newsfirstkannada.com

ಅಂಗಡಿಗೆ ಬೆಂಕಿ ಇಟ್ರು, 1.5 ಕೋಟಿ ಹೋಯ್ತು.. ಜೀವ ಉಳಿಸಿಕೊಂಡಿದ್ದೇ ದೊಡ್ಡದು -ನಾಗಮಂಗಲ ಬಟ್ಟೆ ವ್ಯಾಪಾರಿ ಕಣ್ಣೀರು

Share :

Published September 12, 2024 at 10:43am

Update September 12, 2024 at 10:47am

    ನಾಗಮಂಗಲ ಗಣೇಶ ಮೆರವಣಿಗೆಯಲ್ಲಿ ಅಹಿತಕರ ಬೆಳವಣಿಗೆ

    ಕಿಡಿಗೇಡಿಗಳ ಕೃತ್ಯಕ್ಕೆ 1.5 ಕೋಟಿ ಮೌಲ್ಯದ ಬಟ್ಟೆ ಅಂಗಡಿ ಭಸ್ಮ

    ಬೀದಿಗೆ ಬಿದ್ದ ಉದ್ಯಮಿ ಬದುಕು, ಗಳಗಳನೇ ಕಣ್ಣೀರಿಟ್ಟ ವ್ಯಾಪಾರಿ

ಮಂಡ್ಯ: ನಾಗಮಂಗಲ ಗಣೇಶ ಮೆರವಣಿಗೆಯಲ್ಲಿ ನಡೆದ ಗಲಾಟೆಯಲ್ಲಿ ಭೀಮ್ ರಾಜ್ ಅನ್ನೋರ ಬಟ್ಟೆ ಶೋ ರೂಮ್ ಸುಟ್ಟು ಭಸ್ಮವಾಗಿದೆ. ಗಲಾಟೆ ನಡೆದ ಸ್ಥಳದಲ್ಲಿ ಸಾಧನಾ ಟೆಕ್ಸ್​ಸ್ಟೈಲ್ ಎಂಬ ಅಂಗಡಿ ಹಾಕಿಕೊಂಡಿದ್ದರು. ಇವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟು ವಿಕೃತಿ ಮೆರೆದಿದ್ದಾರೆ. ಪರಿಣಾಮ ಭೀಮ್ ರಾಜ್ ಅನ್ನೋರಿಗೆ 1.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಂಗಡಿಯನ್ನು ಕಳೆದುಕೊಂಡ ಉದ್ಯಮಿ ಭೀಮ್ ರಾಜ್ ಬದುಕು ಬೀದಿಗೆ ಬಿದ್ದಿದ್ದು, ಕಣ್ಣೀರು ಇಡುತ್ತಿದ್ದಾರೆ.

ಇದನ್ನೂ ಓದಿ:ನಾಗಮಂಗಲ ಕೇಸ್​; ನಮ್ಮವ್ರು ತಪ್ಪು ಮಾಡಿಲ್ಲ ಎಂದು ಹೈಡ್ರಾಮಾ ಮಾಡಿದ ಕುಟುಂಬಸ್ಥರಿಗೆ ಇನ್​​ಸ್ಪೆಕ್ಟರ್​ ಪಾಠ

ನ್ಯೂಸ್​ಫಸ್ಟ್​ ಜೊತೆ ಅಳಲು ತೋಡಿಕೊಂಡಿರುವ ಭೀಮ್ ರಾಜ್.. ಬಟ್ಟೆ ಉದ್ಯಮದಿಂದಲೇ ನಮ್ಮ ಜೀವನ ನಡೆಯುತ್ತಿತ್ತು. ನಮಗೆ ಬಟ್ಟೆ ಅಂಗಡಿ ಬಿಟ್ಟರೆ ಬೇರೇ ಏನೂ ಇಲ್ಲ. ಶೋ ರೂಂಗೆ ಬೆಂಕಿ ಹಾಕಿರುವ ಮಾಹಿತಿ ‌ಪಡೆದು ಸ್ಥಳಕ್ಕೆ ಬಂದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಬಂದಿದ್ರು. ಆ ವೇಳೆ 200 ಮಂದಿಯ ಗುಂಪು ನಮ್ಮ ‌ಮೇಲೆ ಅಟ್ಯಾಕ್ ಮಾಡಿದ್ರು.

ಕೈಯಲ್ಲಿ ಬಾಟಲ್, ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಿದರು. ಪೊಲೀಸರ ಬಳಿ ಬರುವಂತೆ ಮನವಿ ಮಾಡಿಕೊಂಡೆ. ಆದರೆ ಪೊಲೀಸರಿಗೂ ಅವರು ಹಲ್ಲೆ ಮಾಡಿದ್ದರಿಂದ ಸ್ಥಳಕ್ಕೆ ಬರಲು ಹಿಂದೇಟು ಹಾಕಿದರು. ಕೊನೆಗೆ ನನ್ನ ಮೇಲೆ ಕಿಡಿಗೇಡಿಗಳು ಅಟ್ಯಾಕ್ ಮಾಡಲು ಮುಂದೆ ಬಂದರು. ಆಗ ನಾನು ಪ್ರಾಣ ಉಳಿಸಿಕೊಳ್ಳಲು ಚಪ್ಪಲಿ ಬಿಟ್ಟು ಬರಿಗಾಲಲ್ಲೇ ಓಡಿ ಹೋಗಿ ಜೀವ ಉಳಿಸಿಕೊಂಡೆ.

ನಾವು ಸಂಪೂರ್ಣ ಬೀದಿಗೆ ಬಂದಿದ್ದೇವೆ. 20 ವರ್ಷ ಹಿಂದಕ್ಕೆ ನಮ್ಮ ‌ಸ್ಥಿತಿ ಹೋಗಿದೆ. ನಮ್ಮ ಶೋ ರೂಂ ನಲ್ಲಿ ‌7 ಜನ ಕೆಲಸ ಮಾಡುತ್ತಿದ್ದರು. ಈಗ ನಾನೇ ಮತ್ತೊಬ್ಬರ ಬಳಿ ಕೆಲಸ ಮಾಡುವ ಸ್ಥಿತಿ ಬಂದಿದೆ ಎಂದು ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ:ಮಿಸ್ಟರಿ ಸ್ಪಿನ್ನರ್​​ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಗಡಿಗೆ ಬೆಂಕಿ ಇಟ್ರು, 1.5 ಕೋಟಿ ಹೋಯ್ತು.. ಜೀವ ಉಳಿಸಿಕೊಂಡಿದ್ದೇ ದೊಡ್ಡದು -ನಾಗಮಂಗಲ ಬಟ್ಟೆ ವ್ಯಾಪಾರಿ ಕಣ್ಣೀರು

https://newsfirstlive.com/wp-content/uploads/2024/09/BIM-RAJ.jpg

    ನಾಗಮಂಗಲ ಗಣೇಶ ಮೆರವಣಿಗೆಯಲ್ಲಿ ಅಹಿತಕರ ಬೆಳವಣಿಗೆ

    ಕಿಡಿಗೇಡಿಗಳ ಕೃತ್ಯಕ್ಕೆ 1.5 ಕೋಟಿ ಮೌಲ್ಯದ ಬಟ್ಟೆ ಅಂಗಡಿ ಭಸ್ಮ

    ಬೀದಿಗೆ ಬಿದ್ದ ಉದ್ಯಮಿ ಬದುಕು, ಗಳಗಳನೇ ಕಣ್ಣೀರಿಟ್ಟ ವ್ಯಾಪಾರಿ

ಮಂಡ್ಯ: ನಾಗಮಂಗಲ ಗಣೇಶ ಮೆರವಣಿಗೆಯಲ್ಲಿ ನಡೆದ ಗಲಾಟೆಯಲ್ಲಿ ಭೀಮ್ ರಾಜ್ ಅನ್ನೋರ ಬಟ್ಟೆ ಶೋ ರೂಮ್ ಸುಟ್ಟು ಭಸ್ಮವಾಗಿದೆ. ಗಲಾಟೆ ನಡೆದ ಸ್ಥಳದಲ್ಲಿ ಸಾಧನಾ ಟೆಕ್ಸ್​ಸ್ಟೈಲ್ ಎಂಬ ಅಂಗಡಿ ಹಾಕಿಕೊಂಡಿದ್ದರು. ಇವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟು ವಿಕೃತಿ ಮೆರೆದಿದ್ದಾರೆ. ಪರಿಣಾಮ ಭೀಮ್ ರಾಜ್ ಅನ್ನೋರಿಗೆ 1.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಂಗಡಿಯನ್ನು ಕಳೆದುಕೊಂಡ ಉದ್ಯಮಿ ಭೀಮ್ ರಾಜ್ ಬದುಕು ಬೀದಿಗೆ ಬಿದ್ದಿದ್ದು, ಕಣ್ಣೀರು ಇಡುತ್ತಿದ್ದಾರೆ.

ಇದನ್ನೂ ಓದಿ:ನಾಗಮಂಗಲ ಕೇಸ್​; ನಮ್ಮವ್ರು ತಪ್ಪು ಮಾಡಿಲ್ಲ ಎಂದು ಹೈಡ್ರಾಮಾ ಮಾಡಿದ ಕುಟುಂಬಸ್ಥರಿಗೆ ಇನ್​​ಸ್ಪೆಕ್ಟರ್​ ಪಾಠ

ನ್ಯೂಸ್​ಫಸ್ಟ್​ ಜೊತೆ ಅಳಲು ತೋಡಿಕೊಂಡಿರುವ ಭೀಮ್ ರಾಜ್.. ಬಟ್ಟೆ ಉದ್ಯಮದಿಂದಲೇ ನಮ್ಮ ಜೀವನ ನಡೆಯುತ್ತಿತ್ತು. ನಮಗೆ ಬಟ್ಟೆ ಅಂಗಡಿ ಬಿಟ್ಟರೆ ಬೇರೇ ಏನೂ ಇಲ್ಲ. ಶೋ ರೂಂಗೆ ಬೆಂಕಿ ಹಾಕಿರುವ ಮಾಹಿತಿ ‌ಪಡೆದು ಸ್ಥಳಕ್ಕೆ ಬಂದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಬಂದಿದ್ರು. ಆ ವೇಳೆ 200 ಮಂದಿಯ ಗುಂಪು ನಮ್ಮ ‌ಮೇಲೆ ಅಟ್ಯಾಕ್ ಮಾಡಿದ್ರು.

ಕೈಯಲ್ಲಿ ಬಾಟಲ್, ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಿದರು. ಪೊಲೀಸರ ಬಳಿ ಬರುವಂತೆ ಮನವಿ ಮಾಡಿಕೊಂಡೆ. ಆದರೆ ಪೊಲೀಸರಿಗೂ ಅವರು ಹಲ್ಲೆ ಮಾಡಿದ್ದರಿಂದ ಸ್ಥಳಕ್ಕೆ ಬರಲು ಹಿಂದೇಟು ಹಾಕಿದರು. ಕೊನೆಗೆ ನನ್ನ ಮೇಲೆ ಕಿಡಿಗೇಡಿಗಳು ಅಟ್ಯಾಕ್ ಮಾಡಲು ಮುಂದೆ ಬಂದರು. ಆಗ ನಾನು ಪ್ರಾಣ ಉಳಿಸಿಕೊಳ್ಳಲು ಚಪ್ಪಲಿ ಬಿಟ್ಟು ಬರಿಗಾಲಲ್ಲೇ ಓಡಿ ಹೋಗಿ ಜೀವ ಉಳಿಸಿಕೊಂಡೆ.

ನಾವು ಸಂಪೂರ್ಣ ಬೀದಿಗೆ ಬಂದಿದ್ದೇವೆ. 20 ವರ್ಷ ಹಿಂದಕ್ಕೆ ನಮ್ಮ ‌ಸ್ಥಿತಿ ಹೋಗಿದೆ. ನಮ್ಮ ಶೋ ರೂಂ ನಲ್ಲಿ ‌7 ಜನ ಕೆಲಸ ಮಾಡುತ್ತಿದ್ದರು. ಈಗ ನಾನೇ ಮತ್ತೊಬ್ಬರ ಬಳಿ ಕೆಲಸ ಮಾಡುವ ಸ್ಥಿತಿ ಬಂದಿದೆ ಎಂದು ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ:ಮಿಸ್ಟರಿ ಸ್ಪಿನ್ನರ್​​ಗೆ ದಿಢೀರ್ ಬುಲಾವ್.. ಬಾಂಗ್ಲಾ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಹೊಸ ತಂತ್ರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More