ಕಣ್ಣೀರಿನ ಕಡಲಲ್ಲೇ ಅಪರ್ಣಾ ಅವರಿಗೆ ಪತಿಯ ವಿದಾಯ
2005ರಲ್ಲಿ ಅಪರ್ಣಾ ಹಾಗೂ ನಾಗರಾಜ್ ವಸ್ತಾರೆ ಮದುವೆ
ಅಕ್ಟೋಬರ್ 14ಕ್ಕೆ ಅಪರ್ಣಾ ಅವರ ಕೊನೆ ಆಸೆ ಒಂದಿತ್ತು
ಅಚ್ಚ ಕನ್ನಡದ ಅಪರಂಜಿ, ಸ್ವಚ್ಛ ಭಾಷೆಯ ನಿರೂಪಕಿ, ಮಸಣದ ಹೂವಿನಿಂದ ಚಿರಪರಿಚಿತರಾದ ನಟಿ ಅಪರ್ಣಾ ಇನ್ನು ನೆನಪು ಮಾತ್ರ. ಸೊಗಸಾದ ನಿರೂಪಣೆಯಲ್ಲಿ ಮನೆಮಾತಾದ ಅಪರ್ಣಾ ಅವರು ಈಗ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಪ್ಪಟ ಕನ್ನಡ ಭಾಷಾ ಪ್ರೇಮಿಯ ಅಗಲಿಕೆ ಕನ್ನಡಿಗರಿಗೆ ತುಂಬಲಾರದ ನೋವು ತಂದಿದೆ.
ಇದನ್ನೂ ಓದಿ: ಮುಂದಿನ ನಿಲ್ದಾಣ.. ಮರೆಯದ ಅಪರ್ಣಾ ಧ್ವನಿಗೆ ಮೆಟ್ರೋ ಪ್ರಯಾಣಿಕರಿಂದ ವಿಶೇಷ ಮನವಿ; ಏನದು?
ಅಪರ್ಣಾ ಅವರ ನಿರೂಪಣೆ, ಸ್ವಚ್ಛ ಭಾಷೆ ಕೇಳಿದವರಿಗೆ ಅವರ ನಿಧನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನೂ ಅವರ ಪತಿ ನಾಗರಾಜ ವಸ್ತಾರೆ ಅವರು ಅಪರ್ಣಾ ಸಾವಿನ ನೋವು ತಾಳಲಾರದೇ ಕಣ್ಣೀರಿಟ್ಟಿದ್ದಾರೆ. ಕಣ್ಣೀರಿನ ಕಡಲಲ್ಲೇ ದಿಟ್ಟ ಕನ್ನಡತಿ ಅಪರ್ಣಾ ಅವರಿಗೆ ಭಾರವಾದ ವಿದಾಯ ಹೇಳಿದ್ದಾರೆ.
ಆಕೆ ಛಲಗಾತಿ ಎನ್ನುತ್ತಲೇ ಉಮ್ಮಳಿಸಿಕೊಂಡು ಬಂದ ದುಃಖವನ್ನು ತಡೆದುಕೊಂಡು ನಾಗರಾಜ ವಸ್ತಾರೆ ಅವರು, ಅವಳು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದಳು. ಪರೀಕ್ಷಿಸಿದ್ದ ವೈದ್ಯರೇ 6 ತಿಂಗಳು ಬದುಕಬಹುದು ಅಂತ ತಿಳಿಸಿದ್ದರು. ಆದ್ರೂ ಕಳೆದ ಒಂದೂವರೆ ವರ್ಷಗಳ ಕಾಲ ನಾವಿಬ್ಬರು ನಡೆಸಿದ ಸೆಣಸಾಟದಲ್ಲಿ ಸೋತಿದ್ದೇವೆ. ಅಪರ್ಣಾ ತನ್ನ ದೇಹಕ್ಕಂಟಿದ್ದ ವ್ಯಾಧಿಯೊಂದಿಗೂ ಬೇಸರವಾಗದಂತೆ ನಗುತ್ತಲೇ ಇದ್ದಳು. ಇದೇ ಅಕ್ಟೋಬರ್ 14ಕ್ಕೆ 58 ವಸಂತಗಳನ್ನು ಅವಳು ಪೂರೈಸುತ್ತಿದ್ದಳು ಎಂದಿದ್ದಾರೆ.
ನಾಗರಾಜ ವಸ್ತಾರೆ ಭಾವುಕ ಮಾತಿನ ಹಿನ್ನೆಲೆ ಏನು?
ನಿರೂಪಕಿ ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್ ಜೊತೆ ಒಂದೂವರೆ ವರ್ಷಗಳ ಕಾಲ ಕಾದಾಡಿದ್ದರು. ಒಂದೂವರೆ ವರ್ಷ ಕಾಲ ಯಾರಂದ್ರೆ ಯಾರಿಗೂ ಸಹ ತನ್ನನ್ನು ಕಾಡುತ್ತಿದ್ದ ವ್ಯಾಧಿಯ ಗುಟ್ಟನ್ನು ರಟ್ಟು ಮಾಡಿರ್ಲಿಲ್ಲ. ನಾವಿಬ್ಬರೇ ಎಷ್ಟು ಸಾಧ್ಯವೋ ಅಷ್ಟು ನೋವುಂಡಿದ್ದೀವಿ ಎಂದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ 4ನೇ ಹಂತದಲ್ಲಿದ್ದಾಗ ಗೊತ್ತಾಗಿದ್ದೇ ಅಪರ್ಣಾ ಅವರ ಸಾವಿಗೆ ಕಾರಣವಾಗಿದೆ. ಈ ಮಾರಕ ಕಾಯಿಲೆ ಮೊದಲೇ ಗೊತ್ತಾಗಿದ್ದರೆ ಅಪರ್ಣಾ ಅವರು ಇನ್ನಷ್ಟು ವರ್ಷಗಳ ಕಾಲ ಬದುಕೋ ಅವಕಾಶವಿತ್ತು.
ಅಪರ್ಣಾ ಹಾಗೂ ನಾಗರಾಜ ರಾಮಸ್ವಾಮಿ ವಸ್ತಾರೆ ಪ್ರೀತಿಸಿ ಮದುವೆ ಆಗಿದ್ದರು. ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ. ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ. ಈ ಜೋಡಿಯ ದಾಂಪತ್ಯಕ್ಕೆ ಈ ಸಾಲು ಸಾಕ್ಷಿ ನುಡಿದಂತಿದೆ. ಅಪರ್ಣಾ ಹಾಗೂ ನಾಗರಾಜ ವಸ್ತಾರೆ ಪ್ರೀತಿ ಹಾಗೂ ದಾಂಪತ್ಯ ಕಾಪಿಟ್ಟ ಮುತ್ತಿನಂತೆಯೇ ಇತ್ತು. 2005ರಲ್ಲಿ ಅಪರ್ಣಾ ಹಾಗೂ ನಾಗರಾಜ್ ವಸ್ತಾರೆ ಪರಸ್ಪರ ಒಪ್ಪಿಕೊಂಡು ಮುಪ್ಪಿಲ್ಲದ ಪ್ರೀತಿಗೆ ಜೋತು ಬಿದ್ದು ಮದುವೆ ಆಗಿದ್ದರು. ಈ ದಾಂಪತ್ಯಕ್ಕೆ ಬೆಳ್ಳಿಹಬ್ಬದ ಸಂಭ್ರಮದ ಗರಿಯೂ ಸೇರಿತ್ತು.
ಇದನ್ನೂ ಓದಿ: ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?
ಕ್ಯಾನ್ಸರ್ಗೆ ತುತ್ತಾಗಿ ಬಳಲುತ್ತಿದ್ದ ಸಂದರ್ಭದಲ್ಲೂ ಅಪರ್ಣಾ ಅವರ ಇಚ್ಛೆಯಂತೆ ಯಾರೊಂದಿಗೂ ಈ ನೋವನ್ನೂ ಹಂಚಿಕೊಳ್ಳದ ಪತಿ ಒದ್ದಾಡಿದ್ದಾರೆ. ಈ ಕ್ಷಣಕ್ಕೂ ಅಪರ್ಣಾ ಅಗಲಿಕೆಯನ್ನು ಅವರು ಅರಗಿಸಿಕೊಳ್ಳೋದಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ.
ಅಪರ್ಣಾ ಕೊನೆ ಆಸೆ ಈಡೇರಲೇ ಇಲ್ಲ!
ಸದಾ ಕುಟುಂಬದ ಪ್ರೀತಿಯ ಅಪ್ಪುಗೆಯ ಮಧ್ಯೆಯೇ ಇದ್ದ ಅಪರ್ಣಾ ಅವರಿಗೆ ಆ ದಿನವೂ ಒಟ್ಟಿಗೆ ಇರಬೇಕು ಅನ್ನೋ ಮಹದಾಸೆ ಇತ್ತು. ಇದೇ ಅಕ್ಟೋಬರ್ 14ಕ್ಕೆ ನಾನು 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು.. ಅದೇ ದಿನವೇ ಮನೆಯಲ್ಲಿ ಕುಟುಂಬದೊಂದಿಗೆ ಇರಬೇಕು ಅಂತ ಬಯಸಿದ್ದರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಣ್ಣೀರಿನ ಕಡಲಲ್ಲೇ ಅಪರ್ಣಾ ಅವರಿಗೆ ಪತಿಯ ವಿದಾಯ
2005ರಲ್ಲಿ ಅಪರ್ಣಾ ಹಾಗೂ ನಾಗರಾಜ್ ವಸ್ತಾರೆ ಮದುವೆ
ಅಕ್ಟೋಬರ್ 14ಕ್ಕೆ ಅಪರ್ಣಾ ಅವರ ಕೊನೆ ಆಸೆ ಒಂದಿತ್ತು
ಅಚ್ಚ ಕನ್ನಡದ ಅಪರಂಜಿ, ಸ್ವಚ್ಛ ಭಾಷೆಯ ನಿರೂಪಕಿ, ಮಸಣದ ಹೂವಿನಿಂದ ಚಿರಪರಿಚಿತರಾದ ನಟಿ ಅಪರ್ಣಾ ಇನ್ನು ನೆನಪು ಮಾತ್ರ. ಸೊಗಸಾದ ನಿರೂಪಣೆಯಲ್ಲಿ ಮನೆಮಾತಾದ ಅಪರ್ಣಾ ಅವರು ಈಗ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಪ್ಪಟ ಕನ್ನಡ ಭಾಷಾ ಪ್ರೇಮಿಯ ಅಗಲಿಕೆ ಕನ್ನಡಿಗರಿಗೆ ತುಂಬಲಾರದ ನೋವು ತಂದಿದೆ.
ಇದನ್ನೂ ಓದಿ: ಮುಂದಿನ ನಿಲ್ದಾಣ.. ಮರೆಯದ ಅಪರ್ಣಾ ಧ್ವನಿಗೆ ಮೆಟ್ರೋ ಪ್ರಯಾಣಿಕರಿಂದ ವಿಶೇಷ ಮನವಿ; ಏನದು?
ಅಪರ್ಣಾ ಅವರ ನಿರೂಪಣೆ, ಸ್ವಚ್ಛ ಭಾಷೆ ಕೇಳಿದವರಿಗೆ ಅವರ ನಿಧನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇನ್ನೂ ಅವರ ಪತಿ ನಾಗರಾಜ ವಸ್ತಾರೆ ಅವರು ಅಪರ್ಣಾ ಸಾವಿನ ನೋವು ತಾಳಲಾರದೇ ಕಣ್ಣೀರಿಟ್ಟಿದ್ದಾರೆ. ಕಣ್ಣೀರಿನ ಕಡಲಲ್ಲೇ ದಿಟ್ಟ ಕನ್ನಡತಿ ಅಪರ್ಣಾ ಅವರಿಗೆ ಭಾರವಾದ ವಿದಾಯ ಹೇಳಿದ್ದಾರೆ.
ಆಕೆ ಛಲಗಾತಿ ಎನ್ನುತ್ತಲೇ ಉಮ್ಮಳಿಸಿಕೊಂಡು ಬಂದ ದುಃಖವನ್ನು ತಡೆದುಕೊಂಡು ನಾಗರಾಜ ವಸ್ತಾರೆ ಅವರು, ಅವಳು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದಳು. ಪರೀಕ್ಷಿಸಿದ್ದ ವೈದ್ಯರೇ 6 ತಿಂಗಳು ಬದುಕಬಹುದು ಅಂತ ತಿಳಿಸಿದ್ದರು. ಆದ್ರೂ ಕಳೆದ ಒಂದೂವರೆ ವರ್ಷಗಳ ಕಾಲ ನಾವಿಬ್ಬರು ನಡೆಸಿದ ಸೆಣಸಾಟದಲ್ಲಿ ಸೋತಿದ್ದೇವೆ. ಅಪರ್ಣಾ ತನ್ನ ದೇಹಕ್ಕಂಟಿದ್ದ ವ್ಯಾಧಿಯೊಂದಿಗೂ ಬೇಸರವಾಗದಂತೆ ನಗುತ್ತಲೇ ಇದ್ದಳು. ಇದೇ ಅಕ್ಟೋಬರ್ 14ಕ್ಕೆ 58 ವಸಂತಗಳನ್ನು ಅವಳು ಪೂರೈಸುತ್ತಿದ್ದಳು ಎಂದಿದ್ದಾರೆ.
ನಾಗರಾಜ ವಸ್ತಾರೆ ಭಾವುಕ ಮಾತಿನ ಹಿನ್ನೆಲೆ ಏನು?
ನಿರೂಪಕಿ ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್ ಜೊತೆ ಒಂದೂವರೆ ವರ್ಷಗಳ ಕಾಲ ಕಾದಾಡಿದ್ದರು. ಒಂದೂವರೆ ವರ್ಷ ಕಾಲ ಯಾರಂದ್ರೆ ಯಾರಿಗೂ ಸಹ ತನ್ನನ್ನು ಕಾಡುತ್ತಿದ್ದ ವ್ಯಾಧಿಯ ಗುಟ್ಟನ್ನು ರಟ್ಟು ಮಾಡಿರ್ಲಿಲ್ಲ. ನಾವಿಬ್ಬರೇ ಎಷ್ಟು ಸಾಧ್ಯವೋ ಅಷ್ಟು ನೋವುಂಡಿದ್ದೀವಿ ಎಂದಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ 4ನೇ ಹಂತದಲ್ಲಿದ್ದಾಗ ಗೊತ್ತಾಗಿದ್ದೇ ಅಪರ್ಣಾ ಅವರ ಸಾವಿಗೆ ಕಾರಣವಾಗಿದೆ. ಈ ಮಾರಕ ಕಾಯಿಲೆ ಮೊದಲೇ ಗೊತ್ತಾಗಿದ್ದರೆ ಅಪರ್ಣಾ ಅವರು ಇನ್ನಷ್ಟು ವರ್ಷಗಳ ಕಾಲ ಬದುಕೋ ಅವಕಾಶವಿತ್ತು.
ಅಪರ್ಣಾ ಹಾಗೂ ನಾಗರಾಜ ರಾಮಸ್ವಾಮಿ ವಸ್ತಾರೆ ಪ್ರೀತಿಸಿ ಮದುವೆ ಆಗಿದ್ದರು. ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ. ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ. ಈ ಜೋಡಿಯ ದಾಂಪತ್ಯಕ್ಕೆ ಈ ಸಾಲು ಸಾಕ್ಷಿ ನುಡಿದಂತಿದೆ. ಅಪರ್ಣಾ ಹಾಗೂ ನಾಗರಾಜ ವಸ್ತಾರೆ ಪ್ರೀತಿ ಹಾಗೂ ದಾಂಪತ್ಯ ಕಾಪಿಟ್ಟ ಮುತ್ತಿನಂತೆಯೇ ಇತ್ತು. 2005ರಲ್ಲಿ ಅಪರ್ಣಾ ಹಾಗೂ ನಾಗರಾಜ್ ವಸ್ತಾರೆ ಪರಸ್ಪರ ಒಪ್ಪಿಕೊಂಡು ಮುಪ್ಪಿಲ್ಲದ ಪ್ರೀತಿಗೆ ಜೋತು ಬಿದ್ದು ಮದುವೆ ಆಗಿದ್ದರು. ಈ ದಾಂಪತ್ಯಕ್ಕೆ ಬೆಳ್ಳಿಹಬ್ಬದ ಸಂಭ್ರಮದ ಗರಿಯೂ ಸೇರಿತ್ತು.
ಇದನ್ನೂ ಓದಿ: ಒನ್ ಅಂಡ್ ಓನ್ಲಿ ವರು.. ಮಜಾ ಟಾಕೀಸ್ನಲ್ಲಿ ಅಭಿನಯಿಸಲು ಅಪರ್ಣಾ ಒಪ್ಪಿದ್ದು ಹೇಗೆ? ಸೃಜನ್ ಲೋಕೇಶ್ ಹೇಳಿದ್ದೇನು?
ಕ್ಯಾನ್ಸರ್ಗೆ ತುತ್ತಾಗಿ ಬಳಲುತ್ತಿದ್ದ ಸಂದರ್ಭದಲ್ಲೂ ಅಪರ್ಣಾ ಅವರ ಇಚ್ಛೆಯಂತೆ ಯಾರೊಂದಿಗೂ ಈ ನೋವನ್ನೂ ಹಂಚಿಕೊಳ್ಳದ ಪತಿ ಒದ್ದಾಡಿದ್ದಾರೆ. ಈ ಕ್ಷಣಕ್ಕೂ ಅಪರ್ಣಾ ಅಗಲಿಕೆಯನ್ನು ಅವರು ಅರಗಿಸಿಕೊಳ್ಳೋದಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ.
ಅಪರ್ಣಾ ಕೊನೆ ಆಸೆ ಈಡೇರಲೇ ಇಲ್ಲ!
ಸದಾ ಕುಟುಂಬದ ಪ್ರೀತಿಯ ಅಪ್ಪುಗೆಯ ಮಧ್ಯೆಯೇ ಇದ್ದ ಅಪರ್ಣಾ ಅವರಿಗೆ ಆ ದಿನವೂ ಒಟ್ಟಿಗೆ ಇರಬೇಕು ಅನ್ನೋ ಮಹದಾಸೆ ಇತ್ತು. ಇದೇ ಅಕ್ಟೋಬರ್ 14ಕ್ಕೆ ನಾನು 58ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು.. ಅದೇ ದಿನವೇ ಮನೆಯಲ್ಲಿ ಕುಟುಂಬದೊಂದಿಗೆ ಇರಬೇಕು ಅಂತ ಬಯಸಿದ್ದರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ