ಬೆಂಗಳೂರಲ್ಲಿ ನ್ಯಾಕ್ ಕಮಿಟಿಯಿಂದ ವಿಶೇಷ ಕಾರ್ಯಾಗಾರ
ಡಾ.ರಾಧಾಕೃಷ್ಣನ್ ಸಮಿತಿಯು ಶಿಫಾರಸು ಜಾರಿಗೆ ತರುವ ಉದ್ದೇಶ
ಕಾರ್ಯಾಗಾರದಲ್ಲಿ ಸುಮಾರು 800 ಶಿಕ್ಷಣ ತಜ್ಞರು ಭಾಗಿಯಾಗಿದ್ದರು
ಬೆಂಗಳೂರು: ಎನ್ಇಪಿ-2020 (National Education Policy)ಯ ಮುಖ್ಯ ಉದ್ದೇಶ ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತರುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಡಾ.ರಾಧಾಕೃಷ್ಣನ್ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿಯ ಮಾಡಿದ್ದ ಶಿಫಾರಸುಗಳನ್ನು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ಅನುಮೋದನೆ ನೀಡಿದೆ. ಅದನ್ನು ನ್ಯಾಕ್ (NAAC) ಕಮಿಟಿಯು ಜಾರಿಗೆ ತರಲು ಕೆಲಸ ಆರಂಭಿಸಿದೆ.
ಅಂದ್ಹಾಗೆ ಡಾ.ರಾಧಾಕೃಷ್ಣನ್ ಸಮಿತಿಯು ಹಲವಾರು ಪ್ರಮುಖ ಅಂಶಗಳನ್ನು ಶಿಫಾರಸು ಮಾಡಿದೆ. ಅದರಲ್ಲಿ ಮುಖ್ಯವಾಗಿ ಎರಡು ಹಂತಗಳಲ್ಲಿ ಸುಧಾರಣೆಗಳನ್ನು ತರುವ ಬಗ್ಗೆ ಪ್ರಸ್ತಾಪಿಸಿದೆ. ಬೈನರಿ ಅಕ್ರಿಡೇಷನ್ (Binary Accreditation ಮತ್ತು ಮೆಚುರಿಟಿ-ಬೇಸ್ಡ್ ಗ್ರೇಡ್ ಲೇವೆಲ್ಸ್ (Maturity-Based Graded Levels) ಮೂಲಕ ಸುಧಾರಣೆ ತರಬೇಕು ಎಂದು ಒತ್ತಿ ಹೇಳಿದೆ.
ಇದನ್ನೂ ಓದಿ:ಬಯಲಾಯ್ತು ಗಂಗೂಲಿ ಅಸಲಿ ಮುಖವಾಡ.. ಕ್ರೆಡಿಟ್ ಆಸೆಗಾಗಿ ಸತ್ಯ ಒಪ್ಪಿಕೊಂಡ ದಾದಾ..!
ಇದನ್ನು ಜಾರಿಗೆ ತರುವ ಉದ್ದೇಶದಿಂದ ಅಪೆಕ್ಸ್ ಕಮಿಟಿ ಹಾಗೂ ಡಿಸಿಪ್ಲೈನ್-ವೈಸ್ ಕಮಿಟಿಯು ಸುಮಾರು 40ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಚರ್ಚಿಸುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಕ್ ಕಮಿಟಿಯು ದೇಶಾದ್ಯಂತ ಕಾರ್ಯಾಗಾರವನ್ನು ಹಮ್ಮಿಕೊಳ್ತಿದೆ. ನ್ಯಾಕ್ ಅಡಿಯಲ್ಲಿ ಬರುವ ಐದು ರೀಜಿನಲ್ ಕಾರ್ಯಾಗಾರವನ್ನು ಮಾಡ್ತಿದೆ. ವರ್ಕ್ಶಾಪ್ಗಳ ಮೂಲಕ ಕಾಲೇಜು, ವಿಶ್ವವಿದ್ಯಾಲಯಗಳ ಅಭಿಪ್ರಾಯಗಳನ್ನು ಪಡೆದು ಮುಂಬರುವ ತಿಂಗಳಲ್ಲಿ ಜಾರಿಗೆ ತರಲಿದೆ. ಸದ್ಯ ಮ್ಯಾನುವಲ್ ಆಗಿ ಜಾರಿಗೆ ತಂದು ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಅಭಿಪ್ರಾಯ ಪಡೆದು ಅಧಿಕೃತವಾಗಿ ಜಾರಿಗೆ ಬರಲಿದೆ.
ಅಂದರಂತೆ ನಿನ್ನೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) NAAC ಪ್ರಾದೇಶಿಕ ಕಾರ್ಯಾಗಾರ ನಡೆಯಿತು. ಈ ವೇಳೆ ದಕ್ಷಿಣ ವಲಯದ ಎಲ್ಲಾ ರಾಜ್ಯಗಳ ಉಪಕುಲಪತಿಗಳು, ಪ್ರಾಂಶುಪಾಲರು ಸೇರಿ ಸುಮಾರು 800ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಭಾಗವಹಿಸಿದ್ದರು.
ನಿವೃತ್ತ ಐಎಎಸ್ ಅಧಿಕಾರಿ, ನ್ಯಾಷನಲ್ ಕೌನ್ಸಿಲ್ ಫಾರ್ ವಕೇಷನ್ ಎಜುಕೇಷನ್ ಅಂಡ್ ಟ್ರೈನಿಂಗ್ನ ಮಾಜಿ ಅಧ್ಯಕ್ಷರಾಗಿದ್ದ ಡಾ.ನಿರ್ಮಲ್ಜೀತ್ ಸಿಂಗ್ ಕಲ್ಸಿ ಮಾತನಾಡಿ, ಉನ್ನತ ಶಿಕ್ಷಣದ ಬೈನರಿ ಅಕ್ರಿಡೇಷನ್ನಲ್ಲಿ ಸ್ಕಿಲ್ ಡೆವಲಪ್ಮೆಂಟ್ಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದರು. ಬೈನರಿ ಮಾನ್ಯತೆಯಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಅಗತ್ಯವಾಗಿ ಸೇರಿಸಬೇಕು ಎಂದು ಒತ್ತಾಯಿಸಿದರು. ಮಾನವೀಯತೆ ಮತ್ತು ಸಮಾಜ ವಿಜ್ಞಾನ ಹಾಗೂ ಇತರೆ ಶಿಸ್ತಿನ ಕೌಶಲ್ಯಗಳನ್ನು ಸಂಯೋಜಿಸುವ ಅವಶ್ಯಕತೆ ಇದೆ ಎಂದರು. ನ್ಯಾಕ್ ಕಮಿಟಿಯ ನಿರ್ದೇಶಕ ಪ್ರೊ. ಗಣೇಶನ್ ಕಣ್ಣಬಿರನ್ ಅವರು ಬೈನರಿ ಮಾನ್ಯತೆಯ ಫ್ರೇಮ್ವರ್ಕ್ ಬಗ್ಗೆ ಮಾಹಿತಿ ನೀಡಿದರು. ಇನ್ನುಳಿದ ನಾಲ್ಕು ಕಾರ್ಯಾಗಾರವನ್ನು ಭುವನೇಶ್ವರ, ಗುವಾಹಟಿ, ಲಖನೌ ಮತ್ತು ಅಹ್ಮದಾಬಾದ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:ಬದುಕು ಸುಟ್ಟ ಬೆಂಕಿ.. ಅಪ್ಪ-ಅಮ್ಮನ ಕಳೆದುಕೊಂಡು ಅನಾಥರಾದ ರಮಾನಂದ ಶೆಟ್ಟಿ ಮಕ್ಕಳು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಂಗಳೂರಲ್ಲಿ ನ್ಯಾಕ್ ಕಮಿಟಿಯಿಂದ ವಿಶೇಷ ಕಾರ್ಯಾಗಾರ
ಡಾ.ರಾಧಾಕೃಷ್ಣನ್ ಸಮಿತಿಯು ಶಿಫಾರಸು ಜಾರಿಗೆ ತರುವ ಉದ್ದೇಶ
ಕಾರ್ಯಾಗಾರದಲ್ಲಿ ಸುಮಾರು 800 ಶಿಕ್ಷಣ ತಜ್ಞರು ಭಾಗಿಯಾಗಿದ್ದರು
ಬೆಂಗಳೂರು: ಎನ್ಇಪಿ-2020 (National Education Policy)ಯ ಮುಖ್ಯ ಉದ್ದೇಶ ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತರುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಡಾ.ರಾಧಾಕೃಷ್ಣನ್ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿಯ ಮಾಡಿದ್ದ ಶಿಫಾರಸುಗಳನ್ನು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ಅನುಮೋದನೆ ನೀಡಿದೆ. ಅದನ್ನು ನ್ಯಾಕ್ (NAAC) ಕಮಿಟಿಯು ಜಾರಿಗೆ ತರಲು ಕೆಲಸ ಆರಂಭಿಸಿದೆ.
ಅಂದ್ಹಾಗೆ ಡಾ.ರಾಧಾಕೃಷ್ಣನ್ ಸಮಿತಿಯು ಹಲವಾರು ಪ್ರಮುಖ ಅಂಶಗಳನ್ನು ಶಿಫಾರಸು ಮಾಡಿದೆ. ಅದರಲ್ಲಿ ಮುಖ್ಯವಾಗಿ ಎರಡು ಹಂತಗಳಲ್ಲಿ ಸುಧಾರಣೆಗಳನ್ನು ತರುವ ಬಗ್ಗೆ ಪ್ರಸ್ತಾಪಿಸಿದೆ. ಬೈನರಿ ಅಕ್ರಿಡೇಷನ್ (Binary Accreditation ಮತ್ತು ಮೆಚುರಿಟಿ-ಬೇಸ್ಡ್ ಗ್ರೇಡ್ ಲೇವೆಲ್ಸ್ (Maturity-Based Graded Levels) ಮೂಲಕ ಸುಧಾರಣೆ ತರಬೇಕು ಎಂದು ಒತ್ತಿ ಹೇಳಿದೆ.
ಇದನ್ನೂ ಓದಿ:ಬಯಲಾಯ್ತು ಗಂಗೂಲಿ ಅಸಲಿ ಮುಖವಾಡ.. ಕ್ರೆಡಿಟ್ ಆಸೆಗಾಗಿ ಸತ್ಯ ಒಪ್ಪಿಕೊಂಡ ದಾದಾ..!
ಇದನ್ನು ಜಾರಿಗೆ ತರುವ ಉದ್ದೇಶದಿಂದ ಅಪೆಕ್ಸ್ ಕಮಿಟಿ ಹಾಗೂ ಡಿಸಿಪ್ಲೈನ್-ವೈಸ್ ಕಮಿಟಿಯು ಸುಮಾರು 40ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಚರ್ಚಿಸುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನ್ಯಾಕ್ ಕಮಿಟಿಯು ದೇಶಾದ್ಯಂತ ಕಾರ್ಯಾಗಾರವನ್ನು ಹಮ್ಮಿಕೊಳ್ತಿದೆ. ನ್ಯಾಕ್ ಅಡಿಯಲ್ಲಿ ಬರುವ ಐದು ರೀಜಿನಲ್ ಕಾರ್ಯಾಗಾರವನ್ನು ಮಾಡ್ತಿದೆ. ವರ್ಕ್ಶಾಪ್ಗಳ ಮೂಲಕ ಕಾಲೇಜು, ವಿಶ್ವವಿದ್ಯಾಲಯಗಳ ಅಭಿಪ್ರಾಯಗಳನ್ನು ಪಡೆದು ಮುಂಬರುವ ತಿಂಗಳಲ್ಲಿ ಜಾರಿಗೆ ತರಲಿದೆ. ಸದ್ಯ ಮ್ಯಾನುವಲ್ ಆಗಿ ಜಾರಿಗೆ ತಂದು ವಿಶ್ವವಿದ್ಯಾಲಯಗಳ ಮತ್ತು ಕಾಲೇಜುಗಳ ಅಭಿಪ್ರಾಯ ಪಡೆದು ಅಧಿಕೃತವಾಗಿ ಜಾರಿಗೆ ಬರಲಿದೆ.
ಅಂದರಂತೆ ನಿನ್ನೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) NAAC ಪ್ರಾದೇಶಿಕ ಕಾರ್ಯಾಗಾರ ನಡೆಯಿತು. ಈ ವೇಳೆ ದಕ್ಷಿಣ ವಲಯದ ಎಲ್ಲಾ ರಾಜ್ಯಗಳ ಉಪಕುಲಪತಿಗಳು, ಪ್ರಾಂಶುಪಾಲರು ಸೇರಿ ಸುಮಾರು 800ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಭಾಗವಹಿಸಿದ್ದರು.
ನಿವೃತ್ತ ಐಎಎಸ್ ಅಧಿಕಾರಿ, ನ್ಯಾಷನಲ್ ಕೌನ್ಸಿಲ್ ಫಾರ್ ವಕೇಷನ್ ಎಜುಕೇಷನ್ ಅಂಡ್ ಟ್ರೈನಿಂಗ್ನ ಮಾಜಿ ಅಧ್ಯಕ್ಷರಾಗಿದ್ದ ಡಾ.ನಿರ್ಮಲ್ಜೀತ್ ಸಿಂಗ್ ಕಲ್ಸಿ ಮಾತನಾಡಿ, ಉನ್ನತ ಶಿಕ್ಷಣದ ಬೈನರಿ ಅಕ್ರಿಡೇಷನ್ನಲ್ಲಿ ಸ್ಕಿಲ್ ಡೆವಲಪ್ಮೆಂಟ್ಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದರು. ಬೈನರಿ ಮಾನ್ಯತೆಯಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಅಗತ್ಯವಾಗಿ ಸೇರಿಸಬೇಕು ಎಂದು ಒತ್ತಾಯಿಸಿದರು. ಮಾನವೀಯತೆ ಮತ್ತು ಸಮಾಜ ವಿಜ್ಞಾನ ಹಾಗೂ ಇತರೆ ಶಿಸ್ತಿನ ಕೌಶಲ್ಯಗಳನ್ನು ಸಂಯೋಜಿಸುವ ಅವಶ್ಯಕತೆ ಇದೆ ಎಂದರು. ನ್ಯಾಕ್ ಕಮಿಟಿಯ ನಿರ್ದೇಶಕ ಪ್ರೊ. ಗಣೇಶನ್ ಕಣ್ಣಬಿರನ್ ಅವರು ಬೈನರಿ ಮಾನ್ಯತೆಯ ಫ್ರೇಮ್ವರ್ಕ್ ಬಗ್ಗೆ ಮಾಹಿತಿ ನೀಡಿದರು. ಇನ್ನುಳಿದ ನಾಲ್ಕು ಕಾರ್ಯಾಗಾರವನ್ನು ಭುವನೇಶ್ವರ, ಗುವಾಹಟಿ, ಲಖನೌ ಮತ್ತು ಅಹ್ಮದಾಬಾದ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:ಬದುಕು ಸುಟ್ಟ ಬೆಂಕಿ.. ಅಪ್ಪ-ಅಮ್ಮನ ಕಳೆದುಕೊಂಡು ಅನಾಥರಾದ ರಮಾನಂದ ಶೆಟ್ಟಿ ಮಕ್ಕಳು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ