newsfirstkannada.com

VIDEO: ಮಗನ ಮಾತಿಗೆ ಗಳ ಗಳನೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ.. ಭಾವುಕನಾದ ಅನಂತ್ ಹೇಳಿದ್ದೇನು?

Share :

Published March 2, 2024 at 5:13pm

    ಅನಂತ್ ಅಂಬಾನಿ ಬಾಲ್ಯದ ಆರೋಗ್ಯದ ಸಮಸ್ಯೆ ಬಗ್ಗೆ ಭಾವುಕ ಮಾತು

    ಬಾಲ್ಯದ ಎದುರಾದ ಕಷ್ಟ ನೆನೆದು ತಂದೆ-ತಾಯಿಗೆ ಹೃತ್ಪೂರ್ವಕ ಧನ್ಯವಾದ

    ಪ್ರೀ ವೆಡ್ಡಿಂಗ್​ ಸಮಾರಂಭಕ್ಕೆ ಭಾಗಿಯಾದ ಗಣ್ಯರಿಗೆ ಅನಂತ ವಂದನೆಗಳು

ಒಬ್ಬ ತಂದೆ ತನ್ನ ಮಕ್ಕಳ ಭವಿಷ್ಯ ರೂಪಿಸಲು ಇಡೀ ಜೀವನವನ್ನು ಕಳೆಯುತ್ತಾನೆ. ಅದೇ ರೀತಿ ತನ್ನ ಮಗನ ಆರೋಗ್ಯಕ್ಕೆ ಆಪತ್ತು ಬಂದರೆ ಅದೇಷ್ಟು ಕಷ್ಟ ಪಡುತ್ತಾನೋ ಆ ದೇವರಿಗೆ ಗೊತ್ತು. ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಕೂಡ ತಮ್ಮ ಆರೋಗ್ಯ ಸಮಸ್ಯೆಗಳಿಂದ ಅದೆಷ್ಟೋ ನೊಂದು ಬಂದಿದ್ದಾರೆ. ನನ್ನ ಜೀವನದ ಕಷ್ಟದ ದಿನಗಳಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದು ನನ್ನ ಅಪ್ಪ- ಅಮ್ಮ ಅಂತಾ ಹೇಳುತ್ತಾ ಅನಂತ್ ಅಂಬಾನಿ ಭಾವುಕರಾಗಿದ್ದಾರೆ.

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಪ್ರೀ ವೆಡ್ಡಿಂಗ್​ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ದೇಶ, ವಿದೇಶಗಳಿಂದ ಗಣ್ಯರು ಆಗಮಿಸಿದ್ದಾರೆ. ಈ ಸಮಾರಂಭದಲ್ಲಿ ಅನಂತ್ ಅಂಬಾನಿ ಅವರು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡುತ್ತಿದ್ದಂತೆ ಮುಖೇಶ್ ಅಂಬಾನಿ ಕಣ್ಣೀರಿಟ್ಟಿದ್ದಾರೆ.

ಇದನ್ನು ಓದಿ: ದಿ ರಾಮೇಶ್ವರ ಕೆಫೆ ಬ್ಲಾಸ್ಟ್​ ಹಿಂದೆ ಇದೆಯಾ ಬ್ಯುಸಿನೆಸ್​ ಮಾಫಿಯಾ? ಯಾವ್ಯಾವ ಆಯಾಮದಲ್ಲಿ ನಡಿತಿದೆ ತನಿಖೆ?

ಮೂರು ದಿನದ ಪ್ರೀ ವೆಡ್ಡಿಂಗ್​ ಸಮಾರಂಭದಲ್ಲಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರು ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಗಣ್ಯರಿಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಪೋಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ಜೊತೆಗೆ ಅನಂತ್ ಅಂಬಾನಿ ತಮ್ಮ ಬಾಲ್ಯದಲ್ಲಿ ಉಂಟಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತಾಡಿದ್ದಾರೆ. ಇನ್ನೂ ಅನಂತ್ ಅಂಬಾನಿ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದಂತೆ ತಂದೆ ಮುಖೇಶ್ ಅಂಬಾನಿ ಅವರ ಕಣ್ಣಲ್ಲಿ ನೀರು ತುಂಬಿತ್ತು.

ಇದನ್ನು ಓದಿ: ಜಾಮ್‌ನಗರದಲ್ಲಿ ಧೂಳೆಬ್ಬಿಸಿದ ರಿಹಾನ್ನಾ.. ಜಾಹ್ನವಿ ಕಪೂರ್ ಜೊತೆ ಸೊಂಟ ಬಳುಕಿಸಿದ ವಿಡಿಯೋ ವೈರಲ್‌!

ಫ್ರೀ ವೆಡ್ಡಿಂಗ್ ವೇದಿಕೆ ಮೇಲೆ ನಿಂತುಕೊಂಡು ಮಾತಾಡಿದ ಅನಂತ್ ಅಂಬಾನಿ ಅವರು, ಈ ಮೂಲಕ ನನ್ನ ಕುಟುಂಬವು ನನಗೆ ತುಂಬಾ ವಿಶೇಷ ಭಾವನೆ ಕೊಟ್ಟಿದೆ. ಆದರೆ ನನ್ನ ಜೀವನವು ಗುಲಾಬಿಗಳ ಹಾಸಿಗೆಯಂತೆ ಇರಲಿಲ್ಲ. ನಾನು ಮುಳ್ಳಿನಿಂದ ಉಂಟಾಗುವಂತ ನೋವನ್ನು ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ನನ್ನ ತಂದೆ-ತಾಯಿ ಮಾತ್ರ ಎಂದಿಗೂ ನನ್ನ ಕೈ ಬಿಡಲಿಲ್ಲ. ಅಂತಹ ಕೆಟ್ಟ ಸಂದರ್ಭದಲ್ಲಿ ಅವರು ನನ್ನ ಬೆಂಬಲಕ್ಕೆ ನಿಂತುಕೊಂಡಿದ್ದರು. ಹಾಗೇ ಇದ್ದಿದ್ದರಿಂದ ಇಂದು ನನ್ನ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ನಾನು ಎಷ್ಟು ಧನ್ಯವಾದಗಳನ್ನು ಹೇಳಿದರೂ ಕೂಡ ಕಮ್ಮಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮಗನ ಮಾತಿಗೆ ಗಳ ಗಳನೆ ಕಣ್ಣೀರಿಟ್ಟ ಮುಖೇಶ್ ಅಂಬಾನಿ.. ಭಾವುಕನಾದ ಅನಂತ್ ಹೇಳಿದ್ದೇನು?

https://newsfirstlive.com/wp-content/uploads/2024/03/ambani-5.jpg

    ಅನಂತ್ ಅಂಬಾನಿ ಬಾಲ್ಯದ ಆರೋಗ್ಯದ ಸಮಸ್ಯೆ ಬಗ್ಗೆ ಭಾವುಕ ಮಾತು

    ಬಾಲ್ಯದ ಎದುರಾದ ಕಷ್ಟ ನೆನೆದು ತಂದೆ-ತಾಯಿಗೆ ಹೃತ್ಪೂರ್ವಕ ಧನ್ಯವಾದ

    ಪ್ರೀ ವೆಡ್ಡಿಂಗ್​ ಸಮಾರಂಭಕ್ಕೆ ಭಾಗಿಯಾದ ಗಣ್ಯರಿಗೆ ಅನಂತ ವಂದನೆಗಳು

ಒಬ್ಬ ತಂದೆ ತನ್ನ ಮಕ್ಕಳ ಭವಿಷ್ಯ ರೂಪಿಸಲು ಇಡೀ ಜೀವನವನ್ನು ಕಳೆಯುತ್ತಾನೆ. ಅದೇ ರೀತಿ ತನ್ನ ಮಗನ ಆರೋಗ್ಯಕ್ಕೆ ಆಪತ್ತು ಬಂದರೆ ಅದೇಷ್ಟು ಕಷ್ಟ ಪಡುತ್ತಾನೋ ಆ ದೇವರಿಗೆ ಗೊತ್ತು. ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಕೂಡ ತಮ್ಮ ಆರೋಗ್ಯ ಸಮಸ್ಯೆಗಳಿಂದ ಅದೆಷ್ಟೋ ನೊಂದು ಬಂದಿದ್ದಾರೆ. ನನ್ನ ಜೀವನದ ಕಷ್ಟದ ದಿನಗಳಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದು ನನ್ನ ಅಪ್ಪ- ಅಮ್ಮ ಅಂತಾ ಹೇಳುತ್ತಾ ಅನಂತ್ ಅಂಬಾನಿ ಭಾವುಕರಾಗಿದ್ದಾರೆ.

ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರ ಪ್ರೀ ವೆಡ್ಡಿಂಗ್​ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ದೇಶ, ವಿದೇಶಗಳಿಂದ ಗಣ್ಯರು ಆಗಮಿಸಿದ್ದಾರೆ. ಈ ಸಮಾರಂಭದಲ್ಲಿ ಅನಂತ್ ಅಂಬಾನಿ ಅವರು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡುತ್ತಿದ್ದಂತೆ ಮುಖೇಶ್ ಅಂಬಾನಿ ಕಣ್ಣೀರಿಟ್ಟಿದ್ದಾರೆ.

ಇದನ್ನು ಓದಿ: ದಿ ರಾಮೇಶ್ವರ ಕೆಫೆ ಬ್ಲಾಸ್ಟ್​ ಹಿಂದೆ ಇದೆಯಾ ಬ್ಯುಸಿನೆಸ್​ ಮಾಫಿಯಾ? ಯಾವ್ಯಾವ ಆಯಾಮದಲ್ಲಿ ನಡಿತಿದೆ ತನಿಖೆ?

ಮೂರು ದಿನದ ಪ್ರೀ ವೆಡ್ಡಿಂಗ್​ ಸಮಾರಂಭದಲ್ಲಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರು ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಗಣ್ಯರಿಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಪೋಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ಜೊತೆಗೆ ಅನಂತ್ ಅಂಬಾನಿ ತಮ್ಮ ಬಾಲ್ಯದಲ್ಲಿ ಉಂಟಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತಾಡಿದ್ದಾರೆ. ಇನ್ನೂ ಅನಂತ್ ಅಂಬಾನಿ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದಂತೆ ತಂದೆ ಮುಖೇಶ್ ಅಂಬಾನಿ ಅವರ ಕಣ್ಣಲ್ಲಿ ನೀರು ತುಂಬಿತ್ತು.

ಇದನ್ನು ಓದಿ: ಜಾಮ್‌ನಗರದಲ್ಲಿ ಧೂಳೆಬ್ಬಿಸಿದ ರಿಹಾನ್ನಾ.. ಜಾಹ್ನವಿ ಕಪೂರ್ ಜೊತೆ ಸೊಂಟ ಬಳುಕಿಸಿದ ವಿಡಿಯೋ ವೈರಲ್‌!

ಫ್ರೀ ವೆಡ್ಡಿಂಗ್ ವೇದಿಕೆ ಮೇಲೆ ನಿಂತುಕೊಂಡು ಮಾತಾಡಿದ ಅನಂತ್ ಅಂಬಾನಿ ಅವರು, ಈ ಮೂಲಕ ನನ್ನ ಕುಟುಂಬವು ನನಗೆ ತುಂಬಾ ವಿಶೇಷ ಭಾವನೆ ಕೊಟ್ಟಿದೆ. ಆದರೆ ನನ್ನ ಜೀವನವು ಗುಲಾಬಿಗಳ ಹಾಸಿಗೆಯಂತೆ ಇರಲಿಲ್ಲ. ನಾನು ಮುಳ್ಳಿನಿಂದ ಉಂಟಾಗುವಂತ ನೋವನ್ನು ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ. ಆದರೆ ನನ್ನ ತಂದೆ-ತಾಯಿ ಮಾತ್ರ ಎಂದಿಗೂ ನನ್ನ ಕೈ ಬಿಡಲಿಲ್ಲ. ಅಂತಹ ಕೆಟ್ಟ ಸಂದರ್ಭದಲ್ಲಿ ಅವರು ನನ್ನ ಬೆಂಬಲಕ್ಕೆ ನಿಂತುಕೊಂಡಿದ್ದರು. ಹಾಗೇ ಇದ್ದಿದ್ದರಿಂದ ಇಂದು ನನ್ನ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ನಾನು ಎಷ್ಟು ಧನ್ಯವಾದಗಳನ್ನು ಹೇಳಿದರೂ ಕೂಡ ಕಮ್ಮಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More