ನಾಲ್ಕು ತಿಂಗಳಿಂದ ಒಟ್ಟಿಗೆ ವಾಸವಿದ್ದ ಜೋಡಿ
ಮದುವೆ ವಿಚಾರ ಬರ್ತಿದ್ದಂತೆ ಕಾಲ್ಕಿಳಲು ಪ್ಲಾನ್
ಲವ್ ಅಂಡ್ ಚೀಟಿಂಗ್ ಕೇಸ್ನಲ್ಲಿ ಯುವತಿಗೆ ಜಯ
ಪ್ರೀತಿಯ ನಾಟಕವಾಡಿ ಯುವತಿಗೆ ವಂಚಿಸಲು ಪ್ರಯತ್ನಿಸಿದ್ದ ಯುವಕ ಇದೀಗ ವಿವಾಹದ ಬಂಧನಕ್ಕೆ ಸಿಲುಕಿದ್ದಾನೆ. ಬಿಹಾರದ ಮುಜಾಫರ್ನಲ್ಲಿ ನಡೆದ ಲವ್ ಅಂಡ್ ಚೀಟಿಂಗ್ ಕಹಾನಿಗೆ ಕೊನೆಗೂ ಒಂದು ತಾರ್ಕಿಕ ಅಂತ್ಯ ಸಿಕ್ಕಿದೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು..?
ಅಹಿಯಾಪುರದ ನಿವಾಸಿ ಗೋವಿಂದ್ ಎಂಬ ಯುವಕನಿಗೆ 26 ವರ್ಷದ ಚಂದಾ ಅನ್ನೋ ಯುವತಿಯ ಪರಿಚಯ ಆಗುತ್ತದೆ. ಕೆಲಸ ಹುಡುಕುತ್ತಿದ್ದ ಚಂದಾಗೆ ಗೋವಿಂದ್ ಭರವಸೆ ನೀಡಿದ್ದ. ನಾನು ನಿನಗೆ ಕೆಲಸವನ್ನು ಕೊಡಿಸುತ್ತೇನೆ ಎಂದು ಪರಿಚಯಿಸಿಕೊಂಡು ಸ್ನೇಹ ಬೆಳೆಸಿಕೊಂಡಿದ್ದ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ತನ್ನ ಜೊತೆಯಲ್ಲೇ ಇದ್ದುಕೊಂಡು ಕೆಲಸ ಮಾಡುವಂತೆ ಕರೆಸಿಕೊಂಡಿದ್ದ ಗೋವಿಂದ್.
ಅಂತೆಯೇ ಕಳೆದ ನಾಲ್ಕು ತಿಂಗಳಿಂದ ಇಬ್ಬರು ಲೀವ್-ಇನ್-ರಿಲೇಷನ್ಶಿಪ್ನಲ್ಲಿದ್ದರು. ಇತ್ತೀಚೆಗೆ ಯುವತಿ ತನ್ನನ್ನು ಮದುವೆಯಾಗಿ ನಿಮ್ಮ ಮನೆಗೆ ಕರೆದುಕೊಂಡು ಹೋಗುವಂತೆ ಗೋವಿಂದ್ ಬಳಿ ಪಟ್ಟು ಹಿಡಿದಿದ್ದಾಳೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಗೋವಿಂದ್ ಫೆಬ್ರವರಿ 2 ರಂದು ಆಕೆಗೆ ಗೊತ್ತಾಗದ ರೀತಿಯಲ್ಲಿ ಎಸ್ಕೇಪ್ ಆಗಲು ಮುಂದಾಗಿದ್ದ.
ತಾನು ಮೋಸ ಹೋದೆ ಎಂದು ಅವಳಿಗೆ ಬರುತ್ತಿದ್ದಂತೆಯೇ ಯುವತಿ ಚಂದಾ ಸಿಕಂದರ್ಪುರ ಪೊಲೀಸರ ಮೊರೆ ಹೋಗಿದ್ದಾಳೆ. ನಾನು ಗೋವಿಂದ್ ಎಂಬ ಯವಕನ ಪ್ರೀತಿಸಿ ಮೋಸ ಹೋದೆ. ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಕೇಸ್ ದಾಖಲಿಸಿಕೊಂಡ ಪೊಲೀಸರು, ಇಬ್ಬರ ಸಂಬಂಧಿಕರನ್ನು ಸಂಪರ್ಕಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ. ಬಳಿಕ ರಾಜಿ ಮಾಡಿಸಿ ಇಬ್ಬರಿಗೂ ಠಾಣೆಯಲ್ಲಿ ಮದುವೆ ಮಾಡಿಸಿ ಕಳುಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾಲ್ಕು ತಿಂಗಳಿಂದ ಒಟ್ಟಿಗೆ ವಾಸವಿದ್ದ ಜೋಡಿ
ಮದುವೆ ವಿಚಾರ ಬರ್ತಿದ್ದಂತೆ ಕಾಲ್ಕಿಳಲು ಪ್ಲಾನ್
ಲವ್ ಅಂಡ್ ಚೀಟಿಂಗ್ ಕೇಸ್ನಲ್ಲಿ ಯುವತಿಗೆ ಜಯ
ಪ್ರೀತಿಯ ನಾಟಕವಾಡಿ ಯುವತಿಗೆ ವಂಚಿಸಲು ಪ್ರಯತ್ನಿಸಿದ್ದ ಯುವಕ ಇದೀಗ ವಿವಾಹದ ಬಂಧನಕ್ಕೆ ಸಿಲುಕಿದ್ದಾನೆ. ಬಿಹಾರದ ಮುಜಾಫರ್ನಲ್ಲಿ ನಡೆದ ಲವ್ ಅಂಡ್ ಚೀಟಿಂಗ್ ಕಹಾನಿಗೆ ಕೊನೆಗೂ ಒಂದು ತಾರ್ಕಿಕ ಅಂತ್ಯ ಸಿಕ್ಕಿದೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು..?
ಅಹಿಯಾಪುರದ ನಿವಾಸಿ ಗೋವಿಂದ್ ಎಂಬ ಯುವಕನಿಗೆ 26 ವರ್ಷದ ಚಂದಾ ಅನ್ನೋ ಯುವತಿಯ ಪರಿಚಯ ಆಗುತ್ತದೆ. ಕೆಲಸ ಹುಡುಕುತ್ತಿದ್ದ ಚಂದಾಗೆ ಗೋವಿಂದ್ ಭರವಸೆ ನೀಡಿದ್ದ. ನಾನು ನಿನಗೆ ಕೆಲಸವನ್ನು ಕೊಡಿಸುತ್ತೇನೆ ಎಂದು ಪರಿಚಯಿಸಿಕೊಂಡು ಸ್ನೇಹ ಬೆಳೆಸಿಕೊಂಡಿದ್ದ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ತನ್ನ ಜೊತೆಯಲ್ಲೇ ಇದ್ದುಕೊಂಡು ಕೆಲಸ ಮಾಡುವಂತೆ ಕರೆಸಿಕೊಂಡಿದ್ದ ಗೋವಿಂದ್.
ಅಂತೆಯೇ ಕಳೆದ ನಾಲ್ಕು ತಿಂಗಳಿಂದ ಇಬ್ಬರು ಲೀವ್-ಇನ್-ರಿಲೇಷನ್ಶಿಪ್ನಲ್ಲಿದ್ದರು. ಇತ್ತೀಚೆಗೆ ಯುವತಿ ತನ್ನನ್ನು ಮದುವೆಯಾಗಿ ನಿಮ್ಮ ಮನೆಗೆ ಕರೆದುಕೊಂಡು ಹೋಗುವಂತೆ ಗೋವಿಂದ್ ಬಳಿ ಪಟ್ಟು ಹಿಡಿದಿದ್ದಾಳೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಗೋವಿಂದ್ ಫೆಬ್ರವರಿ 2 ರಂದು ಆಕೆಗೆ ಗೊತ್ತಾಗದ ರೀತಿಯಲ್ಲಿ ಎಸ್ಕೇಪ್ ಆಗಲು ಮುಂದಾಗಿದ್ದ.
ತಾನು ಮೋಸ ಹೋದೆ ಎಂದು ಅವಳಿಗೆ ಬರುತ್ತಿದ್ದಂತೆಯೇ ಯುವತಿ ಚಂದಾ ಸಿಕಂದರ್ಪುರ ಪೊಲೀಸರ ಮೊರೆ ಹೋಗಿದ್ದಾಳೆ. ನಾನು ಗೋವಿಂದ್ ಎಂಬ ಯವಕನ ಪ್ರೀತಿಸಿ ಮೋಸ ಹೋದೆ. ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಕೇಸ್ ದಾಖಲಿಸಿಕೊಂಡ ಪೊಲೀಸರು, ಇಬ್ಬರ ಸಂಬಂಧಿಕರನ್ನು ಸಂಪರ್ಕಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ. ಬಳಿಕ ರಾಜಿ ಮಾಡಿಸಿ ಇಬ್ಬರಿಗೂ ಠಾಣೆಯಲ್ಲಿ ಮದುವೆ ಮಾಡಿಸಿ ಕಳುಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ