ದೇಶವನ್ನೇ ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್ ಕೇಸ್ ಮರಣೋತ್ತರ ಪರೀಕ್ಷೆ ವರದಿ
ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದು ಎನ್ಕೌಂಟರ್ಗೆ ಬಲಿಯಾದ ಕ್ಷೌರಿಕ
ತಪ್ಪಿಸಿಕೊಂಡಿರುವ ಸಹೋದರನ ಸುಳಿವು ಕೊಟ್ಟರೆ 25 ಸಾವಿರ ರೂಪಾಯಿ ಬಹುಮಾನ
ಉತ್ತರ ಪ್ರದೇಶ: ಅನ್ಯಕೋಮಿನ ವ್ಯಕ್ತಿ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಬುಡೌನ್ನ ಮನೆಯಲ್ಲಿದ್ದ 3 ಮಕ್ಕಳ ಮೇಲೆ ಆಯುಧದಿಂದ ದಾಳಿ ಮಾಡಿ ಇಬ್ಬರನ್ನು ಸ್ಥಳದಲ್ಲೇ ಕೊಲೆ ಮಾಡಿದ್ದನು. ವ್ಯಕ್ತಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದು ಕೊನೆಗೆ ಆತನನ್ನು ಬಂಧಿಸುವಲ್ಲಿ ಮುಂದಾದ ಪೊಲೀಸರ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದನು. ಕೊನೆಗೆ ಆತನನ್ನು ಎನ್ಕೌಂಟರ್ ಮಾಡಲಾಗಿದೆ. ಇದೀಗ ಇಬ್ಬರ ಮಕ್ಕಳ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ.
22 ವರ್ಷದ ಸಾಜಿದ್ ಎಂಬ ಅನ್ಯಕೋಮಿನ ವ್ಯಕ್ತಿ ಆಯುಷ್ (12) ಮತ್ತು ಅಹಾನ್ನನ್ನು (8) ಕೊಲೆ ಮಾಡಿದ್ದಾನೆ. ಮತ್ತೋರ್ವ ಸಹೋದರ ಆತನ ದಾಳಿಯಿಂದ ಗಂಭೀರ ಗಾಯಗೊಂಡಿದ್ದನೆ. ಹರಿತವಾದ ಆಯುಧದಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮರಣೋತ್ತರ ವರದಿಯಲ್ಲಿ ಆಯುಷ್ ದೇಹದ ಮೇಲೆ 14 ಗಾಯಗಳು ಕಾಣಿಸಿವೆ. ಅಹಾನ್ಗೆ ದೇಹದ ಮೇಲೆ 9 ಗಾಯಗಳು ಕಂಡಿವೆ. ಸಾಜಿದ್ ಇಬ್ಬರ ಮೇಲೆ ಒಟ್ಟು 23 ಬಾರಿ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆಗಾರ ಸಾಜಿದ್ ಇಬ್ಬರು ಮಕ್ಕಳ ಬೆನ್ನು, ಎದೆ, ಕಾಲು ಮತ್ತು ಕತ್ತಿನ ಮೇಲೆ ದಾಳಿ ಮಾಡಿದ್ದಾನೆ. ಓಡಲು ಯತ್ನಿಸಿದ ಸಮಯದಲ್ಲಿ ಅವರ ಕಾಲುಗಳಿಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸಾಜಿದ್ ಮರಣೋತ್ತರ ಪರೀರಕ್ಷೆ ವರದಿ
ಎನ್ಕೌಂಟರ್ ಮೂಲಕ ಹತನಾದ ಸಾಜಿದ್ಗೆ ಮೂರು ಗುಂಡುಗಳನ್ನು ಹಾರಿಸಲಾಗಿದೆ. ಭೀಕರ ಹತ್ಯೆಯ ಬಳಿಕ ಆತನನ್ನು ಪೊಲೀಸರು ಹಿಡಿಯಲು ಯತ್ನಿಸಿದಾಗ ದಾಳಿಗೆ ಮುಂದಾಗುತ್ತಾನೆ. ಕೊನೆಗೆ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಇನ್ನು ಪೊಲೀಸ್ ಕಾರ್ಯಚರಣೆ ವೇಳೆ ಆತನ ಸಹೋದರ ಜಾವೇದ್ ತಪ್ಪಿಸಿಕೊಂಡಿದ್ದಾನೆ.
ಆರೋಪಿ ತಂದೆ ಚಿಕ್ಕಪ್ಪ ಪೊಲೀಸರ ವಶಕ್ಕೆ
ಜಾವೇದ್ ಬಂಧಿಸಲು ಮುಂದಾದ ಪೊಲೀಸರು ಆತನ ತಂದೆ ಮತ್ತು ಚಿಕ್ಕಪ್ಪನನ್ನು ವಿಚಾರಣೆ ಒಳಪಡಿಸಿದ್ದಾರೆ. ಘಟನೆಗೆ ಕಾರಣವೇನೆಂದು ತಿಳಿಯುತ್ತಿದ್ದಾರೆ. ಅತ್ತ ಜಾವೇದ್ ಪತ್ತೆಗೆ ಬಲೆ ಬೀಸಿದ್ದಾರೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ ಕಣ್ಣೀರಲಿಲ್ಲ ತೇಲಿದೆ. ಮರಣೋತ್ತರ ಪರೀಕ್ಷೆ ನಂತರ ಅಂತಿಮ ವಿಧಿ ವಿಧಾನಗಳ ಮೂಲಕ ಕಾರ್ಯ ನೆರವೇರಿಸಲಾಗಿದೆ.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ; ಅನ್ಯ ಕೋಮಿನ ವ್ಯಕ್ತಿಯಿಂದ ಇಬ್ಬರು ಮಕ್ಕಳ ಬರ್ಬರ ಹತ್ಯೆ
25 ಸಾವಿರ ಬಹುಮಾನ
ಸದ್ಯ ಸಾಜಿದ್ ಎನ್ಕೌಂಟರ್ ಕುರಿತಾಗಿ ತನಿಖೆ ಚುರುಕುಗೊಂಡಿದೆ. 15 ದಿನಗಳ ಸಮಗ್ರ ವರದಿಯನ್ನು ಒದಗಿಸೋದು ವಿಚಾರಣೆಯ ಪ್ರಮುಖ ಗುರಿಯಾಗಿದೆ. ಜಾವೇದ್ ಬಗ್ಗೆ ಹಿಡಿಯಲು ಮಾಹಿತಿ ಕೊಟ್ಟವರಿಗೆ 25 ಸಾವಿರ ಬಹುಮಾನ ಘೋಷಿಸಿದ್ದಾರೆ. ಆತನ ಪತ್ತೆಗಾಗಿ ಪೊಲೀಸರು ತಂಡವನ್ನು ರಚಿಸಿದ್ದಾರೆ.
ದೇಶವನ್ನೇ ಬೆಚ್ಚಿ ಬೀಳಿಸಿದ ಡಬಲ್ ಮರ್ಡರ್ ಕೇಸ್ ಮರಣೋತ್ತರ ಪರೀಕ್ಷೆ ವರದಿ
ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದು ಎನ್ಕೌಂಟರ್ಗೆ ಬಲಿಯಾದ ಕ್ಷೌರಿಕ
ತಪ್ಪಿಸಿಕೊಂಡಿರುವ ಸಹೋದರನ ಸುಳಿವು ಕೊಟ್ಟರೆ 25 ಸಾವಿರ ರೂಪಾಯಿ ಬಹುಮಾನ
ಉತ್ತರ ಪ್ರದೇಶ: ಅನ್ಯಕೋಮಿನ ವ್ಯಕ್ತಿ ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಬುಡೌನ್ನ ಮನೆಯಲ್ಲಿದ್ದ 3 ಮಕ್ಕಳ ಮೇಲೆ ಆಯುಧದಿಂದ ದಾಳಿ ಮಾಡಿ ಇಬ್ಬರನ್ನು ಸ್ಥಳದಲ್ಲೇ ಕೊಲೆ ಮಾಡಿದ್ದನು. ವ್ಯಕ್ತಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದು ಕೊನೆಗೆ ಆತನನ್ನು ಬಂಧಿಸುವಲ್ಲಿ ಮುಂದಾದ ಪೊಲೀಸರ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದನು. ಕೊನೆಗೆ ಆತನನ್ನು ಎನ್ಕೌಂಟರ್ ಮಾಡಲಾಗಿದೆ. ಇದೀಗ ಇಬ್ಬರ ಮಕ್ಕಳ ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ.
22 ವರ್ಷದ ಸಾಜಿದ್ ಎಂಬ ಅನ್ಯಕೋಮಿನ ವ್ಯಕ್ತಿ ಆಯುಷ್ (12) ಮತ್ತು ಅಹಾನ್ನನ್ನು (8) ಕೊಲೆ ಮಾಡಿದ್ದಾನೆ. ಮತ್ತೋರ್ವ ಸಹೋದರ ಆತನ ದಾಳಿಯಿಂದ ಗಂಭೀರ ಗಾಯಗೊಂಡಿದ್ದನೆ. ಹರಿತವಾದ ಆಯುಧದಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮರಣೋತ್ತರ ವರದಿಯಲ್ಲಿ ಆಯುಷ್ ದೇಹದ ಮೇಲೆ 14 ಗಾಯಗಳು ಕಾಣಿಸಿವೆ. ಅಹಾನ್ಗೆ ದೇಹದ ಮೇಲೆ 9 ಗಾಯಗಳು ಕಂಡಿವೆ. ಸಾಜಿದ್ ಇಬ್ಬರ ಮೇಲೆ ಒಟ್ಟು 23 ಬಾರಿ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊಲೆಗಾರ ಸಾಜಿದ್ ಇಬ್ಬರು ಮಕ್ಕಳ ಬೆನ್ನು, ಎದೆ, ಕಾಲು ಮತ್ತು ಕತ್ತಿನ ಮೇಲೆ ದಾಳಿ ಮಾಡಿದ್ದಾನೆ. ಓಡಲು ಯತ್ನಿಸಿದ ಸಮಯದಲ್ಲಿ ಅವರ ಕಾಲುಗಳಿಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸಾಜಿದ್ ಮರಣೋತ್ತರ ಪರೀರಕ್ಷೆ ವರದಿ
ಎನ್ಕೌಂಟರ್ ಮೂಲಕ ಹತನಾದ ಸಾಜಿದ್ಗೆ ಮೂರು ಗುಂಡುಗಳನ್ನು ಹಾರಿಸಲಾಗಿದೆ. ಭೀಕರ ಹತ್ಯೆಯ ಬಳಿಕ ಆತನನ್ನು ಪೊಲೀಸರು ಹಿಡಿಯಲು ಯತ್ನಿಸಿದಾಗ ದಾಳಿಗೆ ಮುಂದಾಗುತ್ತಾನೆ. ಕೊನೆಗೆ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಇನ್ನು ಪೊಲೀಸ್ ಕಾರ್ಯಚರಣೆ ವೇಳೆ ಆತನ ಸಹೋದರ ಜಾವೇದ್ ತಪ್ಪಿಸಿಕೊಂಡಿದ್ದಾನೆ.
ಆರೋಪಿ ತಂದೆ ಚಿಕ್ಕಪ್ಪ ಪೊಲೀಸರ ವಶಕ್ಕೆ
ಜಾವೇದ್ ಬಂಧಿಸಲು ಮುಂದಾದ ಪೊಲೀಸರು ಆತನ ತಂದೆ ಮತ್ತು ಚಿಕ್ಕಪ್ಪನನ್ನು ವಿಚಾರಣೆ ಒಳಪಡಿಸಿದ್ದಾರೆ. ಘಟನೆಗೆ ಕಾರಣವೇನೆಂದು ತಿಳಿಯುತ್ತಿದ್ದಾರೆ. ಅತ್ತ ಜಾವೇದ್ ಪತ್ತೆಗೆ ಬಲೆ ಬೀಸಿದ್ದಾರೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬ ಕಣ್ಣೀರಲಿಲ್ಲ ತೇಲಿದೆ. ಮರಣೋತ್ತರ ಪರೀಕ್ಷೆ ನಂತರ ಅಂತಿಮ ವಿಧಿ ವಿಧಾನಗಳ ಮೂಲಕ ಕಾರ್ಯ ನೆರವೇರಿಸಲಾಗಿದೆ.
ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸೋ ಕೃತ್ಯ; ಅನ್ಯ ಕೋಮಿನ ವ್ಯಕ್ತಿಯಿಂದ ಇಬ್ಬರು ಮಕ್ಕಳ ಬರ್ಬರ ಹತ್ಯೆ
25 ಸಾವಿರ ಬಹುಮಾನ
ಸದ್ಯ ಸಾಜಿದ್ ಎನ್ಕೌಂಟರ್ ಕುರಿತಾಗಿ ತನಿಖೆ ಚುರುಕುಗೊಂಡಿದೆ. 15 ದಿನಗಳ ಸಮಗ್ರ ವರದಿಯನ್ನು ಒದಗಿಸೋದು ವಿಚಾರಣೆಯ ಪ್ರಮುಖ ಗುರಿಯಾಗಿದೆ. ಜಾವೇದ್ ಬಗ್ಗೆ ಹಿಡಿಯಲು ಮಾಹಿತಿ ಕೊಟ್ಟವರಿಗೆ 25 ಸಾವಿರ ಬಹುಮಾನ ಘೋಷಿಸಿದ್ದಾರೆ. ಆತನ ಪತ್ತೆಗಾಗಿ ಪೊಲೀಸರು ತಂಡವನ್ನು ರಚಿಸಿದ್ದಾರೆ.