ಸಿಕ್ಕ ಸಿಕ್ಕಲ್ಲಿ ಬಿಸ್ಲೇರಿ ಬಾಟಲ್ ಅನ್ನು ಖರೀದಿ ಮಾಡುವ ಮುನ್ನ ಎಚ್ಚರ ಎಚ್ಚರ
ದೇಶದ ಅತ್ಯಂತ ಜನಪ್ರಿಯ ವಾಟರ್ ಬಾಟಲ್ ಬ್ರಾಂಡ್ ಎಂದರೆ ಬಿಸ್ಲೇರಿ
ಬಿಸ್ಲೇರಿ ಬಾಡಲ್ನಿಂದ ನೀರು ಕುಡಿಯುತ್ತಿದ್ದಂತೆ ಅಸ್ವಸ್ಥಗೊಂಡ ನದೀಮ್
ಗ್ವಾಲಿಯರ್: ದೇಶದ ಅತ್ಯಂತ ಜನಪ್ರಿಯ ವಾಟರ್ ಬಾಟಲ್ ಬ್ರಾಂಡ್ ಎಂದರೆ ಅದು ಬಿಸ್ಲೇರಿ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಬೆಳೆಸುವ ಜನ ಈ ಬಿಸ್ಲೇರಿ ಬಾಟಲ್ ಖರೀದಿ ಮಾಡುತ್ತಾರೆ. ಆದರೆ ವ್ಯಕ್ತಿಯೊಬ್ಬ ಬಿಸ್ಲೇರಿ ನೀರನ್ನು ಕುಡಿದು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: PhonePe ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ? ಈ ಸಂಗತಿ ನಿಜಾನಾ?
ಹೌದು, ಗ್ವಾಲಿಯರ್ನ ಆಪಗಂಜ್ ನಿವಾಸಿಯಾಗಿರೋ ನದೀಮ್ ಖಾನ್ ಅವರು ಬಾಯಾರಿಕೆ ಅಂತ ಶೀಟ್ಲಾ ಡೈರಿಯಿಂದ ಬಾಟಲಿ ನೀರನ್ನು ಖರೀದಿಸಿದರು. ಅವರು ಆ ಬಿಸ್ಲೇರಿ ಬಾಟಲಿಯಿಂದ ನೀರನ್ನು ಕುಡಿದ ತಕ್ಷಣವೇ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದಾರಂತೆ. ಆ ಕೂಡಲೇ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ಗ್ವಾಲಿಯರ್ನ ಜಯರೋಗ ಆಸ್ಪತ್ರೆಗೆ ದಾಖಲಿಸಿದ್ದಾರಂತೆ. ಆದರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರೋ ನದೀಮ್ ಖಾನ್ ಅವರ ಸ್ಥಿತಿ ಗಂಭೀರವಾಗಿದೆ.
ಸದ್ಯ ನದೀಮ್ ಖಾನ್ ಸಹೋದರ ತಾಹಿರ್ ಖಾನ್ ಅವರು ಬಾಟಲಿಯನ್ನು ಸಾಕ್ಷ್ಯವಾಗಿ ಇಟ್ಟುಕೊಂಡು ಬಹೋದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಟಲ್ ಒಂದು ಪ್ರಸಿದ್ಧ ಬ್ರಾಂಡ್ ಎಂದು ತೋರುತ್ತಿದೆ. ಆದರೆ ಅದರ ಮೇಲೆ ಬಿಸ್ಲೇರಿಗಾಗಿ ಬಿಸಿಲೇರಿಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಬಳಿಕ ನೀರನ್ನು ಕುಡಿಯುತ್ತಿದ್ದಾಗ ಅಹಿತಕರ ವಾಸನೆಯನ್ನು ಬಂದಿದೆ. ಹೀಗಾಗಿ ನೀರು ಸೇವಿಸಿದ ನದೀಮ್ ಅಸ್ವಸ್ಥಗೊಂಡಿದ್ದಾನೆ ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಾರುಕಟ್ಟೆಯಲ್ಲಿ ನಕಲಿ ಬಾಟಲಿ ನೀರು ಮಾರಾಟವಾಗುತ್ತಿರುವ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಕ್ಕ ಸಿಕ್ಕಲ್ಲಿ ಬಿಸ್ಲೇರಿ ಬಾಟಲ್ ಅನ್ನು ಖರೀದಿ ಮಾಡುವ ಮುನ್ನ ಎಚ್ಚರ ಎಚ್ಚರ
ದೇಶದ ಅತ್ಯಂತ ಜನಪ್ರಿಯ ವಾಟರ್ ಬಾಟಲ್ ಬ್ರಾಂಡ್ ಎಂದರೆ ಬಿಸ್ಲೇರಿ
ಬಿಸ್ಲೇರಿ ಬಾಡಲ್ನಿಂದ ನೀರು ಕುಡಿಯುತ್ತಿದ್ದಂತೆ ಅಸ್ವಸ್ಥಗೊಂಡ ನದೀಮ್
ಗ್ವಾಲಿಯರ್: ದೇಶದ ಅತ್ಯಂತ ಜನಪ್ರಿಯ ವಾಟರ್ ಬಾಟಲ್ ಬ್ರಾಂಡ್ ಎಂದರೆ ಅದು ಬಿಸ್ಲೇರಿ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಬೆಳೆಸುವ ಜನ ಈ ಬಿಸ್ಲೇರಿ ಬಾಟಲ್ ಖರೀದಿ ಮಾಡುತ್ತಾರೆ. ಆದರೆ ವ್ಯಕ್ತಿಯೊಬ್ಬ ಬಿಸ್ಲೇರಿ ನೀರನ್ನು ಕುಡಿದು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: PhonePe ರಾಯಭಾರತ್ವದಿಂದ ಹೊರಬರುತ್ತಾರಾ ಕಿಚ್ಚ? ಈ ಸಂಗತಿ ನಿಜಾನಾ?
ಹೌದು, ಗ್ವಾಲಿಯರ್ನ ಆಪಗಂಜ್ ನಿವಾಸಿಯಾಗಿರೋ ನದೀಮ್ ಖಾನ್ ಅವರು ಬಾಯಾರಿಕೆ ಅಂತ ಶೀಟ್ಲಾ ಡೈರಿಯಿಂದ ಬಾಟಲಿ ನೀರನ್ನು ಖರೀದಿಸಿದರು. ಅವರು ಆ ಬಿಸ್ಲೇರಿ ಬಾಟಲಿಯಿಂದ ನೀರನ್ನು ಕುಡಿದ ತಕ್ಷಣವೇ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದಾರಂತೆ. ಆ ಕೂಡಲೇ ಸಂಬಂಧಿಕರು ಅವರನ್ನು ಆಸ್ಪತ್ರೆಗೆ ಗ್ವಾಲಿಯರ್ನ ಜಯರೋಗ ಆಸ್ಪತ್ರೆಗೆ ದಾಖಲಿಸಿದ್ದಾರಂತೆ. ಆದರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರೋ ನದೀಮ್ ಖಾನ್ ಅವರ ಸ್ಥಿತಿ ಗಂಭೀರವಾಗಿದೆ.
ಸದ್ಯ ನದೀಮ್ ಖಾನ್ ಸಹೋದರ ತಾಹಿರ್ ಖಾನ್ ಅವರು ಬಾಟಲಿಯನ್ನು ಸಾಕ್ಷ್ಯವಾಗಿ ಇಟ್ಟುಕೊಂಡು ಬಹೋದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಾಟಲ್ ಒಂದು ಪ್ರಸಿದ್ಧ ಬ್ರಾಂಡ್ ಎಂದು ತೋರುತ್ತಿದೆ. ಆದರೆ ಅದರ ಮೇಲೆ ಬಿಸ್ಲೇರಿಗಾಗಿ ಬಿಸಿಲೇರಿಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಬಳಿಕ ನೀರನ್ನು ಕುಡಿಯುತ್ತಿದ್ದಾಗ ಅಹಿತಕರ ವಾಸನೆಯನ್ನು ಬಂದಿದೆ. ಹೀಗಾಗಿ ನೀರು ಸೇವಿಸಿದ ನದೀಮ್ ಅಸ್ವಸ್ಥಗೊಂಡಿದ್ದಾನೆ ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮಾರುಕಟ್ಟೆಯಲ್ಲಿ ನಕಲಿ ಬಾಟಲಿ ನೀರು ಮಾರಾಟವಾಗುತ್ತಿರುವ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ