ಯುವತಿಯನ್ನು ಕೊಂದ ವಿವಾಹಿತ ಸೇನಾಧಿಕಾರಿ ಅರೆಸ್ಟ್
ಸಿರ್ವಾಲ್ ಗಡ್ ನಿರ್ಜನ ಪ್ರದೇಶದಲ್ಲಿ ಸಿಕ್ತು ಯುವತಿಯ ಶವ
ತಲೆಗೆ ಸುತ್ತಿಗೆಯಿಂದ ಹೊಡೆದು ಯುವತಿಯನ್ನು ಹತ್ಯೆ ಮಾಡಿದ ಸೇನಾಧಿಕಾರಿ
ಡೆಹ್ರಾಡೂನ್: ವಿವಾಹಿತ ಸೇನಾಧಿಕಾರಿಯೊಬ್ಬ ಯುವತಿಯನ್ನು ಕೊಂದ ಘೋರ ಘಟನೆ ಪಚ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬೆಳಕಿಗೆ ಬಂದಿದೆ. ಶ್ರೇಯಾ ಶರ್ಮಾ ಎಂಬಾಕೆ ಲೆಫ್ಟಿನೆಂಟ್ ಕರ್ನಲ್ ರಾಮೆಂದು ಉಪಾಧ್ಯಾಯ ಕೈಯಾರೆ ಕೊಲೆಯಾಗಿದ್ದಾಳೆ.
ನೇಪಾಲ ಮೂಲದ ಶ್ರೇಯಾ ಶರ್ಮಾ ತನ್ನನ್ನು ಮದುವೆಯಾಗು ಎಂದು ರಾಮೆಂದು ಉಪಾಧ್ಯಾಯನನ್ನು ಒತ್ತಾಯಿಸಿದ್ದಾಳೆ. ಈ ಕಾರಣಕ್ಕೆ ಕೋಪಗೊಂಡು ಆಕೆಯನ್ನು ಹತ್ಯೆಗೈದಿದ್ದಾನೆ. ಯುವತಿಯ ಶವ ಸಿರ್ವಾಲ್ ಗಡ್ ಪ್ರದೇಶದಲ್ಲಿ ಸಿಕ್ಕಿದೆ.
ರಾಮೆಂದು ಉಪಾಧ್ಯಾಯ ಕ್ಲೆಮೆಂಟ್ ಟೌನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದನು. ಹೀಗಿರುವಾಗ ಯುವತಿಯ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದನು. ಕೊನೆಗೆ ಆ ಯುವತಿ ತನ್ನನ್ನು ವಿವಾಹವಾಗುವಂತೆ ಒತ್ತಡ ಹೇರಿದ್ದಾಳೆ. ಹೀಗಾಗಿ ಆಕೆಯನ್ನು ರಾಮೆಂದು ಹತ್ಯೆ ಮಾಡಿದ್ದಾನೆ.
ಶ್ರೇಯಾ ಶರ್ಮ ಮತ್ತು ರಾಮೆಂದು ಉಪಾಧ್ಯಾಯಗೆ ಸಿಲಿಗುರಿಯ ಡ್ಯಾನ್ಸ್ ಬಾರ್ನಲ್ಲಿ ಭೇಟಿಯಾಗಿ ಪರಿಚಯವಾಗುತ್ತದೆ. ಮೂರು ವರ್ಷಗಳ ಕಾಲ ಇವರ ಸಂಬಂಧ ಮುಂದುವರೆಯುತ್ತದೆ. ಬಳಿಕ ರಾಮೆಂದು ಉಪಾಧ್ಯಾಯ ಡೆಹ್ರಾಡೂನ್ಗೆ ವರ್ಗಾವಣೆಯಾಗುತ್ತದೆ. ಆಕೆಯನ್ನು ಕೂಡ ರಾಮೆಂದು ಉಪಾಧ್ಯಾಯ ಡೆಹ್ರಾಡೂನ್ಗೆ ಕರೆಸಿಕೊಳ್ಳುತ್ತಾನೆ. ಬಾಡಿಗೆ ಮನೆಯಲ್ಲಿ ಇರಿಸಿಕೊಳ್ಳುತ್ತಾನೆ.
ಶನಿವಾರದಂದು ಇಬ್ಬರು ರಾಜ್ಪುರದ ರಸ್ತೆ ಕ್ಲಬ್ನಲ್ಲಿ ಮದ್ಯ ಸೇವಿಸುತ್ತಾರೆ. ಬಳಿಕ ಲಾಂಗ್ ಡ್ರೈವ್ ಹೋಗುತ್ತಾರೆ. ಥಾನೋ ರಸ್ತೆಯ ನಿರ್ಜನ ಪ್ರದೇಶದ ಬಳಿಕ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡುತ್ತಾನೆ. ಬಳಿಕ ಶವವನ್ನು ಎಸೆದು ಓಡಿ ಹೋಗುತ್ತಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯುವತಿಯನ್ನು ಕೊಂದ ವಿವಾಹಿತ ಸೇನಾಧಿಕಾರಿ ಅರೆಸ್ಟ್
ಸಿರ್ವಾಲ್ ಗಡ್ ನಿರ್ಜನ ಪ್ರದೇಶದಲ್ಲಿ ಸಿಕ್ತು ಯುವತಿಯ ಶವ
ತಲೆಗೆ ಸುತ್ತಿಗೆಯಿಂದ ಹೊಡೆದು ಯುವತಿಯನ್ನು ಹತ್ಯೆ ಮಾಡಿದ ಸೇನಾಧಿಕಾರಿ
ಡೆಹ್ರಾಡೂನ್: ವಿವಾಹಿತ ಸೇನಾಧಿಕಾರಿಯೊಬ್ಬ ಯುವತಿಯನ್ನು ಕೊಂದ ಘೋರ ಘಟನೆ ಪಚ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬೆಳಕಿಗೆ ಬಂದಿದೆ. ಶ್ರೇಯಾ ಶರ್ಮಾ ಎಂಬಾಕೆ ಲೆಫ್ಟಿನೆಂಟ್ ಕರ್ನಲ್ ರಾಮೆಂದು ಉಪಾಧ್ಯಾಯ ಕೈಯಾರೆ ಕೊಲೆಯಾಗಿದ್ದಾಳೆ.
ನೇಪಾಲ ಮೂಲದ ಶ್ರೇಯಾ ಶರ್ಮಾ ತನ್ನನ್ನು ಮದುವೆಯಾಗು ಎಂದು ರಾಮೆಂದು ಉಪಾಧ್ಯಾಯನನ್ನು ಒತ್ತಾಯಿಸಿದ್ದಾಳೆ. ಈ ಕಾರಣಕ್ಕೆ ಕೋಪಗೊಂಡು ಆಕೆಯನ್ನು ಹತ್ಯೆಗೈದಿದ್ದಾನೆ. ಯುವತಿಯ ಶವ ಸಿರ್ವಾಲ್ ಗಡ್ ಪ್ರದೇಶದಲ್ಲಿ ಸಿಕ್ಕಿದೆ.
ರಾಮೆಂದು ಉಪಾಧ್ಯಾಯ ಕ್ಲೆಮೆಂಟ್ ಟೌನ್ ಕಂಟೋನ್ಮೆಂಟ್ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದನು. ಹೀಗಿರುವಾಗ ಯುವತಿಯ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದನು. ಕೊನೆಗೆ ಆ ಯುವತಿ ತನ್ನನ್ನು ವಿವಾಹವಾಗುವಂತೆ ಒತ್ತಡ ಹೇರಿದ್ದಾಳೆ. ಹೀಗಾಗಿ ಆಕೆಯನ್ನು ರಾಮೆಂದು ಹತ್ಯೆ ಮಾಡಿದ್ದಾನೆ.
ಶ್ರೇಯಾ ಶರ್ಮ ಮತ್ತು ರಾಮೆಂದು ಉಪಾಧ್ಯಾಯಗೆ ಸಿಲಿಗುರಿಯ ಡ್ಯಾನ್ಸ್ ಬಾರ್ನಲ್ಲಿ ಭೇಟಿಯಾಗಿ ಪರಿಚಯವಾಗುತ್ತದೆ. ಮೂರು ವರ್ಷಗಳ ಕಾಲ ಇವರ ಸಂಬಂಧ ಮುಂದುವರೆಯುತ್ತದೆ. ಬಳಿಕ ರಾಮೆಂದು ಉಪಾಧ್ಯಾಯ ಡೆಹ್ರಾಡೂನ್ಗೆ ವರ್ಗಾವಣೆಯಾಗುತ್ತದೆ. ಆಕೆಯನ್ನು ಕೂಡ ರಾಮೆಂದು ಉಪಾಧ್ಯಾಯ ಡೆಹ್ರಾಡೂನ್ಗೆ ಕರೆಸಿಕೊಳ್ಳುತ್ತಾನೆ. ಬಾಡಿಗೆ ಮನೆಯಲ್ಲಿ ಇರಿಸಿಕೊಳ್ಳುತ್ತಾನೆ.
ಶನಿವಾರದಂದು ಇಬ್ಬರು ರಾಜ್ಪುರದ ರಸ್ತೆ ಕ್ಲಬ್ನಲ್ಲಿ ಮದ್ಯ ಸೇವಿಸುತ್ತಾರೆ. ಬಳಿಕ ಲಾಂಗ್ ಡ್ರೈವ್ ಹೋಗುತ್ತಾರೆ. ಥಾನೋ ರಸ್ತೆಯ ನಿರ್ಜನ ಪ್ರದೇಶದ ಬಳಿಕ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡುತ್ತಾನೆ. ಬಳಿಕ ಶವವನ್ನು ಎಸೆದು ಓಡಿ ಹೋಗುತ್ತಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ