/newsfirstlive-kannada/media/post_attachments/wp-content/uploads/2023/08/krs-3.jpg)
ಮಂಡ್ಯ: ರಾಜ್ಯದಲ್ಲಿ ಕೆಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ನಿನ್ನೆ ಸುರಿದ ಮಳೆಗೆ ಅವಾಂತರಗಳು ಸೃಷ್ಟಿಯಾಗಿದೆ. ಅತ್ತ ಕಾವೇರಿ ಜಲಾನಯದ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕೃಷ್ಣರಾಜ ಸಾಗರ ತನ್ನ ಒಳಡಲು ತುಂಬಿಕೊಳ್ಳಲು ಪರಿತಪಿಸುತ್ತಿದೆ.
ನಿನ್ನೆ ಮಂಡ್ಯದಲ್ಲಿ 95.5 ಮಿಲಿಮೀಟರ್​ ಮಳೆಯಾಗಿದೆ. ಮೈಸೂರಿನಲ್ಲಿ 49 ಮಿಲಿಮೀಟರ್​, ಕೊಡಗಿನಲ್ಲಿ 64 ಮಿಲಿಮೀಟರ್​ ಮಳೆಯಾಗಿದೆ. ಆದರೂ ಕೆಆರ್​ಎಸ್ ಒಡಲು ತುಂಬಬೇಕಿದೆ​.
ಇದನ್ನೂ ಓದಿ: ಬೆಂಗಳೂರು: 133 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ಮಹಾಮಳೆ! ಹಳೆಯ ಘಟನೆಯನ್ನ ನೆನಪಿಸುತ್ತಿದೆ!
ಇಂದಿನ ಕೆಆರ್ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 84.24 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 12.783 ಟಿಎಂಸಿ
ಒಳ ಹರಿವು - 1,467 ಕ್ಯೂಸೆಕ್
ಹೊರ ಹರಿವು - 547 ಕ್ಯೂಸೆಕ್
ಕೆಆರ್​ಎಸ್​ ಅದೆಷ್ಟೋ ಜನರಿಗೆ ಜೀವಾಳ. ಇದನ್ನೇ ನಂಬಿಕೊಂಡು ಬದುಕುವ ಜನರಿದ್ದಾರೆ. ಕೃಷಿಯಿಂದ ಹಿಡಿದು, ಬಾಯಾರಿಕೆ ನೀಗಿಸುತ್ತದೆ. ಹಾಗಾಗಿ ಈ ಬಾರಿ ಹೆಚ್ಚು ಮಳೆಯಾದರೆ ಕೆಆರ್​ಎಸ್​ ಡ್ಯಾಂ ತುಂಬುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us