ಕಪ್ ಗೆದ್ದ ಸಂಭ್ರಮದ ನಡುವೆ ಫ್ಯಾನ್ಸ್ಗೆ ಶಾಕ್..!
ಟೀಮ್ ಇಂಡಿಯಾದಲ್ಲಿ ಆಟಗಾರರ ನಿವೃತ್ತಿ ಪರ್ವ..!
ಟಿ-20 ವಿಶ್ವಕಪ್ ಗೆದ್ದಿರುವ ಭಾರತ ತಂಡ
ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ರಿಟೈರ್ಮೆಂಟ್ ಪರ್ವ ಶುರುವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಆಯ್ತು.. ಇದೀಗ ಇನ್ನೂ ಹಲವು ಆಟಗಾರರು ನಿವೃತ್ತಿ ಹೇಳಲು ಚಿಂತನೆ ನಡೆಸ್ತಿದ್ದಾರೆ. ಕೇವಲ ಟಿ20 ಇಂಟರ್ನ್ಯಾಷನಲ್ ಮಾತ್ರವಲ್ಲ.. ಎಲ್ಲಾ ಫಾರ್ಮೆಟ್ ವಿದಾಯ ಘೋಷಿಸೋ ಆಟಗಾರರೂ ಇದ್ದಾರೆ.
11 ವರ್ಷಗಳ ಕೊರಗು ಕೊನೆಗೂ ನೀಗಿದೆ. ಕೊಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. 2013ರ ಬಳಿಕ ಪದೇ ಪದೆ ಐಸಿಸಿ ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿದ್ದ ಟೀಮ್ ಇಂಡಿಯಾ ಕೊನೆಗೂ ಗೆದ್ದು ಬೀಗಿದೆ. ಭಾರತದ ಮುಡಿಗೆ ಟಿ20 ವಿಶ್ವಕಪ್ ಕಿರೀಟ ಒಲಿದಿದೆ. ಈ ಅವಿಸ್ಮರಣೀಯ ಕ್ಷಣ ಘಟಿಸಿ 2 ದಿನಗಳೇ ಆಯ್ತು. ಆ ಸಂಭ್ರಮಕ್ಕೆ ಇನ್ನೂ ತೆರೆ ಬಿದ್ದಿಲ್ಲ.. ಸೋಷಿಯಲ್ ಮೀಡಿಯಾಗಳಲ್ಲಂತೂ ಟೀಮ್ ಇಂಡಿಯಾದ ವಿಜಯದ ಯಾತ್ರೆ ಇನ್ನೂ ಸಖತ್ ಟ್ರೆಡಿಂಗ್ನಲ್ಲಿದೆ.
ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?
ಕಪ್ ಗೆದ್ದ ಸಂಭ್ರಮದ ನಡುವೆ ಫ್ಯಾನ್ಸ್ಗೆ ಶಾಕ್..!
ಇಂಡಿಯನ್ ಟೈಗರ್ಸ್, ಕೆರಬಿಯನ್ ನಾಡಲ್ಲಿ ಘರ್ಜಿಸಿ ಟ್ರೋಫಿ ಗೆದ್ದ ಖುಷಿಯ ಬೆನ್ನಲ್ಲೇ ಇಂಡಿಯನ್ ಫ್ಯಾನ್ಸ್ಗೆ ಎದುರಾಗಿದ್ದು ಶಾಕ್. ಮ್ಯಾನ್ ಆಫ್ ದ ಮ್ಯಾಚ್ ಅವಾರ್ಡ್ ಪಡೆಯಲು ಬಂದ ವಿರಾಟ್, ಪೋಡಿಯಂ ಮೇಲೆಯೇ ವಿದಾಯ ಹೇಳಿ ಶಾಕ್ ನೀಡಿದರು. ಇದ್ರ ಬೆನ್ನಲ್ಲೇ, ಪ್ರೆಸ್ ಕಾನ್ಪರೆನ್ಸ್ನಲ್ಲಿ ಗುಡ್ ಬೈ ಹೇಳಿದ್ರು. ಒಂದು ದಿನ ಕಳೆದ ಬಳಿಕ ರವೀಂದ್ರ ಜಡೇಜಾ ನಿವೃತ್ತಿಯ ಶಾಕ್ ಕೊಟ್ಟಿದ್ದಾರೆ. ಆರಂಭವಾಗಿರೋ ಈ ರಿಟೈರ್ಮೆಂಟ್ ಪರ್ವ ಸದ್ಯಕ್ಕೆ ನಿಲ್ಲೋ ತರ ಇಲ್ಲ. ಮುಂದಿನ ಕೋಚ್ ಗೌತಮ್ ಗಂಭೀರ್, ಸೀನಿಯರ್ಸ್ಗೆ ಷರತ್ತು ವಿಧಿಸಿರೋದ್ರಿಂದ ಇನ್ನಷ್ಟು ಪ್ಲೇಯರ್ಸ್ ಗುಡ್ ಬೈ ಹೇಳೋ ಸಾಧ್ಯತೆ ಇದೆ.
ಏಕದಿನ, T20ಗೆ ಗುಡ್ ಬೈ ಹೇಳ್ತಾರಾ ಅಶ್ವಿನ್?
35 ವರ್ಷದ ಗಡಿದಾಟಿದ ಟೀಮ್ ಇಂಡಿಯನ್ಸ್ ಒಬ್ಬಬ್ಬಾರಾಗಿ ಚುಟುಕು ಫಾರ್ಮೆಟ್ಗೆ ಟಾಟಾ ಹೇಳ್ತಿದ್ದಾರೆ. 37 ವರ್ಷದ ಆಫ್ ಸ್ಪಿನ್ನರ್ ಅಶ್ವಿನ್, ಕೂಡ ಶೀಘ್ರದಲ್ಲೇ ಗುಡ್ ಬೈ ಹೇಳೋ ಸಾಧ್ಯತೆ ಇದೆ. ಟಿ20 ಮಾತ್ರವಲ್ಲ.. ಏಕದಿನ ತಂಡದಿಂದಲೂ ದೂರ ಉಳಿದಿರೋ ಅಶ್ವಿನ್, ವೈಟ್ಬಾಲ್ ಫಾರ್ಮೆಟ್ಗೆ ವಿದಾಯ ಹೇಳಿದ್ರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ದಿಢೀರ್ ಬದಲಾವಣೆ.. ಜಿಂಬಾಬ್ವೆ ಪ್ರವಾಸದಿಂದ ಮೂವರು ಸ್ಟಾರ್ ಆಟಗಾರರಿಗೆ ಕೊಕ್..!
ನಿವೃತ್ತಿ ಹೇಳಲು ಸ್ಪೀಡ್ಸ್ಟರ್ ಶಮಿ ಸಜ್ಜು..?
ವೇಗಿ ಮೊಹಮ್ಮದ್ ಶಮಿ ಕೂಡ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಿದೆ. 33 ವರ್ಷದ ಶಮಿಯನ್ನ ಇಂಜುರಿ ಸಮಸ್ಯೆ ಪದೇ ಪದೆ ಕಾಡ್ತಿದೆ. ಹೀಗಾಗಿ ವರ್ಕ್ಲೋಡ್ ಮ್ಯಾನೇಜ್ಮೆಂಟ್ ದೃಷ್ಟಿಯಿಂದ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಹೇಳೋ ಸಾಧ್ಯತೆಯಿದೆ.
ಎಲ್ಲಾ ಮಾದರಿಗೆ ಸದ್ಯದಲ್ಲೇ ಧವನ್ ವಿದಾಯ?
ಶಿಖರ್ ಧವನ್ ಟೀಮ್ ಇಂಡಿಯಾ ಮೇನ್ ಸ್ಕ್ಯಾಡ್ನಿಂದ ಹೊರ ಬಿದ್ದು ವರ್ಷಗಳೇ ಉರುಳಿವೆ. ಸೆಕೆಂಡ್ ಸ್ಟ್ರಿಂಗ್ ಟೀಮ್ನೊಂದಿಗೂ ಕೊನೆಯ ಬಾರಿ ಆಡಿದ್ದು, ಡಿಸೆಂಬರ್, 10, 2022ರಂದು. ಆ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ. 38 ವರ್ಷದ ಧವನ್ಗೆ ಮತ್ತೆ ಅವಕಾಶ ಸಿಗೋದು ಅನುಮಾನವೇ. ಹೀಗಾಗಿ ಟಿ20 ಮಾತ್ರವಲ್ಲ. ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೇ ಧವನ್ ವಿದಾಯ ಘೋಷಿಸೋ ನಿರೀಕ್ಷೆಯಿದೆ.
ನಿವೃತ್ತಿ ಘೋಷಿಸ್ತಾರಾ ಭುವನೇಶ್ವರ್ ಕುಮಾರ್?
ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾದಿಂದ ಹೊರಬಿದ್ದು ಒಂದು ವರ್ಷಕ್ಕೂ ಹೆಚ್ಚು ಕಾಲವಾಯ್ತು. 34 ವರ್ಷದ ಭುವನೇಶ್ವರ್ಗೆ ಮತ್ತೆ ಟೀಮ್ ಇಂಡಿಯಾ ಬಾಗಿಲು ತೆಗೆಯೋದು ಅನುಮಾನವೇ. ಹೀಗಾಗಿ ಅಧಿಕೃತವಾಗಿ ಶೀಘ್ರದಲ್ಲೇ ಸ್ವಿಂಗ್ ಮಾಸ್ಟರ್ ನಿವೃತ್ತಿ ಘೋಷಿಸಿದ್ರೆ, ಅಚ್ಚರಿಪಡಬೇಕಿಲ್ಲ.
ಷರತ್ತುಗಳನ್ನು ನೀಡಿ ಕೋಚ್ ಪಟ್ಟಕ್ಕೇರಲು ಗೌತಮ್ ಗಂಭೀರ್ ಸಜ್ಜಾಗಿದ್ರೆ, ಗಂಭೀರ್ ಎಂಟ್ರಿಗೂ ಮುನ್ನವೇ ಸೀನಿಯರ್ಸ್, ಜಾಗ ಖಾಲಿ ಮಾಡ್ತಿದ್ದಾರೆ. ಮೂವರು ಲೆಜೆಂಡ್ಸ್ ಅಧಿಕೃತವಾಗಿ ವಿದಾಯ ಹೇಳಿದ್ರೆ, ಇನ್ನು ಹಲವರು ಗುಡ್ ಬೈ ಹೇಳೋ ಚಿಂತನೆ ನಡೆಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಶುರುವಾಗಿರೋ ರಿಟೈರ್ಮೆಂಟ್ ಇನ್ನೂ ಕೆಲ ಕಾಲ ಮುಂದುವರೆಯೋದ್ರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ:ವಿಶ್ವಕಪ್ ವೇದಿಕೆಯಲ್ಲೇ ವಿರಾಟ್ ನಿವೃತ್ತಿ ಘೋಷಣೆ.. ಕೊಹ್ಲಿಯಂತೆ ರೋಹಿತ್ ಹಾಗೆ ಮಾಡಲಿಲ್ಲ ಯಾಕೆ ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕಪ್ ಗೆದ್ದ ಸಂಭ್ರಮದ ನಡುವೆ ಫ್ಯಾನ್ಸ್ಗೆ ಶಾಕ್..!
ಟೀಮ್ ಇಂಡಿಯಾದಲ್ಲಿ ಆಟಗಾರರ ನಿವೃತ್ತಿ ಪರ್ವ..!
ಟಿ-20 ವಿಶ್ವಕಪ್ ಗೆದ್ದಿರುವ ಭಾರತ ತಂಡ
ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ರಿಟೈರ್ಮೆಂಟ್ ಪರ್ವ ಶುರುವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಆಯ್ತು.. ಇದೀಗ ಇನ್ನೂ ಹಲವು ಆಟಗಾರರು ನಿವೃತ್ತಿ ಹೇಳಲು ಚಿಂತನೆ ನಡೆಸ್ತಿದ್ದಾರೆ. ಕೇವಲ ಟಿ20 ಇಂಟರ್ನ್ಯಾಷನಲ್ ಮಾತ್ರವಲ್ಲ.. ಎಲ್ಲಾ ಫಾರ್ಮೆಟ್ ವಿದಾಯ ಘೋಷಿಸೋ ಆಟಗಾರರೂ ಇದ್ದಾರೆ.
11 ವರ್ಷಗಳ ಕೊರಗು ಕೊನೆಗೂ ನೀಗಿದೆ. ಕೊಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. 2013ರ ಬಳಿಕ ಪದೇ ಪದೆ ಐಸಿಸಿ ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿದ್ದ ಟೀಮ್ ಇಂಡಿಯಾ ಕೊನೆಗೂ ಗೆದ್ದು ಬೀಗಿದೆ. ಭಾರತದ ಮುಡಿಗೆ ಟಿ20 ವಿಶ್ವಕಪ್ ಕಿರೀಟ ಒಲಿದಿದೆ. ಈ ಅವಿಸ್ಮರಣೀಯ ಕ್ಷಣ ಘಟಿಸಿ 2 ದಿನಗಳೇ ಆಯ್ತು. ಆ ಸಂಭ್ರಮಕ್ಕೆ ಇನ್ನೂ ತೆರೆ ಬಿದ್ದಿಲ್ಲ.. ಸೋಷಿಯಲ್ ಮೀಡಿಯಾಗಳಲ್ಲಂತೂ ಟೀಮ್ ಇಂಡಿಯಾದ ವಿಜಯದ ಯಾತ್ರೆ ಇನ್ನೂ ಸಖತ್ ಟ್ರೆಡಿಂಗ್ನಲ್ಲಿದೆ.
ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?
ಕಪ್ ಗೆದ್ದ ಸಂಭ್ರಮದ ನಡುವೆ ಫ್ಯಾನ್ಸ್ಗೆ ಶಾಕ್..!
ಇಂಡಿಯನ್ ಟೈಗರ್ಸ್, ಕೆರಬಿಯನ್ ನಾಡಲ್ಲಿ ಘರ್ಜಿಸಿ ಟ್ರೋಫಿ ಗೆದ್ದ ಖುಷಿಯ ಬೆನ್ನಲ್ಲೇ ಇಂಡಿಯನ್ ಫ್ಯಾನ್ಸ್ಗೆ ಎದುರಾಗಿದ್ದು ಶಾಕ್. ಮ್ಯಾನ್ ಆಫ್ ದ ಮ್ಯಾಚ್ ಅವಾರ್ಡ್ ಪಡೆಯಲು ಬಂದ ವಿರಾಟ್, ಪೋಡಿಯಂ ಮೇಲೆಯೇ ವಿದಾಯ ಹೇಳಿ ಶಾಕ್ ನೀಡಿದರು. ಇದ್ರ ಬೆನ್ನಲ್ಲೇ, ಪ್ರೆಸ್ ಕಾನ್ಪರೆನ್ಸ್ನಲ್ಲಿ ಗುಡ್ ಬೈ ಹೇಳಿದ್ರು. ಒಂದು ದಿನ ಕಳೆದ ಬಳಿಕ ರವೀಂದ್ರ ಜಡೇಜಾ ನಿವೃತ್ತಿಯ ಶಾಕ್ ಕೊಟ್ಟಿದ್ದಾರೆ. ಆರಂಭವಾಗಿರೋ ಈ ರಿಟೈರ್ಮೆಂಟ್ ಪರ್ವ ಸದ್ಯಕ್ಕೆ ನಿಲ್ಲೋ ತರ ಇಲ್ಲ. ಮುಂದಿನ ಕೋಚ್ ಗೌತಮ್ ಗಂಭೀರ್, ಸೀನಿಯರ್ಸ್ಗೆ ಷರತ್ತು ವಿಧಿಸಿರೋದ್ರಿಂದ ಇನ್ನಷ್ಟು ಪ್ಲೇಯರ್ಸ್ ಗುಡ್ ಬೈ ಹೇಳೋ ಸಾಧ್ಯತೆ ಇದೆ.
ಏಕದಿನ, T20ಗೆ ಗುಡ್ ಬೈ ಹೇಳ್ತಾರಾ ಅಶ್ವಿನ್?
35 ವರ್ಷದ ಗಡಿದಾಟಿದ ಟೀಮ್ ಇಂಡಿಯನ್ಸ್ ಒಬ್ಬಬ್ಬಾರಾಗಿ ಚುಟುಕು ಫಾರ್ಮೆಟ್ಗೆ ಟಾಟಾ ಹೇಳ್ತಿದ್ದಾರೆ. 37 ವರ್ಷದ ಆಫ್ ಸ್ಪಿನ್ನರ್ ಅಶ್ವಿನ್, ಕೂಡ ಶೀಘ್ರದಲ್ಲೇ ಗುಡ್ ಬೈ ಹೇಳೋ ಸಾಧ್ಯತೆ ಇದೆ. ಟಿ20 ಮಾತ್ರವಲ್ಲ.. ಏಕದಿನ ತಂಡದಿಂದಲೂ ದೂರ ಉಳಿದಿರೋ ಅಶ್ವಿನ್, ವೈಟ್ಬಾಲ್ ಫಾರ್ಮೆಟ್ಗೆ ವಿದಾಯ ಹೇಳಿದ್ರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ದಿಢೀರ್ ಬದಲಾವಣೆ.. ಜಿಂಬಾಬ್ವೆ ಪ್ರವಾಸದಿಂದ ಮೂವರು ಸ್ಟಾರ್ ಆಟಗಾರರಿಗೆ ಕೊಕ್..!
ನಿವೃತ್ತಿ ಹೇಳಲು ಸ್ಪೀಡ್ಸ್ಟರ್ ಶಮಿ ಸಜ್ಜು..?
ವೇಗಿ ಮೊಹಮ್ಮದ್ ಶಮಿ ಕೂಡ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಿದೆ. 33 ವರ್ಷದ ಶಮಿಯನ್ನ ಇಂಜುರಿ ಸಮಸ್ಯೆ ಪದೇ ಪದೆ ಕಾಡ್ತಿದೆ. ಹೀಗಾಗಿ ವರ್ಕ್ಲೋಡ್ ಮ್ಯಾನೇಜ್ಮೆಂಟ್ ದೃಷ್ಟಿಯಿಂದ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಹೇಳೋ ಸಾಧ್ಯತೆಯಿದೆ.
ಎಲ್ಲಾ ಮಾದರಿಗೆ ಸದ್ಯದಲ್ಲೇ ಧವನ್ ವಿದಾಯ?
ಶಿಖರ್ ಧವನ್ ಟೀಮ್ ಇಂಡಿಯಾ ಮೇನ್ ಸ್ಕ್ಯಾಡ್ನಿಂದ ಹೊರ ಬಿದ್ದು ವರ್ಷಗಳೇ ಉರುಳಿವೆ. ಸೆಕೆಂಡ್ ಸ್ಟ್ರಿಂಗ್ ಟೀಮ್ನೊಂದಿಗೂ ಕೊನೆಯ ಬಾರಿ ಆಡಿದ್ದು, ಡಿಸೆಂಬರ್, 10, 2022ರಂದು. ಆ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ. 38 ವರ್ಷದ ಧವನ್ಗೆ ಮತ್ತೆ ಅವಕಾಶ ಸಿಗೋದು ಅನುಮಾನವೇ. ಹೀಗಾಗಿ ಟಿ20 ಮಾತ್ರವಲ್ಲ. ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೇ ಧವನ್ ವಿದಾಯ ಘೋಷಿಸೋ ನಿರೀಕ್ಷೆಯಿದೆ.
ನಿವೃತ್ತಿ ಘೋಷಿಸ್ತಾರಾ ಭುವನೇಶ್ವರ್ ಕುಮಾರ್?
ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಟೀಮ್ ಇಂಡಿಯಾದಿಂದ ಹೊರಬಿದ್ದು ಒಂದು ವರ್ಷಕ್ಕೂ ಹೆಚ್ಚು ಕಾಲವಾಯ್ತು. 34 ವರ್ಷದ ಭುವನೇಶ್ವರ್ಗೆ ಮತ್ತೆ ಟೀಮ್ ಇಂಡಿಯಾ ಬಾಗಿಲು ತೆಗೆಯೋದು ಅನುಮಾನವೇ. ಹೀಗಾಗಿ ಅಧಿಕೃತವಾಗಿ ಶೀಘ್ರದಲ್ಲೇ ಸ್ವಿಂಗ್ ಮಾಸ್ಟರ್ ನಿವೃತ್ತಿ ಘೋಷಿಸಿದ್ರೆ, ಅಚ್ಚರಿಪಡಬೇಕಿಲ್ಲ.
ಷರತ್ತುಗಳನ್ನು ನೀಡಿ ಕೋಚ್ ಪಟ್ಟಕ್ಕೇರಲು ಗೌತಮ್ ಗಂಭೀರ್ ಸಜ್ಜಾಗಿದ್ರೆ, ಗಂಭೀರ್ ಎಂಟ್ರಿಗೂ ಮುನ್ನವೇ ಸೀನಿಯರ್ಸ್, ಜಾಗ ಖಾಲಿ ಮಾಡ್ತಿದ್ದಾರೆ. ಮೂವರು ಲೆಜೆಂಡ್ಸ್ ಅಧಿಕೃತವಾಗಿ ವಿದಾಯ ಹೇಳಿದ್ರೆ, ಇನ್ನು ಹಲವರು ಗುಡ್ ಬೈ ಹೇಳೋ ಚಿಂತನೆ ನಡೆಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದಲ್ಲಿ ಶುರುವಾಗಿರೋ ರಿಟೈರ್ಮೆಂಟ್ ಇನ್ನೂ ಕೆಲ ಕಾಲ ಮುಂದುವರೆಯೋದ್ರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ:ವಿಶ್ವಕಪ್ ವೇದಿಕೆಯಲ್ಲೇ ವಿರಾಟ್ ನಿವೃತ್ತಿ ಘೋಷಣೆ.. ಕೊಹ್ಲಿಯಂತೆ ರೋಹಿತ್ ಹಾಗೆ ಮಾಡಲಿಲ್ಲ ಯಾಕೆ ಗೊತ್ತಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್