ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ಸರಣಿ
ಜುಲೈ 27ನೇ ತಾರೀಕಿನಿಂದಲೇ ಲಂಕಾ ವಿರುದ್ಧ ಮೊದಲ ಟಿ20 ಮ್ಯಾಚ್
ಈ ಮುನ್ನವೇ ಭಾರತ ಕ್ರಿಕೆಟ್ ತಂಡಕ್ಕೆ ಶುರುವಾಯ್ತು ದೊಡ್ಡ ಸಂಕಷ್ಟ..!
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ಸರಣಿ ನಾಡಿದ್ದರಿಂದ ಶುರುವಾಗಲಿದೆ. ಜುಲೈ 27ನೇ ತಾರೀಕು ನಡೆಯಲಿರೋ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಆಟಗಾರರು ಸಜ್ಜಾಗಿದ್ದಾರೆ. ಅದರಲ್ಲೂ ನೆಟ್ನಲ್ಲಿ ಸಖತ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಇನ್ನು, ಈ ಮುನ್ನವೇ ಟೀಮ್ ಇಂಡಿಯಾಗೆ ಆಘಾತದ ಸುದ್ದಿ ಒಂದಿದೆ. ಪ್ರಾಕ್ಟೀಸ್ ವೇಳೆ ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಮೊಹಮ್ಮದ್ ಸಿರಾಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಮೊಹಮ್ಮದ್ ಸಿರಾಜ್ ಅವರನ್ನು ವೈದ್ಯರು ಮಾನಿಟರ್ ಮಾಡುತ್ತಿದ್ದಾರೆ. ಇವರು ನಾಡಿದ್ದು ನಡೆಯೋ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಲಭ್ಯರಾಗೋದು ಡೌಟ್ ಆಗಿದೆ. ಇದು ಟೀಮ್ ಇಂಡಿಯಾಗೆ ದೊಡ್ಡ ಆಘಾತ ನೀಡಿದೆ.
ಟೀಮ್ ಇಂಡಿಯಾ ಆಟಗಾರರ ಭಾರೀ ಕಸರತ್ತು!
ಟೀಮ್ ಇಂಡಿಯಾ ಶ್ರೀಲಂಕಾ ಎದುರಿನ ಸರಣಿಗಾಗಿ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಲಂಕಾ ತಲುಪಿದ ಬೆನ್ನಲ್ಲೇ ವಿಶ್ರಮಿಸದೇ ಕಠಿಣ ಅಭ್ಯಾಸಕ್ಕೆ ನಡೆಸಿದೆ. ಆತಿಥೇಯ ಪಡೆ ಗೌತಮ್ ಗಂಭೀರ್ ಬಾಯ್ಸ್ ಕಸರತ್ತು ನೋಡಿಯೇ ನಡುಗಿ ಹೋಗ್ಬೇಕು. ಆ ಮಟ್ಟಿಗೆ ಟೀಮ್ ಇಂಡಿಯನ್ಸ್ ಬೆವರು ಹರಿಸಿದ್ದಾರೆ.
ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಗೆ ಸಜ್ಜಾಗಿದೆ. ಉಭಯ ದೇಶಗಳ ನಡುವೆ ಟ್ವೆಂಟಿ-ಟ್ವೆಂಟಿ ದಂಗಲ್ ಆರಂಭಗೊಳ್ಳಲಿದ್ದು ಕದನ ಕುತೂಹಲ ಕೆರಳಿಸಿದೆ. ಈಗಾಗಲೇ ಭಾರತ ತಂಡ ಲಂಕನ್ನರ ನಾಡಲ್ಲಿ ಬೀಡು ಬಿಟ್ಟಿದ್ದು, ಬ್ಯಾಟಲ್ ಫೀಲ್ಡ್ನಲ್ಲಿ ಆತಿಥೇಯ ತಂಡವನ್ನ ಎದುರಿಸಲು ಭರ್ಜರಿ ತಯಾರಿ ಆರಂಭಿಸಿದೆ. ಹೊಸ ಕ್ಯಾಪ್ಟನ್ ಹಾಗೂ ಹೊಸ ಕೋಚ್ ಆಗಮನ ತಂಡಕ್ಕೆ ಹೊಸ ಹುರುಪು ತಂದಿದ್ದು, ಲಂಕಾ ಸಂಹರಿಸಿ ಗೆಲುವಿನ ಪತಾಕೆ ಹಾರಿಸುವ ಇರಾದೆಯಲ್ಲಿದೆ.
ಇದನ್ನೂ ಓದಿ: ಆರಂಭದಲ್ಲೇ ಗಂಭೀರ್ ಬಿಗಿ ಹಿಡಿತ.. ಪಾಂಡ್ಯ, ಪಂತ್, ಸಂಜುಗೆ ಪ್ರಾಕ್ಟಿಸ್ ಸೆಷನ್ನಲ್ಲಿ ಕ್ಲಾಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ಸರಣಿ
ಜುಲೈ 27ನೇ ತಾರೀಕಿನಿಂದಲೇ ಲಂಕಾ ವಿರುದ್ಧ ಮೊದಲ ಟಿ20 ಮ್ಯಾಚ್
ಈ ಮುನ್ನವೇ ಭಾರತ ಕ್ರಿಕೆಟ್ ತಂಡಕ್ಕೆ ಶುರುವಾಯ್ತು ದೊಡ್ಡ ಸಂಕಷ್ಟ..!
ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವೆ 3 ಪಂದ್ಯಗಳ ಟಿ20 ಸರಣಿ ನಾಡಿದ್ದರಿಂದ ಶುರುವಾಗಲಿದೆ. ಜುಲೈ 27ನೇ ತಾರೀಕು ನಡೆಯಲಿರೋ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾದ ಆಟಗಾರರು ಸಜ್ಜಾಗಿದ್ದಾರೆ. ಅದರಲ್ಲೂ ನೆಟ್ನಲ್ಲಿ ಸಖತ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಇನ್ನು, ಈ ಮುನ್ನವೇ ಟೀಮ್ ಇಂಡಿಯಾಗೆ ಆಘಾತದ ಸುದ್ದಿ ಒಂದಿದೆ. ಪ್ರಾಕ್ಟೀಸ್ ವೇಳೆ ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ತೀವ್ರವಾಗಿ ಗಾಯಗೊಂಡಿದ್ದಾರೆ. ಹಾಗಾಗಿ ಮೊಹಮ್ಮದ್ ಸಿರಾಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸದ್ಯ ಮೊಹಮ್ಮದ್ ಸಿರಾಜ್ ಅವರನ್ನು ವೈದ್ಯರು ಮಾನಿಟರ್ ಮಾಡುತ್ತಿದ್ದಾರೆ. ಇವರು ನಾಡಿದ್ದು ನಡೆಯೋ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಲಭ್ಯರಾಗೋದು ಡೌಟ್ ಆಗಿದೆ. ಇದು ಟೀಮ್ ಇಂಡಿಯಾಗೆ ದೊಡ್ಡ ಆಘಾತ ನೀಡಿದೆ.
ಟೀಮ್ ಇಂಡಿಯಾ ಆಟಗಾರರ ಭಾರೀ ಕಸರತ್ತು!
ಟೀಮ್ ಇಂಡಿಯಾ ಶ್ರೀಲಂಕಾ ಎದುರಿನ ಸರಣಿಗಾಗಿ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಲಂಕಾ ತಲುಪಿದ ಬೆನ್ನಲ್ಲೇ ವಿಶ್ರಮಿಸದೇ ಕಠಿಣ ಅಭ್ಯಾಸಕ್ಕೆ ನಡೆಸಿದೆ. ಆತಿಥೇಯ ಪಡೆ ಗೌತಮ್ ಗಂಭೀರ್ ಬಾಯ್ಸ್ ಕಸರತ್ತು ನೋಡಿಯೇ ನಡುಗಿ ಹೋಗ್ಬೇಕು. ಆ ಮಟ್ಟಿಗೆ ಟೀಮ್ ಇಂಡಿಯನ್ಸ್ ಬೆವರು ಹರಿಸಿದ್ದಾರೆ.
ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಗೆ ಸಜ್ಜಾಗಿದೆ. ಉಭಯ ದೇಶಗಳ ನಡುವೆ ಟ್ವೆಂಟಿ-ಟ್ವೆಂಟಿ ದಂಗಲ್ ಆರಂಭಗೊಳ್ಳಲಿದ್ದು ಕದನ ಕುತೂಹಲ ಕೆರಳಿಸಿದೆ. ಈಗಾಗಲೇ ಭಾರತ ತಂಡ ಲಂಕನ್ನರ ನಾಡಲ್ಲಿ ಬೀಡು ಬಿಟ್ಟಿದ್ದು, ಬ್ಯಾಟಲ್ ಫೀಲ್ಡ್ನಲ್ಲಿ ಆತಿಥೇಯ ತಂಡವನ್ನ ಎದುರಿಸಲು ಭರ್ಜರಿ ತಯಾರಿ ಆರಂಭಿಸಿದೆ. ಹೊಸ ಕ್ಯಾಪ್ಟನ್ ಹಾಗೂ ಹೊಸ ಕೋಚ್ ಆಗಮನ ತಂಡಕ್ಕೆ ಹೊಸ ಹುರುಪು ತಂದಿದ್ದು, ಲಂಕಾ ಸಂಹರಿಸಿ ಗೆಲುವಿನ ಪತಾಕೆ ಹಾರಿಸುವ ಇರಾದೆಯಲ್ಲಿದೆ.
ಇದನ್ನೂ ಓದಿ: ಆರಂಭದಲ್ಲೇ ಗಂಭೀರ್ ಬಿಗಿ ಹಿಡಿತ.. ಪಾಂಡ್ಯ, ಪಂತ್, ಸಂಜುಗೆ ಪ್ರಾಕ್ಟಿಸ್ ಸೆಷನ್ನಲ್ಲಿ ಕ್ಲಾಸ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್