ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಪತ್ನಿ ಹತ್ಯೆ ಆಗಿರುವುದು ಹೇಗೆ?
ರಸ್ತೆಯಲ್ಲಿ ಪತ್ತೆಯಾದ ಮೃತದೇಹದ ಕುತ್ತಿಗೆಯಲ್ಲಿ ಇದ್ದವು 2 ಕೀಗಳು
ಮಗನಿಗೆ ವಾಟ್ಸ್ ಮೂಲಕ ತಂದೆ ಏನೇನು ಮೆಸೇಜ್ ಮಾಡಿದ್ದನು?
ಮುಂಬೈ: ಗೋರೆಗಾಂವ್ನ ಜವಾಹರ್ ನಗರದ ಟೋಪಿವಾಲಾ ಮ್ಯಾನ್ಷನ್ ಅಪಾರ್ಟ್ಮೆಂಟ್ ಮುಂಭಾದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು ಹಲವು ಅನುಮಾನಗಳನ್ನ ಉಂಟು ಮಾಡಿದೆ.
ಇದನ್ನೂ ಓದಿ: Olympics; ಗ್ರೇಟ್ ಬ್ರಿಟನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
ಸಾವನ್ನಪ್ಪಿದವರು ಕಿಶೋರ್ ಪೆಡ್ನೇಕರ್ (58) ಎಂದು ಗುರುತಿಸಲಾಗಿದೆ. ಇವರು ಜಿಮ್ ವಸ್ತುಗಳನ್ನು ಮಾರಾಟ ಮಾಡುವ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾಗುತ್ತಿದ್ದಂತೆ ಇವರ ಪತ್ನಿ ರಾಜಶ್ರೀಗೆ ಸಾಕಷ್ಟು ಬಾರಿ ಫೋನ್ ಮಾಡಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೇ ಆ ಕಡೆಯಿಂದ ಬಂದಿಲ್ಲ. ಮನೆಗೆ ಹೋಗಿ ನೋಡಿದರೆ ಮನೆ ಬಾಗಿಲು ಒಳಗಡೆಯಿಂದ ಲಾಕ್ ಹಾಕಿತ್ತು. ಹೀಗಾಗಿ ಪತ್ನಿ ಮೇಲೆಯೇ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಕಿಶೋರ್ ಮೃತದೇಹದ ಕುತ್ತಿಗೆಯಲ್ಲಿದ್ದ ಲಾಕೆಟ್ನಲ್ಲಿ ಎರಡು ಕೀಗಳು ಕಂಡು ಬಿಂದಿದ್ದು ಅವುಗಳನ್ನ ತೆಗೆದುಕೊಂಡು ಹೋಗಿ ಅಪಾರ್ಟ್ಮೆಂಟ್ನಲ್ಲಿದ್ದ ಮನೆಯ ಬಾಗಿಲನ್ನು ಪೊಲೀಸರು ಓಪನ್ ಮಾಡಿದ್ದಾರೆ. ಆಗ ಪೊಲೀಸರು ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್
ಪೊಲೀಸರು ಮನೆಯನ್ನು ಓಪನ್ ಮಾಡಿದಾಗ ಕಿಶೋರ್ ಪೆಡ್ನೇಕರ್ ಪತ್ನಿ ರಾಜಶ್ರೀ (57) ಕೊಲೆಯಾಗಿದ್ದರು. ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಕಿಶೋರ್ ಮೊದಲು ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಆ ನಂತರ ತಾನು ಅಪಾರ್ಟ್ಮೆಂಟ್ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: 100km ವೇಗದಲ್ಲಿ ಕಾರು ಸ್ಟಂಟ್ ಮಾಡ್ತಿದ್ದ ಅಪ್ರಾಪ್ತ.. ಸ್ಕೂಟರ್ಗೆ ಡಿಕ್ಕಿಯಾಗಿ ತಾಯಿ ಸಾವು, ಮಗಳು ಚಿಂತಾಜನಕ
ಪೊಲೀಸರ ಪ್ರಾಥಮಿಕ ವರದಿ ಪ್ರಕಾರ, ಶುಗರ್ನಿಂದಾಗಿ ಕಿಶೋರ್ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಸಾವಿನ ಬಗ್ಗೆ ಪ್ಲಾನ್ ರೂಪಿಸಿದ್ದರು. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮಗನಿಗೆ ವಾಟ್ಸ್ ಆಪ್ ಮೂಲಕ ತಮ್ಮ ಬ್ಯಾಂಕ್ ಖಾತೆಗಳ ಬಗೆಗಿನ ಎಲ್ಲ ವಿವರಗಳನ್ನು ಸೆಂಡ್ ಮಾಡಿದ್ದರು. ಅಲ್ಲದೇ ಸಾವಿಗೂ ಮೊದಲೇ ದೆಹಲಿಯಿಂದ ಮುಂಬೈಗೆ ಬರಲು ಮಗನಿಗೆ ವಿಮಾನದ ಟಿಕೆಟ್ ಅನ್ನು ಬುಕ್ ಮಾಡಿದ್ದರು. ಇನ್ನು ಅವರ ಫ್ಲಾಟ್ನಲ್ಲಿ ಖಿನ್ನತೆ ಹಾಗೂ ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಹಲವಾರು ಔಷಧಿಗಳು ಸಿಕ್ಕಿವೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಪತ್ನಿ ಹತ್ಯೆ ಆಗಿರುವುದು ಹೇಗೆ?
ರಸ್ತೆಯಲ್ಲಿ ಪತ್ತೆಯಾದ ಮೃತದೇಹದ ಕುತ್ತಿಗೆಯಲ್ಲಿ ಇದ್ದವು 2 ಕೀಗಳು
ಮಗನಿಗೆ ವಾಟ್ಸ್ ಮೂಲಕ ತಂದೆ ಏನೇನು ಮೆಸೇಜ್ ಮಾಡಿದ್ದನು?
ಮುಂಬೈ: ಗೋರೆಗಾಂವ್ನ ಜವಾಹರ್ ನಗರದ ಟೋಪಿವಾಲಾ ಮ್ಯಾನ್ಷನ್ ಅಪಾರ್ಟ್ಮೆಂಟ್ ಮುಂಭಾದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು ಹಲವು ಅನುಮಾನಗಳನ್ನ ಉಂಟು ಮಾಡಿದೆ.
ಇದನ್ನೂ ಓದಿ: Olympics; ಗ್ರೇಟ್ ಬ್ರಿಟನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು.. ಸೆಮಿಸ್ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ
ಸಾವನ್ನಪ್ಪಿದವರು ಕಿಶೋರ್ ಪೆಡ್ನೇಕರ್ (58) ಎಂದು ಗುರುತಿಸಲಾಗಿದೆ. ಇವರು ಜಿಮ್ ವಸ್ತುಗಳನ್ನು ಮಾರಾಟ ಮಾಡುವ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾಗುತ್ತಿದ್ದಂತೆ ಇವರ ಪತ್ನಿ ರಾಜಶ್ರೀಗೆ ಸಾಕಷ್ಟು ಬಾರಿ ಫೋನ್ ಮಾಡಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೇ ಆ ಕಡೆಯಿಂದ ಬಂದಿಲ್ಲ. ಮನೆಗೆ ಹೋಗಿ ನೋಡಿದರೆ ಮನೆ ಬಾಗಿಲು ಒಳಗಡೆಯಿಂದ ಲಾಕ್ ಹಾಕಿತ್ತು. ಹೀಗಾಗಿ ಪತ್ನಿ ಮೇಲೆಯೇ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಕಿಶೋರ್ ಮೃತದೇಹದ ಕುತ್ತಿಗೆಯಲ್ಲಿದ್ದ ಲಾಕೆಟ್ನಲ್ಲಿ ಎರಡು ಕೀಗಳು ಕಂಡು ಬಿಂದಿದ್ದು ಅವುಗಳನ್ನ ತೆಗೆದುಕೊಂಡು ಹೋಗಿ ಅಪಾರ್ಟ್ಮೆಂಟ್ನಲ್ಲಿದ್ದ ಮನೆಯ ಬಾಗಿಲನ್ನು ಪೊಲೀಸರು ಓಪನ್ ಮಾಡಿದ್ದಾರೆ. ಆಗ ಪೊಲೀಸರು ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್
ಪೊಲೀಸರು ಮನೆಯನ್ನು ಓಪನ್ ಮಾಡಿದಾಗ ಕಿಶೋರ್ ಪೆಡ್ನೇಕರ್ ಪತ್ನಿ ರಾಜಶ್ರೀ (57) ಕೊಲೆಯಾಗಿದ್ದರು. ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಕಿಶೋರ್ ಮೊದಲು ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಆ ನಂತರ ತಾನು ಅಪಾರ್ಟ್ಮೆಂಟ್ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: 100km ವೇಗದಲ್ಲಿ ಕಾರು ಸ್ಟಂಟ್ ಮಾಡ್ತಿದ್ದ ಅಪ್ರಾಪ್ತ.. ಸ್ಕೂಟರ್ಗೆ ಡಿಕ್ಕಿಯಾಗಿ ತಾಯಿ ಸಾವು, ಮಗಳು ಚಿಂತಾಜನಕ
ಪೊಲೀಸರ ಪ್ರಾಥಮಿಕ ವರದಿ ಪ್ರಕಾರ, ಶುಗರ್ನಿಂದಾಗಿ ಕಿಶೋರ್ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಸಾವಿನ ಬಗ್ಗೆ ಪ್ಲಾನ್ ರೂಪಿಸಿದ್ದರು. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮಗನಿಗೆ ವಾಟ್ಸ್ ಆಪ್ ಮೂಲಕ ತಮ್ಮ ಬ್ಯಾಂಕ್ ಖಾತೆಗಳ ಬಗೆಗಿನ ಎಲ್ಲ ವಿವರಗಳನ್ನು ಸೆಂಡ್ ಮಾಡಿದ್ದರು. ಅಲ್ಲದೇ ಸಾವಿಗೂ ಮೊದಲೇ ದೆಹಲಿಯಿಂದ ಮುಂಬೈಗೆ ಬರಲು ಮಗನಿಗೆ ವಿಮಾನದ ಟಿಕೆಟ್ ಅನ್ನು ಬುಕ್ ಮಾಡಿದ್ದರು. ಇನ್ನು ಅವರ ಫ್ಲಾಟ್ನಲ್ಲಿ ಖಿನ್ನತೆ ಹಾಗೂ ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಹಲವಾರು ಔಷಧಿಗಳು ಸಿಕ್ಕಿವೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ