Advertisment

ಘಾಟ್​ನಲ್ಲಿ ಕಮರಿಗೆ ಉರುಳಿದ ಬಸ್​.. ಕೊನೆಯುಸಿರೆಳೆದ ಮೂವರು, 38 ಪ್ರಯಾಣಿಕರು ಗಂಭೀರ

ಗಾಯಾಳುಗಳನ್ನು ಇಂದೋರ್​ನ ಎಂವೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಪ್ರಯಾಣಿಕರ ಸ್ಥಿತಿ ಹೇಳತೀರಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ರಕ್ಷಣೆ ಕಾರ್ಯದಲ್ಲಿ ತೊಡಗಿ ಹಲವರನ್ನು ಕಾಪಾಡಿದ್ದಾರೆ.

author-image
Bhimappa
MP_BUS_New
Advertisment

ಇಂದೋರ್: ಪ್ರಯಾಣಿಕರು ಇರುವ ಬಸ್​ವೊಂದು ರಾತ್ರಿ ಕಮರಿಗೆ ಉರುಳಿ ಬಿದ್ದು ಮೂವರು ಮೃತಪಟ್ಟಿದ್ದು 38 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಭೇರು ಘಾಟ್​ನಲ್ಲಿ ಈ ಘಟನೆ ನಡೆದಿದೆ. 

Advertisment

ಓಂಕಾರೇಶ್ವರದಿಂದ ಇಂದೋರ್​ಗೆ ಹೊರಟಿದ್ದ ಬಸ್ ಭೇರು ಘಾಟ್ ಬಳಿ ಬರುತ್ತಿದ್ದಂತೆ ಕಮರಿಗೆ ಉರುಳಿ ಬಿದ್ದಿದೆ. ಹೀಗಾಗಿ ಬಸ್​ನಲ್ಲಿದ್ದವರ ಪೈಕಿ ಸ್ಥಳದಲ್ಲೇ ಇಬ್ಬರು ಉಸಿರು ಚೆಲ್ಲಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ 38 ಜನರು ಗಂಭೀರವಾಗಿ ಗಾಯಗೊಂಡಿದ್ದು ಇದರಲ್ಲಿ ಮೂವರು ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ:ಟ್ರಾಫಿಕ್​ನಲ್ಲಿ 17 ವಾಹನಗಳಿಗೆ ಬೆಂಜ್ ಲಾರಿ ಡಿಕ್ಕಿ.. ಉಸಿರು ಚೆಲ್ಲಿದ 14 ಜನ, 13 ಮಂದಿ ಸ್ಥಿತಿ ಚಿಂತಾಜನಕ!

MP_BUS

ಸದ್ಯ ಗಾಯಾಳುಗಳನ್ನು ಇಂದೋರ್​ನ ಎಂವೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂವರು ಪ್ರಯಾಣಿಕರ ಸ್ಥಿತಿ ಹೇಳತೀರಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ರಕ್ಷಣೆ ಕಾರ್ಯದಲ್ಲಿ ತೊಡಗಿ ಹಲವರನ್ನು ಕಾಪಾಡಿದ್ದಾರೆ. ಆ್ಯಂಬುಲೆನ್ಸ್​ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. 

Advertisment

ಇನ್ನು ಘಟನೆಯಲ್ಲಿ ಬದುಕುಳಿದ ನವಲ್ ಸಿಂಗ್ ಚೌಹಾಣ್ ಎನ್ನುವರು ಮಾತನಾಡಿ, ಬಸ್​ ಇಂದೋರ್​ಗೆ ಹೋಗುವಾಗ ಮಾರ್ಗಮಧ್ಯೆ ಡಾಬಾದಲ್ಲಿ ನಿಲ್ಲಿಸಿ ಎಲ್ಲರೂ ಊಟ ಮಾಡಿದ್ದೇವು. ಮತ್ತೆ ಬಸ್ ಹೊರಡಲು ಪ್ರಾರಂಭವಾಗಿ ಸ್ವಲ್ಪ ದೂರ ಹೋಗಿತ್ತು ಅಷ್ಟೇ, ಆದರೆ ಅಷ್ಟರಲ್ಲೇ ಆಳವಾದ ಕಮರಿಗೆ ಬಸ್​ ಬಿದ್ದಿತು ಎಂದಿದ್ದಾರೆ. ಅಲ್ಲದೇ ಘಟನೆಯಲ್ಲಿ ಬದುಕುಳಿದ ಇಲ್ಲೊಬ್ಬರು ಮಾತನಾಡಿ, ಅನಿತಾ ಬಾಯಿ ಎನ್ನುವ ನನ್ನ ಅತ್ತೆಯನ್ನು ಕಳೆದುಕೊಂಡೆ ಎಂದು ಕಣ್ಣೀರು ಹಾಕಿದ್ದಾನೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bus Madhya Pradesh
Advertisment
Advertisment
Advertisment