ಹೊಸ ಟೀಮ್ ಸೆಲೆಕ್ಷನ್ಗೂ ಮುನ್ನ ಕಮಿಟಿಗೆ ಹೊಸ ತಲೆನೋವು!
ಏಕದಿನ ಫಾರ್ಮೆಟ್ಗೆ ಕನ್ನಡಿಗ ಕೆ.ಎಲ್ ರಾಹುಲ್ ಆಗ್ತಾರಾ ನಾಯಕ?
ಮುಂದಿನ ಏಕದಿನ ವಿಶ್ವಕಪ್ ಯಾವಾಗ, ಹಿಟ್ಮ್ಯಾನ್ ಇರ್ತಾರಾ?
ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಸೆಲೆಕ್ಷನ್ಗೆ ಕೌಂಟ್ಡೌನ್ ಶುರುವಾಗಿದ್ದು, ಏಕದಿನ ಸರಣಿಗೆ ಟೀಮ್ ಸೆಲೆಕ್ಷನ್ ದೊಡ್ಡ ತಲೆನೋವು ತಂದಿಟ್ಟಿದೆ. ರೋಹಿತ್ ಶರ್ಮಾ ಉತ್ತರಾಧಿಕಾರಿಯನ್ನ ನೇಮಿಸೋ ದೊಡ್ಡ ಜವಾಬ್ದಾರಿ ಅಜಿತ್ ಅಗರ್ಕರ್, ಗೌತಮ್ ಗಂಭೀರ್ ಹೆಗಲೇರಿದೆ. ನಾಯಕನ ಪಟ್ಟವೇರಲು ಆಟಗಾರರ ದಂಡೇ ರೆಡಿಯಿದೆ. ಇರೋವ್ರಲ್ಲಿ ಒಬ್ಬರನ್ನ ಆಯ್ಕೆ ಮಾಡೋದೆ ಸವಾಲಾಗಿದೆ.
ಇದನ್ನೂ ಓದಿ: PUC ರಿಸಲ್ಟ್ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ
ಜಿಂಬಾಬ್ವೆ ಪ್ರವಾಸದ ದಿಗ್ವಿಜಯದ ಬೆನ್ನಲ್ಲೇ ಲಂಕೆಗೆ ಹಾರಲು ಟೀಮ್ ಇಂಡಿಯಾ ಸಜ್ಜಾಗಿದೆ. ಜುಲೈ 27ರಿಂದ ಆರಂಭವಾಗಲಿರೋ ಟಿ20 ಹಾಗೂ ಏಕದಿನ ಸರಣಿಗೆ ಸಿದ್ಧತೆಗಳು ಶುರುವಾಗಿವೆ. ಇನ್ನೆರೆಡು ದಿನಗಳಲ್ಲಿ ಟೀಮ್ ಸೆಲೆಕ್ಷನ್ ಮೀಟಿಂಗ್ ನಡೆಯಲಿದೆ. ಅದಕ್ಕೂ ಮುನ್ನ ಹೆಡ್ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮುಂದೆ ನಾಯಕನ ಆಯ್ಕೆಯ ಸವಾಲು ಎದುರಾಗಿದೆ.
ಇದನ್ನೂ ಓದಿ: ಫಿಲ್ಮಿ ರೇಂಜ್ನಲ್ಲಿ ಶೆಡ್ಗೆ ಬೆಂಕಿಯಿಟ್ಟು ಸಾಯಿಸಿದ್ರು.. ಮೃತ ಸಭಾನಾಳ PSI ಕನಸು ಸುಟ್ಟು ಹೋಯ್ತು..
ರೋಹಿತ್ಗೆ ಪರ್ಯಾಯ ನಾಯಕನನ್ನ ಬೆಳೆಸೋ ಸವಾಲು.!
ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಿಂದ ರೋಹಿತ್ ರೆಸ್ಟ್ ಪಡೆಯೋ ಸಾಧ್ಯತೆಯಿದೆ. ಹೀಗಾಗಿ ಏಕದಿನ ತಂಡದ ನಾಯಕನ್ಯಾರು ಎಂಬ ಪ್ರಶ್ನೆ ಹುಟ್ಟಿದೆ. ಮುಂದಿನ ವರ್ಷ ನಡೆಯೋ ಚಾಂಪಿಯನ್ ಟ್ರೋಫಿ ಬಳಿಕ ರೋಹಿತ್ ಏಕದಿನ ಫಾರ್ಮೆಟ್ಗೆ ಗುಡ್ ಬೈ ಹೇಳೋ ಸಾಧ್ಯತೆಯಿದೆ. 2027ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ರೋಹಿತ್ಗೆ ಪರ್ಯಾಯ ನಾಯಕನನ್ನ ಈಗಿನಿಂದಲೇ ಬೆಳೆಸಬೇಕಿದ್ದು, ಗೌತಮ್ ಗಂಭೀರ್ ಮುಂದೆ ಬಿಗ್ ಟಾಸ್ಕ್ ಇದೆ.
ಕನ್ನಡಿಗ ರಾಹುಲ್ಗೆ ಅದೃಷ್ಟ ಒಲಿಯುತ್ತಾ.?
ಏಕದಿನ ನಾಯಕತ್ವದ ರೇಸ್ನಲ್ಲಿ ಕೆ.ಎಲ್ ರಾಹುಲ್ ಮುಂಚೂಣಿಯಲ್ಲಿದ್ದಾರೆ. ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ರಾಹುಲ್ಗೆ ನಾಯಕನಾಗಿ ತಂಡವನ್ನ ಮುನ್ನಡೆಸಿದ ಅನುಭವವೂ ಇದೆ. ಗಂಭೀರ್ ಲಕ್ನೋ ತಂಡದ ಮೆಂಟರ್ ಆಗಿದ್ದಾಗ ರಾಹುಲ್ ನಾಯಕನಾಗಿದ್ರು. ರಾಹುಲ್ ಸಾಮರ್ಥ್ಯದ ಬಗ್ಗೆ ಗಂಭೀರ್ಗೆ ಅರಿವಿರೋದ್ರಿಂದ ಕನ್ನಡಿಗನಿಗೆ ಅದೃಷ್ಟ ಒಲಿಯೋ ಸಾಧ್ಯತೆಯಿದೆ.
ಶ್ರೇಯಸ್ ಅಯ್ಯರ್ಗೆ ಮಣೆ ಹಾಕ್ತಾರಾ.?
ಟೀಮ್ ಇಂಡಿಯಾದಿಂದ ಕೆಲ ಕಾಲದಿಂದ ಹೊರಬಿದ್ದಿರೋ ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಿ ನಾಯಕನಾದ್ರೂ ಅಚ್ಚರಿ ಪಡಬೇಕಿಲ್ಲ. ಗಂಭೀರ್ ಹಾಗೂ ಶ್ರೇಯಸ್ ಒಟ್ಟಾಗಿ ಕೆಲಸ ಮಾಡಿ ಕೆಕೆಆರ್ ತಂಡವನ್ನ ಚಾಂಪಿಯನ್ ಮಾಡಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚನ್ನಾಗಿದೆ. ಶ್ರೇಯಸ್ ವಯಸ್ಸು 29 ಆಗಿದ್ದು, ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗಿ ಬೆಳೆಸಬಹುದು. ಹೀಗಾಗಿ ಶ್ರೇಯಸ್ಗೆ ಮಣೆ ಹಾಕಿದ್ರೂ ಅಚ್ಚರಿಪಡಬೇಕಿಲ್ಲ.
ಡೇರ್ ಡೆವಿಲ್ ಪಂತ್ಗೆ ಪಟ್ಟ ಕಟ್ತಾರಾ.?
ಯುವ ಆಟಗಾರ ರಿಷಬ್ ಪಂತ್ರನ್ನ ಬಹು ಹಿಂದಿನಿಂದಲೇ ಬಿಸಿಸಿಐ ಮಟ್ಟದಲ್ಲಿ ಭವಿಷ್ಯದ ಕ್ಯಾಪ್ಟನ್ ಆಗಿ ಬೆಳೆಸೋ ಪ್ರಯತ್ನ ನಡೆದಿತ್ತು. ಪಂತ್ಗೆ ಅಪಘಾತವಾದ ಬಳಿಕ ಆ ಪ್ಲಾನ್ ನಿಂತಿತ್ತು. ಇದೀಗ ಪಂತ್ ಸಾಲಿಡ್ ಕಮ್ಬ್ಯಾಕ್ ಮಾಡಿದ್ದಾರೆ. ಮೂರೂ ಫಾರ್ಮೆಟ್ನಲ್ಲಿ ಪಂತ್ ಸಾಮರ್ಥ್ಯ ನಿರೂಪಿಸಿರೋದ್ರಿಂದ, ಮತ್ತೆ ನಾಯಕತ್ವಕ್ಕೆ ಪರಿಗಣಿಸೋ ಸಾಧ್ಯತೆಯಿದೆ.
ಇದನ್ನೂ ಓದಿ: PUC ರಿಸಲ್ಟ್ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ
ವೈಟ್ ಬಾಲ್ ಫಾರ್ಮೆಟ್ಗೇ ಹಾರ್ದಿಕ್ ನಾಯಕ.?
ಸದ್ಯ ಟಿ20 ಫಾರ್ಮೆಟ್ನ ಖಾಯಂ ನಾಯಕನಾಗಿ ಹಾರ್ದಿಕ್ ಪಾಂಡ್ಯ ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ಟಿ20 ಸರಣಿಯಲ್ಲೂ ಹಾರ್ದಿಕ್ ತಂಡವನ್ನ ಮುನ್ನಡೆಸೋದು ಬಹುತೇಕ ಪಕ್ಕಾ ಆಗಿದೆ. ಇದೇ ಹಾರ್ದಿಕ್ ಏಕದಿನ ತಂಡಕ್ಕೂ ನಾಯಕನಾದ್ರೂ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ, ಕೋಚ್ ಹುದ್ದೆಗೆ ಗಂಭೀರ್ ನೇಮಕ ಮಾಡುವ ಸಂದರ್ಭದಲ್ಲಿ ಬಿಸಿಸಿಐ ಹಾರ್ದಿಕ್ ಜೊತೆ ಮಾತ್ರ ಚರ್ಚಿಸಿತ್ತು. ಈ ಚರ್ಚೆ ಭವಿಷ್ಯದ ನಾಯಕನ ಸುಳಿವು ನೀಡಿದೆ. ಹೀಗಾಗಿ ವೈಟ್ಬಾಲ್ ಫಾರ್ಮೆಟ್ಗೆ ಹಾರ್ದಿಕ್ ನಾಯಕನಾಗಿ ನೇಮಕವಾದ್ರೂ ಅಚ್ಚರಿಯಿಲ್ಲ.
ಇದನ್ನೂ ಓದಿ: ರಿಷಬ್ ಪಂತ್ಗೆ ಸಾಥ್ ಕೊಡ್ತಾರಾ ರಾಹುಲ್ ದ್ರಾವಿಡ್.. ಡೆಲ್ಲಿ ಕ್ಯಾಪಿಟಲ್ಸ್ಗೆ ಕೋಚ್ ಆಗ್ತಾರಾ ಕನ್ನಡಿಗ?
ತಂಡದ ಹಿರಿಯ ವೇಗಿ ಜಸ್ಪ್ರಿತ್ ಬೂಮ್ರಾಗೆ ನಾಯಕನ ಪಟ್ಟ ಒಲಿಯೋ ಸಾಧ್ಯತೆ ಇದೆ. ತಂಡವನ್ನ ಸಮರ್ಥವಾಗಿ ಮುನ್ನಡೆಸೋ ಸಾಮರ್ಥ್ಯ ಪ್ಲಸ್ ಅಪಾರ ಅನುಭವ ಹಾಗೂ ಚಾಣಾಕ್ಷತೆ ಬೂಮ್ರಾಗಿದೆ. ಬೂಮ್ರಾ ಜೊತೆಗೆ ಜಿಂಬಾಬ್ವೆ ಪ್ರವಾಸದಲ್ಲಿ ನಾಯಕತ್ವದ ಟೆಸ್ಟ್ ಪಾಸ್ ಆಗಿರೋ ಶುಭ್ಮನ್ ಗಿಲ್ ಕೂಡ ಕ್ಯಾಪ್ಟನ್ಸಿ ರೇಸ್ನಲ್ಲಿದ್ದಾರೆ. ನಾಯಕನ ಪಟ್ಟಕ್ಕಾಗಿ ಹಲವರ ನಡುವೆ ರೇಸ್ ಏರ್ಪಟ್ಟಿದ್ದು, ಕೋಚ್ ಗೌತಮ್ ಗಂಭೀರ್, ಸೆಲೆಕ್ಟರ್ ಅಜಿತ್ ಅಗರ್ಕರ್ ಯಾರಿಗೆ ಮಣೆ ಹಾಕ್ತಾರೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಹೊಸ ಟೀಮ್ ಸೆಲೆಕ್ಷನ್ಗೂ ಮುನ್ನ ಕಮಿಟಿಗೆ ಹೊಸ ತಲೆನೋವು!
ಏಕದಿನ ಫಾರ್ಮೆಟ್ಗೆ ಕನ್ನಡಿಗ ಕೆ.ಎಲ್ ರಾಹುಲ್ ಆಗ್ತಾರಾ ನಾಯಕ?
ಮುಂದಿನ ಏಕದಿನ ವಿಶ್ವಕಪ್ ಯಾವಾಗ, ಹಿಟ್ಮ್ಯಾನ್ ಇರ್ತಾರಾ?
ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಸೆಲೆಕ್ಷನ್ಗೆ ಕೌಂಟ್ಡೌನ್ ಶುರುವಾಗಿದ್ದು, ಏಕದಿನ ಸರಣಿಗೆ ಟೀಮ್ ಸೆಲೆಕ್ಷನ್ ದೊಡ್ಡ ತಲೆನೋವು ತಂದಿಟ್ಟಿದೆ. ರೋಹಿತ್ ಶರ್ಮಾ ಉತ್ತರಾಧಿಕಾರಿಯನ್ನ ನೇಮಿಸೋ ದೊಡ್ಡ ಜವಾಬ್ದಾರಿ ಅಜಿತ್ ಅಗರ್ಕರ್, ಗೌತಮ್ ಗಂಭೀರ್ ಹೆಗಲೇರಿದೆ. ನಾಯಕನ ಪಟ್ಟವೇರಲು ಆಟಗಾರರ ದಂಡೇ ರೆಡಿಯಿದೆ. ಇರೋವ್ರಲ್ಲಿ ಒಬ್ಬರನ್ನ ಆಯ್ಕೆ ಮಾಡೋದೆ ಸವಾಲಾಗಿದೆ.
ಇದನ್ನೂ ಓದಿ: PUC ರಿಸಲ್ಟ್ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ
ಜಿಂಬಾಬ್ವೆ ಪ್ರವಾಸದ ದಿಗ್ವಿಜಯದ ಬೆನ್ನಲ್ಲೇ ಲಂಕೆಗೆ ಹಾರಲು ಟೀಮ್ ಇಂಡಿಯಾ ಸಜ್ಜಾಗಿದೆ. ಜುಲೈ 27ರಿಂದ ಆರಂಭವಾಗಲಿರೋ ಟಿ20 ಹಾಗೂ ಏಕದಿನ ಸರಣಿಗೆ ಸಿದ್ಧತೆಗಳು ಶುರುವಾಗಿವೆ. ಇನ್ನೆರೆಡು ದಿನಗಳಲ್ಲಿ ಟೀಮ್ ಸೆಲೆಕ್ಷನ್ ಮೀಟಿಂಗ್ ನಡೆಯಲಿದೆ. ಅದಕ್ಕೂ ಮುನ್ನ ಹೆಡ್ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮುಂದೆ ನಾಯಕನ ಆಯ್ಕೆಯ ಸವಾಲು ಎದುರಾಗಿದೆ.
ಇದನ್ನೂ ಓದಿ: ಫಿಲ್ಮಿ ರೇಂಜ್ನಲ್ಲಿ ಶೆಡ್ಗೆ ಬೆಂಕಿಯಿಟ್ಟು ಸಾಯಿಸಿದ್ರು.. ಮೃತ ಸಭಾನಾಳ PSI ಕನಸು ಸುಟ್ಟು ಹೋಯ್ತು..
ರೋಹಿತ್ಗೆ ಪರ್ಯಾಯ ನಾಯಕನನ್ನ ಬೆಳೆಸೋ ಸವಾಲು.!
ಶ್ರೀಲಂಕಾ ಪ್ರವಾಸದ ಏಕದಿನ ಸರಣಿಯಿಂದ ರೋಹಿತ್ ರೆಸ್ಟ್ ಪಡೆಯೋ ಸಾಧ್ಯತೆಯಿದೆ. ಹೀಗಾಗಿ ಏಕದಿನ ತಂಡದ ನಾಯಕನ್ಯಾರು ಎಂಬ ಪ್ರಶ್ನೆ ಹುಟ್ಟಿದೆ. ಮುಂದಿನ ವರ್ಷ ನಡೆಯೋ ಚಾಂಪಿಯನ್ ಟ್ರೋಫಿ ಬಳಿಕ ರೋಹಿತ್ ಏಕದಿನ ಫಾರ್ಮೆಟ್ಗೆ ಗುಡ್ ಬೈ ಹೇಳೋ ಸಾಧ್ಯತೆಯಿದೆ. 2027ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ರೋಹಿತ್ಗೆ ಪರ್ಯಾಯ ನಾಯಕನನ್ನ ಈಗಿನಿಂದಲೇ ಬೆಳೆಸಬೇಕಿದ್ದು, ಗೌತಮ್ ಗಂಭೀರ್ ಮುಂದೆ ಬಿಗ್ ಟಾಸ್ಕ್ ಇದೆ.
ಕನ್ನಡಿಗ ರಾಹುಲ್ಗೆ ಅದೃಷ್ಟ ಒಲಿಯುತ್ತಾ.?
ಏಕದಿನ ನಾಯಕತ್ವದ ರೇಸ್ನಲ್ಲಿ ಕೆ.ಎಲ್ ರಾಹುಲ್ ಮುಂಚೂಣಿಯಲ್ಲಿದ್ದಾರೆ. ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ರಾಹುಲ್ಗೆ ನಾಯಕನಾಗಿ ತಂಡವನ್ನ ಮುನ್ನಡೆಸಿದ ಅನುಭವವೂ ಇದೆ. ಗಂಭೀರ್ ಲಕ್ನೋ ತಂಡದ ಮೆಂಟರ್ ಆಗಿದ್ದಾಗ ರಾಹುಲ್ ನಾಯಕನಾಗಿದ್ರು. ರಾಹುಲ್ ಸಾಮರ್ಥ್ಯದ ಬಗ್ಗೆ ಗಂಭೀರ್ಗೆ ಅರಿವಿರೋದ್ರಿಂದ ಕನ್ನಡಿಗನಿಗೆ ಅದೃಷ್ಟ ಒಲಿಯೋ ಸಾಧ್ಯತೆಯಿದೆ.
ಶ್ರೇಯಸ್ ಅಯ್ಯರ್ಗೆ ಮಣೆ ಹಾಕ್ತಾರಾ.?
ಟೀಮ್ ಇಂಡಿಯಾದಿಂದ ಕೆಲ ಕಾಲದಿಂದ ಹೊರಬಿದ್ದಿರೋ ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಮಾಡಿ ನಾಯಕನಾದ್ರೂ ಅಚ್ಚರಿ ಪಡಬೇಕಿಲ್ಲ. ಗಂಭೀರ್ ಹಾಗೂ ಶ್ರೇಯಸ್ ಒಟ್ಟಾಗಿ ಕೆಲಸ ಮಾಡಿ ಕೆಕೆಆರ್ ತಂಡವನ್ನ ಚಾಂಪಿಯನ್ ಮಾಡಿದ್ದಾರೆ. ಇಬ್ಬರ ಕೆಮಿಸ್ಟ್ರಿ ಚನ್ನಾಗಿದೆ. ಶ್ರೇಯಸ್ ವಯಸ್ಸು 29 ಆಗಿದ್ದು, ಟೀಮ್ ಇಂಡಿಯಾದ ಭವಿಷ್ಯದ ನಾಯಕನಾಗಿ ಬೆಳೆಸಬಹುದು. ಹೀಗಾಗಿ ಶ್ರೇಯಸ್ಗೆ ಮಣೆ ಹಾಕಿದ್ರೂ ಅಚ್ಚರಿಪಡಬೇಕಿಲ್ಲ.
ಡೇರ್ ಡೆವಿಲ್ ಪಂತ್ಗೆ ಪಟ್ಟ ಕಟ್ತಾರಾ.?
ಯುವ ಆಟಗಾರ ರಿಷಬ್ ಪಂತ್ರನ್ನ ಬಹು ಹಿಂದಿನಿಂದಲೇ ಬಿಸಿಸಿಐ ಮಟ್ಟದಲ್ಲಿ ಭವಿಷ್ಯದ ಕ್ಯಾಪ್ಟನ್ ಆಗಿ ಬೆಳೆಸೋ ಪ್ರಯತ್ನ ನಡೆದಿತ್ತು. ಪಂತ್ಗೆ ಅಪಘಾತವಾದ ಬಳಿಕ ಆ ಪ್ಲಾನ್ ನಿಂತಿತ್ತು. ಇದೀಗ ಪಂತ್ ಸಾಲಿಡ್ ಕಮ್ಬ್ಯಾಕ್ ಮಾಡಿದ್ದಾರೆ. ಮೂರೂ ಫಾರ್ಮೆಟ್ನಲ್ಲಿ ಪಂತ್ ಸಾಮರ್ಥ್ಯ ನಿರೂಪಿಸಿರೋದ್ರಿಂದ, ಮತ್ತೆ ನಾಯಕತ್ವಕ್ಕೆ ಪರಿಗಣಿಸೋ ಸಾಧ್ಯತೆಯಿದೆ.
ಇದನ್ನೂ ಓದಿ: PUC ರಿಸಲ್ಟ್ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ
ವೈಟ್ ಬಾಲ್ ಫಾರ್ಮೆಟ್ಗೇ ಹಾರ್ದಿಕ್ ನಾಯಕ.?
ಸದ್ಯ ಟಿ20 ಫಾರ್ಮೆಟ್ನ ಖಾಯಂ ನಾಯಕನಾಗಿ ಹಾರ್ದಿಕ್ ಪಾಂಡ್ಯ ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ಟಿ20 ಸರಣಿಯಲ್ಲೂ ಹಾರ್ದಿಕ್ ತಂಡವನ್ನ ಮುನ್ನಡೆಸೋದು ಬಹುತೇಕ ಪಕ್ಕಾ ಆಗಿದೆ. ಇದೇ ಹಾರ್ದಿಕ್ ಏಕದಿನ ತಂಡಕ್ಕೂ ನಾಯಕನಾದ್ರೂ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ, ಕೋಚ್ ಹುದ್ದೆಗೆ ಗಂಭೀರ್ ನೇಮಕ ಮಾಡುವ ಸಂದರ್ಭದಲ್ಲಿ ಬಿಸಿಸಿಐ ಹಾರ್ದಿಕ್ ಜೊತೆ ಮಾತ್ರ ಚರ್ಚಿಸಿತ್ತು. ಈ ಚರ್ಚೆ ಭವಿಷ್ಯದ ನಾಯಕನ ಸುಳಿವು ನೀಡಿದೆ. ಹೀಗಾಗಿ ವೈಟ್ಬಾಲ್ ಫಾರ್ಮೆಟ್ಗೆ ಹಾರ್ದಿಕ್ ನಾಯಕನಾಗಿ ನೇಮಕವಾದ್ರೂ ಅಚ್ಚರಿಯಿಲ್ಲ.
ಇದನ್ನೂ ಓದಿ: ರಿಷಬ್ ಪಂತ್ಗೆ ಸಾಥ್ ಕೊಡ್ತಾರಾ ರಾಹುಲ್ ದ್ರಾವಿಡ್.. ಡೆಲ್ಲಿ ಕ್ಯಾಪಿಟಲ್ಸ್ಗೆ ಕೋಚ್ ಆಗ್ತಾರಾ ಕನ್ನಡಿಗ?
ತಂಡದ ಹಿರಿಯ ವೇಗಿ ಜಸ್ಪ್ರಿತ್ ಬೂಮ್ರಾಗೆ ನಾಯಕನ ಪಟ್ಟ ಒಲಿಯೋ ಸಾಧ್ಯತೆ ಇದೆ. ತಂಡವನ್ನ ಸಮರ್ಥವಾಗಿ ಮುನ್ನಡೆಸೋ ಸಾಮರ್ಥ್ಯ ಪ್ಲಸ್ ಅಪಾರ ಅನುಭವ ಹಾಗೂ ಚಾಣಾಕ್ಷತೆ ಬೂಮ್ರಾಗಿದೆ. ಬೂಮ್ರಾ ಜೊತೆಗೆ ಜಿಂಬಾಬ್ವೆ ಪ್ರವಾಸದಲ್ಲಿ ನಾಯಕತ್ವದ ಟೆಸ್ಟ್ ಪಾಸ್ ಆಗಿರೋ ಶುಭ್ಮನ್ ಗಿಲ್ ಕೂಡ ಕ್ಯಾಪ್ಟನ್ಸಿ ರೇಸ್ನಲ್ಲಿದ್ದಾರೆ. ನಾಯಕನ ಪಟ್ಟಕ್ಕಾಗಿ ಹಲವರ ನಡುವೆ ರೇಸ್ ಏರ್ಪಟ್ಟಿದ್ದು, ಕೋಚ್ ಗೌತಮ್ ಗಂಭೀರ್, ಸೆಲೆಕ್ಟರ್ ಅಜಿತ್ ಅಗರ್ಕರ್ ಯಾರಿಗೆ ಮಣೆ ಹಾಕ್ತಾರೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ