/newsfirstlive-kannada/media/media_files/2026/02/01/union-budget-2026-02-01-09-37-44.jpg)
ಬಹು ನಿರೀಕ್ಷಿತ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಆಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯವನ್ನ ಮಂಡಿಸುತ್ತಿದ್ದಾರೆ. ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ. ಬಜೆಟ್​ಗೆ ಸಂಬಂಧಿಸಿದ ಕ್ಷಣ ಕ್ಷಣದ ಅಪ್​ಡೇಟ್ಸ್​ ಇಲ್ಲಿದೆ.
- Feb 01, 2026 11:43 IST
7 ಹೈಸ್ಪೀಡ್ ರೈಲು ಕಾರಿಡಾರ್ಗಳ ಘೋಷಣೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ದೆಹಲಿ-ವಾರಣಾಸಿ ಕಾರಿಡಾರ್ ಸೇರಿದಂತೆ ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ಘೋಷಿಸಿದರು. ವಾರಣಾಸಿ ಮತ್ತು ಪಾಟ್ನಾದಲ್ಲಿ ಹಡಗು ದುರಸ್ತಿ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು. ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಕಾರಿಡಾರ್ಗಳಲ್ಲಿಯೂ ಹೈಸ್ಪೀಡ್ ರೈಲು ಕಾರಿಡಾರ್ಗಳನ್ನು ನಿರ್ಮಿಸಲಾಗುವುದು.
- Feb 01, 2026 11:40 IST
ದೇಶದಲ್ಲಿ ಮೂರು ಹೊಸ ಏಮ್ಸ್, 7 ರೈಲು ಕಾರಿಡಾರ್ಗಳು -ಬಜೆಟ್ನಲ್ಲಿ ದೊಡ್ಡ ಘೋಷಣೆ
ದೇಶದಲ್ಲಿ ಮೂರು ಹೊಸ ಏಮ್ಸ್, 7 ರೈಲು ಕಾರಿಡಾರ್ಗಳು -ಬಜೆಟ್ನಲ್ಲಿ ದೊಡ್ಡ ಘೋಷಣೆ
- Feb 01, 2026 11:39 IST
ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಮಾಸ್ಟರ್ ಪ್ಲಾನ್
ದೇಶದಲ್ಲಿ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಬ್ಯಾಂಕಿಂಗ್ ಕುರಿತು ಸಮಿತಿಯನ್ನು ರಚಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಗ್ರಾಹಕರನ್ನು ರಕ್ಷಿಸಲು ನಾವು ಹೊಸ ಉನ್ನತ ಮಟ್ಟದಲ್ಲಿ ಕೆಲಸ ಮಾಡಲು ಬಯಸುತ್ತೇವೆ ಎಂದು ತಿಳಿಸಿದರು.
- Feb 01, 2026 11:38 IST
ಮೂರು ರಾಜ್ಯಗಳಲ್ಲಿ ಗಣಿಗಾರಿಕೆ ಕಾರಿಡಾರ್
ಒಡಿಶಾ, ಕೇರಳ ಮತ್ತು ಛತ್ತೀಸ್ಗಢದಲ್ಲಿ ಗಣಿಗಾರಿಕೆ ಕಾರಿಡಾರ್ಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ.
- Feb 01, 2026 11:37 IST
ರಾಷ್ಟ್ರೀಯ ಫೈಬರ್ ಯೋಜನೆ
ರೇಷ್ಮೆ, ಸೆಣಬು ಮತ್ತು ಉಣ್ಣೆಗಾಗಿ ರಾಷ್ಟ್ರೀಯ ನಾರು ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
- Feb 01, 2026 11:27 IST
22 ಹೊಸ ಜಲಮಾರ್ಗ ನಿರ್ಮಾಣ
ದೇಶದಲ್ಲಿ 22 ಹೊಸ ಜಲಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ.
- Feb 01, 2026 11:26 IST
ಕ್ಯಾನ್ಸರ್, ಮಧುಮೇಹ ಔಷಧಿಗಳ ಬೆಲೆ ಅಗ್ಗ
ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗವಾಗಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
- Feb 01, 2026 11:24 IST
ಅಪರೂಪದ ಭೂಮಿಯ ಖನಿಜಗಳ ಕಾರಿಡಾರ್ ಘೋಷಣೆ
ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಪರೂಪದ ಭೂಮಿಯ ಕಾರಿಡಾರ್ಗಳನ್ನು ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
- Feb 01, 2026 11:24 IST
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 10,000 ಕೋಟಿ ರೂ.ಗಳ ಘೋಷಣೆ
ಅಭಿವೃದ್ಧಿಯ ಹಾದಿಯಲ್ಲಿ MSMEಗಳು ನಿರ್ಣಾಯಕ ಪಾಲುದಾರರು. ನಾವು ಅವರ ಬೆಳವಣಿಗೆಯನ್ನು ಸಾಧಿಸಲು ಬಯಸುತ್ತೇವೆ. ಉದ್ಯಮಿಗಳಿಗೆ ಪ್ರಯೋಜನವಾಗುವಂತೆ ನಾವು ಈ ಉದ್ದೇಶಕ್ಕಾಗಿ ₹10,000 ಕೋಟಿಗಳನ್ನು ನೀಡುತ್ತಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
- Feb 01, 2026 11:20 IST
ಹಳ್ಳಿಗಳಿಗೆ ದೊಡ್ಡ ಘೋಷಣೆ
ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮವನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ನೇಕಾರರು ಮತ್ತು ಗುಡಿ ಕೈಗಾರಿಕೆಗಳಿಗೆ ಪ್ರಯೋಜನ ನೀಡುತ್ತದೆ. ಬಡ ಗ್ರಾಮೀಣ ಯುವಕರಿಗೆ ಪ್ರಯೋಜನವಾಗುತ್ತದೆ. ಭಾರತವು ಕ್ರೀಡೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
- Feb 01, 2026 11:18 IST
ಸೆಮಿಕಂಡಕ್ಟರ್ ಹಬ್ಗೆ ಶಪಥ
ಭಾರತವನ್ನು ಸೆಮಿಕಂಡಕ್ಟರ್ ಹಬ್ ಮಾಡಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸೆಮಿಕಂಡಕ್ಟರ್ ಅಭಿವೃದ್ಧಿಗೆ 40,000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
- Feb 01, 2026 11:14 IST
ಉತ್ಪಾದನಾ ವಲಯದ ಮೇಲೆ ಗಮನ- ಹಣಕಾಸು ಸಚಿವರು
ನಾವು ಉತ್ಪಾದನಾ ವಲಯದ ಮೇಲೆ ಗಮನ ಹರಿಸುತ್ತಿದ್ದೇವೆ. ಹಳೆಯ ವಲಯವನ್ನು ಬಲಪಡಿಸುವುದು, ಎಂಎಸ್ಎಂಇಗಳನ್ನು ಬಲಪಡಿಸುವುದು. ಆರ್ಥಿಕ ವಲಯದ ಜೊತೆಗೆ ಭದ್ರತೆಯನ್ನು ಬಲಪಡಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ -ನಿರ್ಮಲಾ ಸೀತಾರಾಮನ್
- Feb 01, 2026 11:13 IST
ಬಯೋಫಾರ್ಮಾಗೆ 10,000 ಕೋಟಿ
ನಮ್ಮ ಗಮನ ಜೈವಿಕ ಔಷಧಗಳ ಮೇಲೆ ಇರುತ್ತದೆ. ನಾವು ₹10,000 ಕೋಟಿ ಹಂಚಿಕೆ ಮಾಡುತ್ತಿದ್ದೇವೆ. ಮೂರು ಸಂಸ್ಥೆಗಳು ಸ್ಥಾಪನೆಯಾಗಲಿವೆ. ಪ್ರಸ್ತುತ, ನಮ್ಮಲ್ಲಿ ಏಳು ಸಂಸ್ಥೆಗಳಿದ್ದು, ಅವುಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು -ನಿರ್ಮಲಾ ಸೀತಾರಾಮನ್
- Feb 01, 2026 11:08 IST
ಬಜೆಟ್ ಮಂಡನೆ 2026 ಆರಂಭ
ಈ ಬಾರಿ ಬಜೆಟ್ ಮಂಡನೆ 2026 ಆರಂಭ ಆಗಿದೆ. ಗುರು ರವಿದಾಸ್ ಹೆಸರಿನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡ್ತಿದ್ದಾರೆ. ಈ ಬಾರಿಯ ಬಜೆಟ್ ಮೊದಲ ಬಾರಿಗೆ ಕರ್ತವ್ಯ ಭವನದಲ್ಲಿ ರಚಿಸಲಾಗಿದೆ.
- Feb 01, 2026 10:41 IST
ಕೇಂದ್ರ ಸಚಿವ ಸಂಪುಟ ಬಜೆಟ್ಗೆ ಅನುಮೋದನೆ
ಕೇಂದ್ರ ಸಚಿವ ಸಂಪುಟ ಬಜೆಟ್ಗೆ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯು ಬಜೆಟ್ಗೆ ಅನುಮೋದನೆ ಸಿಕ್ಕಿದೆ. ಈಗ, ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯಸಭೆಯಲ್ಲಿ ಮಂಡಿಸುತ್ತಾರೆ.
- Feb 01, 2026 10:40 IST
ಕೇಂದ್ರ ಸಚಿವ ಸಂಪುಟ ಬಜೆಟ್ಗೆ ಅನುಮೋದನೆ ನೀಡಿದೆ
ಕೇಂದ್ರ ಸಚಿವ ಸಂಪುಟ ಬಜೆಟ್ಗೆ ಅನುಮೋದನೆ ನೀಡಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯು ಬಜೆಟ್ಗೆ ಅನುಮೋದನೆ ಸಿಕ್ಕಿದೆ. ಈಗ, ಹಣಕಾಸು ಸಚಿವರು ಲೋಕಸಭೆಯಲ್ಲಿ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯಸಭೆಯಲ್ಲಿ ಮಂಡಿಸುತ್ತಾರೆ.
- Feb 01, 2026 10:38 IST
ಕೇಂದ್ರ ಬಜೆಟ್ ಭಾಷಣದಲ್ಲಿ ಪಾರ್ಟ್ A, ಪಾರ್ಟಿ B ವಿಭಾಗ..!
ಕೇಂದ್ರ ಬಜೆಟ್ ಭಾಷಣದಲ್ಲಿ ಪಾರ್ಟ್ ಎ ಹಾಗೂ ಪಾರ್ಟಿ ಬಿ ಎಂದು ಎರಡು ವಿಭಾಗ. 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಪಾರ್ಟ್ ಬಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪಾರ್ಟ್ ಎ ಭಾಗದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ, ಯೋಜನೆಗಳು, ಅನುದಾನಗಳು, ನೀತಿ ಸೇರಿದಂತೆ ಹಲವು ಘೋಷಣೆಗಳು ಇರುತ್ತದೆ.
ಪಾರ್ಟ್ ಬಿ ಬಜೆಟ್ ಪ್ರತಿಯಲ್ಲಿ ತೆರಿಗೆ ಪ್ರಸ್ತಾವನೆ ಸೇರಿದಂತೆ ಕೆಲ ಘೋಷಣೆಗಳಿಗೆ ಸೀಮಿತವಾಗಿರುತ್ತದೆ. ಈ ಬಾರಿ ನಿರ್ಮಾಲಾ ಸೀತಾರಾಮನ್ ಪಾರ್ಟಿ ಬಿ ಮೇಲೆ ಒತ್ತು ನೀಡುವ ಸಾದ್ಯತೆ ಇದೆ. ಪಾರ್ಟ್ ಬಿಯಲ್ಲಿ ಅಂಕಿ ಅಂಶಗಳು ಘೋಷಣೆಗಳ ಬದಲು ಭವಿಷ್ಯದ ನೀತಿ, ಯೋಜನೆ, ತೆರಿಗೆ ಸರಳೀಕರಣ, ತೆರಿಗೆ ಪದ್ಧತಿ ಸುಧಾರಣೆ, ರಫ್ತು ಸೇರಿದಂತೆ ಪ್ರಮುಖ ಮಾಹಿತಿಗಳು ಇರಲಿದೆ. ದೇಶದ ಮುಂದಿರುವ ಆರ್ಥಿಕ ಸವಾಲು, ಮುಂದಿನ 25 ವರ್ಷಗಳ ಆರ್ಥಿಕ ದೃಷ್ಟಿಕೋನ ಹಾಗೂ ಯೋಜನೆ, ಆರ್ಥಿಕ ಶಿಸ್ತು, ಸಮತೋಲನ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಪಾರ್ಟ್ ಬಿ ಗಮನಹರಿಸಲಿದೆ.
- Feb 01, 2026 10:20 IST
ದೇಶದಲ್ಲಿ RS 1,93,384 ಕೋಟಿ GST ಸಂಗ್ರಹ
2026ರ ಜನವರಿಯಲ್ಲಿ ದೇಶದಲ್ಲಿ 1,93,384 ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದೆ. 2025ರ ಜನವರಿಗೆ ಹೋಲಿಸಿದರೆ ಶೇ.6.2 ರಷ್ಟು ಹೆಚ್ಚಳವಾಗಿದೆ. ಇಂದು ಕೇಂದ್ರದ ಹಣಕಾಸು ಇಲಾಖೆಯಿಂದ ಕಳೆದ ತಿಂಗಳ ಜಿಎಸ್ಟಿ ಸಂಗ್ರಹದ ಅಂಕಿ-ಅಂಶ ಬಿಡುಗಡೆ ಆಗಿದೆ.
- Feb 01, 2026 10:00 IST
ಕಾಂಜೀವರಂ ಸಿಲ್ಕ್ ಸೀರೆ ಧರಿಸಿ ಬಜೆಟ್ ಮಂಡನೆ
ತಮಿಳುನಾಡಿನ ಕಾಂಜೀವರಂ ಸಿಲ್ಕ್ ಸೀರೆಯಲ್ಲಿ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಬಂದಿದ್ದಾರೆ. ಈ ವರ್ಷ ತಮಿಳುನಾಡು ಅಸೆೆಂಬ್ಲಿ ಚುನಾವಣೆ ಇದೆ. ಹೀಗಾಗಿ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಬಜೆಟ್ ಮಂಡಿಸಲು ಆಗಮಿಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷದ ಬಿಹಾರದ ಮಧುಬನಿ ಆರ್ಟ್ಸ್ ಸೀರೆ ಧರಿಸಿ ಬಜೆಟ್ ಮಂಡಿಸಿದ್ದರು. 2024ರಲ್ಲಿ ಆಂಧ್ರದ ಮಂಗಲಗಿರಿ ಹ್ಯಾಂಡ್ ಲೂಮ್ ಸೀರೆ ಧರಿಸಿದ್ದರು.
- Feb 01, 2026 09:44 IST
‘ಬಜೆಟ್’ ಎಂಬ ಪದ ಹುಟ್ಟಿಕೊಂಡ ಕತೆ ಗೊತ್ತಾ?
ಬಜೆಟ್ ಎಂಬ ಪದದ ಮೂಲ ಫ್ರೆಂಚ್. ‘ಬೌಗೆಟ್’ನಿಂದ ಬಜೆಟ್ ಆಯ್ತು ಎಂಬುದು ಪ್ರತೀತಿ. ಬೌಗೆಟ್ ಅಂದರೆ ಸಣ್ಣ ಚರ್ಮದ ಚೀಲ ಎಂದು ಅರ್ಥ. ಪ್ರಾಚೀನ ಕಾಲದಲ್ಲಿ ಜನ ಚರ್ಮದ ಚೀಲದಲ್ಲಿ ದಾಖಲೆ, ಹಣ ಇಟ್ಟುಕೊಳ್ಳುತ್ತಿದ್ದರು. ಹೀಗಾಗಿ ಇದು ಬಹಳ ಉಪಯುಕ್ತ ಎಂದು ಪರಿಗಣಿಸಲಾಗಿತ್ತು. ಬ್ರಿಟನ್ ಸರ್ಕಾರದ ಅವಧಿಯಲ್ಲಿ ದೇಶದ ಲೆಕ್ಕಪತ್ರ ಮಂಡಿಸುವಾಗ ಆಗಿನ ಹಣಕಾಸು ಸಚಿವರು ತಮ್ಮ ಎಲ್ಲಾ ದಾಖಲೆ ಪತ್ರಗಳನ್ನ ಸಂಸತ್ಗೆ ಸಣ್ಣ ಚರ್ಮದ ಚೀಲದಲ್ಲಿಯೇ ತರುತ್ತಿದ್ದರು. ಈ ಚೀಲವನ್ನು ಬೌಗೆಟ್ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಜನ ಸರ್ಕಾರದ ಲೆಕ್ಕಪತ್ರ ವಿಚಾರಕ್ಕೆ ಸಣ್ಣ ಚರ್ಮದ ಚೀಲ ಅಂದರೆ ಬೌಗೆಟ್ ಎಂದು ಕರೆಯುತ್ತಿದ್ದರು. ಬಜೆಟ್ ಪದ ಹೀಗೆ ಹುಟ್ಟಿಕೊಂಡಿತು. ಈ ಕುರಿತ ಕಂಪ್ಲೀಟ್ ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ.. ದೇಶದಲ್ಲಿ ಮೊದಲ ಬಜೆಟ್ ಮಂಡಿಸಿದ್ದು ಯಾವಾಗ? ‘ಬಜೆಟ್’ ಎಂಬ ಪದ ಹುಟ್ಟಿಕೊಂಡ ಕತೆ ಗೊತ್ತಾ?
- Feb 01, 2026 09:43 IST
ಶ್ರೀಸಾಮಾನ್ಯರ ನಿರೀಕ್ಷೆಗಳು ಏನೇನು..?
ನಿರೀಕ್ಷೆಗಳು ಏನೇನು..?
- ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿರುವ 12 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಸಬಹುದು.
- ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಇಳಿಕೆ ಮಾಡಬಹುದು.
- ವಿವಾಹಿತ ದಂಪತಿಗಳಿಗೆ ಜಂಟಿ ತೆರಿಗೆ ವ್ಯವಸ್ಥೆ ಜಾರಿಗೊಳಿಸಬಹುದು. ಇದರಿಂದ ದಂಪತಿಗಳಿಗೆ ವಾರ್ಷಿಕ 24 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಸಿಗಲಿದೆ.
- ವಾರ್ಷಿಕ 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ ವಿಧಿಸಬಹುದು.
- ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಅನ್ನು ಶೇ.5 ಕ್ಕೆ ಇಳಿಕೆ, ಎಲ್ಟಿಸಿಜಿ ಶೇ.0 ಕ್ಕೆ ಇಳಿಕೆ
- ಮ್ಯೂಚ್ಯುಯಲ್ ಫಂಡ್ ಗಳನ್ನು 5-7 ವರ್ಷದವರೆಗೆ ಹೊಂದಿದ್ದರೇ, ಯಾವುದೇ ತೆರಿಗೆ ಇಲ್ಲ
- ಎಚ್ಆರ್ಎ ಮಿತಿಯನ್ನು ಏರಿಕೆ ಮಾಡಬಹುದು.
- ಗೃಹಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಬಹುದು.
- ಈ ಭಾರಿಯ ಬಂಡವಾಳ ವೆಚ್ಚವನ್ನು ಶೇ.10 ರಷ್ಟು ಹೆಚ್ಚಳ ಮಾಡಿ 12 ಲಕ್ಷ ಕೋಟಿ ರೂ.ಗೆ ಏರಿಸಬಹುದು. ಇದರಿಂದ ಹೆದ್ದಾರಿ, ಬಂದರು, ರೈಲ್ವೇ ಸೇರಿ ಮೂಲಸೌಕರ್ಯ ನಿರ್ಮಾಣ
- ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.2 ಕ್ಕೆ ತಗ್ಗಿಸುವ ಗುರಿ ಹಾಕಿಕೊಳ್ಳಬಹುದು
- ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಎಲ್ಟಿಸಿಜಿ, ಎಸ್ಟಿಸಿಜಿ ಇಳಿಕೆ.
- ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟೀವ್ ಸ್ಕೀಮ್ ಯೋಜನೆಯನ್ನು ಮತ್ತಷ್ಟು ಕ್ಷೇತ್ರಕ್ಕೆ, ಮತ್ತಷ್ಟು ವರ್ಷ ವಿಸ್ತರಿಸಬಹುದು.
- ಎಂಎಸ್ಎಂಇ ಸಾಲ ಸೌಲಭ್ಯವನ್ನು ಹೆಚ್ಚಳ ಮಾಡಬಹುದು
- ಹೆಲ್ತ್ ಕೇರ್ ವಲಯದಲ್ಲಿ ಇನ್ಸೂರೆನ್ಸ್ ಸರಳೀಕರಣ ಸೇರಿ ಕೆಲ ಸೌಲಭ್ಯ, ಸುಧಾರಣೆ ಘೋಷಣೆ ನಿರೀಕ್ಷೆ
- ಸದ್ಯ ಬೆಳ್ಳಿ ಮೇಲೆ ಶೇ.7.5 ರಷ್ಟು ಕಸ್ಟಮ್ಸ್ ಡ್ಯೂಟಿ ಮತ್ತು ಶೇ.3 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇವೆರಡನ್ನೂ ಕಡಿಮೆ ಮಾಡಿದ್ರೆ ದೇಶದಲ್ಲಿ ಬೆಳ್ಳಿ ಬೆಲೆ ಅಗ್ಗವಾಗಲಿದೆ.
- ಇದೇ ರೀತಿ ಚಿನ್ನದ ಮೇಲಿನ ಕಸ್ಟಮ್ಸ್ ಡ್ಯೂಟಿ ಕಡಿಮೆ ಮಾಡಿದ್ರೆ ಚಿನ್ನದ ಬೆಲೆಯೂ ಅಗ್ಗ!
- ದೇಶದಲ್ಲಿ ಹೆದ್ದಾರಿ, ಏರ್ ಪೋರ್ಟ್ ಸಂಪರ್ಕ ಉತ್ತಮಪಡಿಸಲು ಹೆಚ್ಚಿನ ಹಣ ಹಂಚಿಕೆ ನಿರೀಕ್ಷೆ
- ಜನರ ಮನೆ ಕನಸು ನನಸಾಗಿಸಲು ಅಫರ್ಡಬಲ್ ಹೌಸಿಂಗ್ಗೆ ಹೆಚ್ಚಿನ ಒತ್ತು ನಿರೀಕ್ಷೆ.
- ಅಫರ್ಡಬಲ್ ಹೌಸಿಂಗ್ ವೆಚ್ಚವನ್ನು 45 ಲಕ್ಷದಿಂದ 60 ಲಕ್ಷ ರೂಪಾಯಿಗೆ ಏರಿಸುವ ನಿರೀಕ್ಷೆ
- ಡಿಜಿಟಲ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ
- ಅಪರೇಷನ್ ಸಿಂಧೂರ್ ಹಿನ್ನಲೆಯಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚಿನ ಹಣ ಹಂಚಿಕೆ, ಸೇನೆಯ ಅಪ್ ಗ್ರೇಡ್ಗೆ ಆದ್ಯತೆೆ, ಹೊಸ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಗೆ ಹಣ ನೀಡಿಕೆ
- ವಂದೇಭಾರತ್ ರೈಲುಗಳಿಗೆ ಹೆಚ್ಚಿನ ಹಣ ಹಂಚಿಕೆ, ರೈಲ್ವೇ ಸುರಕ್ಷತೆ, ರೈಲ್ವೇ ಆಧುನೀಕರಣಕ್ಕೆ ಒತ್ತು ನಿರೀಕ್ಷೆ
- ಕೃಷಿ ಸಮ್ಮಾನ್ ನಿಧಿಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ ನೀಡುವುದನ್ನು 2 ಸಾವಿರದಿಂದ 3 ಸಾವಿರಕ್ಕೆ ಏರಿಕೆ ನಿರೀಕ್ಷೆ
- ವಿಬಿ ರಾಮ್ ಜಿ ಯೋಜನೆಗೆ ರಾಜ್ಯ ಸರ್ಕಾರಗಳು ಶೇ.40 ರಷ್ಟು ಹಣ ನೀಡಬೇಕಿರುವುದರಿಂದ ಕೇಂದ್ರದಿಂದ ಕಡಿಮೆ ವೆಚ್ಚ
- ಎಐ, ಕೌಶಲ್ಯಾಭಿವೃದ್ದಿ ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು
- ಭಾರತದ ಬ್ಯಾಂಕ್ ಗಳನ್ನು ಜಾಗತಿಕ ಬ್ಯಾಂಕ್ ಗಳಾಗಿ ರೂಪಿಸಲು ಪ್ಲ್ಯಾನ್ ಘೋಷಣೆಯ ನೀರೀಕ್ಷೆ
- Feb 01, 2026 09:42 IST
ಕರ್ನಾಟಕದ ನಿರೀಕ್ಷೆಗಳು
ಕರ್ನಾಟಕದ ನಿರೀಕ್ಷೆಗಳು
- 2023ರ ಬಜೆಟ್ ನಲ್ಲಿ ಘೋಷಿಸಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ 5,400 ಕೋಟಿ ರೂ. ಹಣ ನೀಡುವ ನಿರೀಕ್ಷೆ
- ಕರ್ನಾಟಕದಲ್ಲಿ ಹಾಲಿ ಜಾರಿಯಲ್ಲಿರುವ 9 ರೈಲ್ವೇ ಯೋಜನೆಗಳಿಗೆ ಹೆಚ್ಚಿನ ಹಣ ಹಂಚಿಕೆ
- ಬೆಂಗಳೂರು ಮೆಟ್ರೋ, ಸಬ್ ಆರ್ಬನ್ ರೈಲು ಯೋಜನೆಗೆ ಹೆಚ್ಚಿನ ಹಣ ಹಂಚಿಕೆ ನಿರೀಕ್ಷೆ
- ಕರ್ನಾಟಕದಲ್ಲಿರುವ ಕೇಂದ್ರೀಯ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್ಸಿ, ಐಐಐಟಿ ಗೆ ಹೆಚ್ಚಿನ ಹಣ ಹಂಚಿಕೆ
- ಉತ್ತರ ಕರ್ನಾಟಕ ಭಾಗಕ್ಕೆ ಏಮ್ಸ್ ಆಸ್ಪತ್ರೆ ಮಂಜೂರು ನಿರೀಕ್ಷೆ
- Feb 01, 2026 09:41 IST
ವಿವಾಹಿತ ದಂಪತಿಗೆ ಜಂಟಿ ತೆರಿಗೆ ಪದ್ದತಿ?
ಈ ಏರಿಕೆ ಆಧಾರದಲ್ಲಿ, ಆದಾಯ ತೆರಿಗೆ ಕಟ್ಟುವವರಿಗೆ ಈಗಿರುವ 12.75 ಲಕ್ಷ ರೂಪಾಯಿಗೆ ಬದಲಿಗೆ 13 ಲಕ್ಷ ರೂಪಾಯಿವರೆಗೂ ತೆರಿಗೆ ಇರೋದಿಲ್ಲ. ಜೊತೆಗೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಮೇಲಿರುವ ತೆರಿಗೆಯನ್ನ ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಕೂಡ ಇದೆ. ಇದಲ್ಲದೆ ಮುಖ್ಯವಾಗಿ ಈ ಬಾರಿ ವಿವಾಹಿತ ದಂಪತಿಗೆ ಜಂಟಿ ತೆರಿಗೆ ಪದ್ದತಿಯನ್ನ ಜಾರಿಗೆ ತರ್ತಾರೆ ಅಂತ ಹೇಳಲಾಗ್ತಿದೆ.
ಇದು ಕೂಡ ಬಜೆಟ್ನಲ್ಲಿ ಮಂಡನೆಯಾದ್ರೆ, ದಂಪತಿಗೆ ಒಟ್ಟಾರೆಯಾಗಿ 24 ಲಕ್ಷ ರೂಪಾಯಿವರೆಗೂ ತೆರಿಗೆ ವಿನಾಯಿತಿ ಸಿಗುತ್ತೆ. ಹಾಗೇ ಮ್ಯೂಚುವಲ್ ಫಂಡ್ಗಳ ಮೇಲೇ ಹೂಡಿಕೆ ಮಾಡಿ, 5 ರಿಂದ 7 ವರ್ಷಗಳ ವರೆಗೆ ಅವುಗಳನ್ನ ಹೊಂದಿದ್ರೆ, ಅದ್ರ ಮೇಲೂ ತೆರಿಗೆಯನ್ನ ರದ್ದು ಮಾಡಬಹುದು. ಗೃಹ ಸಾಲದ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನೂ 2 ಲಕ್ಷ ರೂಪಾಯಿಗೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ.
- Feb 01, 2026 09:41 IST
ಜನರ ನಿರೀಕ್ಷೆಗಳು ಏನೇನು..?
ರೇಲ್ವೆ, ಮೂಲ ಸೌಕರ್ಯ, ನಗರಾಭಿವೃದ್ಧಿ, ಉತ್ಪಾದನೆ, ರಕ್ಷಣಾ ವಲಯ, ಎಲೆಕ್ಟ್ರಾನಿಕ್ಸ್, ಎಂಎಸ್ಎಂಇ, ಎಐ ಹಾಗೂ ಮರುಬಳಕೆಯ ಎನರ್ಜಿ ಸೆಕ್ಟರ್ಗಳ ಮೇಲೆ ಗಮನ ಹರಿಸಲಾಗಿದೆ. ಇನ್ನು ಸಾಮಾನ್ಯ ಜನರ ನಿರೀಕ್ಷೆ ಇರೋದು ಇನ್ಕಂ ಟ್ಯಾಕ್ಸ್ ಮೇಲೆ. ಈಗಾಗಲೇ ಇನ್ಕಂ ಟ್ಯಾಕ್ಸ್ನಲ್ಲಿ ಸಾಕಷ್ಟು ಸುಧಾರಣೆಗಳನ್ನ ತರಲಾಗಿದೆ. ಆದ್ರೂ ಹೊಸ ರೆಜೀಮ್ನಲ್ಲಿ ಈಗಿರುವ ಸ್ಟಾಂಡರ್ಡ್ ಡಿಡಕ್ಷನ್ನ 75 ಸಾವಿರ ರೂಪಾಯಿಯನ್ನ 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗುತ್ತೆ ಅನ್ನೋ ನಿರೀಕ್ಷೆ ಇದೆ.
- Feb 01, 2026 09:40 IST
ನಿರ್ಮಲಾ ಸೀತಾರಾಮನ್ ಬರೋಬ್ಬರಿ 9ನೇ ಬಾರಿಗೆ ಬಜೆಟ್ ಮಂಡನೆ
ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ತಮ್ಮ ಐತಿಹಾಸಿಕ 9ನೇ ಬಜೆಟ್ನ ಮಂಡಿಸಲಿದ್ದಾರೆ. ಈ ಮೂಲಕ ಅತೀ ಹೆಚ್ಚು ಬಾರಿ ಅಂದ್ರೆ 10 ಬಾರಿ ಬಜೆಟ್ ಮಂಡಿಸಿರುವ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವ್ರ ದಾಖಲೆಗಿಂತ ಕೇವಲ ಒಂದು ಹೆಜ್ಜೆ ಮಾತ್ರ ಹಿಂದಿರ್ತಾರೆ. ಜೊತೆಗೆ 2024ರ ಮಧ್ಯಂತರ ಬಜೆಟ್ ಕೂಡ ಸೇರಿದಂತೆ 2019ರಿಂದ ಬಜೆಟ್ ಮಂಡನೆ ಮಾಡ್ತಿರುವ ನಿರ್ಮಲಾ, ಸತತವಾಗಿ ಅತೀ ಹೆಚ್ಚಿನ ಸಂಖ್ಯೆಯ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆಯಲಿದ್ದಾರೆ.
- Feb 01, 2026 09:40 IST
ಮೋದಿ ಲೆಕ್ಕದ ಮೇಲೆ ಹೆಚ್ಚಿದ ಕುತೂಹಲ
ಈ ಬಾರಿ ಬಜೆಟ್ನಲ್ಲಿ ದೇಶದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನ 16ನೇ ಹಣಕಾಸು ಆಯೋಗದ ವರದಿಯನ್ನ ಸದನದ ಮುಂದೆ ಮಂಡಿಸಲಾಗುತ್ತಿದೆ. ಇದರಲ್ಲಿ ರಾಜ್ಯಗಳ ಪಾಲು ಏನು ಎನ್ನುವುದು ತಿಳಿದುಬರಲಿದೆ. ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲು ಕಡಿಮೆ ದೊರೆಯುತ್ತಿದೆ ಎಂದು ಆರೋಪ ಪದೇ ಪದೇ ಕೇಳಿಬರುತ್ತಿದೆ. ಹಾಗಾಗಿ ಈ ಹಣಕಾಸು ಆಯೋಗದ ವರದಿಲ್ಲಿ ಏನಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us