ದರ್ಶನ್ ದುಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದ ನಾದ ಬ್ರಹ್ಮ
ರೇಣುಕಾಸ್ವಾಮಿ ಫೇಕ್ ಅಕೌಂಟ್ನ ಸತ್ಯವನ್ನ ಬಿಚ್ಚಿಟ್ಟ ನಟಿ
ದರ್ಶನ್ರನ್ನ ಭಿನ್ನವಾಗಿ ಬಣ್ಣಿಸಿ ಬೇಸರ ಹೊರಹಾಕಿದ ಸಂಗೀತ ನಿರ್ದೇಶಕ
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಜೈಲುಪಾಲಾಗಿರೋ ದರ್ಶನ್ ಬಗ್ಗೆ ಒಬ್ಬೊಬ್ಬರು ಒಂದೊಂದು ತರಹದ ಹೇಳಿಕೆಗಳನ್ನ ನೀಡ್ತಿದ್ದಾರೆ. ಸದ್ಯ ಚಂದನವನದ ಖ್ಯಾತ ಸಂಗೀತ ನಿರ್ದೇಶಕರೊಬ್ರು ದರ್ಶನ್ರನ್ನ ತನ್ನ ಮಗು ಅಂತ ಮರುಕಪಟ್ಟಿದ್ದಾರೆ. ಅತ್ತ ನಟಿಯೊಬ್ರು ರೇಣುಕಾಸ್ವಾಮಿ ಫೇಕ್ ಅಕೌಂಟ್ನ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ದರ್ಶನ್ ದುಸ್ಥಿತಿ ಕಂಡು ಚಿತ್ರರಂಗದ ಕಲಾವಿದರು ಒಬ್ಬೋಬ್ಬರೇ ಬೇಸರ ಹೊರಹಾಕ್ತಿದ್ದಾರೆ. ಮೆಜೆಸ್ಟಿಕ್ನಲ್ಲಿ ಹೀರೋ ಆಗಿ ಮೆರೆದಿದ್ದ ದರ್ಶನ್ ಸದ್ಯ ಪಟ್ಟಣಗೆರೆ ಶೆಡ್ನಲ್ಲಿ ವಿಲನ್ ಆಗಿ ಜೈಲುಪಾಲಾಗಿರೋದು ಅಭಿಮಾನಿಗಳ ಬೇಸರ ತಂದಿದೆ. ಚಂದನವನದ ಖ್ಯಾತ ಸಂಗೀತ ನಿರ್ದೇಶಕರೊಬ್ರು ದರ್ಶನ್ರನ್ನ ಬೇರೆ ರೀತಿಯೇ ಬಣ್ಣಿಸಿ ಬೇಸರ ಹೊರಹಾಕಿದ್ದಾರೆ.
‘ದರ್ಶನ್ ನನ್ನ ಮಗು ಇದ್ದಹಾಗೆ, ನಾನು ತಂದೆ ಇದ್ದಹಾಗೆ’!
ದರ್ಶನ್ ಜೈಲುಪಾಲಾಗಿರೋ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾದ ಬ್ರಹ್ಮ ದರ್ಶನ್ ನನ್ನ ಮಗು ಇದ್ದಹಾಗೆ, ನಾನು ತಂದೆ ಇದ್ದಹಾಗೆ. ಈ ವಿಚಾರದಲ್ಲಿ ದರ್ಶನ್ಗೆ ಎಷ್ಟು ನೋವಾಗಿದ್ಯೋ ನನಗೂ ಅಷ್ಟೆ ನೋವಾಗಿದೆ ಅಂತ ಮರುಕಪಟ್ಟಿದ್ದಾರೆ.
ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಐವರು.. ವರುಣಾರ್ಭಟಕ್ಕೆ ದೇಶದಲ್ಲಿ ಲೆಕ್ಕವಿಲ್ಲದಷ್ಟು ಸಾವು ನೋವು
ರೇಣುಕಾಸ್ವಾಮಿ ಕಾಮೆಂಟ್ಗಳನ್ನ ನ್ಯೂಸ್ಫಸ್ಟ್ ಮುಂದೆ ಬಿಟ್ಟಿಟ್ಟ ನಟಿ
ಮೃತ ರೇಣುಕಾಸ್ವಾಮಿ ಫೇಕ್ ಅಕೌಂಟ್ಗಳ ಮೂಲಕ ಹಲವು ನಟಿಯರಿಗೆ ಅಶ್ಲೀಲ ಮೆಸೇಜ್ಗಳನ್ನ ಮಾಡ್ತಿದ್ದ ಅನ್ನೋ ಆರೋಪದ ಬಗ್ಗೆ ನಟಿ ಚಿತ್ರಾಲ್ ನ್ಯೂಸ್ ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿ ಮಾಡಿದ್ದ ಎನ್ನಲಾದ ಕೆಲ ಕಾಮೆಂಟ್ಗಳನ್ನ ಸಹ ನಟಿ ಚಿತ್ರಾಲ್ ನ್ಯೂಸ್ ಫಸ್ಟ್ ಕ್ಯಾಮೆರಾ ಮುಂದೆಯೇ ತೋರಿಸಿದ್ದಾರೆ. ಅಲ್ಲದೇ ತಾನು ಬ್ಲಾಕ್ ಲೀಸ್ಟ್ಗೆ ಹಾಕಿದ್ದ ರೇಣುಕಾಸ್ವಾಮಿಯದ್ದೂ ಎನ್ನಲಾದ ಅಕೌಂಟ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Kalki 2898 AD: ಅಬ್ಬಬ್ಬಾ! ಪ್ರಭಾಸ್ ಕಲ್ಕಿ ಸಿನಿಮಾದ 3ನೇ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
ಬೆಲೆ ಏರಿಕೆ ಬಗ್ಗೆ ಚರ್ಚೆ ಆಗ್ಬಾರ್ದು ಅಂತ ದರ್ಶನ್ ಕಸ್ಟಡಿ ಹೆಚ್ಚಳ
ರಾಜ್ಯ ಸರ್ಕಾರ ಬೆಲೆ ಏರಿಕೆ ಬಗ್ಗೆ ಜನರು ಚರ್ಚೆ ಮಾಡ್ಬಾರ್ದು ಅಂತ ನಟ ದರ್ಶನ್ ಕಸ್ಟಡಿಯನ್ನ 2 ದಿನ ಹೆಚ್ಚಳ ಮಾಡಿದೆ ಅಂತ ಸಿ.ಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್.. ಡಿ ಬಾಸ್ ಪಡೆದ 5 ಪುಸ್ತಕಗಳು ಯಾವುವು?
ಒಟ್ನಲ್ಲಿ ಅತ್ತ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ದಿನ ಎಣಿಸುತ್ತಿದ್ರೆ ಇತ್ತ ಚಿತ್ರ ರಂಗದ ಸಹಕಲಾವಿದರು ಪ್ರಕರಣದ ಬಗ್ಗೆ ಒಬ್ಬೊಬ್ಬರೇ ತುಟಿ ಬಿಚ್ಚುತ್ತಿದ್ದಾರೆ. ಇನ್ನೂ ನಾಲ್ಕುದಿನ ದರ್ಶನ್ ಜೈಲುವಾಸ ಬಾಕಿ ಇದ್ದು, ಮತ್ತಿನ್ಯಾರು ಏನೇನ್ ಹೇಳ್ತಾರೋ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ ದುಸ್ಥಿತಿ ನೆನೆದು ಬೇಸರ ವ್ಯಕ್ತಪಡಿಸಿದ ನಾದ ಬ್ರಹ್ಮ
ರೇಣುಕಾಸ್ವಾಮಿ ಫೇಕ್ ಅಕೌಂಟ್ನ ಸತ್ಯವನ್ನ ಬಿಚ್ಚಿಟ್ಟ ನಟಿ
ದರ್ಶನ್ರನ್ನ ಭಿನ್ನವಾಗಿ ಬಣ್ಣಿಸಿ ಬೇಸರ ಹೊರಹಾಕಿದ ಸಂಗೀತ ನಿರ್ದೇಶಕ
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಜೈಲುಪಾಲಾಗಿರೋ ದರ್ಶನ್ ಬಗ್ಗೆ ಒಬ್ಬೊಬ್ಬರು ಒಂದೊಂದು ತರಹದ ಹೇಳಿಕೆಗಳನ್ನ ನೀಡ್ತಿದ್ದಾರೆ. ಸದ್ಯ ಚಂದನವನದ ಖ್ಯಾತ ಸಂಗೀತ ನಿರ್ದೇಶಕರೊಬ್ರು ದರ್ಶನ್ರನ್ನ ತನ್ನ ಮಗು ಅಂತ ಮರುಕಪಟ್ಟಿದ್ದಾರೆ. ಅತ್ತ ನಟಿಯೊಬ್ರು ರೇಣುಕಾಸ್ವಾಮಿ ಫೇಕ್ ಅಕೌಂಟ್ನ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ದರ್ಶನ್ ದುಸ್ಥಿತಿ ಕಂಡು ಚಿತ್ರರಂಗದ ಕಲಾವಿದರು ಒಬ್ಬೋಬ್ಬರೇ ಬೇಸರ ಹೊರಹಾಕ್ತಿದ್ದಾರೆ. ಮೆಜೆಸ್ಟಿಕ್ನಲ್ಲಿ ಹೀರೋ ಆಗಿ ಮೆರೆದಿದ್ದ ದರ್ಶನ್ ಸದ್ಯ ಪಟ್ಟಣಗೆರೆ ಶೆಡ್ನಲ್ಲಿ ವಿಲನ್ ಆಗಿ ಜೈಲುಪಾಲಾಗಿರೋದು ಅಭಿಮಾನಿಗಳ ಬೇಸರ ತಂದಿದೆ. ಚಂದನವನದ ಖ್ಯಾತ ಸಂಗೀತ ನಿರ್ದೇಶಕರೊಬ್ರು ದರ್ಶನ್ರನ್ನ ಬೇರೆ ರೀತಿಯೇ ಬಣ್ಣಿಸಿ ಬೇಸರ ಹೊರಹಾಕಿದ್ದಾರೆ.
‘ದರ್ಶನ್ ನನ್ನ ಮಗು ಇದ್ದಹಾಗೆ, ನಾನು ತಂದೆ ಇದ್ದಹಾಗೆ’!
ದರ್ಶನ್ ಜೈಲುಪಾಲಾಗಿರೋ ಬಗ್ಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಬೇಸರ ವ್ಯಕ್ತಪಡಿಸಿದ್ದಾರೆ. ಮಂಡ್ಯದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾದ ಬ್ರಹ್ಮ ದರ್ಶನ್ ನನ್ನ ಮಗು ಇದ್ದಹಾಗೆ, ನಾನು ತಂದೆ ಇದ್ದಹಾಗೆ. ಈ ವಿಚಾರದಲ್ಲಿ ದರ್ಶನ್ಗೆ ಎಷ್ಟು ನೋವಾಗಿದ್ಯೋ ನನಗೂ ಅಷ್ಟೆ ನೋವಾಗಿದೆ ಅಂತ ಮರುಕಪಟ್ಟಿದ್ದಾರೆ.
ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಐವರು.. ವರುಣಾರ್ಭಟಕ್ಕೆ ದೇಶದಲ್ಲಿ ಲೆಕ್ಕವಿಲ್ಲದಷ್ಟು ಸಾವು ನೋವು
ರೇಣುಕಾಸ್ವಾಮಿ ಕಾಮೆಂಟ್ಗಳನ್ನ ನ್ಯೂಸ್ಫಸ್ಟ್ ಮುಂದೆ ಬಿಟ್ಟಿಟ್ಟ ನಟಿ
ಮೃತ ರೇಣುಕಾಸ್ವಾಮಿ ಫೇಕ್ ಅಕೌಂಟ್ಗಳ ಮೂಲಕ ಹಲವು ನಟಿಯರಿಗೆ ಅಶ್ಲೀಲ ಮೆಸೇಜ್ಗಳನ್ನ ಮಾಡ್ತಿದ್ದ ಅನ್ನೋ ಆರೋಪದ ಬಗ್ಗೆ ನಟಿ ಚಿತ್ರಾಲ್ ನ್ಯೂಸ್ ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿ ಮಾಡಿದ್ದ ಎನ್ನಲಾದ ಕೆಲ ಕಾಮೆಂಟ್ಗಳನ್ನ ಸಹ ನಟಿ ಚಿತ್ರಾಲ್ ನ್ಯೂಸ್ ಫಸ್ಟ್ ಕ್ಯಾಮೆರಾ ಮುಂದೆಯೇ ತೋರಿಸಿದ್ದಾರೆ. ಅಲ್ಲದೇ ತಾನು ಬ್ಲಾಕ್ ಲೀಸ್ಟ್ಗೆ ಹಾಕಿದ್ದ ರೇಣುಕಾಸ್ವಾಮಿಯದ್ದೂ ಎನ್ನಲಾದ ಅಕೌಂಟ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Kalki 2898 AD: ಅಬ್ಬಬ್ಬಾ! ಪ್ರಭಾಸ್ ಕಲ್ಕಿ ಸಿನಿಮಾದ 3ನೇ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
ಬೆಲೆ ಏರಿಕೆ ಬಗ್ಗೆ ಚರ್ಚೆ ಆಗ್ಬಾರ್ದು ಅಂತ ದರ್ಶನ್ ಕಸ್ಟಡಿ ಹೆಚ್ಚಳ
ರಾಜ್ಯ ಸರ್ಕಾರ ಬೆಲೆ ಏರಿಕೆ ಬಗ್ಗೆ ಜನರು ಚರ್ಚೆ ಮಾಡ್ಬಾರ್ದು ಅಂತ ನಟ ದರ್ಶನ್ ಕಸ್ಟಡಿಯನ್ನ 2 ದಿನ ಹೆಚ್ಚಳ ಮಾಡಿದೆ ಅಂತ ಸಿ.ಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್.. ಡಿ ಬಾಸ್ ಪಡೆದ 5 ಪುಸ್ತಕಗಳು ಯಾವುವು?
ಒಟ್ನಲ್ಲಿ ಅತ್ತ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ದಿನ ಎಣಿಸುತ್ತಿದ್ರೆ ಇತ್ತ ಚಿತ್ರ ರಂಗದ ಸಹಕಲಾವಿದರು ಪ್ರಕರಣದ ಬಗ್ಗೆ ಒಬ್ಬೊಬ್ಬರೇ ತುಟಿ ಬಿಚ್ಚುತ್ತಿದ್ದಾರೆ. ಇನ್ನೂ ನಾಲ್ಕುದಿನ ದರ್ಶನ್ ಜೈಲುವಾಸ ಬಾಕಿ ಇದ್ದು, ಮತ್ತಿನ್ಯಾರು ಏನೇನ್ ಹೇಳ್ತಾರೋ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ