/newsfirstlive-kannada/media/media_files/2026/01/31/nirmala-seetaraman-2026-01-31-08-04-43.jpg)
ಇಂದು ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯವನ್ನ ಮಂಡಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಮಂಡನೆಯಾಗಲಿರುವ ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ.
ಈ ಬಾರಿ ಬಜೆಟ್​ನಲ್ಲಿ ದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಕೇಂದ್ರ ಬಜೆಟ್​ ಮಂಡನೆಗೂ ಮುನ್ನ 16ನೇ ಹಣಕಾಸು ಆಯೋಗದ ವರದಿಯನ್ನ ಸದನದ ಮುಂದೆ ಮಂಡಿಸಲಾಗುತ್ತಿದೆ. ಇದರಲ್ಲಿ ರಾಜ್ಯಗಳ ಪಾಲು ಏನು ಎನ್ನುವುದು ತಿಳಿದುಬರಲಿದೆ. ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲು ಕಡಿಮೆ ದೊರೆಯುತ್ತಿದೆ ಎಂದು ಆರೋಪ ಪದೇ ಪದೇ ಕೇಳಿಬರುತ್ತಿದೆ. ಹಾಗಾಗಿ ಈ ಹಣಕಾಸು ಆಯೋಗದ ವರದಿಲ್ಲಿ ಏನಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ನಿರೀಕ್ಷೆಗಳು ಏನೇನು..?
- ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 12 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಸಬಹುದು.
- ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಇಳಿಕೆ ಮಾಡಬಹುದು.
- ವಿವಾಹಿತ ದಂಪತಿಗಳಿಗೆ ಜಂಟಿ ತೆರಿಗೆ ವ್ಯವಸ್ಥೆ ಜಾರಿಗೊಳಿಸಬಹುದು. ಇದರಿಂದ ದಂಪತಿಗಳಿಗೆ ವಾರ್ಷಿಕ 24 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಸಿಗಲಿದೆ.
- ವಾರ್ಷಿಕ 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಬಹುದು.
- ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ.5 ಕ್ಕೆ ಇಳಿಕೆ, ಎಲ್ಟಿಸಿಜಿ ಶೇ.0 ಕ್ಕೆ ಇಳಿಕೆ
- ಮ್ಯೂಚ್ಯುಯಲ್ ಫಂಡ್ ಗಳನ್ನು 5-7 ವರ್ಷದವರೆಗೆ ಹೊಂದಿದ್ದರೇ, ಯಾವುದೇ ತೆರಿಗೆ ಇಲ್ಲ
- ಎಚ್ಆರ್ಎ ಮಿತಿಯನ್ನು ಏರಿಕೆ ಮಾಡಬಹುದು.
- ಗೃಹಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಬಹುದು.
- ಈ ಭಾರಿಯ ಬಂಡವಾಳ ವೆಚ್ಚವನ್ನು ಶೇ.10 ರಷ್ಟು ಹೆಚ್ಚಳ ಮಾಡಿ 12 ಲಕ್ಷ ಕೋಟಿ ರೂ.ಗೆ ಏರಿಸಬಹುದು. ಇದರಿಂದ ಹೆದ್ದಾರಿ, ಬಂದರು, ರೈಲ್ವೇ ಸೇರಿ ಮೂಲಸೌಕರ್ಯ ನಿರ್ಮಾಣ
- ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.2 ಕ್ಕೆ ತಗ್ಗಿಸುವ ಗುರಿ ಹಾಕಿಕೊಳ್ಳಬಹುದು
- ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಎಲ್ಟಿಸಿಜಿ, ಎಸ್ಟಿಸಿಜಿ ಇಳಿಕೆ.
- ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್ ಸ್ಕೀಮ್ ಯೋಜನೆಯನ್ನು ಮತ್ತಷ್ಟು ಕ್ಷೇತ್ರಕ್ಕೆ, ಮತ್ತಷ್ಟು ವರ್ಷ ವಿಸ್ತರಿಸಬಹುದು.
- ಎಂಎಸ್ಎಂಇ ಸಾಲ ಸೌಲಭ್ಯವನ್ನು ಹೆಚ್ಚಳ ಮಾಡಬಹುದು
- ಹೆಲ್ತ್ ಕೇರ್ ವಲಯದಲ್ಲಿ ಇನ್ಸೂರೆನ್ಸ್ ಸರಳೀಕರಣ ಸೇರಿ ಕೆಲ ಸೌಲಭ್ಯ, ಸುಧಾರಣೆ ಘೋಷಣೆ ನಿರೀಕ್ಷೆ
- ಸದ್ಯ ಬೆಳ್ಳಿ ಮೇಲೆ ಶೇ.7.5 ರಷ್ಟು ಕಸ್ಟಮ್ಸ್ ಡ್ಯೂಟಿ ಮತ್ತು ಶೇ.3 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇವೆರಡನ್ನೂ ಕಡಿಮೆ ಮಾಡಿದ್ರೆ ದೇಶದಲ್ಲಿ ಬೆಳ್ಳಿ ಬೆಲೆ ಅಗ್ಗವಾಗಲಿದೆ.
- ಇದೇ ರೀತಿ ಚಿನ್ನದ ಮೇಲಿನ ಕಸ್ಟಮ್ಸ್ ಡ್ಯೂಟಿ ಕಡಿಮೆ ಮಾಡಿದ್ರೆ ಚಿನ್ನದ ಬೆಲೆಯೂ ಅಗ್ಗ!
- ದೇಶದಲ್ಲಿ ಹೆದ್ದಾರಿ, ಏರ್ ಪೋರ್ಟ್ ಸಂಪರ್ಕ ಉತ್ತಮಪಡಿಸಲು ಹೆಚ್ಚಿನ ಹಣ ಹಂಚಿಕೆ ನಿರೀಕ್ಷೆ
- ಜನರ ಮನೆ ಕನಸು ನನಸಾಗಿಸಲು ಅಫರ್ಡಬಲ್ ಹೌಸಿಂಗ್ಗೆ ಹೆಚ್ಚಿನ ಒತ್ತು ನಿರೀಕ್ಷೆ.
- ಅಫರ್ಡಬಲ್ ಹೌಸಿಂಗ್ ವೆಚ್ಚವನ್ನು 45 ಲಕ್ಷದಿಂದ 60 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆ
- ಡಿಜಿಟಲ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ
- ಅಪರೇಷನ್ ಸಿಂಧೂರ್ ಹಿನ್ನಲೆಯಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚಿನ ಹಣ ಹಂಚಿಕೆ, ಸೇನೆಯ ಅಪ್ ಗ್ರೇಡ್ಗೆ ಆದ್ಯತೆೆ, ಹೊಸ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಗೆ ಹಣ ನೀಡಿಕೆ
- ವಂದೇಭಾರತ್ ರೈಲುಗಳಿಗೆ ಹೆಚ್ಚಿನ ಹಣ ಹಂಚಿಕೆ, ರೈಲ್ವೇ ಸುರಕ್ಷತೆ, ರೈಲ್ವೇ ಆಧುನೀಕರಣಕ್ಕೆ ಒತ್ತು ನಿರೀಕ್ಷೆ
- ಕೃಷಿ ಸಮ್ಮಾನ್ ನಿಧಿಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ ನೀಡುವುದನ್ನು 2 ಸಾವಿರದಿಂದ 3 ಸಾವಿರಕ್ಕೆ ಏರಿಕೆ ನಿರೀಕ್ಷೆ
- ವಿಬಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರಗಳು ಶೇ.40 ರಷ್ಟು ಹಣ ನೀಡಬೇಕಿರುವುದರಿಂದ ಕೇಂದ್ರದಿಂದ ಕಡಿಮೆ ವೆಚ್ಚ
- ಎಐ, ಕೌಶಲ್ಯಾಭಿವೃದ್ದಿ ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು
- ಭಾರತದ ಬ್ಯಾಂಕ್ ಗಳನ್ನು ಜಾಗತಿಕ ಬ್ಯಾಂಕ್ ಗಳಾಗಿ ರೂಪಿಸಲು ಪ್ಲ್ಯಾನ್ ಘೋಷಣೆಯ ನೀರೀಕ್ಷೆ
ಇದನ್ನೂ ಓದಿ: ಸದ್ದಿಲ್ಲದೇ ಎಂಗೇಜ್ ಆದ ಸಂಜನಾ.. ಹುಡುಗ ಯಾರು ಗೊತ್ತೇ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us