ಜರ್ಮನ್ ಶೆಫರ್ಡ್ ನಾಯಿ​ ಉಗುರಿಂದ ಪರಚಿದ್ದಕ್ಕೆ ರೇಬಿಸ್​.. ಇನ್​ಸ್ಪೆಕ್ಟರ್ ನಿಧನ

ಪ್ರಾಣಿಗಳು ತೋರಿಸುವ ಪ್ರೀತಿಗೆ ಸರಿ ಸಾಟಿಯೇ ಇಲ್ಲ ಅನ್ನೋ ಮಾತಿದೆ. ನಾವು ಎಷ್ಟು ಪ್ರೀತಿ ತೋರಿಸುತ್ತೇವೋ ಅದಕ್ಕಿಂತ ಹತ್ತು ಪಟ್ಟು ಪ್ರೀತಿಯನ್ನ ಪ್ರಾಣಿಗಳು ನಮಗೆ ನೀಡುತ್ತವೆ. ಆದ್ರೆ ಪ್ರಾಣಿಗಳು ಪ್ರೀತಿ ತೋರಿಸುತ್ತವೆ ಅನ್ನೋದು ಎಷ್ಟು ಸತ್ಯವೋ, ಅವುಗಳಿಂದ ನಮ್ಮ ಪ್ರಾಣಕ್ಕೆ ಅಪಾಯ ಅನ್ನೋದು ಕೂಡ ಅಷ್ಟೇ ಸತ್ಯ.

author-image
Ganesh Kerekuli
police
Advertisment

ಅಹಮದಾಬಾದ್: ತಾನು ಪ್ರೀತಿಯಿಂದ ಸಾಕಿದ್ದ ಶ್ವಾನದಿಂದ ಪೊಲೀಸ್​ ಅಧಿಕಾರಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಶ್ವಾನದ ಉಗುರು ತಗುಲಿದ ಪರಿಣಾಮ, ಪೊಲೀಸ್​ ಅಧಿಕಾರಿ ರೇಬಿಸ್​ ರೋಗಕ್ಕೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಈ ಘಟನೆ ಗುಜರಾತ್​ನ ಅಹಮದಾಬಾದ್‌ನಲ್ಲಿನ ಕೆಡಿ ಆಸ್ಪತ್ರೆಯಲ್ಲಿ ನಡೆದಿದೆ.

ಅಸಲಿಗೆ ಆಗಿದ್ದೇನು?

ಅಹಮಾಬಾದ್​ನ ಸಿಟಿ ಕಂಟ್ರೋಲ್​ ರೂಮ್​ನಲ್ಲಿ ಪೊಲೀಸ್​ ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಪ್ರೀತಿಯಿಂದ ಸಾಕಿದ್ದ ಜರ್ಮನ್ ಶೆಫರ್ಡ್‌ ಶ್ವಾನವನ್ನ ದಿನಾಲೂ ವಾಕಿಂಗ್​ ಕರೆದುಕೊಂಡು ಹೋಗುತ್ತಿದ್ದರು. ಅದರಂತೆ ಒಂದು ದಿನ ಜರ್ಮನ್ ಶೆಫರ್ಡ್‌ ನಾಯಿಯ ಉಗುರು ಪೊಲೀಸ್ ಇನ್ಸ್‌ಪೆಕ್ಟರ್ ಕೈಯನ್ನ ಪರಚಿದೆ.

ಆದರೆ ಇದರಿಂದ ಏನು ಆಗಲ್ಲ ಎಂದು ಪೊಲೀಸ್​ ಇನ್ಸ್​ಪೆಕ್ಟರ್​ ವನರಾಜ್ ಮಂಜರಿಯಾ ಸುಮ್ಮನೆ ಇದ್ದರು. ಯಾವುದೇ ಡಾಕ್ಟರ್​ಗಳ ಸಂಪರ್ಕ ಮಾಡಿರಲಿಲ್ಲ. ಆದರೆ ದಿನ ಕಳೆದಂತೆ ಅವರ ವರ್ತನೆ ಬದಲಾವಣೆ ಆಗುತ್ತ ಸಾಗಿತು. ಹೀಗಾಗಿ ಅವರನ್ನು ಅಹಮದಾಬಾದ್‌ನಲ್ಲಿರುವ ಕೆಡಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆವಾಗಲೇ ರೇಬಿಸ್ ಬಂದಿರುವುದು ತಿಳಿಸಲಾಗಿತ್ತು.​

ಅದಾಗ್ಯೂ ಅವರಿಗೆ ಚಿಕಿತ್ಸೆ ಕೊಡಿಸಲಾಗ್ತಿತ್ತು. ಆದ್ರೆ ದುರಾದೃಷ್ಟವಶಾತ್​ ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಾನು ಪ್ರೀತಿಯಿಂದ ಸಾಕಿದ್ದ ಶ್ವಾನದಿಂದಲೇ ಪೊಲೀಸ್​ ಇನ್ಸ್​ಪೆಕ್ಟರ್​ ಪ್ರಾಣ ಕಳೆದುಕೊಂಡಿದ್ದಾರೆ. ರೇಬಿಸ್​ ದೇಹದಲ್ಲಿರುವ ನರಮಂಡಲಕ್ಕೆ ಹಾನಿ ಮಾಡುವುದರಿಂದ ಯಾರೇ ಆಗಲಿ ಬೇಗ ಪ್ರಾಣ ಕಳೆದುಕೊಳ್ಳುತ್ತಾರೆ. ಈವರೆಗೂ ರೇಬಿಸ್​ಗೆ ಸರಿಯಾದ ಚಿಕಿತ್ಸೆ ಇಲ್ಲ ಎನ್ನಲಾಗಿದೆ.

ಇದನ್ನೂ ಓದಿ:ಒಂದು ಮೊಬೈಲ್ ನಂಬರ್​ಗೆ ಎಷ್ಟು ಆಧಾರ್​ ಕಾರ್ಡ್ ಲಿಂಕ್ ಮಾಡಬಹುದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

gujarath police inspector died german shepherd rabies
Advertisment