CSK ಅಭಿಮಾನಿಗಳಿಗೆ ಶಾಕಿಂಗ್​ ನ್ಯೂಸ್​​! ಮ್ಯಾನೇಜ್​ಮೆಂಟ್​ಗೆ ‘ಅಲಭ್ಯ’ ಸಂದೇಶ ಕಳುಹಿಸಿದ ಮಾಹಿ

author-image
AS Harshith
Updated On
ಕೋಟಿ ಕೋಟಿ ಹಣ ಕಳೆದುಕೊಂಡ MS ಧೋನಿ.. ಮಾಜಿ ಕ್ಯಾಪ್ಟನ್ ಲಾಸ್ ಆಗಿದ್ದು ಹೇಗೆ?
Advertisment
  • ಐಪಿಎಲ್​ ಪ್ರಾರಂಭಕ್ಕೂ ಮುನ್ನವೇ ಧೋನಿ ಬಗ್ಗೆ ಹೀಗೊಂದು ಸುದ್ದಿ
  • ಚೆನ್ನೈ ಸೂಪರ್​ ಕಿಂಗ್ಸ್​​ ಸಿಇಓ ವಿಶ್ವನಾಥನ್​​ ಏನಂದ್ರು ಗೊತ್ತಾ?
  • ನಾನು ಅವರಿಂದ ಯಾವುದೇ ಧೃಡೀಕರಣ ತೆಗೆದುಕೊಂಡಿಲ್ಲ ಎಂದರು

ಐಪಿಎಲ್​ 2025 ಯಾವಾಗ ಸಮೀಪಿಸುತ್ತೋ ಎಂದು ಕ್ರಿಕೆಟ್​​ ಅಭಿಮಾನಿಗಳು ತವಕದಲ್ಲಿದ್ದರೆ. ಇತ್ತ ಸಿಎಸ್​ಕೆ ಅಭಿಮಾನಿಗಳು ಧೋನಿ ಈ ಬಾರಿ ತಂಡದಲ್ಲಿದ್ದಾರಾ? ಎಂಬ ಕುತೂಹಲದಲ್ಲಿದ್ದಾರೆ. ಆದರೆ ಇಂತಹ ಸಮಯದಲ್ಲಿ ಮಾಹಿ ಅಭಿಮಾನಿಗೆ ಶಾಕಿಂಗ್​ ಸುದ್ದಿಯೊಂದು ಹೊರಬಿದ್ದಿದೆ. ಅದೇನು ಗೊತ್ತಾ? ಈ ಸ್ಟೋರಿ ಓದಿ.

ಐಪಿಎಲ್​ 2025ಕ್ಕೆ ಮುಂಚಿತವಾಗಿ ಸಿಎಸ್​ಕೆ ತಂಡದಲ್ಲಿ ಮಾಜಿ ನಾಯಕನ ಕುರಿತು ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿವೆ. ಹೊಸ ನಿಯಮಗಳ ಪ್ರಕಾರ ಮಹೇಂದ್ರ ಸಿಂಗ್​ ಧೋನಿಯನ್ನು 4 ಕೋಟಿ ರೂಪಾಯಿಗೆ ತಂಡ ಉಳಿಸಿಕೊಳ್ಳಲು ಮುಂದಾಗಿದೆ. ಅನ್​ಕ್ಯಾಪ್ಡ್​ ಆಟಗಾರನಾಗಿ ಮಾಹಿಯನ್ನು ತಂಡದಲ್ಲಿ ಇರಿಸಿಕೊಳ್ಳಲು ಸಜ್ಜಾಗಿದೆ. ಆದರೆ ಮಾಹಿ ಮಾತ್ರ ಇಲ್ಲಿಯವರೆಗೆ ತನ್ನ ಲಭ್ಯತೆ ಬಗ್ಗೆ ಖಚಿತಪಡಿಸಿಕೊಂಡಿಲ್ಲವಂತೆ.

publive-image

ಮಹೇಂದ್ರ ಸಿಂಗ್​ ಧೋನಿ ಅಕ್ಟೋಬರ್​ 29 ಅಥವಾ 30ರಂದು ಸಿಎಸ್​​ಕೆ ಅಧಿಕಾರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಅಕ್ಟೋಬರ್​ 28ರವರೆಗೆ ನಾನು ಯಾವ ಸಭೆಗಳಿಗೂ ಲಭ್ಯವಿರುವುದಿಲ್ಲ ಎಂದು ಮ್ಯಾನೇಜ್​ಮೆಂಟ್​​ಗೆ ತಿಳಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: IND vs NZ; ಯುವ ಬ್ಯಾಟರ್ ಸರ್ಫರಾಜ್​ ಖಾನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಯಾಕೆ ಗೊತ್ತಾ?

ಚೆನ್ನೈ ಸೂಪರ್​ ಕಿಂಗ್ಸ್​​ ಸಿಇಓ ವಿಶ್ವನಾಥನ್​​ ಅವರು ಈ ಕುರಿತಾಗಿ, ಬಹುಬೇಡಿಕೆಯ ಆಟಗಾರರೊಬ್ಬರು ಅಕ್ಟೋಬರ್​ 31ರ ಮೊದಲು ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತಾರೆ. ಬಳಿಕ ಅಭ್ಯಾಸಕ್ಕೆ ಮರಳಲಿದ್ದಾರೆ ಎಂಬ ಭರವಸೆಯಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಷಸರ್ಪ ಕಚ್ಚಿ ಮೂವರು ಸಾ*ವು.. ಪುಂಗಿದಾಸನನ್ನು ಕರೆಸಿ ಹಾವು ಹಿಡಿಯಲು ಮುಂದಾದ ಅರಣ್ಯ ಇಲಾಖೆ

publive-image

‘ನಾನು ಅವರಿಂದ ಯಾವುದೇ ಧೃಡೀಕರಣ ತೆಗೆದುಕೊಂಡಿಲ್ಲ. ಅವರು ನಮಗಾಗಿ ಆಡಲು ಬಯಸುತ್ತೇನೆ. ಅಕ್ಟೋಬರ್​ 31ರ ಮೊದಲು ಖಚಿತಪಡಿಸಲಿದ್ದಾರೆ ಎಂಬ ಭಾವಿಸುತ್ತೇನೆ’ ಎಂದು ವಿಶ್ವನಾಥನ್​ ತಿಳಿಸಿದ್ದಾರೆ.

ಸಿಎಸ್​ಕೆ ತಂಡ ಅನ್​ಕ್ಯಾಪ್ಡ್​ ಆಟಗಾರನಾಗಿ ಧೋನಿಯನ್ನು ಉಳಿಸಿಕೊಳ್ಳಲು ಮುಂದಾಗಿದೆ. 120 ಕೋಟಿಗಳ ಬಜೆಟ್​ನಿಂದ 4 ಕೋಟಿಯನ್ನು ಧೋನಿಗಾಗಿ ನೀಡಲಿದೆ. ಮಾಹಿ ಲಭ್ಯತೆ ಬಗ್ಗೆ ತಿಳಿಸಿದರೆ ಅನ್​​ಕ್ಯಾಪ್ಡ್​ ಆಟಗಾರನಾಗಿ 43 ವರ್ಷದ ಧೋನಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment