/newsfirstlive-kannada/media/media_files/2025/08/26/vantara-2025-08-26-13-01-58.jpg)
ನವದೆಹಲಿ: ವಂತಾರ ವನ್ಯಜೀವಿ ಸಂರಕ್ಷಣಾ ಕೇಂದ್ರ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಜಾಸ್ತಿ ಚೆಲಮೇಶ್ವರ್​ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್​ಐಟಿ)ವನ್ನು ಸುಪ್ರೀಂ ಕೋರ್ಟ್ ರಚನೆ ಮಾಡಿದೆ. ಪರಿಸರ, ವನ್ಯಜೀವಿ ಆರ್ಥಿಕ ನಿಯಮಗಳ ಉಲ್ಲಂಘನೆ ಮಾಡುತ್ತಿರುವ ಕುರಿತು ಸಾಕಷ್ಟು ಅರ್ಜಿಗಳು ಬಂದಿರುವ ಕಾರಣ ಸುಪ್ರೀಂ ಕೋರ್ಟ್​ ಎಸ್​ಐಟಿಯನ್ನು ರಚನೆ ಮಾಡಿದೆ.
ನಿವೃತ್ತ ನ್ಯಾಯಮೂರ್ತಿ ಜಾಸ್ತಿ ಚೆಲಮೇಶ್ವರ್​ ನೇತೃತ್ವದ ಎಸ್​ಐಟಿ ತಂಡದಲ್ಲಿ ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಹಾಗೂ ಮಾಜಿ ಭಾರತೀಯ ಕಂದಾಯ ಸೇವೆ (ಐಆರ್​ಎಸ್​) ಅಧಿಕಾರಿ ಅನೀಶ್ ಗುಪ್ತಾ ಅವರು ತಂಡದಲ್ಲಿ ಇದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಗುಜರಾತ್​ನ ಜಾಮ್ನಾನಗರದಲ್ಲಿರುವ ಅಂಬಾನಿ ಕುಟುಂಬದ ರಿಲಯನ್ಸ್​ ಇಂಡಸ್ಟ್ರೀಸ್ ಮತ್ತು ರಿಲಯನ್ಸ್​​ ಫೌಂಡೇಷನ್ ವತಿಯಿಂದ ಆರಂಭಿಸಿದ ವಂತಾರ ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿ ಅಕ್ರಮ ವನ್ಯಜೀವಿ ಸಾಗಾಟ, ಪರಿಸರ ಹಾಗೂ ಆರ್ಥಿಕ ನಿಯಮಗಳ ಕುರಿತು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸಾಕಷ್ಟು ಅರ್ಜಿಗಳು ಬಂದಿದ್ದರಿಂದ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಎಸ್​ಐಟಿಯನ್ನು ರಚನೆ ಮಾಡಲಾಗಿದೆ.
ಇದನ್ನೂ ಓದಿ: ನಿಲ್ಲದ ವರದಕ್ಷಿಣೆ ಕಿರುಕುಳ.. ಪೆಟ್ರೋಲ್ ಸುರಿದು 3 ವರ್ಷದ ಮಗಳ ಜೊತೆ ಬೆಂಕಿ ಹಚ್ಚಿಕೊಂಡ ತಾಯಿ
/filters:format(webp)/newsfirstlive-kannada/media/post_attachments/wp-content/uploads/2025/07/ELEPHANT-1.jpg)
ಯಾವ್ಯಾವ ವಿಷಯ ಎಸ್​ಐಟಿ ತನಿಖೆ ಮಾಡಲಿದೆ?
- ಸ್ವದೇಶ ಹಾಗೂ ವಿದೇಶಗಳಲ್ಲಿನ ಪ್ರಾಣಿಗಳನ್ನು ಹೇಗೆ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದರು. ಅದರಲ್ಲಿ ವಿಶೇಷವಾಗಿ ಆನೆಗಳನ್ನು ಯಾಕೆ ತೆಗೆದುಕೊಳ್ಳಲಾಗುತ್ತಿದೆ?
- 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಂತೆ ವಂತಾರದಲ್ಲಿ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯಾ?
- ಅಂತರಾಷ್ಟ್ರೀಯ ಪ್ರೋಟೋಕಾಲ್​​; ಅಳಿವಿನಂಚಿನಲ್ಲಿರುವ ಪ್ರಾಣಿ, ಸಸ್ಯಗಳನ್ನು ಆಮದು, ರಫ್ತು ಮಾಡುವಾಗ ಕಾನೂನುಗಳು ಪಾಲನೆ ಆಗಿವೆಯಾ ಎಂದು ಪರಿಶೀಲನೆ.
- ಪಶುಸಂಗೋಪನೆ, ಪಶುವೈದ್ಯಕೀಯ ಆರೈಕೆ, ಪ್ರಾಣಿ ಕಲ್ಯಾಣದಡಿ ಪ್ರಾಣಿಗಳು ಮರಣ ಹೊಂದಿದರೆ ಯಾವ್ಯಾವ ಮಾನದಂಡ ಪಾಲಿಸಲಾಗುತ್ತದೆ ಎಂಬುದರ ತನಿಖೆ
- ವಂತಾರದ ಹವಾಮಾನ ಸೂಕ್ತತೆ ಹಾಗೂ ಕೈಗಾರಿಕೆಗಾಗಿ ಇರುವ ದೂರುಗಳ ಬಗ್ಗೆ ಪರಿಶೀಲನೆ
- ತಳಿ ಪದ್ಧತಿ ಮತ್ತು ಜೀವ ವೈವಿದ್ಯತೆ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದ ಆರೋಪಗಳ ಕುರಿತು ಪರಿಶೀಲನೆ
- ಜಲ ಸಂಪನ್ಮೂಲ ದುರ್ಬಳಕೆ ಹಾಗೂ ಕಾರ್ಬನ್ ಕ್ರೆಡಿಟ್ ಯೋಜನೆ ಕುರಿತು ತನಿಖೆ
- ಅಪಾದಿತ ಕಳ್ಳಸಾಗಣಿಕೆ ಚಟುವಟಿಕೆ ಸೇರಿದಂತೆ ವನ್ಯಜೀವ ಮತ್ತು ವ್ಯಾಪಾರ ಕಾನೂನುಗಳ ಉಲ್ಲಂಘನೆ ಆಗಿವೆಯಾ?
- ಹಣ ಕಾಸಿನ ಸಂಬಂಧ ಹಾಗೂ ಮನಿಲಾಂಡರಿಂಗ್ ಆರೋಪ ಕುರಿತು ಪರಿಶೀಲನೆ
- ಅರ್ಜಿಯಲ್ಲಿರುವ ಇತೆರ ಆರೋಪಗಳನ್ನು ಎಸ್​ಐಟಿ ಪರಿಶೀಲನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us