ಆಂಧ್ರದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಒಟ್ಟಿಗೆ ಮತದಾನ
ಮೇ 13ನೇ ತಾರೀಕಿನಂದು ನಡೆಯಲಿರೋ ಮತದಾನಕ್ಕೆ ಭರ್ಜರಿ ತಯಾರಿ!
ಪವನ್ ಕಲ್ಯಾಣ್ನನ್ನು ಗೆಲ್ಲಿಸಲು ಅಖಾಡಕ್ಕಿಳಿದ ಮೆಗಾಸ್ಟಾರ್ ಚಿರಂಜೀವಿ
ವಿಶಾಖಪಟ್ಟಣಂ: ಆಂಧ್ರಪ್ರದೇಶದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಒಟ್ಟಿಗೆ ಮೇ 13ನೇ ತಾರೀಕು ಮತದಾನ ನಡೆಯಲಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸೋಲಿಸಲು ಜನಸೇನಾ, ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಸಜ್ಜಾಗಿದೆ. ಅಷ್ಟೇ ಅಲ್ಲ ಜತೆಗೆ ವೈ.ಎಸ್ ಶರ್ಮಿಳಾ ನಾಯಕತ್ವದ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಕಡೆ ಚುನಾವಣೆಗೆ ಮುಂದಾಗಿವೆ.
ಇನ್ನು, ಈ ಬಾರಿ ಇಡೀ ಆಂಧ್ರದಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್. ಇವರು ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಜನಸೇನಾ ಮೈತ್ರಿ ಅಭ್ಯರ್ಥಿಯಾಗಿ ಕಂಟೆಸ್ಟ್ ಮಾಡುತ್ತಿದ್ದಾರೆ. ಸದ್ಯ ನಟ ಪವನ್ ಕಲ್ಯಾಣ್ಗೆ ಮೆಗಾಸ್ಟಾರ್ ಚಿರಂಜೀವಿ ಬೆಂಬಲ ಘೋಷಿಸಿದ್ದಾರೆ.
మీ భవిష్యత్తు కోసం పాటుపడే నాయకుడు పవన్ కళ్యాణ్ గారిని గెలిపించండి.
With #jsp # Andhra Pradesh election, 2024 pic.twitter.com/xiYRKgAi9t
— Ram Charan (@AlwaysRamCharan) May 7, 2024
ಈ ಸಂಬಂಧ ವಿಡಿಯೋ ಮಾಡಿರೋ ಮೆಗಾಸ್ಟಾರ್ ಚಿರಂಜೀವಿ ನನ್ನ ತಮ್ಮ ಜನರಿಗಾಗಿ ರಾಜಕೀಯಕ್ಕೆ ಬಂದಿದ್ದಾನೆ. ಯಾವ ತಾಯಿಗೆ ತಾನೇ ತನ್ನ ಮಗ ಅವಮಾನಕ್ಕೆ ಒಳಗಾಗುತ್ತಿದ್ದರೆ ನೋಡಿಕೊಂಡು ಕೂರಲು ಸಾಧ್ಯ. ನಾನು ತಾಯಿ ಸ್ಥಾನದಲ್ಲಿ ನಿಂತು ಪವನ್ ಕಲ್ಯಾಣ್ನನ್ನು ಸಾಕಿದ್ದೇನೆ. ಅವನಿಗೆ ನಿಮ್ಮ ಆಶೀರ್ವಾದ ಬೇಕಿದೆ. ಈ ಬಾರಿ ಪವನ್ಗೆ ವೋಟ್ ಹಾಕಿ ಗೆಲ್ಲಿಸಿ. ಪವನ್ ವಿಧಾನಸಭೆಯಲ್ಲಿ ನಿಮ್ಮ ಧನಿ ಆಗಲಿದ್ದಾನೆ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್.. ಖಡಕ್ ವಾರ್ನಿಂಗ್ ಕೊಟ್ಟ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಂಧ್ರದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಒಟ್ಟಿಗೆ ಮತದಾನ
ಮೇ 13ನೇ ತಾರೀಕಿನಂದು ನಡೆಯಲಿರೋ ಮತದಾನಕ್ಕೆ ಭರ್ಜರಿ ತಯಾರಿ!
ಪವನ್ ಕಲ್ಯಾಣ್ನನ್ನು ಗೆಲ್ಲಿಸಲು ಅಖಾಡಕ್ಕಿಳಿದ ಮೆಗಾಸ್ಟಾರ್ ಚಿರಂಜೀವಿ
ವಿಶಾಖಪಟ್ಟಣಂ: ಆಂಧ್ರಪ್ರದೇಶದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಒಟ್ಟಿಗೆ ಮೇ 13ನೇ ತಾರೀಕು ಮತದಾನ ನಡೆಯಲಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸೋಲಿಸಲು ಜನಸೇನಾ, ಟಿಡಿಪಿ ಮತ್ತು ಬಿಜೆಪಿ ಮೈತ್ರಿ ಸಜ್ಜಾಗಿದೆ. ಅಷ್ಟೇ ಅಲ್ಲ ಜತೆಗೆ ವೈ.ಎಸ್ ಶರ್ಮಿಳಾ ನಾಯಕತ್ವದ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಕಡೆ ಚುನಾವಣೆಗೆ ಮುಂದಾಗಿವೆ.
ಇನ್ನು, ಈ ಬಾರಿ ಇಡೀ ಆಂಧ್ರದಲ್ಲಿ ಅತೀ ಹೆಚ್ಚು ಸದ್ದು ಮಾಡಿದ್ದು ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್. ಇವರು ಪೀಠಾಪುರಂ ವಿಧಾನಸಭಾ ಕ್ಷೇತ್ರದಿಂದ ಜನಸೇನಾ ಮೈತ್ರಿ ಅಭ್ಯರ್ಥಿಯಾಗಿ ಕಂಟೆಸ್ಟ್ ಮಾಡುತ್ತಿದ್ದಾರೆ. ಸದ್ಯ ನಟ ಪವನ್ ಕಲ್ಯಾಣ್ಗೆ ಮೆಗಾಸ್ಟಾರ್ ಚಿರಂಜೀವಿ ಬೆಂಬಲ ಘೋಷಿಸಿದ್ದಾರೆ.
మీ భవిష్యత్తు కోసం పాటుపడే నాయకుడు పవన్ కళ్యాణ్ గారిని గెలిపించండి.
With #jsp # Andhra Pradesh election, 2024 pic.twitter.com/xiYRKgAi9t
— Ram Charan (@AlwaysRamCharan) May 7, 2024
ಈ ಸಂಬಂಧ ವಿಡಿಯೋ ಮಾಡಿರೋ ಮೆಗಾಸ್ಟಾರ್ ಚಿರಂಜೀವಿ ನನ್ನ ತಮ್ಮ ಜನರಿಗಾಗಿ ರಾಜಕೀಯಕ್ಕೆ ಬಂದಿದ್ದಾನೆ. ಯಾವ ತಾಯಿಗೆ ತಾನೇ ತನ್ನ ಮಗ ಅವಮಾನಕ್ಕೆ ಒಳಗಾಗುತ್ತಿದ್ದರೆ ನೋಡಿಕೊಂಡು ಕೂರಲು ಸಾಧ್ಯ. ನಾನು ತಾಯಿ ಸ್ಥಾನದಲ್ಲಿ ನಿಂತು ಪವನ್ ಕಲ್ಯಾಣ್ನನ್ನು ಸಾಕಿದ್ದೇನೆ. ಅವನಿಗೆ ನಿಮ್ಮ ಆಶೀರ್ವಾದ ಬೇಕಿದೆ. ಈ ಬಾರಿ ಪವನ್ಗೆ ವೋಟ್ ಹಾಕಿ ಗೆಲ್ಲಿಸಿ. ಪವನ್ ವಿಧಾನಸಭೆಯಲ್ಲಿ ನಿಮ್ಮ ಧನಿ ಆಗಲಿದ್ದಾನೆ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್.. ಖಡಕ್ ವಾರ್ನಿಂಗ್ ಕೊಟ್ಟ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ