Advertisment

ದುರ್ಗೆಗೆ ಅಡ್ಡಿಯಾದ ವರುಣ.. ಮಳೆಯಾರ್ಭಟಕ್ಕೆ ಉಸಿರು ಚೆಲ್ಲಿದ 7 ಜನ

ನವರಾತ್ರಿ ದುರ್ಗಾಪೂಜೆ ಹೊತ್ತಲ್ಲೇ ಕೊಲ್ಕತ್ತಾದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ದಸರಾ ಹಬ್ಬದಂತೆ ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯಂದೂ ದುರ್ಗಾ ಪೂಜೆಯನ್ನ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದ್ರೆ ಈ ಬಾರಿಯ ದುರ್ಗ ಪೂಜೆಗೆ ವರುಣದೇವ ಅಡ್ಡಿ ಉಂಟುಮಾಡಿದ್ದಾನೆ.

author-image
Ganesh Kerekuli
kolkata
Advertisment

ಕೊಲ್ಕತ್ತಾ: ನಗರದಉಪನಗರಗಳಲ್ಲಿ ನೆನ್ನೆಯಿಂದ ಧಾರಾಕಾರ ಮಳೆಯಾಗ್ತಿದ್ದು,ಜನರು ನಲುಗಿ ಹೋಗಿದ್ದಾರೆ. ಮಳೆಯಾರ್ಭಟಕ್ಕೆ ಈಗಾಗಲೇ 7 ಜನರು ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

Advertisment

ಬೆನಿಯಾಪುಕುರ್, ಕಾಳಿಕಾಪುರ್, ನೇತಾಜಿ ನಗರ, ಗರಿಯಾಹತ್, ಎಕ್ಬಾಲ್ಪುರ್, ಬೆಹಾಲಾ ಮತ್ತು ಹರಿದೇವ್ಪುರ್ಗಳಲ್ಲಿ ಮಳೆಯ ಅವಾಂತರಕ್ಕೆ ಏಳು ಜನರು ಮೃತಪಟ್ಟಿದ್ದಾರೆ. ಅದರ ಪೈಕಿ ಕನಿಷ್ಠ ಮೂವರು ವಿದ್ಯುತ್​ ಅವಘಡದಿಂದ ಮೃತಪಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ. 

kolkat1

ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತವಾದ ಪರಿಣಾಮ ಕೊಲ್ಕತ್ತಾದಲ್ಲಿ ಧಾರಾಕಾರ ಮಳೆಯಾಗ್ತಿದೆ. ಇತ್ತ ಮಳೆಯಾರ್ಭಟಕ್ಕೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೇ ಅನೇಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಭಾರೀ ಮಳೆಯಾಗುವ ಸಾಧ್ಯತೆ ಹಿನ್ನಲೆ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಇದನ್ನೂ ಓದಿ : ವಿಮಾನದ ಲ್ಯಾಂಡಿಂಗ್‌ ಗೇರ್ ಕಂಪಾರ್ಟ್ ಮೆಂಟ್‌ನಲ್ಲಿ 2 ಗಂಟೆ ಕುಳಿತು ದೆಹಲಿಗೆ ಬಂದ ಅಫ್ಘನಿಸ್ತಾನದ ಬಾಲಕ! ಮುಂದೇನಾಯ್ತು?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

west bengal heavy rain kolkata heavy rain Heavy Rain
Advertisment
Advertisment
Advertisment