Advertisment

ಘೋರ ದುರಂತ.. ರೈಲಿನಡಿ ಸಿಲುಕಿ ನಾಲ್ವರು ದುರ್ಮರಣ

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಬುಧವಾರ ರೈಲು ಹಳಿ ದಾಟುತ್ತಿದ್ದಾಗ ಎದುರು ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಒಂದು ಪ್ಲಾಟ್​ ಫಾರ್ಮ್​​ನಿಂದ ಇನ್ನೊಂದು ಪ್ಲಾಟ್​​ಫಾರ್ಮ್​ಗೆ ಬರುವ ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದಾಗ ದುರಂತ ಸಂಭವಿಸಿದೆ.

author-image
Ganesh Kerekuli
Tran accident
Advertisment

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ (Uttar Pradesh's Mirzapur) ಬುಧವಾರ ರೈಲು ಹಳಿ ದಾಟುತ್ತಿದ್ದಾಗ ಎದುರು ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಒಂದು ಪ್ಲಾಟ್​ ಫಾರ್ಮ್​​ನಿಂದ ಇನ್ನೊಂದು ಪ್ಲಾಟ್​​ಫಾರ್ಮ್​ಗೆ ಬರುವ ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದಾಗ ದುರಂತ ಸಂಭವಿಸಿದೆ. 

Advertisment

ಇದನ್ನೂ ಓದಿ: ಎರಡು ರೈಲುಗಳ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣಬಿಟ್ಟ ನಾಲ್ವರು..

ರೈಲ್ವೆ ಅಧಿಕಾರಿಗಳ ಪ್ರಕಾರ, ಆ ನಾಲ್ವರು ಪ್ರಯಾಣಿಕರು ಚುನಾರ್ ಜಂಕ್ಷನ್‌ ಬಳಿ ಇರುವ ಪ್ಲಾಟ್‌ಫಾರ್ಮ್‌ನ ಬದಿಯಲ್ಲಿರುವ ಚೋಪನ್-ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್‌ನಿಂದ (Uttar Pradesh's Mirzapur) ಇಳಿದು ಹಳಿ ದಾಟಲು ಮುಂದಾಗಿದ್ದರು. ಆಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಹೌರಾ-ಕಲ್ಕಾ ನೇತಾಜಿ ಎಕ್ಸ್‌ಪ್ರೆಸ್ (Howrah-Kalka Netaji Express) ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಉಸಿರು ಚೆಲ್ಲಿದಾರೆ.

ದುರಂತಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. ತಕ್ಷಣ ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. 

Advertisment

ಇದನ್ನೂ ಓದಿ: ಅಮೆರಿಕಾದ ಕೆಂಟುಕಿಯಲ್ಲಿ ಕಾರ್ಗೋ ವಿಮಾನ ಪತನ: 7 ಮಂದಿ ಸಾವು, 11 ಮಂದಿಗೆ ಗಾಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

train accident
Advertisment
Advertisment
Advertisment