ಪ್ರಿಯತಮೆಯ ಗಂಡನನ್ನ ಕೊಲೆ ಮಾಡಲೆಂದೇ ಕಳುಹಿಸಿದ್ದನು
ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಮಗಳು
ಬಾಂಬ್ ಸ್ಫೋಟಗೊಂಡಾಗ ಪ್ರಿಯತಮೆ ಎಲ್ಲಿ ಹೋಗಿದ್ದಳು?
ಗಾಂಧಿನಗರ: ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಮನೆಗೆ ಬಾಂಬ್ ಇಟ್ಟು ಪಾರ್ಸೆಲ್ ಕಳುಹಿಸಿದ್ದು ಅದನ್ನು ಓಪನ್ ಮಾಡಿದ ತಕ್ಷಣ ಸ್ಫೋಟಗೊಂಡು ಗಂಡ, ಮಗಳು ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್ನ ವಡಾಲಿಯಲ್ಲಿ ನಡೆದಿದೆ.
ವಡಾಲಿಯ ಜೀತುಭಾಯ್ ಹೀರಾಭಾಯಿ ವಂಜಾರಾ (32) ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ಭೂಮಿಕಾ (12) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಬಾಂಬ್ ಬ್ಲಾಸ್ಟ್ ಆದ ಕೆಲವೇ ಗಂಟೆಗಳಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿ ಜಯಂತಿಭಾಯಿ ಬಾಲುಸಿಂಗ್ ವಂಜಾರ (31)ನನ್ನ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ಬಸ್ ಪಲ್ಟಿ.. ಹೊನ್ನಾವರ ಘಾಟಿ ಬಳಿ ಭೀಕರ ಅಪಘಾತ; 80 ಮಂದಿಯಲ್ಲಿ ಹಲವರ ಕೈ, ಕಾಲು ಕಟ್
ಜೀತುಭಾಯ್ಯ ಹೆಂಡತಿ ಜೊತೆ ಮದುವೆಗೆ ಮೊದಲಿನಿಂದಲು ಆರೋಪಿಯು ಅಕ್ರಮ ಸಂಬಂಧ ಹೊಂದಿದ್ದನು. ಅಲ್ಲದೇ ಮೊದಲಿನಿಂದಲೂ ಆಕೆ ನನ್ನ ಜೊತೆಗಿದ್ದು ಬೇರೆಯವನನ್ನ ಮದುವೆ ಆಗಿದ್ದಕ್ಕೆ ಆರೋಪಿಯು ಮನನೊಂದಿದ್ದನು. ಹೀಗಾಗಿ ಆಕೆಯ ಗಂಡನನ್ನು ಕೊಲೆ ಮಾಡಲೆಂದು ರಾಜಸ್ಥಾನಕ್ಕೆ ಹೋಗಿ ಬಾಂಬ್ಗೆ ಬೇಕಾಗುವ ಜಿಲೆಟಿನ್ ಸ್ಟಿಕ್ಗಳನ್ನು ಖರೀದಿ ಮಾಡಿದ್ದನು. ನಂತರ ಅದನ್ನು ಟೇಪ್ರೇಕಾರ್ಡ್ ರೀತಿಯಲ್ಲಿ ರೆಡಿ ಮಾಡಿ, ಬಟನ್ ಪ್ರೆಸ್ ಮಾಡಿದರೆ ಸ್ಫೋಟವಾಗುಂತೆ ಮಾಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಬಿಸಿಲಿನ ತಾಪಮಾನ; ರಾಯಚೂರನ್ನೇ ಸೈಡ್ ಮಾಡಿದ ಮಂಡ್ಯ.. ಎಷ್ಟು ಡಿಗ್ರಿ ಸೆಲ್ಸಿಯಸ್ ದಾಖಲಾಯ್ತು?
ಅದರಂತೆ ಬಾಂಬ್ ಅನ್ನು ಆಟೋ ಮೂಲಕ ಪಾರ್ಸೆಲ್ ಆಗಿ ಪ್ರಿಯತಮೆಯ ಮನೆಗೆ ಕಳುಹಿಸಿದ್ದಾನೆ. ಆಟೋ ಡ್ರೈವರ್ನಿಂದ ಪಾರ್ಸೆಲ್ ಪಡೆದುಕೊಂಡು ಆಕೆಯ ಗಂಡ ಅದನ್ನು ಓಪನ್ ಮಾಡಿದ್ದಾನೆ. ತಕ್ಷಣ ಅದು ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲೇ ಗಂಡ, ಮಗಳು ಸಾವನ್ನಪ್ಪಿದ್ದಾರೆ. ಇಷ್ಟೇ ಅಲ್ಲದೇ ಇನ್ನಿಬ್ಬರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾರ್ಸೆಲ್ ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿ ಇಲ್ಲದ ಕಾರಣ ಆಕೆಗೆ ಏನು ಆಗಿಲ್ಲ ಎಂದು ಹೇಳಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಿಯತಮೆಯ ಗಂಡನನ್ನ ಕೊಲೆ ಮಾಡಲೆಂದೇ ಕಳುಹಿಸಿದ್ದನು
ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಮಗಳು
ಬಾಂಬ್ ಸ್ಫೋಟಗೊಂಡಾಗ ಪ್ರಿಯತಮೆ ಎಲ್ಲಿ ಹೋಗಿದ್ದಳು?
ಗಾಂಧಿನಗರ: ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಮನೆಗೆ ಬಾಂಬ್ ಇಟ್ಟು ಪಾರ್ಸೆಲ್ ಕಳುಹಿಸಿದ್ದು ಅದನ್ನು ಓಪನ್ ಮಾಡಿದ ತಕ್ಷಣ ಸ್ಫೋಟಗೊಂಡು ಗಂಡ, ಮಗಳು ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್ನ ವಡಾಲಿಯಲ್ಲಿ ನಡೆದಿದೆ.
ವಡಾಲಿಯ ಜೀತುಭಾಯ್ ಹೀರಾಭಾಯಿ ವಂಜಾರಾ (32) ಸ್ಥಳದಲ್ಲೇ ಮೃತಪಟ್ಟಿದ್ದು, ಮಗಳು ಭೂಮಿಕಾ (12) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಬಾಂಬ್ ಬ್ಲಾಸ್ಟ್ ಆದ ಕೆಲವೇ ಗಂಟೆಗಳಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿ ಜಯಂತಿಭಾಯಿ ಬಾಲುಸಿಂಗ್ ವಂಜಾರ (31)ನನ್ನ ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ಬಸ್ ಪಲ್ಟಿ.. ಹೊನ್ನಾವರ ಘಾಟಿ ಬಳಿ ಭೀಕರ ಅಪಘಾತ; 80 ಮಂದಿಯಲ್ಲಿ ಹಲವರ ಕೈ, ಕಾಲು ಕಟ್
ಜೀತುಭಾಯ್ಯ ಹೆಂಡತಿ ಜೊತೆ ಮದುವೆಗೆ ಮೊದಲಿನಿಂದಲು ಆರೋಪಿಯು ಅಕ್ರಮ ಸಂಬಂಧ ಹೊಂದಿದ್ದನು. ಅಲ್ಲದೇ ಮೊದಲಿನಿಂದಲೂ ಆಕೆ ನನ್ನ ಜೊತೆಗಿದ್ದು ಬೇರೆಯವನನ್ನ ಮದುವೆ ಆಗಿದ್ದಕ್ಕೆ ಆರೋಪಿಯು ಮನನೊಂದಿದ್ದನು. ಹೀಗಾಗಿ ಆಕೆಯ ಗಂಡನನ್ನು ಕೊಲೆ ಮಾಡಲೆಂದು ರಾಜಸ್ಥಾನಕ್ಕೆ ಹೋಗಿ ಬಾಂಬ್ಗೆ ಬೇಕಾಗುವ ಜಿಲೆಟಿನ್ ಸ್ಟಿಕ್ಗಳನ್ನು ಖರೀದಿ ಮಾಡಿದ್ದನು. ನಂತರ ಅದನ್ನು ಟೇಪ್ರೇಕಾರ್ಡ್ ರೀತಿಯಲ್ಲಿ ರೆಡಿ ಮಾಡಿ, ಬಟನ್ ಪ್ರೆಸ್ ಮಾಡಿದರೆ ಸ್ಫೋಟವಾಗುಂತೆ ಮಾಡಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಬಿಸಿಲಿನ ತಾಪಮಾನ; ರಾಯಚೂರನ್ನೇ ಸೈಡ್ ಮಾಡಿದ ಮಂಡ್ಯ.. ಎಷ್ಟು ಡಿಗ್ರಿ ಸೆಲ್ಸಿಯಸ್ ದಾಖಲಾಯ್ತು?
ಅದರಂತೆ ಬಾಂಬ್ ಅನ್ನು ಆಟೋ ಮೂಲಕ ಪಾರ್ಸೆಲ್ ಆಗಿ ಪ್ರಿಯತಮೆಯ ಮನೆಗೆ ಕಳುಹಿಸಿದ್ದಾನೆ. ಆಟೋ ಡ್ರೈವರ್ನಿಂದ ಪಾರ್ಸೆಲ್ ಪಡೆದುಕೊಂಡು ಆಕೆಯ ಗಂಡ ಅದನ್ನು ಓಪನ್ ಮಾಡಿದ್ದಾನೆ. ತಕ್ಷಣ ಅದು ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲೇ ಗಂಡ, ಮಗಳು ಸಾವನ್ನಪ್ಪಿದ್ದಾರೆ. ಇಷ್ಟೇ ಅಲ್ಲದೇ ಇನ್ನಿಬ್ಬರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಾರ್ಸೆಲ್ ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿ ಇಲ್ಲದ ಕಾರಣ ಆಕೆಗೆ ಏನು ಆಗಿಲ್ಲ ಎಂದು ಹೇಳಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ