newsfirstkannada.com

ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

Share :

Published May 26, 2024 at 2:01pm

    ಆರೋಪಿಯನ್ನೇ ಹಿಡಿದುಕೊಟ್ಟಿರುವುದೇ ಗ್ಲೌಸ್​ಗಳು.. ಹೇಗೆ?

    ಹುಡುಗಿಯರನ್ನ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದ

    ವಿದ್ಯಾರ್ಥಿಯರನ್ನು ಹೇಗೆ ಖೆಡ್ಡಾಕ್ಕೆ ಕೆಡುವುತ್ತಿದ್ದ ಗೊತ್ತಾ ಕಿಲಾಡಿ?

ಭೋಪಾಲ್: ಧ್ವನಿ ಬದಲಾಯಿಸುವ ಮೊಬೈಲ್​ ಆ್ಯಪ್ ಬಳಸಿ ಕಾಲೇಜಿನ 7 ವಿದ್ಯಾರ್ಥಿನಿಯರ ಮೇಲೆ ಅನಕ್ಷರಸ್ಥನೊಬ್ಬ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಪೊಲೀಸರು ಒಟ್ಟು ಮೂವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಿಲ್​ ಕಾರ್ಮಿಕ ಬ್ರಜೇಶ್ ಕುಶ್ವಾಹಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಪ್ರಮುಖ ಆರೋಪಿ. ಇವನು ಅನಕ್ಷರಸ್ಥನಾಗಿದ್ದು ಮಹಾರಾಷ್ಟ್ರದ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೈ ಸುಟ್ಟುಕೊಂಡಿದ್ದನು. ಬಳಿಕ ತನ್ನ ಊರಿಗೆ ವಾಪಸ್ ಆಗಿದ್ದನು. ನಂತರ ಧ್ವನಿ ಬದಲಾಯಿಸುವ ಮೊಬೈಲ್​ ಆ್ಯಪ್​ ಬಳಸಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಮಹಿಳಾ ಪ್ರೊಫೆಸರ್​ನಂತೆ ಮಾತಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಿತ್ಯ ಲೈಂಗಿಕ ಕಿರುಕುಳ.. ತನ್ನ ಮೇಲೆ ಅತ್ಯಾಚಾರ ಎಸಗ್ತಿದ್ದ ವ್ಯಕ್ತಿಯನ್ನ ಕೊಂದ ಬಾಲಕ

ವಿದ್ಯಾರ್ಥಿನಿಯರ ಜೊತೆಗೆ ಮಾತಾಡುವಾಗ ಮಹಿಳಾ ಪ್ರೊಫೆಸರ್​ನಂತೆ ಮಾತಾಡಿ ನಿಮ್ಮ ಮುಂದಿನ ಶಿಕ್ಷಣಕ್ಕೆ ಹಾಗೂ ಸ್ಕಾಲರ್ಶಿಪ್​ಗೆ ಸಹಾಯ ಮಾಡುವುದಾಗಿ ಹೇಳುತ್ತಿದ್ದನು. ಬಳಿಕ ಒಮ್ಮೆ ನಿರ್ಜನ ಪ್ರದೇಶದಲ್ಲಿ ಭೇಟಿ ಆಗಲು ಹೇಳಿ, ಬೈಕ್​ನಲ್ಲಿ ಬಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ನಂತರ ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಜೊತೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗುತ್ತಿದ್ದನು. ಇದೇ ರೀತಿ 7 ಕಾಲೇಜುಗಳ 7 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು ಎಂದು ಹೇಳಲಾಗಿದೆ.

ಇದನ್ನೂ ಓದಿ: KKR vs SRH; ಗಂಭೀರ್ ಚಾಣಕ್ಷತನ, ಕ್ಯಾಪ್ಟನ್ ಕಮಿನ್ಸ್​ ಬುದ್ಧಿವಂತಿಕೆ.. 2 ತಂಡದ ಬಲಾಬಲ ಏನು?

ಈ ಸಂಬಂಧ ಯುವತಿಯೊಬ್ಬರು ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಕಾಲೇಜು ಬಳಿ ತಲೆಗೆ ಹೆಲ್ಮೆಟ್​ ಧರಿಸಿ ಬರುತ್ತಿದ್ದರಿಂದ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟವಾಗಿತ್ತು. ಆದರೆ ಎಲ್ಲ ಯುವತಿಯರ ಭೇಟಿ ಮಾಡಲು ಬಂದಾಗ ತನ್ನ ಕೈಗೆ ಆಗಿದ್ದ ಸುಟ್ಟ ಗಾಯ ಕಾಣಿಸಬಾರದೆಂದು​ ಹಾಕಿಕೊಳ್ಳುತ್ತಿದ್ದ ಗ್ಲೌಸ್​ಗಳೇ ಆರೋಪಿಯನ್ನ ಹಿಡಿಯಲು ಪ್ರಮುಖ ಸುಳಿವು ನೀಡಿವೆ. ಸದ್ಯ ಆರೋಪಿಯ ಮನೆಯನ್ನು ಸರ್ಕಾರ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಸಿ ಎಂದು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾಯ್ಸ್​ ಬದಲಿಸೋ ಆ್ಯಪ್ ಬಳಸಿ 7 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ.. ಅನಕ್ಷರಸ್ಥನ ಕೃತ್ಯಕ್ಕೆ ಪೊಲೀಸರೇ ಶಾಕ್!

https://newsfirstlive.com/wp-content/uploads/2024/05/MP_3_ARRESTED.jpg

    ಆರೋಪಿಯನ್ನೇ ಹಿಡಿದುಕೊಟ್ಟಿರುವುದೇ ಗ್ಲೌಸ್​ಗಳು.. ಹೇಗೆ?

    ಹುಡುಗಿಯರನ್ನ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದ

    ವಿದ್ಯಾರ್ಥಿಯರನ್ನು ಹೇಗೆ ಖೆಡ್ಡಾಕ್ಕೆ ಕೆಡುವುತ್ತಿದ್ದ ಗೊತ್ತಾ ಕಿಲಾಡಿ?

ಭೋಪಾಲ್: ಧ್ವನಿ ಬದಲಾಯಿಸುವ ಮೊಬೈಲ್​ ಆ್ಯಪ್ ಬಳಸಿ ಕಾಲೇಜಿನ 7 ವಿದ್ಯಾರ್ಥಿನಿಯರ ಮೇಲೆ ಅನಕ್ಷರಸ್ಥನೊಬ್ಬ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಪೊಲೀಸರು ಒಟ್ಟು ಮೂವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಮಿಲ್​ ಕಾರ್ಮಿಕ ಬ್ರಜೇಶ್ ಕುಶ್ವಾಹಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಪ್ರಮುಖ ಆರೋಪಿ. ಇವನು ಅನಕ್ಷರಸ್ಥನಾಗಿದ್ದು ಮಹಾರಾಷ್ಟ್ರದ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಕೈ ಸುಟ್ಟುಕೊಂಡಿದ್ದನು. ಬಳಿಕ ತನ್ನ ಊರಿಗೆ ವಾಪಸ್ ಆಗಿದ್ದನು. ನಂತರ ಧ್ವನಿ ಬದಲಾಯಿಸುವ ಮೊಬೈಲ್​ ಆ್ಯಪ್​ ಬಳಸಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಮಹಿಳಾ ಪ್ರೊಫೆಸರ್​ನಂತೆ ಮಾತಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಿತ್ಯ ಲೈಂಗಿಕ ಕಿರುಕುಳ.. ತನ್ನ ಮೇಲೆ ಅತ್ಯಾಚಾರ ಎಸಗ್ತಿದ್ದ ವ್ಯಕ್ತಿಯನ್ನ ಕೊಂದ ಬಾಲಕ

ವಿದ್ಯಾರ್ಥಿನಿಯರ ಜೊತೆಗೆ ಮಾತಾಡುವಾಗ ಮಹಿಳಾ ಪ್ರೊಫೆಸರ್​ನಂತೆ ಮಾತಾಡಿ ನಿಮ್ಮ ಮುಂದಿನ ಶಿಕ್ಷಣಕ್ಕೆ ಹಾಗೂ ಸ್ಕಾಲರ್ಶಿಪ್​ಗೆ ಸಹಾಯ ಮಾಡುವುದಾಗಿ ಹೇಳುತ್ತಿದ್ದನು. ಬಳಿಕ ಒಮ್ಮೆ ನಿರ್ಜನ ಪ್ರದೇಶದಲ್ಲಿ ಭೇಟಿ ಆಗಲು ಹೇಳಿ, ಬೈಕ್​ನಲ್ಲಿ ಬಂದು ಮನೆಗೆ ಕರೆದುಕೊಂಡು ಹೋಗುತ್ತಿದ್ದ. ನಂತರ ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಜೊತೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗುತ್ತಿದ್ದನು. ಇದೇ ರೀತಿ 7 ಕಾಲೇಜುಗಳ 7 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದನು ಎಂದು ಹೇಳಲಾಗಿದೆ.

ಇದನ್ನೂ ಓದಿ: KKR vs SRH; ಗಂಭೀರ್ ಚಾಣಕ್ಷತನ, ಕ್ಯಾಪ್ಟನ್ ಕಮಿನ್ಸ್​ ಬುದ್ಧಿವಂತಿಕೆ.. 2 ತಂಡದ ಬಲಾಬಲ ಏನು?

ಈ ಸಂಬಂಧ ಯುವತಿಯೊಬ್ಬರು ನನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಕಾಲೇಜು ಬಳಿ ತಲೆಗೆ ಹೆಲ್ಮೆಟ್​ ಧರಿಸಿ ಬರುತ್ತಿದ್ದರಿಂದ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟವಾಗಿತ್ತು. ಆದರೆ ಎಲ್ಲ ಯುವತಿಯರ ಭೇಟಿ ಮಾಡಲು ಬಂದಾಗ ತನ್ನ ಕೈಗೆ ಆಗಿದ್ದ ಸುಟ್ಟ ಗಾಯ ಕಾಣಿಸಬಾರದೆಂದು​ ಹಾಕಿಕೊಳ್ಳುತ್ತಿದ್ದ ಗ್ಲೌಸ್​ಗಳೇ ಆರೋಪಿಯನ್ನ ಹಿಡಿಯಲು ಪ್ರಮುಖ ಸುಳಿವು ನೀಡಿವೆ. ಸದ್ಯ ಆರೋಪಿಯ ಮನೆಯನ್ನು ಸರ್ಕಾರ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಈ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಸಿ ಎಂದು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More