ಚೂರಲ್ಮಲಾದಲ್ಲಿದ್ದ ಮೈಸೂರಿನ ಮಹದೇವಮ್ಮನವರ ಕುಟುಂಬ
ಒಂದೇ ಕುಟುಂಬದ 9 ಮಂದಿ ಭೂಕುಸಿತದಲ್ಲಿ ಕಣ್ಮರೆ ಆಗಿದ್ದರು
ಮಣ್ಣಿನಡಿ ಒಬ್ಬರನ್ನ ಬಿಟ್ಟು ಉಳಿದ ಎಂಟು ಮಂದಿಯ ಶವ ಪತ್ತೆ
ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿ 4 ದಿನಗಳು ಕಳೆದಿದೆ. ಈ 4 ದಿನದಲ್ಲಿ ಹುಡುಕಿದಷ್ಟು ಹೆಣದ ರಾಶಿ, ರಾಶಿ ಸಿಕ್ಕಿವೆ. ಕೊಚ್ಚಿಕೊಂಡು ಹೋದ ಗುಡ್ಡದ ಪ್ರವಾಹ ನೂರಾರು ಮಂದಿ ಮಣ್ಣಿನಡಿ ಸಿಲುಕುವಂತೆ ಮಾಡಿದೆ. ರಕ್ಷಣಾ ಸಿಬ್ಬಂದಿ ಕೆಸರಿನ ಮಣ್ಣಿನಲ್ಲಿ ಜೀವ ಬಿಟ್ಟ ಜನರ ಮೃತದೇಹವನ್ನು ಗುಡ್ಡೆ ಹಾಕಲಾಗುತ್ತಿದೆ.
ಇದನ್ನೂ ಓದಿ: ಇನ್ನು ಬದುಕಿದವರು ಯಾರು ಸಿಗಲ್ಲ.. ನಿಮ್ಮವರ ಆಸೆ ಬಿಟ್ಟು ಬಿಡಿ; ಕೇರಳ ಸಿಎಂ ಶಾಕಿಂಗ್ ಹೇಳಿಕೆ
ವಯನಾಡಿನ ಚೂರಲ್ಮಲಾದಲ್ಲಿ ಮೈಸೂರು ಮೂಲದ ಮಹದೇವಮ್ಮನವರ ಕುಟುಂಬ ದುರಂತ ಅಂತ್ಯ ಕಂಡಿದೆ. ಹಲವು ವರ್ಷದಿಂದ ಇಲ್ಲಿ ವಾಸವಿದ್ದ ಮಹದೇವಮ್ಮ ಫ್ಯಾಮಿಲಿಯ ಒಂದೇ ಕುಟುಂಬದ 9 ಮಂದಿ ಭೂಕುಸಿತದಲ್ಲಿ ಕಣ್ಮರೆಯಾಗಿದ್ದರು. ಈ 9 ಮಂದಿಯಲ್ಲಿ ಒಬ್ಬರನ್ನ ಬಿಟ್ಟು ಉಳಿದ ಎಂಟು ಮಂದಿಯ ಶವ ಇದೀಗ ಪತ್ತೆಯಾಗಿದೆ.
ಮಹದೇವಮ್ಮನವರ ಮಗ ಸಿದ್ದರಾಜು, ಸೊಸೆ ಸಾವಿತ್ರಮ್ಮ ಸೇರಿದಂತೆ ಅಶ್ವಿನ್, ಶ್ರೇಯ, ಶಿವಣ್ಣ, ಗುರುಮಲ್ಲ, ಲಕ್ಷಿತ್, ದಿವ್ಯಾ ಅವರ ಶವ ಪತ್ತೆಯಾಗಿದೆ. ಚೂರಲ್ಮಲಾದ ಶಾಲಾ ಆವರಣದಲ್ಲಿ ಎನ್ಡಿಆರ್ಎಫ್ ಹಾಗು ಶ್ವಾನದಳದಿಂದ ಪತ್ತೆ ಕಾರ್ಯ ನಡೆದಿದೆ. ಕೆಸರಿನ ನಡುವೆ ಸಿಲುಕಿದ್ದ ಶವಗಳನ್ನ ರಕ್ಷಣಾ ತಂಡ ಹೊರ ತೆಗೆದಿದೆ. ಮೆಪ್ಪಾಡಿಯ ಕಮ್ಯುನಿಟಿಹಾಲ್ನಲ್ಲಿದ್ದ ಶವಗಳನ್ನು ಮಹದೇವಮ್ಮ ಗುರುತಿಸಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ಶವಗಳ ವಾಸನೆ ಪತ್ತೆ ಹಚ್ಚುತ್ತಿವೆ ಮಾಯಾ ಮತ್ತು ಮರ್ಫಿ.. ರಕ್ಷಣಾ ಕಾರ್ಯದಲ್ಲಿ ಶ್ವಾನಗಳ ಅದ್ಭುತ ಕಾರ್ಯ!
ಮಹದೇವಮ್ಮ ಕುಟುಂಬ ಮೂಲತಃ ಮೈಸೂರು ಜಿಲ್ಲೆ ತಿ.ನರಸೀಪುರದ ಉಕ್ಕಲಗೇರಿ ಗ್ರಾಮದವರು. ಕಳೆದ ಹಲವು ವರ್ಷಗಳಿಂದ ಮಹದೇವಮ್ಮ ಕುಟುಂಬ ಭೂಕುಸಿತವಾದ ಚೂರಲ್ಮಾಲದಲ್ಲಿ ವಾಸವಿತ್ತು. ನಿನ್ನೆಯಷ್ಟೇ ಗಂಜಿ ಕೇಂದ್ರದಲ್ಲಿ ಮಹದೇವಮ್ಮ ಅವರನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಮಹದೇವಮ್ಮ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚೂರಲ್ಮಲಾದಲ್ಲಿದ್ದ ಮೈಸೂರಿನ ಮಹದೇವಮ್ಮನವರ ಕುಟುಂಬ
ಒಂದೇ ಕುಟುಂಬದ 9 ಮಂದಿ ಭೂಕುಸಿತದಲ್ಲಿ ಕಣ್ಮರೆ ಆಗಿದ್ದರು
ಮಣ್ಣಿನಡಿ ಒಬ್ಬರನ್ನ ಬಿಟ್ಟು ಉಳಿದ ಎಂಟು ಮಂದಿಯ ಶವ ಪತ್ತೆ
ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಸಂಭವಿಸಿ 4 ದಿನಗಳು ಕಳೆದಿದೆ. ಈ 4 ದಿನದಲ್ಲಿ ಹುಡುಕಿದಷ್ಟು ಹೆಣದ ರಾಶಿ, ರಾಶಿ ಸಿಕ್ಕಿವೆ. ಕೊಚ್ಚಿಕೊಂಡು ಹೋದ ಗುಡ್ಡದ ಪ್ರವಾಹ ನೂರಾರು ಮಂದಿ ಮಣ್ಣಿನಡಿ ಸಿಲುಕುವಂತೆ ಮಾಡಿದೆ. ರಕ್ಷಣಾ ಸಿಬ್ಬಂದಿ ಕೆಸರಿನ ಮಣ್ಣಿನಲ್ಲಿ ಜೀವ ಬಿಟ್ಟ ಜನರ ಮೃತದೇಹವನ್ನು ಗುಡ್ಡೆ ಹಾಕಲಾಗುತ್ತಿದೆ.
ಇದನ್ನೂ ಓದಿ: ಇನ್ನು ಬದುಕಿದವರು ಯಾರು ಸಿಗಲ್ಲ.. ನಿಮ್ಮವರ ಆಸೆ ಬಿಟ್ಟು ಬಿಡಿ; ಕೇರಳ ಸಿಎಂ ಶಾಕಿಂಗ್ ಹೇಳಿಕೆ
ವಯನಾಡಿನ ಚೂರಲ್ಮಲಾದಲ್ಲಿ ಮೈಸೂರು ಮೂಲದ ಮಹದೇವಮ್ಮನವರ ಕುಟುಂಬ ದುರಂತ ಅಂತ್ಯ ಕಂಡಿದೆ. ಹಲವು ವರ್ಷದಿಂದ ಇಲ್ಲಿ ವಾಸವಿದ್ದ ಮಹದೇವಮ್ಮ ಫ್ಯಾಮಿಲಿಯ ಒಂದೇ ಕುಟುಂಬದ 9 ಮಂದಿ ಭೂಕುಸಿತದಲ್ಲಿ ಕಣ್ಮರೆಯಾಗಿದ್ದರು. ಈ 9 ಮಂದಿಯಲ್ಲಿ ಒಬ್ಬರನ್ನ ಬಿಟ್ಟು ಉಳಿದ ಎಂಟು ಮಂದಿಯ ಶವ ಇದೀಗ ಪತ್ತೆಯಾಗಿದೆ.
ಮಹದೇವಮ್ಮನವರ ಮಗ ಸಿದ್ದರಾಜು, ಸೊಸೆ ಸಾವಿತ್ರಮ್ಮ ಸೇರಿದಂತೆ ಅಶ್ವಿನ್, ಶ್ರೇಯ, ಶಿವಣ್ಣ, ಗುರುಮಲ್ಲ, ಲಕ್ಷಿತ್, ದಿವ್ಯಾ ಅವರ ಶವ ಪತ್ತೆಯಾಗಿದೆ. ಚೂರಲ್ಮಲಾದ ಶಾಲಾ ಆವರಣದಲ್ಲಿ ಎನ್ಡಿಆರ್ಎಫ್ ಹಾಗು ಶ್ವಾನದಳದಿಂದ ಪತ್ತೆ ಕಾರ್ಯ ನಡೆದಿದೆ. ಕೆಸರಿನ ನಡುವೆ ಸಿಲುಕಿದ್ದ ಶವಗಳನ್ನ ರಕ್ಷಣಾ ತಂಡ ಹೊರ ತೆಗೆದಿದೆ. ಮೆಪ್ಪಾಡಿಯ ಕಮ್ಯುನಿಟಿಹಾಲ್ನಲ್ಲಿದ್ದ ಶವಗಳನ್ನು ಮಹದೇವಮ್ಮ ಗುರುತಿಸಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ಶವಗಳ ವಾಸನೆ ಪತ್ತೆ ಹಚ್ಚುತ್ತಿವೆ ಮಾಯಾ ಮತ್ತು ಮರ್ಫಿ.. ರಕ್ಷಣಾ ಕಾರ್ಯದಲ್ಲಿ ಶ್ವಾನಗಳ ಅದ್ಭುತ ಕಾರ್ಯ!
ಮಹದೇವಮ್ಮ ಕುಟುಂಬ ಮೂಲತಃ ಮೈಸೂರು ಜಿಲ್ಲೆ ತಿ.ನರಸೀಪುರದ ಉಕ್ಕಲಗೇರಿ ಗ್ರಾಮದವರು. ಕಳೆದ ಹಲವು ವರ್ಷಗಳಿಂದ ಮಹದೇವಮ್ಮ ಕುಟುಂಬ ಭೂಕುಸಿತವಾದ ಚೂರಲ್ಮಾಲದಲ್ಲಿ ವಾಸವಿತ್ತು. ನಿನ್ನೆಯಷ್ಟೇ ಗಂಜಿ ಕೇಂದ್ರದಲ್ಲಿ ಮಹದೇವಮ್ಮ ಅವರನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಕೂಡ ಮಹದೇವಮ್ಮ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ