ಮಾರಣಾಂತಿಕ ಹಲ್ಲೆ ಮಾಡಿದ ಬಳಿಕ ಜೀವಂತವಾಗಿ ಹೂತು ಹಾಕಿದ ನೀಚರು
ಜೀವಂತ ಮಣ್ಣಾದ ರೂಪ್ ಕಿಶೋರ್ನನ್ನು ಬೀದಿ ನಾಯಿಗಳು ರಕ್ಷಿಸಿದ್ದು ಹೇಗೆ?
ಬಹಳ ದೊಡ್ಡ ಅಪಾಯದಿಂದ ಪಾರಾಗಿ ಬದುಕಿ ಬಂದವನ ವಿಚಿತ್ರ ಘಟನೆ ಇದು
ಉತ್ತರಪ್ರದೇಶದ ಆಗ್ರಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ರೂಪ್ ಕಿಶೋರ್ ಅನ್ನೋ ವ್ಯಕ್ತಿಯನ್ನು ವಿಚಾರದಲ್ಲಿ ನಾಲ್ಕು ಜನ ಸೇರಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೊನೆಗೆ ಅವನು ಮೃತಪಟ್ಟಿದ್ದಾನೆ ಎಂದು ತಿಳಿದು ಅವನನ್ನು ತಮ್ಮ ಫಾರ್ಮ್ಹೌಸ್ನಲ್ಲಿ ಜೀವಂತ ಸಮಾಧಿ ಮಾಡಿದ್ದಾರೆ. ಮಣ್ಣು ಮಾಡಿ ಇಲ್ಲಿಗೆ ಎಲ್ಲಾ ಮುಗೀತು ಅಂತ ಹೊರಟು ಹೋಗಿದ್ದಾರೆ. ಅಸಲಿಗೆ ಹೊಸ ಅಧ್ಯಾಯ ಅಲ್ಲಿಂದಲೇ ಶುರುವಾಗಿದೆ. ಹೀಗೆ ಜೀವಂತವಾಗಿ ಸಮಾಧಿಯಾದವನನ್ನು ಬೀದಿ ನಾಯಿಗಳು ರಕ್ಷಿಸಿಸಿವೆ. ಆಶ್ಚರ್ಯ ಅನಿಸಿದರೂ ಕೂಡ ಇದು ನಿಜ.
ಇದನ್ನೂ ಓದಿ: ಕ್ಲಾಸ್ಮೇಟ್ಗಳಿಂದ ಅಶ್ಲೀಲ ಮೆಸೇಜ್.. ಬೆಂಗಳೂರಲ್ಲಿ ವಿವಾಹಿತ ಮಹಿಳೆ ಸಾವಿಗೆ ಶರಣು; ಆಗಿದ್ದೇನು?
ರೂಪ್ ಕಿಶೋರ್ ಮೇಲೆ ಹಲ್ಲೆ ನಡೆದಾಗ ಹಲ್ಲೆಯ ಭೀಕರತೆಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆವಾಗ ಕಿಶೋರ್ ಮೃತಪಟ್ಟನೆಂದು ತಿಳಿದ ವ್ಯಕ್ತಿಗಳು ಅವನನ್ನು ಜೀವಂತವಾಗಿ ಮಣ್ಣು ಮಾಡಿ ಹೋಗಿದ್ದಾರೆ. ಈ ವೇಳೆ ಅಲ್ಲಿಯೇ ಓಡಾಡುತ್ತಿದ್ದ ಬೀದಿ ನಾಯಿಗಳು ಬಂದು ಅವನನ್ನು ಹೂತು ಹಾಕಿದ್ದ ಜಾಗವನ್ನು ಕೆದರಲು ಶುರು ಮಾಡಿವೆ. ಬೀದಿ ನಾಯಿಗಳು ಕಿಶೋರ್ ದೇಹ ಸಿಗುವವರೆಗೂ ಜಾಗವನ್ನು ಕೆದರಿದ ನಾಯಿಗಳು ಬಳಿಕ ಆತನನ್ನು ಕಚ್ಚಿ ತಿನ್ನಲು ಶುರು ಮಾಡಿವೆ. ಈ ವೇಳೆ ಎಚ್ಚರಗೊಂಡ ಕಿಶೋರ್ ಬೀದಿ ನಾಯಿಗಳನ್ನು ಓಡಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಕೂಡಲೇ ತಮ್ಮ ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ. ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಕಿಶೋರ್ನನ್ನು ಗುರುತಿಸಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಕಿಶೋರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ ₹1.50 ಕೋಟಿ ಕಳ್ಕೊಂಡ ಗಂಡ, ಹೆಂಡತಿ.. ಆನ್ಲೈನ್ ಹೂಡಿಕೆ ಮಾಡೋರು ಓದಲೇಬೇಕಾದ ಸ್ಟೋರಿ
ಕಳೆದ ಜುಲೈ 18 ರಂದು ಆಗ್ರಾದ ಆರ್ಟೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಿಶೋರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಗೌರವ್ ಅಂಕಿತ್, ಕರಣ್ ಹಾಗೂ ಆಕಾಶ್ ಎಂದು ಗುರುತಿಸಲಾಗಿದೆ. ಕಿಶೋರ್ ತಾಯಿ ಇತ್ತೀಚೆಗೆ ಕಿಶೋರ್ ಮೇಲೆ ನಡೆದ ಹಲ್ಲೆಯ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ. ಸಿಕಂದರ್ ಪೊಲೀಸ್ ಠಾಣೆಯಲ್ಲಿ ನಾಲ್ಕು ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಾರಣಾಂತಿಕ ಹಲ್ಲೆ ಮಾಡಿದ ಬಳಿಕ ಜೀವಂತವಾಗಿ ಹೂತು ಹಾಕಿದ ನೀಚರು
ಜೀವಂತ ಮಣ್ಣಾದ ರೂಪ್ ಕಿಶೋರ್ನನ್ನು ಬೀದಿ ನಾಯಿಗಳು ರಕ್ಷಿಸಿದ್ದು ಹೇಗೆ?
ಬಹಳ ದೊಡ್ಡ ಅಪಾಯದಿಂದ ಪಾರಾಗಿ ಬದುಕಿ ಬಂದವನ ವಿಚಿತ್ರ ಘಟನೆ ಇದು
ಉತ್ತರಪ್ರದೇಶದ ಆಗ್ರಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ರೂಪ್ ಕಿಶೋರ್ ಅನ್ನೋ ವ್ಯಕ್ತಿಯನ್ನು ವಿಚಾರದಲ್ಲಿ ನಾಲ್ಕು ಜನ ಸೇರಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕೊನೆಗೆ ಅವನು ಮೃತಪಟ್ಟಿದ್ದಾನೆ ಎಂದು ತಿಳಿದು ಅವನನ್ನು ತಮ್ಮ ಫಾರ್ಮ್ಹೌಸ್ನಲ್ಲಿ ಜೀವಂತ ಸಮಾಧಿ ಮಾಡಿದ್ದಾರೆ. ಮಣ್ಣು ಮಾಡಿ ಇಲ್ಲಿಗೆ ಎಲ್ಲಾ ಮುಗೀತು ಅಂತ ಹೊರಟು ಹೋಗಿದ್ದಾರೆ. ಅಸಲಿಗೆ ಹೊಸ ಅಧ್ಯಾಯ ಅಲ್ಲಿಂದಲೇ ಶುರುವಾಗಿದೆ. ಹೀಗೆ ಜೀವಂತವಾಗಿ ಸಮಾಧಿಯಾದವನನ್ನು ಬೀದಿ ನಾಯಿಗಳು ರಕ್ಷಿಸಿಸಿವೆ. ಆಶ್ಚರ್ಯ ಅನಿಸಿದರೂ ಕೂಡ ಇದು ನಿಜ.
ಇದನ್ನೂ ಓದಿ: ಕ್ಲಾಸ್ಮೇಟ್ಗಳಿಂದ ಅಶ್ಲೀಲ ಮೆಸೇಜ್.. ಬೆಂಗಳೂರಲ್ಲಿ ವಿವಾಹಿತ ಮಹಿಳೆ ಸಾವಿಗೆ ಶರಣು; ಆಗಿದ್ದೇನು?
ರೂಪ್ ಕಿಶೋರ್ ಮೇಲೆ ಹಲ್ಲೆ ನಡೆದಾಗ ಹಲ್ಲೆಯ ಭೀಕರತೆಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆವಾಗ ಕಿಶೋರ್ ಮೃತಪಟ್ಟನೆಂದು ತಿಳಿದ ವ್ಯಕ್ತಿಗಳು ಅವನನ್ನು ಜೀವಂತವಾಗಿ ಮಣ್ಣು ಮಾಡಿ ಹೋಗಿದ್ದಾರೆ. ಈ ವೇಳೆ ಅಲ್ಲಿಯೇ ಓಡಾಡುತ್ತಿದ್ದ ಬೀದಿ ನಾಯಿಗಳು ಬಂದು ಅವನನ್ನು ಹೂತು ಹಾಕಿದ್ದ ಜಾಗವನ್ನು ಕೆದರಲು ಶುರು ಮಾಡಿವೆ. ಬೀದಿ ನಾಯಿಗಳು ಕಿಶೋರ್ ದೇಹ ಸಿಗುವವರೆಗೂ ಜಾಗವನ್ನು ಕೆದರಿದ ನಾಯಿಗಳು ಬಳಿಕ ಆತನನ್ನು ಕಚ್ಚಿ ತಿನ್ನಲು ಶುರು ಮಾಡಿವೆ. ಈ ವೇಳೆ ಎಚ್ಚರಗೊಂಡ ಕಿಶೋರ್ ಬೀದಿ ನಾಯಿಗಳನ್ನು ಓಡಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಕೂಡಲೇ ತಮ್ಮ ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ. ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಕಿಶೋರ್ನನ್ನು ಗುರುತಿಸಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಕಿಶೋರ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ ₹1.50 ಕೋಟಿ ಕಳ್ಕೊಂಡ ಗಂಡ, ಹೆಂಡತಿ.. ಆನ್ಲೈನ್ ಹೂಡಿಕೆ ಮಾಡೋರು ಓದಲೇಬೇಕಾದ ಸ್ಟೋರಿ
ಕಳೆದ ಜುಲೈ 18 ರಂದು ಆಗ್ರಾದ ಆರ್ಟೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಿಶೋರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಗೌರವ್ ಅಂಕಿತ್, ಕರಣ್ ಹಾಗೂ ಆಕಾಶ್ ಎಂದು ಗುರುತಿಸಲಾಗಿದೆ. ಕಿಶೋರ್ ತಾಯಿ ಇತ್ತೀಚೆಗೆ ಕಿಶೋರ್ ಮೇಲೆ ನಡೆದ ಹಲ್ಲೆಯ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಗಲಾಟೆ ನಡೆದಿದೆ. ಸಿಕಂದರ್ ಪೊಲೀಸ್ ಠಾಣೆಯಲ್ಲಿ ನಾಲ್ಕು ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ