ನಾಲ್ಕು ರಾಜ್ಯಸಭಾ ಸ್ಥಾನಕ್ಕೆ ನಾಳೆ ನಡೆಯುತ್ತಿರುವ ಚುನಾವಣೆ
ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಿಸಲು ಭಾರೀ ಸರ್ಕಸ್
ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುತ್ತಿರೋ ಹಿನ್ನೆಲೆ ಜಮೀರ್ ತಿರುಗೇಟು
ಬೆಂಗಳೂರು: ರಾಜ್ಯದ 4 ಸ್ಥಾನಗಳಿಗೆ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ನಾಳೆ ಬೆಳಗ್ಗೆ ರಾಜ್ಯಸಭಾ ಚುನಾವಣೆಗೆ ಶಾಸಕರು ಮತದಾನ ಮಾಡಲಿದ್ದು, 5ನೇ ಅಭ್ಯರ್ಥಿಗೆ ಬೀಳುವ ಮತಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ಗೆಲುವಿಗಾಗಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಲಾಗಿದೆ. ಜೆಡಿಎಸ್ನವ್ರು ಸೋತು, ಸೋತು ಸುಣ್ಣವಾಗಿದ್ದಾರೆ. ಬೇರೆ ವಿಧಿನೇ ಇಲ್ಲ, ಕಾಂಗ್ರೆಸ್ಗೆ ವೋಟ್ ಹಾಕ್ಬೇಕು ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಇದನ್ನೂ ಓದಿ: ರೋಚಕಘಟ್ಟ ತಲುಪಿದ ರಾಜ್ಯಸಭೆ ಎಲೆಕ್ಷನ್; ಮೂರು ಪಕ್ಷಗಳಿಗೂ ಅಡ್ಡ ಮತದಾನದ ಆತಂಕ..
ಜೆಡಿಎಸ್ ಪ್ರತಿ ಸಲ ಸೋಲು ಅನುಭವಿಸ್ತಾ ಇದ್ದಾರೆ. ಅವರಿಗೆ ಸೋಲು ಖಚಿತ. ಇರೋ 19 ಜನರನ್ನ ಉಳಿಸಿಕೊಳ್ಳಿ ಎಂದು ಸಚಿವ ಜಮೀರ್ ಹೆಚ್ಡಿಕೆ ವಿರುದ್ಧ ಕಿಡಿಕಾರಿದ್ದಾರೆ.
ಪೂರ್ತಿ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿhttps://t.co/3iLFUtYCet@hd_kumaraswamy @BZZameerAhmedK @BJP4Karnataka #Bengaluru #NewsFirstKannada pic.twitter.com/bdhfKWy4y9
— NewsFirst Kannada (@NewsFirstKan) February 26, 2024
ರಾಜ್ಯಸಭಾ ಚುನಾವಣೆಯಲ್ಲಿ ಹೆಚ್.ಡಿ ಕುಮಾರಸ್ವಾಮಿಗೆ ಸೋಲೋದು ಗೊತ್ತಿದ್ದರೂ 5ನೇ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದಾರೆ. ಅವರಿಗೆ ಇದೊಂದು ಚಟವಾಗಿದೆ. ಯಾವ ಕಾರಣಕ್ಕೂ ಕುಪೇಂದ್ರ ರೆಡ್ಡಿ ಅವರು ಗೆಲ್ಲೋದಿಲ್ಲ. ಈ ಹಿಂದೆ ಕೂಡ ಜೆಡಿಎಸ್ನಿಂದ ಅಭ್ಯರ್ಥಿಯನ್ನ ಕಣಕ್ಕಿಳಿಸಲಾಗಿತ್ತು. ಆಗಲೂ ಅವರ ಅಭ್ಯರ್ಥಿ ಸೋತಿದ್ದರು. ಈಗ ಮತ್ತದೇ ಕೆಲಸವನ್ನ ಕುಮಾರಸ್ವಾಮಿ ಮಾಡಿದ್ದಾರೆ. ಅವರ ಪಕ್ಷದ ಅಭ್ಯರ್ಥಿ ಗೆಲ್ಲಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುವುದಕ್ಕೂ ಮೊದಲು ಜೆಡಿಎಸ್ ಶಾಸಕರನ್ನ ಉಳಿಸಿಕೊಳ್ಳಲಿ ಎಂದು ಜಮೀರ್ ಅಹ್ಮದ್ ಟಾಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾಲ್ಕು ರಾಜ್ಯಸಭಾ ಸ್ಥಾನಕ್ಕೆ ನಾಳೆ ನಡೆಯುತ್ತಿರುವ ಚುನಾವಣೆ
ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಿಸಲು ಭಾರೀ ಸರ್ಕಸ್
ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುತ್ತಿರೋ ಹಿನ್ನೆಲೆ ಜಮೀರ್ ತಿರುಗೇಟು
ಬೆಂಗಳೂರು: ರಾಜ್ಯದ 4 ಸ್ಥಾನಗಳಿಗೆ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ನಾಳೆ ಬೆಳಗ್ಗೆ ರಾಜ್ಯಸಭಾ ಚುನಾವಣೆಗೆ ಶಾಸಕರು ಮತದಾನ ಮಾಡಲಿದ್ದು, 5ನೇ ಅಭ್ಯರ್ಥಿಗೆ ಬೀಳುವ ಮತಗಳು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ಗೆಲುವಿಗಾಗಿ ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕಲಾಗಿದೆ. ಜೆಡಿಎಸ್ನವ್ರು ಸೋತು, ಸೋತು ಸುಣ್ಣವಾಗಿದ್ದಾರೆ. ಬೇರೆ ವಿಧಿನೇ ಇಲ್ಲ, ಕಾಂಗ್ರೆಸ್ಗೆ ವೋಟ್ ಹಾಕ್ಬೇಕು ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಇದನ್ನೂ ಓದಿ: ರೋಚಕಘಟ್ಟ ತಲುಪಿದ ರಾಜ್ಯಸಭೆ ಎಲೆಕ್ಷನ್; ಮೂರು ಪಕ್ಷಗಳಿಗೂ ಅಡ್ಡ ಮತದಾನದ ಆತಂಕ..
ಜೆಡಿಎಸ್ ಪ್ರತಿ ಸಲ ಸೋಲು ಅನುಭವಿಸ್ತಾ ಇದ್ದಾರೆ. ಅವರಿಗೆ ಸೋಲು ಖಚಿತ. ಇರೋ 19 ಜನರನ್ನ ಉಳಿಸಿಕೊಳ್ಳಿ ಎಂದು ಸಚಿವ ಜಮೀರ್ ಹೆಚ್ಡಿಕೆ ವಿರುದ್ಧ ಕಿಡಿಕಾರಿದ್ದಾರೆ.
ಪೂರ್ತಿ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿhttps://t.co/3iLFUtYCet@hd_kumaraswamy @BZZameerAhmedK @BJP4Karnataka #Bengaluru #NewsFirstKannada pic.twitter.com/bdhfKWy4y9
— NewsFirst Kannada (@NewsFirstKan) February 26, 2024
ರಾಜ್ಯಸಭಾ ಚುನಾವಣೆಯಲ್ಲಿ ಹೆಚ್.ಡಿ ಕುಮಾರಸ್ವಾಮಿಗೆ ಸೋಲೋದು ಗೊತ್ತಿದ್ದರೂ 5ನೇ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದಾರೆ. ಅವರಿಗೆ ಇದೊಂದು ಚಟವಾಗಿದೆ. ಯಾವ ಕಾರಣಕ್ಕೂ ಕುಪೇಂದ್ರ ರೆಡ್ಡಿ ಅವರು ಗೆಲ್ಲೋದಿಲ್ಲ. ಈ ಹಿಂದೆ ಕೂಡ ಜೆಡಿಎಸ್ನಿಂದ ಅಭ್ಯರ್ಥಿಯನ್ನ ಕಣಕ್ಕಿಳಿಸಲಾಗಿತ್ತು. ಆಗಲೂ ಅವರ ಅಭ್ಯರ್ಥಿ ಸೋತಿದ್ದರು. ಈಗ ಮತ್ತದೇ ಕೆಲಸವನ್ನ ಕುಮಾರಸ್ವಾಮಿ ಮಾಡಿದ್ದಾರೆ. ಅವರ ಪಕ್ಷದ ಅಭ್ಯರ್ಥಿ ಗೆಲ್ಲಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಶಾಸಕರಿಗೆ ಗಾಳ ಹಾಕುವುದಕ್ಕೂ ಮೊದಲು ಜೆಡಿಎಸ್ ಶಾಸಕರನ್ನ ಉಳಿಸಿಕೊಳ್ಳಲಿ ಎಂದು ಜಮೀರ್ ಅಹ್ಮದ್ ಟಾಂಗ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ