‘ಪೆನ್ ಡ್ರೈವ್ ರಿಲೀಸ್ ಮಾಡ್ತೀನಿ ತಾಕತ್ ಇದ್ರೆ ತನಿಖೆ ಮಾಡಿ’
ಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೆ ಎಷ್ಟೋ ಜನ ನಿದ್ದೆ ಗೆಟ್ಟಿದ್ದಾರೆ
ಸಚಿವರು ನನ್ನನ್ನು ಬಂದು ಭೇಟಿ ಮಾಡಿ ಅಣ್ಣ ಯಾರದ್ದು ಅಂದ್ರು
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮನ್ನು ಹಿಟ್ ಅಂಡ್ ರನ್ ಎಂದ ಸಿಎಂ ಸಿದ್ದರಾಮಯ್ಯ ಹಾಗೂ ಎಸ್ಪಿ ರೋಡ್ನಲ್ಲಿ ಎಷ್ಟು ಬೇಕಾದ್ರೂ ಪೆನ್ ಡ್ರೈವ್ ಸಿಗುತ್ತೆ ಎಂದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೆ ಎಷ್ಟು ಮಂತ್ರಿಗಳು ನಿದ್ದೆ ಗೆಟ್ಟಿದ್ದಾರೆ. ಎಷ್ಟು ಜನ ಸಚಿವರು ಬಂದು ನನ್ನನ್ನು ಭೇಟಿ ಮಾಡಿ ಅಣ್ಣ ಯಾರದ್ದು ಅಣ್ಣ ಅಂತಾ ಕೇಳಿದ್ರು. ನಾನು ಪೆನ್ ಡ್ರೈವ್ ರಿಲೀಸ್ ಮಾಡ್ತೀನಿ. ರಾಜ್ಯ ಸರ್ಕಾರಕ್ಕೆ ಧಮ್ಮು, ತಾಕತ್ತು ಇದ್ಯಾ ಅದನ್ನು ತನಿಖೆ ಮಾಡೋಕೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡೋದು ಹುಡುಕಾಟಿಕೆ ಅಲ್ಲ. ಹಿಟ್ ಅಂಡ್ ರನ್ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಿಟ್ ಅಂಡ್ ರನ್ ವ್ಯಕ್ತಿ ನಾನು ಅಲ್ಲ. ಆಯ್ತು ಪೆನ್ ಡ್ರೈವ್ ರಿಲೀಸ್ ಮಾಡ್ತೀನಿ. ಕ್ರಮ ತೆಗೆದುಕೊಳ್ಳೋಕೆ ತಾಕತ್ತು ಇವರಿಗೆ ಇದೆಯಾ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: WATCH: ಅಣ್ಣ ಹೇಳಿದ್ರೆ, ತಮ್ಮ ಕೇಳಬೇಕಲ್ಲ.. ಡಿ.ಕೆ ಶಿವಕುಮಾರ್ಗೆ ಹೆಚ್ಡಿಕೆ ಖಡಕ್ ಎಚ್ಚರಿಕೆ
ಪೆನ್ ಡ್ರೈವ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಾನು ಈಗ ಪೆನ್ ಡ್ರೈವ್ ಬಿಡುಗಡೆ ಮಾಡಿದ್ರೆ ನಕಲಿ, ಮಿಮಿಕ್ರಿ ಅಂತಾರೆ. ನಾನು SP ರೋಡ್ಗೆ ಹೋಗಿ ಯಾಕೆ ಪೆನ್ ಡ್ರೈವ್ ತರಲಿ. ಇವರೇ ನನಗೆ ಪೆನ್ ಡ್ರೈವ್ ತಯಾರು ಮಾಡಿಕೊಡ್ತಿದ್ದಾರೆ. ಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೆ ಎಷ್ಟು ಮಂತ್ರಿಗಳು ನಿದ್ದೆ ಗೆಟ್ಟರು? ಎಷ್ಟು ಜನ ಸಚಿವರು ನನ್ನನ್ನು ಬಂದು ಭೇಟಿ ಮಾಡಿ ಅಣ್ಣ ಯಾರದ್ದು ಅಣ್ಣ ಅಂತಾ ಕೇಳಿದ್ರು. ಒಂದು ಪೆನ್ ಡ್ರೈಗೆ ನಿದ್ದೆ ಗೆಟ್ಟಿದ್ದೀರಿ. ಸೂಟ್ ಕೇಸ್ಗಟ್ಟಲೇ ದಾಖಲೆಗಳು ನನ್ನ ಬಳಿ ಇವೆ ಎಂದು ಕುಮಾರಸ್ವಾಮಿ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
‘ಪೆನ್ ಡ್ರೈವ್ ರಿಲೀಸ್ ಮಾಡ್ತೀನಿ ತಾಕತ್ ಇದ್ರೆ ತನಿಖೆ ಮಾಡಿ’
ಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೆ ಎಷ್ಟೋ ಜನ ನಿದ್ದೆ ಗೆಟ್ಟಿದ್ದಾರೆ
ಸಚಿವರು ನನ್ನನ್ನು ಬಂದು ಭೇಟಿ ಮಾಡಿ ಅಣ್ಣ ಯಾರದ್ದು ಅಂದ್ರು
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮನ್ನು ಹಿಟ್ ಅಂಡ್ ರನ್ ಎಂದ ಸಿಎಂ ಸಿದ್ದರಾಮಯ್ಯ ಹಾಗೂ ಎಸ್ಪಿ ರೋಡ್ನಲ್ಲಿ ಎಷ್ಟು ಬೇಕಾದ್ರೂ ಪೆನ್ ಡ್ರೈವ್ ಸಿಗುತ್ತೆ ಎಂದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೆ ಎಷ್ಟು ಮಂತ್ರಿಗಳು ನಿದ್ದೆ ಗೆಟ್ಟಿದ್ದಾರೆ. ಎಷ್ಟು ಜನ ಸಚಿವರು ಬಂದು ನನ್ನನ್ನು ಭೇಟಿ ಮಾಡಿ ಅಣ್ಣ ಯಾರದ್ದು ಅಣ್ಣ ಅಂತಾ ಕೇಳಿದ್ರು. ನಾನು ಪೆನ್ ಡ್ರೈವ್ ರಿಲೀಸ್ ಮಾಡ್ತೀನಿ. ರಾಜ್ಯ ಸರ್ಕಾರಕ್ಕೆ ಧಮ್ಮು, ತಾಕತ್ತು ಇದ್ಯಾ ಅದನ್ನು ತನಿಖೆ ಮಾಡೋಕೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡೋದು ಹುಡುಕಾಟಿಕೆ ಅಲ್ಲ. ಹಿಟ್ ಅಂಡ್ ರನ್ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಿಟ್ ಅಂಡ್ ರನ್ ವ್ಯಕ್ತಿ ನಾನು ಅಲ್ಲ. ಆಯ್ತು ಪೆನ್ ಡ್ರೈವ್ ರಿಲೀಸ್ ಮಾಡ್ತೀನಿ. ಕ್ರಮ ತೆಗೆದುಕೊಳ್ಳೋಕೆ ತಾಕತ್ತು ಇವರಿಗೆ ಇದೆಯಾ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: WATCH: ಅಣ್ಣ ಹೇಳಿದ್ರೆ, ತಮ್ಮ ಕೇಳಬೇಕಲ್ಲ.. ಡಿ.ಕೆ ಶಿವಕುಮಾರ್ಗೆ ಹೆಚ್ಡಿಕೆ ಖಡಕ್ ಎಚ್ಚರಿಕೆ
ಪೆನ್ ಡ್ರೈವ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಾನು ಈಗ ಪೆನ್ ಡ್ರೈವ್ ಬಿಡುಗಡೆ ಮಾಡಿದ್ರೆ ನಕಲಿ, ಮಿಮಿಕ್ರಿ ಅಂತಾರೆ. ನಾನು SP ರೋಡ್ಗೆ ಹೋಗಿ ಯಾಕೆ ಪೆನ್ ಡ್ರೈವ್ ತರಲಿ. ಇವರೇ ನನಗೆ ಪೆನ್ ಡ್ರೈವ್ ತಯಾರು ಮಾಡಿಕೊಡ್ತಿದ್ದಾರೆ. ಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೆ ಎಷ್ಟು ಮಂತ್ರಿಗಳು ನಿದ್ದೆ ಗೆಟ್ಟರು? ಎಷ್ಟು ಜನ ಸಚಿವರು ನನ್ನನ್ನು ಬಂದು ಭೇಟಿ ಮಾಡಿ ಅಣ್ಣ ಯಾರದ್ದು ಅಣ್ಣ ಅಂತಾ ಕೇಳಿದ್ರು. ಒಂದು ಪೆನ್ ಡ್ರೈಗೆ ನಿದ್ದೆ ಗೆಟ್ಟಿದ್ದೀರಿ. ಸೂಟ್ ಕೇಸ್ಗಟ್ಟಲೇ ದಾಖಲೆಗಳು ನನ್ನ ಬಳಿ ಇವೆ ಎಂದು ಕುಮಾರಸ್ವಾಮಿ ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ