟಿದ್ದ ಕ್ಯಾಪ್ಟನ್ ದೀರಜ್ ಗೌಡ ₹1 ಲಕ್ಷ ರೂ ಮಂಗಳೂರು ಡ್ರ್ಯಾಗನ್ ಸೇರಿದ್ರೆ. ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, 50 ಸಾವಿರಕ್ಕೆ ಮೈಸೂರು ವಾರಿಯರ್ಸ್ ಪಾಲಾದ್ರು.
2 ಬಾರಿ ಅನ್ಸೋಲ್ಡ್.. ಕೊನೆಗೆ ಮೈಸೂರು ಸೇರಿದ ಪ್ರಸಿದ್ಧ್..!
ಟೀಮ್ ಇಂಡಿಯಾ ವೇಗಿ ಪ್ರಸಿದ್ಧ ಕೃಷ್ಣ ಖರೀದಿಗೆ ಯಾರು ಮುಂದಾಗಲಿಲ್ಲ. ಇಂಜುರಿ ಕಾರಣದಿಂದ ಯಾರೂ, ಬೈ ಮಾಡಲು ಧೈರ್ಯ ಮಾಡಲೇ ಇಲ್ಲ. ಈ ಕಾರಣಕ್ಕೆ 2 ಬಾರಿ ಅನ್ಸೋಲ್ಡ್ ಆಗಿಯೇ ಉಳಿದಿದ್ದರು. ಆದ್ರೆ, ಕೊನೆ ಸುತ್ತಿನಲ್ಲಿ ಮೈಸೂರು ವಾರಿಯರ್ಸ್ ಮೂಲ 1 ಲಕ್ಷಕ್ಕೆ ಪ್ರಸಿದ್ಧ್ಗೆ ಮಣೆ ಹಾಕಿತು. ಮಹಾರಾಜ ಟ್ರೋಫಿಯ ಬಿಡ್ಡಿಂಗ್ ವಾರ್ನಲ್ಲಿ ಬಲಾಢ್ಯ ತಂಡಗಳನ್ನೇ ಫ್ರಾಂಚೈಸಿಗಳು ಕಟ್ಟಿದ್ದು, ಟೂರ್ನಿಯ ಮಹಾರಾಜರಾಗಿ ಯಾರು ಮೆರೆಯುತ್ತಾರೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕದನದಲ್ಲಿ 240 ಆಟಗಾರರು, 72 ಸ್ಲಾಟ್ , 6 ತಂಡಗಳ ಹಣಾಹಣಿ
ಬಿಡ್ಡಿಂಗ್ನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲಾಗಿರುವ ವಿಕೆಟ್ ಕೀಪರ್ಸ್
ಲಕ್ಷ ಲಕ್ಷ ರೂಪಾಯಿ ಬಾಚಿಕೊಂಡ ಬ್ಯಾಟರ್ಸ್, ಆಲ್ರೌಂಡರ್ಸ್
ಮಹಾರಾಜ ಟ್ರೋಫಿಯಲ್ಲಿ ಕರುನಾಡ ಕಲಿಗಳಿಗೆ ಜಾಕ್ಪಾಟ್ ಹೊಡೆದಿದೆ. ನಿರೀಕ್ಷೆಯಂತೆ ಸ್ಟಾರ್ ಆಟಗಾರರಿಗೆ ಬಂಪರ್ ಫ್ರೈಜ್ ಸಿಕ್ಕಿದೆ. ಹಾಗಾದ್ರೆ, ಮಹಾರಾಜ ಬಿಡ್ಡಿಂಗ್ನಲ್ಲಿ ಯಾರಿಗೆ ಅದೃಷ್ಟದ ಬಾಗಿಲು ಬಡೆಯಿತು ಎನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ: ಮೊಬೈಲ್ ಬಳಸುವವರೇ ಎಚ್ಚರ.. ಒಂದು ಕಾಲ್ ರಿಸೀವ್ ಮಾಡಿದ್ದಕ್ಕೆ ₹1 ಕೋಟಿ ಮಾಯ; ಆಗಿದ್ದೇನು?
ಕದನದಲ್ಲಿ 240 ಆಟಗಾರರು, 72 ಸ್ಲಾಟ್ , 6 ತಂಡಗಳ ಹಣಾಹಣಿ..! ಯಾವ ತಂಡಕ್ಕೆ ಯಾರು ಪಾಲ್ತಾಗ್ತಾರೆ ? ಯಾರು ಬಿಡ್ ಕಿಂಗ್ ಅನ್ನಿಸಿಕೊಳ್ತಾರೆ ? ಅನ್ನೋ ಎಲ್ಲಾ ಕುತೂಹಲಕ್ಕೆ ಫೈನಲಿ ತೆರೆ ಬಿದ್ದಿದೆ. ಮಹಾರಾಜ ಟೂರ್ನಿ ಕೆಎಸ್ಸಿಎ ಟಿ20 3ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಮುಗಿದಿದೆ. ಬ್ಯಾಟರ್ಸ್, ಆಲ್ರೌಂಡರ್ಸ್ ಲಕ್ಷ ಲಕ್ಷ ಬಾಚಿಕೊಂಡ್ರೆ ಬೌಲರ್ಗಳು ನಿರೀಕ್ಷೆಗೂ ಮೀರಿ ಬಿಡ್ ಆದ್ರು. ವಿಕೆಟ್ ಕೀಪರ್ಗಳು ಸಹ ಅತ್ಯಧಿಕ ಮೊತ್ತಕ್ಕೆ ಸೇಲಾಗಿ ಎಲ್ಲರಿಗೂ ದಿಗಿಲು ಬಡಿಸಿದ್ರು.
ಇದನ್ನೂ ಓದಿ: ನೆಟ್ನಲ್ಲಿ ಅಬ್ಬರದ ಬ್ಯಾಟಿಂಗ್.. ಸಿಂಹಳೀಯರ ನಾಡಲ್ಲಿ ಘರ್ಜನೆ ಮಾಡ್ತಾರಾ KL ರಾಹುಲ್?
ವಿಕೆಟ್ ಕೀಪರ್ ಚೇತನ್ ಎಲ್.ಆರ್ಗೆ 8.60 ಲಕ್ಷ
ವಿಕೆಟ್ ಕೀಪರ್ ಆ್ಯಂಡ್ ಬ್ಯಾಟ್ಸ್ಮನ್ ಚೇತನ್ ಎಲ್.ಆರ್ಗೆ ಜಾಕ್ಪಾಟ್ ಹೊಡೆದಿದೆ. ಕಳೆದ ಸೀಸನ್ನಲ್ಲಿ ಗುಲ್ಬರ್ಗ ಪರವಾಗಿ ಆಡಿದ್ದ ಚೇತನ್ಗಾಗಿ ಹುಬ್ಬಳ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಮಂಗಳೂರು ಡ್ರ್ಯಾಗನ್ ಮೊದಲಿನಿಂದಲೂ ಭಾರೀ ಪೈಪೋಟಿ ನಡೆಸಿದ್ವು. ಆದ್ರೆ, ಅಂತ್ಯದಲ್ಲಿ ಬಿಡ್ಡಿಂಗ್ ವಾರ್ಗೆ ಇಳಿದ ಬೆಂಗಳೂರು ಬ್ಲಾಸ್ಟರ್, 8.60 ಲಕ್ಷ ರೂಪಾಯಿಗೆ ತನ್ನ ತೆಕ್ಕೆಗೆ ತೆಗೆದುಕೊಳ್ತು.. ಆ ಮೂಲಕ ಮೋಸ್ಟ್ ಎಕ್ಸಾಂಪೆನ್ಸೀವ್ ಪ್ಲೇಯರ್ ಎನಿಸಿಕೊಂಡ್ರು.
ಮಂಗಳೂರು ಡ್ರ್ಯಾಗನ್ ಸೇರಿದ ಶ್ರೇಯಸ್..!
ಆಲ್ರೌಂಡರ್ ಶ್ರೇಯಸ್ ಗೋಪಾಲ್ ಖರೀದಿಗಾಗಿಯೂ ನಡೆದ ಬಿಡ್ಡಿಂಗ್ ವಾರ್ ಸಖತ್ ಆಗಿ ಇತ್ತು. ಮೈಸೂರ್ ವಾರಿಯರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ ನಾನಾ..? ನೀನಾ ಎಂಬಂತೆ ಬಿಡ್ ಮಾಡಿದ್ವು. ಆದ್ರೆ, ಈ ಬಿಡ್ಡಿಂಗ್ ವಾರ್ನಲ್ಲಿ ಮಂಗಳೂರು ಡ್ರ್ಯಾಗನ್ 7.60 ಲಕ್ಷ ರೂಪಾಯಿಗೆ ಖರೀದಿಸುವಲ್ಲಿ ಯಶಸ್ವಿಯಾಯ್ತು.
ಮೈಸೂರು ಪಾಲಾದ ಆಲ್ರೌಂಡರ್ ಕೆ.ಗೌತಮ್..!
ಕೃಷ್ಣಪ್ಪ ಗೌತಮ್ಗಾಗಿ ಗುಲ್ಬರ್ಗ ಮಿಸ್ಟಿಕ್ಸ್ ಆ್ಯಂಡ್ ಮೈಸೂರು ವಾರಿಯರ್ಸ್ ನೇರಾನೇರ ಪೈಪೋಟಿಗೆ ಇಳಿದಿತ್ತು. ಆದ್ರೆ, ಈ ಹಿಂದಿನ ಚೇತನ್.ಎಲ್.ಆರ್ ಆ್ಯಂಡ್ ಶ್ರೇಯಸ್ ಗೋಪಾಲ್ ಬಿಡ್ಡಿಂಗ್ನಲ್ಲಿ ಹಿಂದೆಜ್ಜೆ ಹಾಕಿದ ಮೈಸೂರು, ಈ ಸಲ ಕೃಷ್ಣಪ್ಪ ಗೌತಮ್ ವಿಚಾರದಲ್ಲಿ ಪಟ್ಟು ಸಡಿಲಿಸಲಿಲ್ಲ. ಪರಿಣಾಮವಾಗಿ 7.40 ಲಕ್ಷಕ್ಕೆ ತನ್ನ ತೆಕ್ಕೆಗೆ ತೆಗದುಕೊಳ್ತು.
ಆರ್ಸಿಬಿ ಮಾಜಿ ಆಟಗಾರರಿಗೆ ಅದೃಷ್ಟ!
ಆರ್ಸಿಬಿ ಮಾಜಿ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟರ್ ಆಗಿದ್ದ ಲವನೀತ್ ಸಿಸೊಡಿಯಾ, ಗುಲ್ಬರ್ಗ ಮಿಸ್ಟಿಕ್ಸ್ ಬರೋಬ್ಬರಿ 7.20 ಲಕ್ಷಕ್ಕೆ ಸೇರಿದ್ರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಂಪ್ನಲ್ಲಿರುವ ಲೆಗ್ ಸ್ಪಿನ್ನರ್ ಪ್ರವೀಣ್ ದುಬೆಗೆ, 6.80 ಲಕ್ಷ ನೀಡಿ ಗುಲ್ಬರ್ಗ ಮಿಸ್ಟಿಕ್ಸ್ ಖರೀದಿಸಿದ್ದರು. ಇನ್ನು ಆರ್ಸಿಬಿಯ ಮಾಜಿ ಆಟಗಾರ ಅನೀಶ್ವರ್ ಗೌತಮ್, 6.20 ಲಕ್ಷ ರೂಪಾಯಿಗೆ ಹುಬ್ಬಳ್ಳಿ ಟೈಗರ್ಸ್ ಪಾಲಾದರು.
ಇದನ್ನೂ ಓದಿ: ಕಾರ್ಗಿಲ್ ಯುದ್ಧಕ್ಕೆ ಇಂದು ರಜತ ಮಹೋತ್ಸವ.. ‘ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತ್ತಿಲ್ಲ’; PM ಮೋದಿ
ಇವ್ರೇ ಅಲ್ಲ, ಮೊಹಮ್ಮದ್ ತಾಹಾ 6,60 ಲಕ್ಷಕ್ಕೆ ಹುಬ್ಬಳ್ಳಿ ಸೇರಿಕೊಂಡ್ರೆ. ವಿದ್ಯಾದರ್ ಪಾಟಿಲ್, 6.40 ಲಕ್ಷಕ್ಕೆ ಮೈಸೂರ್ ವಾರಿಯರ್ಸ್ ಮಣೆಹಾಕಿದರು. ಲೋಕಲ್ ಬಾಯ್ ಅಭಿಲಾಷ್ ಶೆಟ್ಟಿ ಮಂಗಳೂರು ಡ್ರ್ಯಾಗನ್ಗೆ 6.30 ಲಕ್ಷಕ್ಕೆ ಬಿಡ್ ಮಾಡ್ತು. ಇನ್ನು ಅವಿನಾಶ್, 5.40 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್ ಪಾಲಾದರು.
ಇದನ್ನೂ ಓದಿ: ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?
ಕೂಚ್ ಬಿಹಾರ್ ಗೆದ್ದ ಧೀರಜ್ & ದ್ರಾವಿಡ್ ಪುತ್ರನಿಗೆ ಗಿಫ್ಟ್..!
ಬಿಗ್ ಅಮೌಂಟ್ನ ನಿರೀಕ್ಷೆಯಲ್ಲಿದ್ದ ಜಗದೀಶ್ ಸುಚಿತ್ ₹4.80 ಲಕ್ಷಕ್ಕೆ ಮೈಸೂರು ಸೇರಿದ್ರೆ. ಕೆ.ಎಸಿ ಕಾರಿಯಪ್ಪ ₹4.20 ಲಕ್ಷಕ್ಕೆ ಹುಬ್ಬಳ್ಳಿ ಟೈಗರ್ಸ್ಗೆ ಎಂಟ್ರಿ ನೀಡಿದರು. ಇನ್ನು ಕೂಚ್ ಬಿಹಾರ್ ಟ್ರೋಫಿ ಗೆದ್ದು ಕೊಟ್ಟಿದ್ದ ಕ್ಯಾಪ್ಟನ್ ದೀರಜ್ ಗೌಡ ₹1 ಲಕ್ಷ ರೂ ಮಂಗಳೂರು ಡ್ರ್ಯಾಗನ್ ಸೇರಿದ್ರೆ. ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, 50 ಸಾವಿರಕ್ಕೆ ಮೈಸೂರು ವಾರಿಯರ್ಸ್ ಪಾಲಾದ್ರು.
2 ಬಾರಿ ಅನ್ಸೋಲ್ಡ್.. ಕೊನೆಗೆ ಮೈಸೂರು ಸೇರಿದ ಪ್ರಸಿದ್ಧ್..!
ಟೀಮ್ ಇಂಡಿಯಾ ವೇಗಿ ಪ್ರಸಿದ್ಧ ಕೃಷ್ಣ ಖರೀದಿಗೆ ಯಾರು ಮುಂದಾಗಲಿಲ್ಲ. ಇಂಜುರಿ ಕಾರಣದಿಂದ ಯಾರೂ, ಬೈ ಮಾಡಲು ಧೈರ್ಯ ಮಾಡಲೇ ಇಲ್ಲ. ಈ ಕಾರಣಕ್ಕೆ 2 ಬಾರಿ ಅನ್ಸೋಲ್ಡ್ ಆಗಿಯೇ ಉಳಿದಿದ್ದರು. ಆದ್ರೆ, ಕೊನೆ ಸುತ್ತಿನಲ್ಲಿ ಮೈಸೂರು ವಾರಿಯರ್ಸ್ ಮೂಲ 1 ಲಕ್ಷಕ್ಕೆ ಪ್ರಸಿದ್ಧ್ಗೆ ಮಣೆ ಹಾಕಿತು. ಮಹಾರಾಜ ಟ್ರೋಫಿಯ ಬಿಡ್ಡಿಂಗ್ ವಾರ್ನಲ್ಲಿ ಬಲಾಢ್ಯ ತಂಡಗಳನ್ನೇ ಫ್ರಾಂಚೈಸಿಗಳು ಕಟ್ಟಿದ್ದು, ಟೂರ್ನಿಯ ಮಹಾರಾಜರಾಗಿ ಯಾರು ಮೆರೆಯುತ್ತಾರೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ