ನಮಾಜ್ ಮಾಡೋ ಸಂದರ್ಭದಲ್ಲಿ ಹನುಮಾನ್ ಹಾಡು ಹಾಕಿದ್ದ ಆರೋಪ
ಹನುಮಾನ್ ಹಾಡು ಹಾಕಿದ್ದಕ್ಕೆ ಯುವಕನಿಗೆ ಕಿಡಿಗೇಡಿಗಳಿಂದ ಭಾರೀ ಹಲ್ಲೆ
ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಣ್ಣಗಲ್ಲಿ ಬಳಿ ಘಟನೆ!
ಬೆಂಗಳೂರು: ನಮಾಜ್ ಮಾಡೋ ಸಂದರ್ಭದಲ್ಲಿ ಹನುಮಾನ್ ಹಾಡು ಹಾಕಿದ್ದಕ್ಕೆ ಯುವಕನಿಗೆ ಕಿಡಿಗೇಡಿಗಳು ಮನಸೋ-ಇಚ್ಛೆ ಥಳಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಣ್ಣಗಲ್ಲಿ ಬಳಿ ಈ ಘಟನೆ ನಡೆದಿದೆ.
ಇನ್ನು, ಮುಖೇಶ್ ಅನ್ನೋರು ತಮ್ಮ ಶಾಪ್ನಲ್ಲಿ ಹಾಡು ಹಾಕಿದ್ರಂತೆ. ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ ಯುವಕರ ಗುಂಪು ನಮಾಜ್ ಮಾಡೋಕೆ ತೊಂದರೆ ಆಗ್ತಿದೆ. ಕೂಡಲೇ ಹನುಮಾನ್ ಹಾಡು ಚೇಂಜ್ ಮಾಡಿ ಎಂದು ಕೇಳಿದೆ. ಇದಕ್ಕೆ ಮುಖೇಶ್ ಒಪ್ಪದಿದ್ದಾಗ ಮಾತಿಗೆ ಮಾತು ಬೆಳೆದಿದೆ. ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಮೂರು ಬಾರಿ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ 6 ಮಂದಿ ವಿರುದ್ಧ ದೂರು ದಾಖಲಾಗಿದೆ. ಪೊಲೀಸ್ರು ಘಟನೆ ಸಂಬಂಧ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಮುಖೇಶ್ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಮಾಜ್ ಮಾಡೋ ಸಂದರ್ಭದಲ್ಲಿ ಹನುಮಾನ್ ಹಾಡು ಹಾಕಿದ್ದ ಆರೋಪ
ಹನುಮಾನ್ ಹಾಡು ಹಾಕಿದ್ದಕ್ಕೆ ಯುವಕನಿಗೆ ಕಿಡಿಗೇಡಿಗಳಿಂದ ಭಾರೀ ಹಲ್ಲೆ
ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಣ್ಣಗಲ್ಲಿ ಬಳಿ ಘಟನೆ!
ಬೆಂಗಳೂರು: ನಮಾಜ್ ಮಾಡೋ ಸಂದರ್ಭದಲ್ಲಿ ಹನುಮಾನ್ ಹಾಡು ಹಾಕಿದ್ದಕ್ಕೆ ಯುವಕನಿಗೆ ಕಿಡಿಗೇಡಿಗಳು ಮನಸೋ-ಇಚ್ಛೆ ಥಳಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಣ್ಣಗಲ್ಲಿ ಬಳಿ ಈ ಘಟನೆ ನಡೆದಿದೆ.
ಇನ್ನು, ಮುಖೇಶ್ ಅನ್ನೋರು ತಮ್ಮ ಶಾಪ್ನಲ್ಲಿ ಹಾಡು ಹಾಕಿದ್ರಂತೆ. ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ ಯುವಕರ ಗುಂಪು ನಮಾಜ್ ಮಾಡೋಕೆ ತೊಂದರೆ ಆಗ್ತಿದೆ. ಕೂಡಲೇ ಹನುಮಾನ್ ಹಾಡು ಚೇಂಜ್ ಮಾಡಿ ಎಂದು ಕೇಳಿದೆ. ಇದಕ್ಕೆ ಮುಖೇಶ್ ಒಪ್ಪದಿದ್ದಾಗ ಮಾತಿಗೆ ಮಾತು ಬೆಳೆದಿದೆ. ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಮೂರು ಬಾರಿ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ 6 ಮಂದಿ ವಿರುದ್ಧ ದೂರು ದಾಖಲಾಗಿದೆ. ಪೊಲೀಸ್ರು ಘಟನೆ ಸಂಬಂಧ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಮುಖೇಶ್ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ