/newsfirstlive-kannada/media/post_attachments/wp-content/uploads/2024/09/MND_BUS.jpg)
ಮಂಡ್ಯ: ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್​​ಆರ್​ಟಿಸಿ ಬಸ್​ ಭಯಾನಕವಾಗಿ ಪಲ್ಟಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಈ ಅಪಘಾತ ನಡೆದಿದೆ.
ಇದನ್ನೂ ಓದಿ: ಭೀಕರ ಪ್ರವಾಹ, ಭೂಕುಸಿತ.. ಧಾರಾಕಾರ ಮಳೆಯಿಂದ 24 ಗಂಟೆಯಲ್ಲೇ 112ಕ್ಕೂ ಅಧಿಕ ಸಾವು!
ಬೆಂಗಳೂರು ಕಡೆಯಿಂದ ಮಂಡ್ಯ ಕಡೆಗೆ ಕೆಎಸ್​ಆರ್​​ಟಿಸಿ ಬಸ್​ ಹೋಗುತ್ತಿತ್ತು. ಈ ವೇಳೆ ಮಂಡ್ಯದ ಸಾಂಜೋ ಆಸ್ಪತ್ರೆ ಬಳಿ ಬಸ್​ ಅನ್ನು ಎಕ್ಸ್​​ಪ್ರೆಸ್​ ವೇಯಿಂದ ಸರ್ವೀಸ್​ ರಸ್ತೆ ಕಡೆಗೆ ಹೋಗುವಾಗ ಬಸ್​ ಪಲ್ಟಿಯಾಗಿದೆ. ಪಲ್ಟಿ ಆಗುವಾಗ ಅಲ್ಲೇ ನಿಂತಿದ್ದ ಕಂಟೈನರ್​ಗೂ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಬಸ್​ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಕುಮಾರಸ್ವಾಮಿ ಆರೋಪಕ್ಕೆ ಎಡಿಜಿಪಿ​ ಕೌಂಟರ್; ಗಂಗೇನಹಳ್ಳಿ ಕೇಸ್​ಗೆ ಹೊಸ ತಿರುವು..!
/newsfirstlive-kannada/media/post_attachments/wp-content/uploads/2024/09/MND_BUS_1.jpg)
ಇನ್ನು ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಂಟೈನರ್ ಡ್ಯಾಮೇಜ್ ಆಗಿದ್ದು ಬಸ್​ಗೂ ಹಾನಿ ಯಾಗಿದೆ. ಬಸ್​ನ ಮುಂಭಾಗವೆಲ್ಲ ಫುಲ್ ನಜ್ಜುಗುಜ್ಜಾಗಿದೆ. ರಸ್ತೆಗೆ ಬಿದ್ದಿದ್ದರಿಂದ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ತಕ್ಷಣ ಕ್ರೇನ್ ಅನ್ನು ತರಿಸಿ ಬಸ್ ಅನ್ನು ಮೇಲೆತ್ತಲಾಯಿತು. ಈ ವೇಳೆ ಸ್ಥಳದಲ್ಲಿ ಪೊಲೀಸರು ಹಾಜರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us