ಎರಡು ಗುಂಪುಗಳಾದ ಮುಂಬೈ ಇಂಡಿಯನ್ಸ್ ಟೀಮ್
ಹಾರ್ದಿಕ್, ರೋಹಿತ್ ಮಧ್ಯೆ ಮುಂದುವರಿದ ಜಗಳ..!
ಕ್ಯಾಪ್ಟನ್ ಪಾಂಡ್ಯ ವಿರುದ್ಧ ಘೋಷಣೆ ಕೂಗಿದ್ರೆ ಶಿಕ್ಷೆ
ಕಳೆದ 2 ಪಂದ್ಯಗಳಲ್ಲೂ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲು ಕಂಡಿದೆ. ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 6 ರನ್ಗಳಿಂದ ಸೋಲಿಸಿತು. ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಎರಡು ಗುಂಪಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಹೌದು, ಮುಂಬೈ ಇಂಡಿಯನ್ಸ್ ತಂಡವು ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ನೂತನ ನಾಯಕ ಹಾರ್ದಿಕ್ ಪಾಂಡ್ಯ ಗುಂಪುಗಳಾಗಿ ವಿಭಜನೆ ಆಗಿದೆ. ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತಿತರರು ರೋಹಿತ್ ಬೆಂಬಲವಾಗಿದ್ದರೆ, ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಮ್ಯಾನೇಜ್ಮೆಂಟ್ ಕೂಡ ಹಾರ್ದಿಕ್ ಪರವೇ ಇದೆ.
ಕೊನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಹೈದರಾಬಾದ್ ವಿರುದ್ಧ 31 ರನ್ಗಳಿಂದ ಸೋತಿದೆ. ಈ ಪಂದ್ಯಗಳಲ್ಲಿ ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗಗಳಲ್ಲೂ ಫೇಲ್ಯೂರ್ ಆಗಿದ್ದಾರೆ. ಹೀಗಾಗಿ ಹಾರ್ದಿಕ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಈ ಮಧ್ಯೆ ಮೈದಾನದಲ್ಲಿ ಯಾರಾದ್ರೂ ಹಾರ್ದಿಕ್ ಪಾಂಡ್ಯರನ್ನು ನಿಂದಿಸುವ ಕೆಲಸ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಎಂಸಿಎ ಮುಂದಾಗಿದೆ. ಟ್ರೋಲ್ ಮಾಡುವವರನ್ನು ಹಾಗೂ ನಿಂದಿಸುವವರನ್ನು ಮೈದಾನದಿಂದ ಹೊರಹಾಕಲು ತೀರ್ಮಾನಿಸಿದೆ.
ಹಾರ್ದಿಕ್ ವಿರುದ್ಧ ಈ ರೀತಿ ಕೃತ್ಯ ಎಸಗುವವರನ್ನು ಪತ್ತೆ ಹಚ್ಚುವ ಸಲುವಾಗಿ ಎಂಸಿಎ ಭದ್ರತೆಯನ್ನು ಹೆಚ್ಚಿಸಿದೆ. ಪಂದ್ಯದ ವೇಳೆ ಹಾರ್ದಿಕ್ ವಿರುದ್ಧ ಕಾಮೆಂಟ್ ಮಾಡುವ, ಘೋಷಣೆ ಕೂಗುವ ಪ್ರೇಕ್ಷಕರನ್ನು ಕಸ್ಟಡಿಗೆ ತೆಗೆದುಕೊಂಡು ಮೈದಾನದಿಂದ ಹೊರಹಾಕಲಾಗುತ್ತದೆ.
ಇದನ್ನೂ ಓದಿ: VIDEO: ಹಾರ್ದಿಕ್ಗೆ ಚಪ್ಪಲಿ ಎಸೆದು ರೋಹಿತ್ ಫ್ಯಾನ್ಸ್ ಆಕ್ರೋಶ; ಈ ಬಗ್ಗೆ ಸ್ಟಾರ್ ಕ್ರಿಕೆಟರ್ ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎರಡು ಗುಂಪುಗಳಾದ ಮುಂಬೈ ಇಂಡಿಯನ್ಸ್ ಟೀಮ್
ಹಾರ್ದಿಕ್, ರೋಹಿತ್ ಮಧ್ಯೆ ಮುಂದುವರಿದ ಜಗಳ..!
ಕ್ಯಾಪ್ಟನ್ ಪಾಂಡ್ಯ ವಿರುದ್ಧ ಘೋಷಣೆ ಕೂಗಿದ್ರೆ ಶಿಕ್ಷೆ
ಕಳೆದ 2 ಪಂದ್ಯಗಳಲ್ಲೂ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಕ್ ಟು ಬ್ಯಾಕ್ ಹೀನಾಯ ಸೋಲು ಕಂಡಿದೆ. ಗುಜರಾತ್ ಟೈಟಾನ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 6 ರನ್ಗಳಿಂದ ಸೋಲಿಸಿತು. ಈ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಎರಡು ಗುಂಪಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ.
ಹೌದು, ಮುಂಬೈ ಇಂಡಿಯನ್ಸ್ ತಂಡವು ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ನೂತನ ನಾಯಕ ಹಾರ್ದಿಕ್ ಪಾಂಡ್ಯ ಗುಂಪುಗಳಾಗಿ ವಿಭಜನೆ ಆಗಿದೆ. ಜಸ್ಪ್ರೀತ್ ಬುಮ್ರಾ, ತಿಲಕ್ ವರ್ಮಾ ಮತ್ತಿತರರು ರೋಹಿತ್ ಬೆಂಬಲವಾಗಿದ್ದರೆ, ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗಿದೆ. ಮ್ಯಾನೇಜ್ಮೆಂಟ್ ಕೂಡ ಹಾರ್ದಿಕ್ ಪರವೇ ಇದೆ.
ಕೊನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಹೈದರಾಬಾದ್ ವಿರುದ್ಧ 31 ರನ್ಗಳಿಂದ ಸೋತಿದೆ. ಈ ಪಂದ್ಯಗಳಲ್ಲಿ ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗಗಳಲ್ಲೂ ಫೇಲ್ಯೂರ್ ಆಗಿದ್ದಾರೆ. ಹೀಗಾಗಿ ಹಾರ್ದಿಕ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಈ ಮಧ್ಯೆ ಮೈದಾನದಲ್ಲಿ ಯಾರಾದ್ರೂ ಹಾರ್ದಿಕ್ ಪಾಂಡ್ಯರನ್ನು ನಿಂದಿಸುವ ಕೆಲಸ ಮಾಡಿದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಎಂಸಿಎ ಮುಂದಾಗಿದೆ. ಟ್ರೋಲ್ ಮಾಡುವವರನ್ನು ಹಾಗೂ ನಿಂದಿಸುವವರನ್ನು ಮೈದಾನದಿಂದ ಹೊರಹಾಕಲು ತೀರ್ಮಾನಿಸಿದೆ.
ಹಾರ್ದಿಕ್ ವಿರುದ್ಧ ಈ ರೀತಿ ಕೃತ್ಯ ಎಸಗುವವರನ್ನು ಪತ್ತೆ ಹಚ್ಚುವ ಸಲುವಾಗಿ ಎಂಸಿಎ ಭದ್ರತೆಯನ್ನು ಹೆಚ್ಚಿಸಿದೆ. ಪಂದ್ಯದ ವೇಳೆ ಹಾರ್ದಿಕ್ ವಿರುದ್ಧ ಕಾಮೆಂಟ್ ಮಾಡುವ, ಘೋಷಣೆ ಕೂಗುವ ಪ್ರೇಕ್ಷಕರನ್ನು ಕಸ್ಟಡಿಗೆ ತೆಗೆದುಕೊಂಡು ಮೈದಾನದಿಂದ ಹೊರಹಾಕಲಾಗುತ್ತದೆ.
ಇದನ್ನೂ ಓದಿ: VIDEO: ಹಾರ್ದಿಕ್ಗೆ ಚಪ್ಪಲಿ ಎಸೆದು ರೋಹಿತ್ ಫ್ಯಾನ್ಸ್ ಆಕ್ರೋಶ; ಈ ಬಗ್ಗೆ ಸ್ಟಾರ್ ಕ್ರಿಕೆಟರ್ ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ