ಟೀಮ್ ಇಂಡಿಯಾ ಪರ ಡೆಬ್ಯೂ ಮಾಡಿದ ಮಯಾಂಕ್
ಇಂಜುರಿಗೆ ತುತ್ತಾಗಿ IPLನಿಂದ ಹೊರಬಿದ್ದಿದ್ದ ಆ ವೇಗಿ
ಬಾಸ್ಗಳ ಅಭಯ ಹಸ್ತ, NCAನಲ್ಲಿ ಸ್ಪೆಷಲ್ ಟ್ರೀಟ್ಮೆಂಟ್
ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲಿ ಮಿಂಚಿದ ಮಯಾಂಕ್ ಯಾದವ್, ಹೊಸ ಭರವಸೆ ಹುಟ್ಟು ಹಾಕಿದ್ದಾರೆ. ತನ್ನ ಬೌಲಿಂಗ್ನಿಂದ ಸೆನ್ಸೇಷನ್ ಸೃಷ್ಟಿಸಿರೋ ಮಯಾಂಕ್ ಆಟವನ್ನ ಮೆಚ್ಚಿದ ಎಲ್ಲರೂ ಶಹಬ್ಬಾಸ್ ಅಂತಿದ್ದಾರೆ. ಇದೇ ವೇಳೆ ಬಿಸಿಸಿಐನ ಇಬ್ಬುಗೆಯ ನೀತಿಯನ್ನೂ ಹಲವರು ಪ್ರಶ್ನಿಸ್ತಿದ್ದಾರೆ.
ಮಯಾಂಕ್ ಯಾದವ್. ಟೀಮ್ ಇಂಡಿಯಾದ ಪೇಸ್ ಸೆನ್ಸೇಷನ್. ಡೆಬ್ಯೂ ಪಂದ್ಯದಲ್ಲೇ ಜಬರ್ದಸ್ತ್ ಬೌಲಿಂಗ್ ಮಾಡಿದ ಮಯಾಂಕ್, ಎಲ್ಲರ ಗಮನ ಸಳೆದಿದ್ದಾರೆ. ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಹಾಕಿದ ಮೊದಲ ಓವರ್ನಲ್ಲಿ ಒಂದೇ ಒಂದು ರನ್ ಬಿಟ್ಟು ಕೊಡದೇ ಬೌಲಿಂಗ್ ಮಾಡಿದ್ದಕ್ಕಂತೂ ಕ್ರಿಕೆಟ್ ಪ್ರಿಯರು ಕ್ಲೀನ್ಬೋಲ್ಡ್ ಆಗಿದ್ದಾರೆ.
ಇದನ್ನೂ ಓದಿ:ರೋಹಿತ್ ಶರ್ಮಾ ಆರ್ಸಿಬಿಗೆ ಸೇರುವ ವಿಚಾರದ ಬಗ್ಗೆ ಮಾತನಾಡಿದ ಎಬಿ ಡಿ ವಿಲ್ಲಿಯರ್ಸ್..!
ಕಳೆದ ಐಪಿಎಲ್ ಟೂರ್ನಿಯಲ್ಲಿ ಕನ್ಸಿಸ್ಟೆಂಟ್ ಆಗಿ 150 ಕಿಲೋ ಮೀಟರ್ಗೂ ಹೆಚ್ಚಿನ ವೇಗದಲ್ಲಿ ಮಯಾಂಕ್ ಬೌಲಿಂಗ್ ಮಾಡಿದ್ರು. ಪೇಸ್ ಮಾತ್ರವಲ್ಲ.. ಲೈನ್ ಅಂಡ್ ಲೆಂಥ್ ಕೂಡ ಮೆಂಟೇನ್ ಮಾಡಿದ್ದ ಯುವ ವೇಗಿ ವಿಕೆಟ್ಗಳನ್ನೂ ಬೇಟೆಯಾಡಿದ್ರು. ಆಗಲೇ ಎಲ್ಲರ ಕಣ್ಣು ಮಯಾಂಕ್ ಮೇಲೆ ಬಿದ್ದಿತ್ತು. ಆದ್ರೆ, ದುರಾದೃಷ್ಟವೋ ಏನೋ ಮಯಾಂಕ್ ಇಂಜುರಿಗೆ ತುತ್ತಾಗಿ ಎನ್ಸಿಎ ಸೇರಿದ್ರು.
NCAನಲ್ಲಿ ಸ್ಪೆಷಲ್ ಟ್ರೀಟ್ಮೆಂಟ್
ಇಂಜುರಿಗೆ ತುತ್ತಾದ ಮಯಾಂಕ್ ಟೀಮ್ ಇಂಡಿಯಾಗೆ ಡೆಬ್ಯೂ ಮಾಡದಿದ್ರು, ಬಿಸಿಸಿಐ ಸ್ಪೆಷಲ್ ಕೇರ್ ತೆಗೆದುಕೊಳ್ತು. ಬಾಸ್ಗಳ ಸೂಚನೆ ಮೇರೆಗೆ ಎನ್ಸಿಎ ಡಾಕ್ಟರ್ಗಳು ಮಯಾಂಕ್ಗೆ ಸ್ಪೆಷಲ್ ಟ್ರೀಟ್ಮೆಂಟ್ ನೀಡಿದ್ರು. ಅಂತಿಮವಾಗಿ ಕಳೆದ ತಿಂಗಳು ಫುಲ್ ಫಿಟ್ ಆದ ಮಯಾಂಕ್, ಯಾವ ಡೊಮೆಸ್ಟಿಕ್ ಪಂದ್ಯವನ್ನೂ ಆಡಲಿಲ್ಲ. ನೇರವಾಗಿ ಬಾಂಗ್ಲಾ ವಿರುದ್ಧ ಸರಣಿಯಲ್ಲಿ ಡೆಬ್ಯೂ ಮಾಡಿ ಭಾರತದ ಪರ ಆಡೋ ಕನಸು ನನಸು ಮಾಡಿಕೊಂಡ್ರು. ಮೊದಲ ಪಂದ್ಯದಲ್ಲೇ ಎಕಾನಮಿಕಲ್ ಸ್ಪೆಲ್ ಹಾಕಿ 1 ವಿಕೆಟ್ ಕೂಡ ಬೇಟೆಯಾಡಿದ್ರು.
ಮತ್ತೊಬ್ಬರಿಗೆ ಒಂದು ನ್ಯಾಯ..?
ಸಿಕ್ಕ ಅವಕಾಶದಲ್ಲಿ ಮಿಂಚಿರುವ ಮಯಾಂಕ್ ಯಾದವ್, ಭವಿಷ್ಯದ ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು, ಒಟ್ಟಾರೆ ಭಾರತೀಯ ಕ್ರಿಕೆಟ್ ಲೋಕವೇ ಮಯಾಂಕ್ನ ಸದ್ಯ ಹಾಡಿ ಹೊಗಳ್ತಾಯಿದೆ. ಇದೇ ಸಂದರ್ಭದಲ್ಲಿ ಬಿಸಿಸಿಐನ ಇಬ್ಬುಗೆಯ ನೀತಿಯೂ ಬಟಾ ಬಯಲಾಗಿದ್ದು, ಟೀಕೆಗಳು ವ್ಯಕ್ತವಾಗ್ತಿವೆ. ಮಯಾಂಕ್ ವಿಚಾರದಲ್ಲಿ ಮುತುವರ್ಜಿ ವಹಿಸಿದ ಬಾಸ್ಗಳು ಉಮ್ರಾನ್ ಮಲ್ಲಿಕ್ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದೇಕೆ ಅನ್ನೋದು ಪ್ರಶ್ನೆಯಾಗಿದೆ.
ಇದನ್ನೂ ಓದಿ:RCB ಅಭಿಮಾನಿಗಳಿಗೆ ಗುಡ್ನ್ಯೂಸ್; ಬಲಿಷ್ಠ ಟೀಂ ಇಂಡಿಯಾದಲ್ಲಿ 4 ಮಂದಿ ಆರ್ಸಿಬಿ ಆಟಗಾರರು..!
ವೇಗದಿಂದಲೇ ಸೆನ್ಸೇಷನ್ ಸೃಷ್ಟಿಸಿದ್ದ ಮಲಿಕ್
ಮಯಾಂಕ್ ಯಾದವ್ರಂತೆ 2022ರ ಐಪಿಎಲ್ನಲ್ಲಿ ಉಮ್ರಾನ್ ಮಲ್ಲಿಕ್ ಸೆನ್ಸೇಷನ್ ಸೃಷ್ಟಿಸಿದ್ರು. 150ಕ್ಕೂ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡ್ತಾ ಗಮನ ಸೆಳೆದಿದ್ರು. ತನ್ನ ವೇಗದ ಬಲದಿಂದ ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟು ಕಮಾಲ್ ಮಾಡಿದ್ರು. 10 ಏಕದಿನ, 8 ಟಿ20 ಪಂದ್ಯಗಳನ್ನಾಡಿದ ಉಮ್ರಾನ್ ಮಲ್ಲಿಕ್, ತಂಡಕ್ಕೆ ಎಂಟ್ರಿಯಾದಷ್ಟೇ ವೇಗವಾಗಿ ಕಣ್ಮರೆಯಾದ್ರು.
ಬಿಸಿಸಿಐ ಬಾಸ್ಗಳ ನಿರ್ಲಕ್ಷ್ಯ
ಮಯಾಂಕ್ ಯಾದವ್ರಂತೆ ಉಮ್ರಾನ್ ಮಲಿಕ್ ಕೂಡ ಟೀಮ್ ಇಂಡಿಯಾಗೆ ಸಿಕ್ಕಿದ್ದ ಅಮೂಲ್ಯ ಪ್ರತಿಭೆ. ಕನ್ಸಿಸ್ಟೆಂಟ್ ಆಗಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡ್ತಿದ್ದ ಉಮ್ರಾನ್, ಲೈನ್ ಅಂಡ್ ಲೆಂಥ್ ವಿಚಾರದಲ್ಲಿ ಎಡವ್ತಿದ್ರು. ಯುವ ವೇಗಿಗೆ ಸಮರ್ಥ ಮಾರ್ಗದರ್ಶನದ ಅವಶ್ಯಕತೆಯಿತ್ತು. ಇದೀಗ ಮಯಾಂಕ್ ಯಾದವ್ ಇಂಜುರಿ ವಿಚಾರದಲ್ಲಿ ಮುತುವರ್ಜಿ ವಹಿಸಿದ ಬಿಸಿಸಿಐ ಬಾಸ್ಗಳು ಆಗ ಉಮ್ರಾನ್ ಮಲಿಕ್ಗೆ ಮಾರ್ಗದರ್ಶನ ನೀಡೋ ವಿಚಾರದಲ್ಲಿ ತೋರಿಸಲಿಲ್ಲ. ಕ್ಯಾಪ್ಟನ್, ಕೋಚ್, ಸೆಲೆಕ್ಟರ್ಸ್ ಕೂಡ ಉಮ್ರಾನ್ ವಿಚಾರದಲ್ಲಿ ನಿರ್ಲಕ್ಯ ತೋರಿದ್ರು. ಪರಿಣಾಮ ಬಂದಷ್ಟೇ ವೇಗವಾಗಿ ತಂಡದಿಂದ ಹೊರಬಿದ್ರು. ಈ ಬಗ್ಗೆಯೇ ಇದೀಗ ಟೀಕೆಗಳು ಎದ್ದಿವೆ.
ಉಮ್ರಾನ್ ಮಲ್ಲಿಕ್ ಮಾತ್ರವಲ್ಲ. ಹಲವಾರು ಯಂಗ್ ಟ್ಯಾಲೆಂಟ್ಗಳ ವಿಚಾರದಲ್ಲಿ ಬಿಸಿಸಿಐ ಪದೇ ಪದೇ ತಪ್ಪು ಹೆಜ್ಜೆ ಇಟ್ಟಿದೆ. ಕಳೆದ ಕೆಲ ವರ್ಷಗಳಿಂದ ಇನ್ನೂ ಹಲವು ಆಟಗಾರರು ಟೀಮ್ ಇಂಡಿಯಾಗೆ ಗೆಸ್ಟ್ ಅಪಿರೀಯನ್ಸ್ ರೀತಿ ಬಂದು ಹೋಗಿದ್ದಾರೆ. ಕೆಲವೇ ಪಂದ್ಯಕ್ಕೆ ಸೀಮಿತವಾದ ಆ ಆಟಗಾರರಿಗೆ ಮತ್ತೆ ಅವಕಾಶ ಸಿಗೋದು ಅನುಮಾನವೇ.
ಇದನ್ನೂ ಓದಿ:CSKಯಲ್ಲಿ ದಿನಕ್ಕೊಂದು ಬೆಳವಣಿಗೆ.. ಧೋನಿ ಬಗ್ಗೆ CEO ಶಾಕಿಂಗ್ ಹೇಳಿಕೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟೀಮ್ ಇಂಡಿಯಾ ಪರ ಡೆಬ್ಯೂ ಮಾಡಿದ ಮಯಾಂಕ್
ಇಂಜುರಿಗೆ ತುತ್ತಾಗಿ IPLನಿಂದ ಹೊರಬಿದ್ದಿದ್ದ ಆ ವೇಗಿ
ಬಾಸ್ಗಳ ಅಭಯ ಹಸ್ತ, NCAನಲ್ಲಿ ಸ್ಪೆಷಲ್ ಟ್ರೀಟ್ಮೆಂಟ್
ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ ಮೊದಲ ಪಂದ್ಯದಲ್ಲಿ ಮಿಂಚಿದ ಮಯಾಂಕ್ ಯಾದವ್, ಹೊಸ ಭರವಸೆ ಹುಟ್ಟು ಹಾಕಿದ್ದಾರೆ. ತನ್ನ ಬೌಲಿಂಗ್ನಿಂದ ಸೆನ್ಸೇಷನ್ ಸೃಷ್ಟಿಸಿರೋ ಮಯಾಂಕ್ ಆಟವನ್ನ ಮೆಚ್ಚಿದ ಎಲ್ಲರೂ ಶಹಬ್ಬಾಸ್ ಅಂತಿದ್ದಾರೆ. ಇದೇ ವೇಳೆ ಬಿಸಿಸಿಐನ ಇಬ್ಬುಗೆಯ ನೀತಿಯನ್ನೂ ಹಲವರು ಪ್ರಶ್ನಿಸ್ತಿದ್ದಾರೆ.
ಮಯಾಂಕ್ ಯಾದವ್. ಟೀಮ್ ಇಂಡಿಯಾದ ಪೇಸ್ ಸೆನ್ಸೇಷನ್. ಡೆಬ್ಯೂ ಪಂದ್ಯದಲ್ಲೇ ಜಬರ್ದಸ್ತ್ ಬೌಲಿಂಗ್ ಮಾಡಿದ ಮಯಾಂಕ್, ಎಲ್ಲರ ಗಮನ ಸಳೆದಿದ್ದಾರೆ. ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಹಾಕಿದ ಮೊದಲ ಓವರ್ನಲ್ಲಿ ಒಂದೇ ಒಂದು ರನ್ ಬಿಟ್ಟು ಕೊಡದೇ ಬೌಲಿಂಗ್ ಮಾಡಿದ್ದಕ್ಕಂತೂ ಕ್ರಿಕೆಟ್ ಪ್ರಿಯರು ಕ್ಲೀನ್ಬೋಲ್ಡ್ ಆಗಿದ್ದಾರೆ.
ಇದನ್ನೂ ಓದಿ:ರೋಹಿತ್ ಶರ್ಮಾ ಆರ್ಸಿಬಿಗೆ ಸೇರುವ ವಿಚಾರದ ಬಗ್ಗೆ ಮಾತನಾಡಿದ ಎಬಿ ಡಿ ವಿಲ್ಲಿಯರ್ಸ್..!
ಕಳೆದ ಐಪಿಎಲ್ ಟೂರ್ನಿಯಲ್ಲಿ ಕನ್ಸಿಸ್ಟೆಂಟ್ ಆಗಿ 150 ಕಿಲೋ ಮೀಟರ್ಗೂ ಹೆಚ್ಚಿನ ವೇಗದಲ್ಲಿ ಮಯಾಂಕ್ ಬೌಲಿಂಗ್ ಮಾಡಿದ್ರು. ಪೇಸ್ ಮಾತ್ರವಲ್ಲ.. ಲೈನ್ ಅಂಡ್ ಲೆಂಥ್ ಕೂಡ ಮೆಂಟೇನ್ ಮಾಡಿದ್ದ ಯುವ ವೇಗಿ ವಿಕೆಟ್ಗಳನ್ನೂ ಬೇಟೆಯಾಡಿದ್ರು. ಆಗಲೇ ಎಲ್ಲರ ಕಣ್ಣು ಮಯಾಂಕ್ ಮೇಲೆ ಬಿದ್ದಿತ್ತು. ಆದ್ರೆ, ದುರಾದೃಷ್ಟವೋ ಏನೋ ಮಯಾಂಕ್ ಇಂಜುರಿಗೆ ತುತ್ತಾಗಿ ಎನ್ಸಿಎ ಸೇರಿದ್ರು.
NCAನಲ್ಲಿ ಸ್ಪೆಷಲ್ ಟ್ರೀಟ್ಮೆಂಟ್
ಇಂಜುರಿಗೆ ತುತ್ತಾದ ಮಯಾಂಕ್ ಟೀಮ್ ಇಂಡಿಯಾಗೆ ಡೆಬ್ಯೂ ಮಾಡದಿದ್ರು, ಬಿಸಿಸಿಐ ಸ್ಪೆಷಲ್ ಕೇರ್ ತೆಗೆದುಕೊಳ್ತು. ಬಾಸ್ಗಳ ಸೂಚನೆ ಮೇರೆಗೆ ಎನ್ಸಿಎ ಡಾಕ್ಟರ್ಗಳು ಮಯಾಂಕ್ಗೆ ಸ್ಪೆಷಲ್ ಟ್ರೀಟ್ಮೆಂಟ್ ನೀಡಿದ್ರು. ಅಂತಿಮವಾಗಿ ಕಳೆದ ತಿಂಗಳು ಫುಲ್ ಫಿಟ್ ಆದ ಮಯಾಂಕ್, ಯಾವ ಡೊಮೆಸ್ಟಿಕ್ ಪಂದ್ಯವನ್ನೂ ಆಡಲಿಲ್ಲ. ನೇರವಾಗಿ ಬಾಂಗ್ಲಾ ವಿರುದ್ಧ ಸರಣಿಯಲ್ಲಿ ಡೆಬ್ಯೂ ಮಾಡಿ ಭಾರತದ ಪರ ಆಡೋ ಕನಸು ನನಸು ಮಾಡಿಕೊಂಡ್ರು. ಮೊದಲ ಪಂದ್ಯದಲ್ಲೇ ಎಕಾನಮಿಕಲ್ ಸ್ಪೆಲ್ ಹಾಕಿ 1 ವಿಕೆಟ್ ಕೂಡ ಬೇಟೆಯಾಡಿದ್ರು.
ಮತ್ತೊಬ್ಬರಿಗೆ ಒಂದು ನ್ಯಾಯ..?
ಸಿಕ್ಕ ಅವಕಾಶದಲ್ಲಿ ಮಿಂಚಿರುವ ಮಯಾಂಕ್ ಯಾದವ್, ಭವಿಷ್ಯದ ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು, ಒಟ್ಟಾರೆ ಭಾರತೀಯ ಕ್ರಿಕೆಟ್ ಲೋಕವೇ ಮಯಾಂಕ್ನ ಸದ್ಯ ಹಾಡಿ ಹೊಗಳ್ತಾಯಿದೆ. ಇದೇ ಸಂದರ್ಭದಲ್ಲಿ ಬಿಸಿಸಿಐನ ಇಬ್ಬುಗೆಯ ನೀತಿಯೂ ಬಟಾ ಬಯಲಾಗಿದ್ದು, ಟೀಕೆಗಳು ವ್ಯಕ್ತವಾಗ್ತಿವೆ. ಮಯಾಂಕ್ ವಿಚಾರದಲ್ಲಿ ಮುತುವರ್ಜಿ ವಹಿಸಿದ ಬಾಸ್ಗಳು ಉಮ್ರಾನ್ ಮಲ್ಲಿಕ್ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದೇಕೆ ಅನ್ನೋದು ಪ್ರಶ್ನೆಯಾಗಿದೆ.
ಇದನ್ನೂ ಓದಿ:RCB ಅಭಿಮಾನಿಗಳಿಗೆ ಗುಡ್ನ್ಯೂಸ್; ಬಲಿಷ್ಠ ಟೀಂ ಇಂಡಿಯಾದಲ್ಲಿ 4 ಮಂದಿ ಆರ್ಸಿಬಿ ಆಟಗಾರರು..!
ವೇಗದಿಂದಲೇ ಸೆನ್ಸೇಷನ್ ಸೃಷ್ಟಿಸಿದ್ದ ಮಲಿಕ್
ಮಯಾಂಕ್ ಯಾದವ್ರಂತೆ 2022ರ ಐಪಿಎಲ್ನಲ್ಲಿ ಉಮ್ರಾನ್ ಮಲ್ಲಿಕ್ ಸೆನ್ಸೇಷನ್ ಸೃಷ್ಟಿಸಿದ್ರು. 150ಕ್ಕೂ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡ್ತಾ ಗಮನ ಸೆಳೆದಿದ್ರು. ತನ್ನ ವೇಗದ ಬಲದಿಂದ ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟು ಕಮಾಲ್ ಮಾಡಿದ್ರು. 10 ಏಕದಿನ, 8 ಟಿ20 ಪಂದ್ಯಗಳನ್ನಾಡಿದ ಉಮ್ರಾನ್ ಮಲ್ಲಿಕ್, ತಂಡಕ್ಕೆ ಎಂಟ್ರಿಯಾದಷ್ಟೇ ವೇಗವಾಗಿ ಕಣ್ಮರೆಯಾದ್ರು.
ಬಿಸಿಸಿಐ ಬಾಸ್ಗಳ ನಿರ್ಲಕ್ಷ್ಯ
ಮಯಾಂಕ್ ಯಾದವ್ರಂತೆ ಉಮ್ರಾನ್ ಮಲಿಕ್ ಕೂಡ ಟೀಮ್ ಇಂಡಿಯಾಗೆ ಸಿಕ್ಕಿದ್ದ ಅಮೂಲ್ಯ ಪ್ರತಿಭೆ. ಕನ್ಸಿಸ್ಟೆಂಟ್ ಆಗಿ 150 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡ್ತಿದ್ದ ಉಮ್ರಾನ್, ಲೈನ್ ಅಂಡ್ ಲೆಂಥ್ ವಿಚಾರದಲ್ಲಿ ಎಡವ್ತಿದ್ರು. ಯುವ ವೇಗಿಗೆ ಸಮರ್ಥ ಮಾರ್ಗದರ್ಶನದ ಅವಶ್ಯಕತೆಯಿತ್ತು. ಇದೀಗ ಮಯಾಂಕ್ ಯಾದವ್ ಇಂಜುರಿ ವಿಚಾರದಲ್ಲಿ ಮುತುವರ್ಜಿ ವಹಿಸಿದ ಬಿಸಿಸಿಐ ಬಾಸ್ಗಳು ಆಗ ಉಮ್ರಾನ್ ಮಲಿಕ್ಗೆ ಮಾರ್ಗದರ್ಶನ ನೀಡೋ ವಿಚಾರದಲ್ಲಿ ತೋರಿಸಲಿಲ್ಲ. ಕ್ಯಾಪ್ಟನ್, ಕೋಚ್, ಸೆಲೆಕ್ಟರ್ಸ್ ಕೂಡ ಉಮ್ರಾನ್ ವಿಚಾರದಲ್ಲಿ ನಿರ್ಲಕ್ಯ ತೋರಿದ್ರು. ಪರಿಣಾಮ ಬಂದಷ್ಟೇ ವೇಗವಾಗಿ ತಂಡದಿಂದ ಹೊರಬಿದ್ರು. ಈ ಬಗ್ಗೆಯೇ ಇದೀಗ ಟೀಕೆಗಳು ಎದ್ದಿವೆ.
ಉಮ್ರಾನ್ ಮಲ್ಲಿಕ್ ಮಾತ್ರವಲ್ಲ. ಹಲವಾರು ಯಂಗ್ ಟ್ಯಾಲೆಂಟ್ಗಳ ವಿಚಾರದಲ್ಲಿ ಬಿಸಿಸಿಐ ಪದೇ ಪದೇ ತಪ್ಪು ಹೆಜ್ಜೆ ಇಟ್ಟಿದೆ. ಕಳೆದ ಕೆಲ ವರ್ಷಗಳಿಂದ ಇನ್ನೂ ಹಲವು ಆಟಗಾರರು ಟೀಮ್ ಇಂಡಿಯಾಗೆ ಗೆಸ್ಟ್ ಅಪಿರೀಯನ್ಸ್ ರೀತಿ ಬಂದು ಹೋಗಿದ್ದಾರೆ. ಕೆಲವೇ ಪಂದ್ಯಕ್ಕೆ ಸೀಮಿತವಾದ ಆ ಆಟಗಾರರಿಗೆ ಮತ್ತೆ ಅವಕಾಶ ಸಿಗೋದು ಅನುಮಾನವೇ.
ಇದನ್ನೂ ಓದಿ:CSKಯಲ್ಲಿ ದಿನಕ್ಕೊಂದು ಬೆಳವಣಿಗೆ.. ಧೋನಿ ಬಗ್ಗೆ CEO ಶಾಕಿಂಗ್ ಹೇಳಿಕೆ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್