/newsfirstlive-kannada/media/post_attachments/wp-content/uploads/2024/08/MUMBAI_WIFE_HUSBAND.jpg)
ಮುಂಬೈ: ಗೋರೆಗಾಂವ್​ನ ಜವಾಹರ್ ನಗರದ ಟೋಪಿವಾಲಾ ಮ್ಯಾನ್ಷನ್​ ಅಪಾರ್ಟ್​ಮೆಂಟ್​ ಮುಂಭಾದ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು ಹಲವು ಅನುಮಾನಗಳನ್ನ ಉಂಟು ಮಾಡಿದೆ.
ಸಾವನ್ನಪ್ಪಿದವರು ಕಿಶೋರ್ ಪೆಡ್ನೇಕರ್ (58) ಎಂದು ಗುರುತಿಸಲಾಗಿದೆ. ಇವರು ಜಿಮ್​ ವಸ್ತುಗಳನ್ನು ಮಾರಾಟ ಮಾಡುವ ಸೇಲ್ಸ್​ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಮೃತದೇಹ ಪತ್ತೆಯಾಗುತ್ತಿದ್ದಂತೆ ಇವರ ಪತ್ನಿ ರಾಜಶ್ರೀಗೆ ಸಾಕಷ್ಟು ಬಾರಿ ಫೋನ್ ಮಾಡಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೇ ಆ ಕಡೆಯಿಂದ ಬಂದಿಲ್ಲ. ಮನೆಗೆ ಹೋಗಿ ನೋಡಿದರೆ ಮನೆ ಬಾಗಿಲು ಒಳಗಡೆಯಿಂದ ಲಾಕ್ ಹಾಕಿತ್ತು. ಹೀಗಾಗಿ ಪತ್ನಿ ಮೇಲೆಯೇ ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಕಿಶೋರ್ ಮೃತದೇಹದ​ ಕುತ್ತಿಗೆಯಲ್ಲಿದ್ದ ಲಾಕೆಟ್​ನಲ್ಲಿ ಎರಡು ಕೀಗಳು ಕಂಡು ಬಿಂದಿದ್ದು ಅವುಗಳನ್ನ ತೆಗೆದುಕೊಂಡು ಹೋಗಿ ಅಪಾರ್ಟ್​​ಮೆಂಟ್​ನಲ್ಲಿದ್ದ ಮನೆಯ ಬಾಗಿಲನ್ನು ಪೊಲೀಸರು ಓಪನ್ ಮಾಡಿದ್ದಾರೆ. ಆಗ ಪೊಲೀಸರು ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್
ಪೊಲೀಸರು ಮನೆಯನ್ನು ಓಪನ್ ಮಾಡಿದಾಗ ಕಿಶೋರ್ ಪೆಡ್ನೇಕರ್ ಪತ್ನಿ ರಾಜಶ್ರೀ (57) ಕೊಲೆಯಾಗಿದ್ದರು. ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ. ಕಿಶೋರ್​ ಮೊದಲು ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಆ ನಂತರ ತಾನು ಅಪಾರ್ಟ್​​ಮೆಂಟ್​ ಮೇಲಿನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಪೊಲೀಸರ ಪ್ರಾಥಮಿಕ ವರದಿ ಪ್ರಕಾರ, ಶುಗರ್​​ನಿಂದಾಗಿ ಕಿಶೋರ್ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ಸಾವಿನ ಬಗ್ಗೆ ಪ್ಲಾನ್ ರೂಪಿಸಿದ್ದರು. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮಗನಿಗೆ ವಾಟ್ಸ್​ ಆಪ್​ ಮೂಲಕ ತಮ್ಮ ಬ್ಯಾಂಕ್​ ಖಾತೆಗಳ ಬಗೆಗಿನ ಎಲ್ಲ ವಿವರಗಳನ್ನು ಸೆಂಡ್ ಮಾಡಿದ್ದರು. ಅಲ್ಲದೇ ಸಾವಿಗೂ ಮೊದಲೇ ದೆಹಲಿಯಿಂದ ಮುಂಬೈಗೆ ಬರಲು ಮಗನಿಗೆ ವಿಮಾನದ ಟಿಕೆಟ್​ ಅನ್ನು ಬುಕ್​ ಮಾಡಿದ್ದರು. ಇನ್ನು ಅವರ ಫ್ಲಾಟ್​ನಲ್ಲಿ ಖಿನ್ನತೆ ಹಾಗೂ ಸಕ್ಕರೆ ಕಾಯಿಲೆಗೆ ಸಂಬಂಧಿಸಿದ ಹಲವಾರು ಔಷಧಿಗಳು ಸಿಕ್ಕಿವೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ