ಆ ರಾತ್ರಿ ಅಕ್ಷರಶಃ ಎಂಎಸ್ ಧೋನಿ ಅಳುತ್ತಿದ್ದರು
ಮಾಹಿ ಭಾವುಕರಾಗಿ ಕಣ್ಣೀರು ಸುರಿಸಿದ ಘಟನೆ
ಕಾಮೆಂಟರಿಯಲ್ಲಿ ಹರ್ಭಜನ್ ಸಿಂಗ್ ಬಿಚ್ಚಿಟ್ಟ ನೋವು
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಕೂಲ್ ಕ್ಯಾಪ್ಟನ್ ಎಂದೆನಿಸಿಕೊಂಡಿರುವ ಮಾಹಿ ತಂಡದ ಎಲ್ಲಾ ಸದಸ್ಯರನ್ನು ಉತ್ತಮವಾಗಿ ಭಾಂದವ್ಯ ಹೊಂದಿದ್ದಾರೆ. ತಮ್ಮ ತಂಡ ಗೆಲುವಿಗಾಗಿ ಏನೆಲ್ಲಾ ಬೇಕು ಅದೆಲ್ಲದರ ಕುರಿತಾಗಿ ಸರಿಯಾದ ಚರ್ಚೆ ಮಾಡುತ್ತಾರೆ. ಅಷ್ಟೇ ಏಕೆ ತಂಡದಲ್ಲಿರುವವರಿಗೆ ಮೊದಲ ಅದ್ಯತೆ ನೀಡುವ ಮೂಲಕ ಬ್ಯಾಟಿಂಗ್ ವಿಚಾರದಲ್ಲಿ ಕೊನೆಗೆ ಬರುತ್ತಾರೆ. ಹೀಗೆ ಧೋನಿ ಈ ಎಲ್ಲಾ ಕಾರಣಕ್ಕೆ ತುಂಬಾ ಇಷ್ಟವಾಗುತ್ತಾರೆ. ಮಾತ್ರವಲ್ಲದೆ ಬಹುಸಂಖ್ಯಾ ಅಭಿಮಾನಿಗಳನ್ನು ಮಾಹಿ ಹೊಂದಿದ್ದಾರೆ. ಧೋನಿ ಕೂಲ್ ಕ್ಯಾಪ್ಟನ್ ಮಾತ್ರವಲ್ಲ, ಅಷ್ಟೇ ಭಾವುಕ ವ್ಯಕ್ತಿ ಕೂಡ. ಹಿಂದೊಮ್ಮೆ ಮಾಹಿ ತಂಡಕ್ಕಾಗಿ ಕಣ್ಣೀರು ಹಾಕಿದ ಪ್ರಸಂಗ ಬಹುತೇಕರಿಗೆ ಗೊತ್ತೇ ಇಲ್ಲ. ಆದರೆ ಇದೀಗ ಆ ಸುದ್ದಿ ಮತ್ತೆ ಮುನ್ನಲೆಗೆ ಬಂದಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.
ಹಿಂದೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ತಂಡವನ್ನು ಅಮಾನತ್ತು ಮಾಡಲಾಗಿತ್ತು. ಬಳಿಕ 2018ರಲ್ಲಿ ಸಿಎಸ್ಕೆ ತಂಡ ಮತ್ತೆ ಪುನರಾಗಮನ ಮಾಡಿತು. ಈ ಸಂಧರ್ಭದಲ್ಲಿ ಮಾಹಿ ಭಾವುಕರಾಗಿ ಕಣ್ಣೀರು ಸುರಿಸಿದ ಘಟನೆ ನಡೆದಿತ್ತು.
ಐಪಿಎಲ್ ಕಾಮೆಂಟರಿ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ನಾನು ಹೇಳಿಕೊಳ್ಳಲು ಬಯಸುವ ಕಥೆಯೊಂದು ಇದೆ. 2018ರಲ್ಲಿ, 2 ವರ್ಷಗಳ ನಿಷೇಧದ ನಂತರ CSK ಮತ್ತೆ ಐಪಿಎಲ್ಗೆ ಮರಳಿತು. ಈ ವೇಳೆ ತಂಡದವರಿಗಾಗಿ ಒಂದು ಭೋಜನ ವ್ಯವಸ್ಥೆ ಮಾಡಲಾಗಿತ್ತು. ‘ಪುರುಷರು ಅಳುವುದಿಲ್ಲ’ ಎಂಬ ಮಾತನ್ನು ನಾನು ಕೇಳಿದ್ದೇನೆ, ಆದರೆ ಆ ರಾತ್ರಿ ಎಂಎಸ್ ಧೋನಿ ಅಳುತ್ತಿದ್ದರು. ಅವರು ಭಾವುಕರಾಗಿದ್ದರು. ಈ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ’’ ಎಂದು ಹೇಳಿದ್ದಾರೆ.
ಇದಕ್ಕೆ ಅಲ್ಲೇ ಇದ್ದ ಇಮ್ರಾನ್ ತಾಹಿರ್, ‘‘ಹೌದು. ನಾನು ಕೂಡ ಅಲ್ಲೇ ಇದ್ದೆ. ಅದು ಭಾವನಾತ್ಮಕ ಕ್ಷಣವಾಗಿತ್ತು. ಇದನ್ನು ಕಂಡಾಗ ಈ ತಂಡ ಅವರಿಗೆ ಎಷ್ಟು ಹತ್ತಿರದಲ್ಲಿದೆ ಎಂದು ನನಗೆ ತಿಳಿಯಿತು. ಅವರು ತಮ್ಮ ತಂಡವನ್ನು ಕುಟುಂಬವೆಂದು ಪರಿಗಣಿಸುತ್ತಾರೆ’’ ಎಂದು ಹೇಳಿದರು.
ಅಂದಹಾಗೆಯೇ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಧೋನಿ ಪಡೆ ಸೋಲಿಸಿದೆ. 15 ರನ್ಗಳ ಭರ್ಜರಿ ಜಯದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ಗೆ ಪ್ರವೇಶಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆ ರಾತ್ರಿ ಅಕ್ಷರಶಃ ಎಂಎಸ್ ಧೋನಿ ಅಳುತ್ತಿದ್ದರು
ಮಾಹಿ ಭಾವುಕರಾಗಿ ಕಣ್ಣೀರು ಸುರಿಸಿದ ಘಟನೆ
ಕಾಮೆಂಟರಿಯಲ್ಲಿ ಹರ್ಭಜನ್ ಸಿಂಗ್ ಬಿಚ್ಚಿಟ್ಟ ನೋವು
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಕೂಲ್ ಕ್ಯಾಪ್ಟನ್ ಎಂದೆನಿಸಿಕೊಂಡಿರುವ ಮಾಹಿ ತಂಡದ ಎಲ್ಲಾ ಸದಸ್ಯರನ್ನು ಉತ್ತಮವಾಗಿ ಭಾಂದವ್ಯ ಹೊಂದಿದ್ದಾರೆ. ತಮ್ಮ ತಂಡ ಗೆಲುವಿಗಾಗಿ ಏನೆಲ್ಲಾ ಬೇಕು ಅದೆಲ್ಲದರ ಕುರಿತಾಗಿ ಸರಿಯಾದ ಚರ್ಚೆ ಮಾಡುತ್ತಾರೆ. ಅಷ್ಟೇ ಏಕೆ ತಂಡದಲ್ಲಿರುವವರಿಗೆ ಮೊದಲ ಅದ್ಯತೆ ನೀಡುವ ಮೂಲಕ ಬ್ಯಾಟಿಂಗ್ ವಿಚಾರದಲ್ಲಿ ಕೊನೆಗೆ ಬರುತ್ತಾರೆ. ಹೀಗೆ ಧೋನಿ ಈ ಎಲ್ಲಾ ಕಾರಣಕ್ಕೆ ತುಂಬಾ ಇಷ್ಟವಾಗುತ್ತಾರೆ. ಮಾತ್ರವಲ್ಲದೆ ಬಹುಸಂಖ್ಯಾ ಅಭಿಮಾನಿಗಳನ್ನು ಮಾಹಿ ಹೊಂದಿದ್ದಾರೆ. ಧೋನಿ ಕೂಲ್ ಕ್ಯಾಪ್ಟನ್ ಮಾತ್ರವಲ್ಲ, ಅಷ್ಟೇ ಭಾವುಕ ವ್ಯಕ್ತಿ ಕೂಡ. ಹಿಂದೊಮ್ಮೆ ಮಾಹಿ ತಂಡಕ್ಕಾಗಿ ಕಣ್ಣೀರು ಹಾಕಿದ ಪ್ರಸಂಗ ಬಹುತೇಕರಿಗೆ ಗೊತ್ತೇ ಇಲ್ಲ. ಆದರೆ ಇದೀಗ ಆ ಸುದ್ದಿ ಮತ್ತೆ ಮುನ್ನಲೆಗೆ ಬಂದಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.
ಹಿಂದೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕೆ ತಂಡವನ್ನು ಅಮಾನತ್ತು ಮಾಡಲಾಗಿತ್ತು. ಬಳಿಕ 2018ರಲ್ಲಿ ಸಿಎಸ್ಕೆ ತಂಡ ಮತ್ತೆ ಪುನರಾಗಮನ ಮಾಡಿತು. ಈ ಸಂಧರ್ಭದಲ್ಲಿ ಮಾಹಿ ಭಾವುಕರಾಗಿ ಕಣ್ಣೀರು ಸುರಿಸಿದ ಘಟನೆ ನಡೆದಿತ್ತು.
ಐಪಿಎಲ್ ಕಾಮೆಂಟರಿ ಸಂದರ್ಭದಲ್ಲಿ ಹರ್ಭಜನ್ ಸಿಂಗ್ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ನಾನು ಹೇಳಿಕೊಳ್ಳಲು ಬಯಸುವ ಕಥೆಯೊಂದು ಇದೆ. 2018ರಲ್ಲಿ, 2 ವರ್ಷಗಳ ನಿಷೇಧದ ನಂತರ CSK ಮತ್ತೆ ಐಪಿಎಲ್ಗೆ ಮರಳಿತು. ಈ ವೇಳೆ ತಂಡದವರಿಗಾಗಿ ಒಂದು ಭೋಜನ ವ್ಯವಸ್ಥೆ ಮಾಡಲಾಗಿತ್ತು. ‘ಪುರುಷರು ಅಳುವುದಿಲ್ಲ’ ಎಂಬ ಮಾತನ್ನು ನಾನು ಕೇಳಿದ್ದೇನೆ, ಆದರೆ ಆ ರಾತ್ರಿ ಎಂಎಸ್ ಧೋನಿ ಅಳುತ್ತಿದ್ದರು. ಅವರು ಭಾವುಕರಾಗಿದ್ದರು. ಈ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ’’ ಎಂದು ಹೇಳಿದ್ದಾರೆ.
ಇದಕ್ಕೆ ಅಲ್ಲೇ ಇದ್ದ ಇಮ್ರಾನ್ ತಾಹಿರ್, ‘‘ಹೌದು. ನಾನು ಕೂಡ ಅಲ್ಲೇ ಇದ್ದೆ. ಅದು ಭಾವನಾತ್ಮಕ ಕ್ಷಣವಾಗಿತ್ತು. ಇದನ್ನು ಕಂಡಾಗ ಈ ತಂಡ ಅವರಿಗೆ ಎಷ್ಟು ಹತ್ತಿರದಲ್ಲಿದೆ ಎಂದು ನನಗೆ ತಿಳಿಯಿತು. ಅವರು ತಮ್ಮ ತಂಡವನ್ನು ಕುಟುಂಬವೆಂದು ಪರಿಗಣಿಸುತ್ತಾರೆ’’ ಎಂದು ಹೇಳಿದರು.
ಅಂದಹಾಗೆಯೇ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಧೋನಿ ಪಡೆ ಸೋಲಿಸಿದೆ. 15 ರನ್ಗಳ ಭರ್ಜರಿ ಜಯದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ಗೆ ಪ್ರವೇಶಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ