30 ವರ್ಷದ ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ಮಾತು
ಬಾಲರಾಮನ ದರ್ಶನ ಪಡೆದ ಬಳಿಕ ಜೈಶ್ರೀರಾಮ್ ಎಂದ ಸರಸ್ವತಿ ದೇವಿ
1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನದಂದು ಪ್ರತಿಜ್ಞೆ ಮಾಡಿದ್ದರು
ರಾಮಜನ್ಮಭೂಮಿ ಅಯೋಧ್ಯೆ ಭಕ್ತರಿಂದ ತುಂಬಿ ತುಳುಕುತ್ತಿದೆ. ಪ್ರತಿದಿನ 3 ರಿಂದ 5 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ. ಭಕ್ತಸಾಗರದಲ್ಲಿ ರಾಮನಾಮ ಮುಗಿಲು ಮುಟ್ಟಿದ್ರೆ ರಾಮಲಲ್ಲಾ ಮೂರ್ತಿಯ ದರ್ಶನ ಪಡೆದವರಿಗೆ ಆಗುತ್ತಿರುವ ಆನಂದ ವರ್ಣಿಸೋದು ಅಸಾಧ್ಯ.
ರಾಮಜನ್ಮಭೂಮಿಯಲ್ಲಿ ಅಪಾರ ಭಕ್ತರ ಮಧ್ಯೆ ಹಲವು ಆಶ್ಚರ್ಯಕರ ಘಟನೆಗಳು ನಡೆಯುತ್ತಿವೆ. ಖುದ್ದು ರಾಮನ ಭಂಟ ಹನುಮನೇ ಶ್ರೀರಾಮನ ದರ್ಶನಕ್ಕೆ ಬಂದು ಹೋಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದೀಗ ಮತ್ತೊಂದು ಘಟನೆ ಭಕ್ತಕೋಟಿಯ ಗಮನ ಸೆಳೆದಿದೆ.
85 ವರ್ಷದ ಸರಸ್ವತಿ ದೇವಿ 30 ವರ್ಷದ ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ತಮ್ಮ ಮೌನ ವ್ರತವನ್ನು ಮುರಿದಿದ್ದಾರೆ. ಅಯೋಧ್ಯೆಗೆ ಭೇಟಿ ಕೊಟ್ಟ ಮೌನಿ ಮಾತಾ ಜೈಶ್ರೀರಾಮ್, ಸೀತಾ ರಾಮ ಅನ್ನೋ ಮೂಲಕ ತಮ್ಮ 30 ವರ್ಷದ ಮೌನವ್ರತವನ್ನು ಮುರಿದಿದ್ದಾರೆ.
An 85-year-old Saraswati Devi, also known as ‘#MauniMata from Jharkhand’s Dhanbad, an unwavering devotee of Lord Ram, broke her 30-year-long ‘maun vrat’ (vow of silence) after the consecration of the Ram Temple in #Ayodhya concluded..#RamLallaVirajman #AyodhaRamMandir #Ram pic.twitter.com/Rndm6XMpZm
— Madhuri Adnal (@madhuriadnal) January 22, 2024
ಇದನ್ನೂ ಓದಿ: ರಾಮಮಂದಿರಕ್ಕಾಗಿ ಸತತ 30 ವರ್ಷ ಮೌನವ್ರತ; ಈಗ ಪ್ರತಿಜ್ಞೆ ಮುರಿಯಲಿದ್ದಾರೆ ‘ಮೌನಿ ಮಾತಾ’!
ಮೌನಿ ಮಾತಾ ಅಂತಾನೇ ಹೆಸರುವಾಸಿಯಾಗಿದ್ದ ಸರಸ್ವತಿ ದೇವಿ ಜಾರ್ಖಂಡ್ನ ಧನಬಾದ್ ನಿವಾಸಿ. 1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನದಂದು ಸರಸ್ವತಿ ದೇವಿಯು ಪ್ರತಿಜ್ಞೆ ಮಾಡಿದ್ದರಂತೆ. ಮುಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ಅಲ್ಲಿಯವರೆಗೂ ತಾವು ಮೌನವ್ರತ ಮಾಡುವುದಾಗಿ ಶಪಥ ಮಾಡಿದ್ದರಂತೆ. ಇದೀಗ ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಆ ಶಪಥವನ್ನು ಕೈಬಿಡಲು ನಿರ್ಧರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
30 ವರ್ಷದ ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ಮೊದಲ ಮಾತು
ಬಾಲರಾಮನ ದರ್ಶನ ಪಡೆದ ಬಳಿಕ ಜೈಶ್ರೀರಾಮ್ ಎಂದ ಸರಸ್ವತಿ ದೇವಿ
1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನದಂದು ಪ್ರತಿಜ್ಞೆ ಮಾಡಿದ್ದರು
ರಾಮಜನ್ಮಭೂಮಿ ಅಯೋಧ್ಯೆ ಭಕ್ತರಿಂದ ತುಂಬಿ ತುಳುಕುತ್ತಿದೆ. ಪ್ರತಿದಿನ 3 ರಿಂದ 5 ಲಕ್ಷ ಭಕ್ತರು ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ. ಭಕ್ತಸಾಗರದಲ್ಲಿ ರಾಮನಾಮ ಮುಗಿಲು ಮುಟ್ಟಿದ್ರೆ ರಾಮಲಲ್ಲಾ ಮೂರ್ತಿಯ ದರ್ಶನ ಪಡೆದವರಿಗೆ ಆಗುತ್ತಿರುವ ಆನಂದ ವರ್ಣಿಸೋದು ಅಸಾಧ್ಯ.
ರಾಮಜನ್ಮಭೂಮಿಯಲ್ಲಿ ಅಪಾರ ಭಕ್ತರ ಮಧ್ಯೆ ಹಲವು ಆಶ್ಚರ್ಯಕರ ಘಟನೆಗಳು ನಡೆಯುತ್ತಿವೆ. ಖುದ್ದು ರಾಮನ ಭಂಟ ಹನುಮನೇ ಶ್ರೀರಾಮನ ದರ್ಶನಕ್ಕೆ ಬಂದು ಹೋಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದೀಗ ಮತ್ತೊಂದು ಘಟನೆ ಭಕ್ತಕೋಟಿಯ ಗಮನ ಸೆಳೆದಿದೆ.
85 ವರ್ಷದ ಸರಸ್ವತಿ ದೇವಿ 30 ವರ್ಷದ ಬಳಿಕ ಅಯೋಧ್ಯೆ ರಾಮಮಂದಿರದಲ್ಲಿ ತಮ್ಮ ಮೌನ ವ್ರತವನ್ನು ಮುರಿದಿದ್ದಾರೆ. ಅಯೋಧ್ಯೆಗೆ ಭೇಟಿ ಕೊಟ್ಟ ಮೌನಿ ಮಾತಾ ಜೈಶ್ರೀರಾಮ್, ಸೀತಾ ರಾಮ ಅನ್ನೋ ಮೂಲಕ ತಮ್ಮ 30 ವರ್ಷದ ಮೌನವ್ರತವನ್ನು ಮುರಿದಿದ್ದಾರೆ.
An 85-year-old Saraswati Devi, also known as ‘#MauniMata from Jharkhand’s Dhanbad, an unwavering devotee of Lord Ram, broke her 30-year-long ‘maun vrat’ (vow of silence) after the consecration of the Ram Temple in #Ayodhya concluded..#RamLallaVirajman #AyodhaRamMandir #Ram pic.twitter.com/Rndm6XMpZm
— Madhuri Adnal (@madhuriadnal) January 22, 2024
ಇದನ್ನೂ ಓದಿ: ರಾಮಮಂದಿರಕ್ಕಾಗಿ ಸತತ 30 ವರ್ಷ ಮೌನವ್ರತ; ಈಗ ಪ್ರತಿಜ್ಞೆ ಮುರಿಯಲಿದ್ದಾರೆ ‘ಮೌನಿ ಮಾತಾ’!
ಮೌನಿ ಮಾತಾ ಅಂತಾನೇ ಹೆಸರುವಾಸಿಯಾಗಿದ್ದ ಸರಸ್ವತಿ ದೇವಿ ಜಾರ್ಖಂಡ್ನ ಧನಬಾದ್ ನಿವಾಸಿ. 1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ದಿನದಂದು ಸರಸ್ವತಿ ದೇವಿಯು ಪ್ರತಿಜ್ಞೆ ಮಾಡಿದ್ದರಂತೆ. ಮುಂದೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು. ಅಲ್ಲಿಯವರೆಗೂ ತಾವು ಮೌನವ್ರತ ಮಾಡುವುದಾಗಿ ಶಪಥ ಮಾಡಿದ್ದರಂತೆ. ಇದೀಗ ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಆ ಶಪಥವನ್ನು ಕೈಬಿಡಲು ನಿರ್ಧರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ