Advertisment

ಭತ್ತ ತುಂಬಿಕೊಂಡು ಹೋಗ್ತಿದ್ದ ಟ್ರ್ಯಾಕ್ಟರ್​ಗೆ ಗುದ್ದಿದ ತೆಲಂಗಾಣ ಬಸ್​.. 15 ಪ್ರಯಾಣಿಕರಿಗೆ ಗಂಭೀರ ಗಾಯ!

ಒಟ್ಟು 15 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳಲ್ಲಿ ಬಸ್​ ಪ್ರಯಾಣಿಕರು ಹಾಗೂ ಟ್ರ್ಯಾಕ್ಟರ್​ ಡ್ರೈವರ್​ ಕೂಡ ಸೇರಿದ್ದಾರೆ.

author-image
Bhimappa
TN_BUS_ACCIDENT (1)
Advertisment

ಹೈದರಾಬಾದ್​: ತೆಲುಗು ಭಾಷೆಯ ರಾಜ್ಯಗಳಲ್ಲಿ ಬಸ್​ ಅಪಘಾತಗಳು ಹೆಚ್ಚುತ್ತಿದ್ದು ಕರ್ನೂಲ್ ಬಳಿ ಬಸ್​ಗೆ ಬೆಂಕಿ ಹೊತ್ತಿದ ಬಳಿಕ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ರಸ್ತೆ ಅಪಘಾತಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಇಂದು ಬೆಳಗಿನ ಜಾವ ತೆಲಂಗಾಣ ಸರ್ಕಾರಿ ಬಸ್​ವೊಂದು ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದಿದ್ದರಿಂದ ಟ್ರಾಲಿ ಮುಗುಚಿ ಬಿದ್ದಿದೆ. 15 ಜನರಿಗೆ ಗಾಯಗಳು ಆಗಿವೆ. 

Advertisment

ತೆಲಂಗಾಣದ ಕರೀಂನಗರದ ಜಿಲ್ಲೆಯ ತಿಮ್ಮಪುರ ಮಂಡಲದ ರೇಣುಗುಂಟಾ ಬ್ರಿಡ್ಜ್​ ಬಳಿ ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸರ್ಕಾರದ ಟಿಎಸ್​ಆರ್​ಟಿಸಿ ಬಸ್ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಈ ಬಸ್ ಮೆಟ್​ಪಲ್ಲಿ ಡಿಪೋದಿಂದ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೈದರಾಬಾದ್​ನಿಂದ ಕರೀಂನಗರಕ್ಕೆ ತೆರಳುತ್ತಿತ್ತು. ಇದೇ ವೇಳೆ ರೇಣುಗುಂಟಾ ಬ್ರಿಡ್ಜ್​ ಬಳಿ ಟ್ರ್ಯಾಕ್ಟರ್​ಗೆ ಗುದ್ದಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ:ಹೈದರಾಬಾದ್​ಗೆ ಹೋಗ್ತಿದ್ದ ಮತ್ತೊಂದು ಬಸ್​ ಪಲ್ಟಿ.. 50 ಪ್ರಯಾಣಿಕರ ಪೈಕಿ, ಇಬ್ಬರು ಸಾವು!

TN_BUS_TRACTOR

ಈ ಘಟನೆಯಲ್ಲಿ ಒಟ್ಟು 15 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳಲ್ಲಿ ಬಸ್​ ಪ್ರಯಾಣಿಕರು ಹಾಗೂ ಟ್ರ್ಯಾಕ್ಟರ್​ ಡ್ರೈವರ್​ ಕೂಡ ಸೇರಿದ್ದಾರೆ. ಟಿಎಸ್​ಆರ್​ಟಿಸಿ ಬಸ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್​ ನೆಲಕ್ಕೆ ಉರುಳಿದ್ದು ಟ್ರಾಲಿಯಲ್ಲಿದ್ದ ಭತ್ತದ ಚೀಲಗಳು ಎಲ್ಲ ಚೆಲ್ಲಾಪಿಲ್ಲಿಯಾಗಿವೆ. ಟ್ರಾಲಿ ಅಂತೂ ಉಲ್ಟಾ ಬಿದ್ದಿದೆ.   

Advertisment

ಘಟನಾ ಸ್ಥಳಕ್ಕೆ ಎಲ್​ಎಂಡಿ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಜನರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೆಲುಗು ಭಾಷೆಯ ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ 5 ಬಸ್​ ಅಪಘಾತಗಳು ಸಂಭವಿಸಿವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಅಲ್ಲಿನ ರಸ್ತೆಗಳು, ಸರ್ಕಾರ, ಹಳೆಯ ಬಸ್​ಗಳು ಸೇರಿ ಇತರೆ ಕಾರಣಗಳು ಇರಬಹುದು ಎನ್ನಲಾಗಿದೆ.      

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bus Telangana
Advertisment
Advertisment
Advertisment