ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ
ಕೆರೆಯಂಗಳದಲ್ಲಿ ಅಸ್ವಸ್ಥವಾಗಿ ಬಿದ್ದಿರುವ ಕೆಲವು ನವಿಲುಗಳು
ಮೃತ ನವಿಲುಗಳ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ ಇಲಾಖೆ
ಚಿಕ್ಕಬಳ್ಳಾಪುರ: ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ ನಡೆದಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಂಗಳದಲ್ಲಿ ನಡೆದಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 15ಕ್ಕೂ ಹೆಚ್ಚು ನವಿಲುಗಳು ನಿಗೂಢವಾಗಿ ಸಾವನ್ನಪಿವೆ.
ಕುಡಿಯುವ ನೀರು ಇಲ್ಲದೇ ಇರೋದ್ರಿಂದ ನವಿಲುಗಳು ನೀರು ಇರುವ ಕೆರೆಯ ಬಳಿ ಬಂದಿವೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಿಂದೆ ಇರುವ ಕೆರೆಯಂಗಳದಲ್ಲಿ ಕೆಲವು ನವಿಲುಗಳು ಅಸ್ವಸ್ಥವಾಗಿವೆ, ಇನ್ನು ಕೆಲವು ನವಿಲುಗಳು ಸ್ಥಳದಲ್ಲಿ ಮೃತಪಟ್ಟಿವೆ.
ಸ್ಥಳಕ್ಕೆ ತೆರಳಿ ಪರಿಶೀಲಿಸಿರುವ ಚಿಕ್ಕಬಳ್ಳಾಪುರದ ವನ್ಯ ಜೀವಿಗಳ ರಕ್ಷಕ ಹಾಗೂ ಉರಗ ತಜ್ಞ ಫೃಥ್ವಿರಾಜ್ ಕೆಲವು ಅಸ್ವಸ್ಥ ನವಿಲುಗಳನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಅರಣ್ಯ ಇಲಾಖೆ ಮೃತ ನವಿಲುಗಳ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ
ಕೆರೆಯಂಗಳದಲ್ಲಿ ಅಸ್ವಸ್ಥವಾಗಿ ಬಿದ್ದಿರುವ ಕೆಲವು ನವಿಲುಗಳು
ಮೃತ ನವಿಲುಗಳ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ ಇಲಾಖೆ
ಚಿಕ್ಕಬಳ್ಳಾಪುರ: ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ ನಡೆದಿರುವ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಂಗಳದಲ್ಲಿ ನಡೆದಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 15ಕ್ಕೂ ಹೆಚ್ಚು ನವಿಲುಗಳು ನಿಗೂಢವಾಗಿ ಸಾವನ್ನಪಿವೆ.
ಕುಡಿಯುವ ನೀರು ಇಲ್ಲದೇ ಇರೋದ್ರಿಂದ ನವಿಲುಗಳು ನೀರು ಇರುವ ಕೆರೆಯ ಬಳಿ ಬಂದಿವೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಿಂದೆ ಇರುವ ಕೆರೆಯಂಗಳದಲ್ಲಿ ಕೆಲವು ನವಿಲುಗಳು ಅಸ್ವಸ್ಥವಾಗಿವೆ, ಇನ್ನು ಕೆಲವು ನವಿಲುಗಳು ಸ್ಥಳದಲ್ಲಿ ಮೃತಪಟ್ಟಿವೆ.
ಸ್ಥಳಕ್ಕೆ ತೆರಳಿ ಪರಿಶೀಲಿಸಿರುವ ಚಿಕ್ಕಬಳ್ಳಾಪುರದ ವನ್ಯ ಜೀವಿಗಳ ರಕ್ಷಕ ಹಾಗೂ ಉರಗ ತಜ್ಞ ಫೃಥ್ವಿರಾಜ್ ಕೆಲವು ಅಸ್ವಸ್ಥ ನವಿಲುಗಳನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಅರಣ್ಯ ಇಲಾಖೆ ಮೃತ ನವಿಲುಗಳ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ