ಇಂದು ಮೋದಿ 3.0 ಸರ್ಕಾರದ ಮೊದಲ ‘ಗ್ಯಾರೆಂಟಿ’ ಬಜೆಟ್
ಈ ಅವಧಿಯ ಮೊದಲ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
ರಾಜ್ಯದ ಹಲವು ರೈಲ್ವೇ ಯೋಜನೆಗಳಿಗೆ ಅನುದಾನದ ನಿರೀಕ್ಷೆ
ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಈಗಾಗಲೇ ಆರಂಭವಾಗಿದ್ದು, ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಮೊರಾರ್ಜಿ ಅವರ ದಾಖಲೆ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ. ಈ ದಾಖಲೆಯ ನಡುವೆ ದೇಶವಾಸಿಗಳಿಗೆ ನಿರ್ಮಲಾ ಸೀತಾರಾಮನ್ ಸವಿ ಉಣಿಸುತ್ತಾರಾ..? ಹೊಸ ಆದಾಯದ ಮೂಲ ಹೆಸರಲ್ಲಿ ಜೇಬಿಗೆ ಕತ್ತರಿ ಹಾಕ್ತಾರಾ ಎಂಬ ಕುತೂಹಲ ಮೂಡಿದೆ.
ಮೋದಿ ಸರ್ಕಾರದ 3.0 ಮೊದಲ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಈ ಬಾರಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 3ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಇಂದು ಇತಿಹಾಸಿಕ ಬಜೆಟ್ ಮಂಡನೆ ಮಾಡಲಿದ್ದು, ಆಗಸ್ಟ್ 12ರವರೆಗೆ ಸಂಸತ್ ಮುಂಗಾರು ಅಧಿವೇಶನ ಶುರು ಆಗಿದೆ. ಮೋದಿ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಮೊದಲ ದಿನವೇ ಅಖಾಡಕ್ಕೆ ಇಳಿದಿದ್ವು. ನೀಟ್ ಅಕ್ರಮವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ವು. ಇನ್ನು ಅಧಿವೇಶನ ಆರಂಭಕ್ಕೂ ಮೊದಲು ಮಾಧ್ಯಮಗಳ ಮುಂದೆ ಹಾಜರಾದ ಪ್ರಧಾನಿ ಮೋದಿ, ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ರು. ಈಗಾಗಲೇ ಜನತೆ ತೀರ್ಪು ಕೊಟ್ಟಾಗಿದೆ. ಇನ್ನೇನಿದ್ದರೂ 2029ರ ಜನವರ ಬಳಿಕ ನೀವು ಯಾವುದೇ ರಾಜಕೀಯ ಆಟ ಆಡಬಹುದು.. ಆದ್ರೆ, ಮುಂದಿನ 4.5 ವರ್ಷಗಳ ಕಾಲ ಸಂಸತ್ತಿನ ಈ ಗೌರವಾನ್ವಿತ ವೇದಿಕೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತೆ ಎಲ್ಲ ಸಂಸದರಿಗೂ ಮನವಿ ಮಾಡಿದ್ರು. ನಾನು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡ್ತೇನೆ. ಬನ್ನಿ ಮುಂದಿನ 4.5 ವರ್ಷಗಳ ಕಾಲ ಪಕ್ಷದ ಗುರುತನ್ನು ಮೀರಿ ಬೆಳೆಯುವಂತೆ ಮತ್ತು ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳುವಂತೆ ಸಂಸತ್ನ ಘನತೆಯ ವೇದಿಕೆಯನ್ನು ಬಳಸಿಕೊಳ್ಳುವಂತೆ ಕೋರಲು ಬಯಸುತ್ತೇನೆ. 2029ರ ಚುನಾವಣಾ ವರ್ಷದ ಜನವರಿಯಲ್ಲಿ ನೀವು ಮತ್ತೆ ಆಟವಾಡಬಹುದು. ಆದರೆ ಅಲ್ಲಿಯವರೆಗೂ ದೇಶದ ಬಡವರು, ದೇಶದ ರೈತರು, ದೇಶದ ಯುವಜನರು, ಮಹಿಳೆಯರು ಮತ್ತು ದೇಶದ ಸಬಲೀಕರಣದಲ್ಲಿ ನೀವು ಭಾಗವಹಿಸಿ. ಇಂದು 2024-25ರ ಬಜೆಟ್ ಮಂಡನೆಗೂ ಮುನ್ನ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷಾ ವರದಿ ಮಂಡನೆ ಮಾಡಿದ್ರು. ಈ ಸಮೀಕ್ಷೆಯ ಪ್ರಕಾರ 2024-25ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ.6.5ರಿಂದ7 ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ರಿಯಲ್ ಜಿಡಿಪಿ ಕೊರೊನಾ ಕಾಲಕ್ಕಿಂತ ಶೇ. 20 ರಷ್ಟು ಹೆಚ್ಚಳವಾಗಿದ್ದು ಭಾರತದ ಆರ್ಥಿಕತೆಯ ಸದೃಢವಾಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಬಜೆಟ್ಗೂ ಮೊದಲೇ ಬಿಹಾರಕ್ಕೆ ಬಿಗ್ ಶಾಕ್; ಮೋದಿ 3.0 ಸರ್ಕಾರಕ್ಕೆ ಶುರುವಾಯ್ತಾ ಮೈತ್ರಿ ಸಂಕಷ್ಟ?
ಎಲೆಕ್ಷನ್ ರಿಸಲ್ಟ್ ಬಳಿಕ ಮೆತ್ತಗಾಗಿರುವ ಬಿಜೆಪಿ, ಖಡಕ್ ನಿರ್ಧಾರದ ಬದಲು ಜನಪ್ರಿಯತೆಗೆ ಹೆಚ್ಚಿನ ಒತ್ತು ನೀಡುವ ಸುಳಿವು ನೀಡಿದೆ. ಹೀಗಾಗಿ ಮೋದಿ ಸರ್ಕಾರದ 3.0 ಮೊದಲ ಬಜೆಟ್ ಮೇಲೆ ದೇಶದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ಎನ್ಡಿಎ ಮಿತ್ರಪಕ್ಷಗಳನ್ನು ತೃಪ್ತಿ ಪಡಿಸುವ ಅನಿವಾರ್ಯತೆ ಮೋದಿ ಮೇಲಿದೆ. ಇದರ ಜೊತೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವ ಕಾರಣ, ರಾಜ್ಯದ ಬೇಡಿಕೆಯನ್ನೂ ಈಡೇರಿಸುವ ಅವಶ್ಯಕತೆ ಇದೆ.. ಹಾಗಾದ್ರೆ ರಾಜ್ಯದ ಬೇಡಿಕೆಗಳೇನು ಅನ್ನೊದನ್ನ ನೋಡೋದಾದ್ರೆ.
ಕರ್ನಾಟಕದ ಪಾಲಿಗೆ ಏನೆಲ್ಲಾ ಸಿಗಲಿದೆ.?
ಕರ್ನಾಟಕದ ಪಾಲಿನ ತೆರಿಗೆ ಪ್ರಮಾಣ ಹೆಚ್ಚಳದ ನಿರೀಕ್ಷೆ ಇದೆ. ಭದ್ರಾ ಮೇಲ್ದಂಡೆಯ 5000 ಕೋಟಿ ಹಣ ಇನ್ನೂ ಬಂದಿಲ್ಲ. ರಾಯಚೂರಿನಲ್ಲಿ ಏಮ್ಸ್, ಹಾಸನ/ಮೈಸೂರಿಗೆ IIT ಬೇಡಿಕೆ ಇದೆ. ಮೇಕೆದಾಟು ಹಾಗೂ ಮಹದಾಯಿಗೆ ಅನುಮತಿಯ ಬೇಡಿಕೆ. ಬರ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೂ ಮನವಿ ಮಾಡಲಾಗಿದೆ. ಇನ್ನು ರಾಜ್ಯದ ಹಲವು ರೈಲ್ವೇ ಯೋಜನೆಗಳಿಗೆ ಬಜೆಟ್ನಲ್ಲಿ ಅನುದಾನ ಸಿಗುವ ನಿರೀಕ್ಷೆ ಇದೆ.
ಅದೇನೆ ಇರಲಿ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಬಗ್ಗೆ ದೇಶದಲ್ಲೆಡೆ ನಿರೀಕ್ಷೆ ಇದ್ದು ಉದ್ಯಮ ವಲಯದಲ್ಲಿ ಕುತೂಹಲ ಹೆಚ್ಚಿದೆ. ಎಲ್ಲರ ನಿರೀಕ್ಷೆ, ಪ್ರಶ್ನೆಗಳು, ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ಮೋದಿ 3.0 ಸರ್ಕಾರದ ಮೊದಲ ‘ಗ್ಯಾರೆಂಟಿ’ ಬಜೆಟ್
ಈ ಅವಧಿಯ ಮೊದಲ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
ರಾಜ್ಯದ ಹಲವು ರೈಲ್ವೇ ಯೋಜನೆಗಳಿಗೆ ಅನುದಾನದ ನಿರೀಕ್ಷೆ
ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಈಗಾಗಲೇ ಆರಂಭವಾಗಿದ್ದು, ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಮೊರಾರ್ಜಿ ಅವರ ದಾಖಲೆ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ. ಈ ದಾಖಲೆಯ ನಡುವೆ ದೇಶವಾಸಿಗಳಿಗೆ ನಿರ್ಮಲಾ ಸೀತಾರಾಮನ್ ಸವಿ ಉಣಿಸುತ್ತಾರಾ..? ಹೊಸ ಆದಾಯದ ಮೂಲ ಹೆಸರಲ್ಲಿ ಜೇಬಿಗೆ ಕತ್ತರಿ ಹಾಕ್ತಾರಾ ಎಂಬ ಕುತೂಹಲ ಮೂಡಿದೆ.
ಮೋದಿ ಸರ್ಕಾರದ 3.0 ಮೊದಲ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ
ಈ ಬಾರಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 3ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಇಂದು ಇತಿಹಾಸಿಕ ಬಜೆಟ್ ಮಂಡನೆ ಮಾಡಲಿದ್ದು, ಆಗಸ್ಟ್ 12ರವರೆಗೆ ಸಂಸತ್ ಮುಂಗಾರು ಅಧಿವೇಶನ ಶುರು ಆಗಿದೆ. ಮೋದಿ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಮೊದಲ ದಿನವೇ ಅಖಾಡಕ್ಕೆ ಇಳಿದಿದ್ವು. ನೀಟ್ ಅಕ್ರಮವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ವು. ಇನ್ನು ಅಧಿವೇಶನ ಆರಂಭಕ್ಕೂ ಮೊದಲು ಮಾಧ್ಯಮಗಳ ಮುಂದೆ ಹಾಜರಾದ ಪ್ರಧಾನಿ ಮೋದಿ, ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ರು. ಈಗಾಗಲೇ ಜನತೆ ತೀರ್ಪು ಕೊಟ್ಟಾಗಿದೆ. ಇನ್ನೇನಿದ್ದರೂ 2029ರ ಜನವರ ಬಳಿಕ ನೀವು ಯಾವುದೇ ರಾಜಕೀಯ ಆಟ ಆಡಬಹುದು.. ಆದ್ರೆ, ಮುಂದಿನ 4.5 ವರ್ಷಗಳ ಕಾಲ ಸಂಸತ್ತಿನ ಈ ಗೌರವಾನ್ವಿತ ವೇದಿಕೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವಂತೆ ಎಲ್ಲ ಸಂಸದರಿಗೂ ಮನವಿ ಮಾಡಿದ್ರು. ನಾನು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡ್ತೇನೆ. ಬನ್ನಿ ಮುಂದಿನ 4.5 ವರ್ಷಗಳ ಕಾಲ ಪಕ್ಷದ ಗುರುತನ್ನು ಮೀರಿ ಬೆಳೆಯುವಂತೆ ಮತ್ತು ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳುವಂತೆ ಸಂಸತ್ನ ಘನತೆಯ ವೇದಿಕೆಯನ್ನು ಬಳಸಿಕೊಳ್ಳುವಂತೆ ಕೋರಲು ಬಯಸುತ್ತೇನೆ. 2029ರ ಚುನಾವಣಾ ವರ್ಷದ ಜನವರಿಯಲ್ಲಿ ನೀವು ಮತ್ತೆ ಆಟವಾಡಬಹುದು. ಆದರೆ ಅಲ್ಲಿಯವರೆಗೂ ದೇಶದ ಬಡವರು, ದೇಶದ ರೈತರು, ದೇಶದ ಯುವಜನರು, ಮಹಿಳೆಯರು ಮತ್ತು ದೇಶದ ಸಬಲೀಕರಣದಲ್ಲಿ ನೀವು ಭಾಗವಹಿಸಿ. ಇಂದು 2024-25ರ ಬಜೆಟ್ ಮಂಡನೆಗೂ ಮುನ್ನ ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷಾ ವರದಿ ಮಂಡನೆ ಮಾಡಿದ್ರು. ಈ ಸಮೀಕ್ಷೆಯ ಪ್ರಕಾರ 2024-25ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ.6.5ರಿಂದ7 ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ರಿಯಲ್ ಜಿಡಿಪಿ ಕೊರೊನಾ ಕಾಲಕ್ಕಿಂತ ಶೇ. 20 ರಷ್ಟು ಹೆಚ್ಚಳವಾಗಿದ್ದು ಭಾರತದ ಆರ್ಥಿಕತೆಯ ಸದೃಢವಾಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ತಜ್ಞರು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಬಜೆಟ್ಗೂ ಮೊದಲೇ ಬಿಹಾರಕ್ಕೆ ಬಿಗ್ ಶಾಕ್; ಮೋದಿ 3.0 ಸರ್ಕಾರಕ್ಕೆ ಶುರುವಾಯ್ತಾ ಮೈತ್ರಿ ಸಂಕಷ್ಟ?
ಎಲೆಕ್ಷನ್ ರಿಸಲ್ಟ್ ಬಳಿಕ ಮೆತ್ತಗಾಗಿರುವ ಬಿಜೆಪಿ, ಖಡಕ್ ನಿರ್ಧಾರದ ಬದಲು ಜನಪ್ರಿಯತೆಗೆ ಹೆಚ್ಚಿನ ಒತ್ತು ನೀಡುವ ಸುಳಿವು ನೀಡಿದೆ. ಹೀಗಾಗಿ ಮೋದಿ ಸರ್ಕಾರದ 3.0 ಮೊದಲ ಬಜೆಟ್ ಮೇಲೆ ದೇಶದ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ಎನ್ಡಿಎ ಮಿತ್ರಪಕ್ಷಗಳನ್ನು ತೃಪ್ತಿ ಪಡಿಸುವ ಅನಿವಾರ್ಯತೆ ಮೋದಿ ಮೇಲಿದೆ. ಇದರ ಜೊತೆಗೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವ ಕಾರಣ, ರಾಜ್ಯದ ಬೇಡಿಕೆಯನ್ನೂ ಈಡೇರಿಸುವ ಅವಶ್ಯಕತೆ ಇದೆ.. ಹಾಗಾದ್ರೆ ರಾಜ್ಯದ ಬೇಡಿಕೆಗಳೇನು ಅನ್ನೊದನ್ನ ನೋಡೋದಾದ್ರೆ.
ಕರ್ನಾಟಕದ ಪಾಲಿಗೆ ಏನೆಲ್ಲಾ ಸಿಗಲಿದೆ.?
ಕರ್ನಾಟಕದ ಪಾಲಿನ ತೆರಿಗೆ ಪ್ರಮಾಣ ಹೆಚ್ಚಳದ ನಿರೀಕ್ಷೆ ಇದೆ. ಭದ್ರಾ ಮೇಲ್ದಂಡೆಯ 5000 ಕೋಟಿ ಹಣ ಇನ್ನೂ ಬಂದಿಲ್ಲ. ರಾಯಚೂರಿನಲ್ಲಿ ಏಮ್ಸ್, ಹಾಸನ/ಮೈಸೂರಿಗೆ IIT ಬೇಡಿಕೆ ಇದೆ. ಮೇಕೆದಾಟು ಹಾಗೂ ಮಹದಾಯಿಗೆ ಅನುಮತಿಯ ಬೇಡಿಕೆ. ಬರ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೂ ಮನವಿ ಮಾಡಲಾಗಿದೆ. ಇನ್ನು ರಾಜ್ಯದ ಹಲವು ರೈಲ್ವೇ ಯೋಜನೆಗಳಿಗೆ ಬಜೆಟ್ನಲ್ಲಿ ಅನುದಾನ ಸಿಗುವ ನಿರೀಕ್ಷೆ ಇದೆ.
ಅದೇನೆ ಇರಲಿ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಬಗ್ಗೆ ದೇಶದಲ್ಲೆಡೆ ನಿರೀಕ್ಷೆ ಇದ್ದು ಉದ್ಯಮ ವಲಯದಲ್ಲಿ ಕುತೂಹಲ ಹೆಚ್ಚಿದೆ. ಎಲ್ಲರ ನಿರೀಕ್ಷೆ, ಪ್ರಶ್ನೆಗಳು, ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ