ಕೇರಳದ ಅನಂತ ಪದ್ಮನಾಭನ ಸಂಪತ್ತಿನ ರೀತಿಯಲ್ಲೇ ಸಂಪತ್ತಿದ್ಯಾ?
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಭಾರೀ ಸಂಪತ್ತು ಇರುವ ಬಗ್ಗೆ ಚರ್ಚೆ
ಕೋಣೆಯಲ್ಲಿದ್ಯಾ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
ಪುರಿ ಜಗನ್ನಾಥ. ಬಂಗಾಳ ಕೊಲ್ಲಿಯ ಕಡಲತಡಿಯಲ್ಲಿ ನೆಲೆನಿಂತ ಜಗದೋದ್ಧಾರಕ. ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಹೋದಧಿಯ ನೆಲ ಇದು. ಈ ಜಗದೊಡೆಯ ಜಗನ್ನಾಥ, ಸಿರಿ ಸಂಪತ್ತಿನಿಂದ ಇಡೀ ಜಗತ್ತನ್ನೇ ಬೆರಗು ಮಾಡ್ತಿದ್ದಾನೆ. ಸದ್ಯ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ ಬಯಲಾಗುವ ಸಮಯ ಬಂದಿದೆ. ಕೋಟ್ಯಂತರ ಭಕ್ತರನ್ನು ಹೊಂದಿರುವ ದೇವಾಲಯ ಇವತ್ತು ಮಹಾ ಪವಾಡಕ್ಕೆ ಸಾಕ್ಷಿಯಾಗಿದೆ. ಅರ್ಥಾರ್ಥ್ ಬರೋಬ್ಬರಿ 46 ವರ್ಷಗಳ ನಂತರ ರಾಜ್ಯ ಬಿಜೆಪಿ ಸರ್ಕಾರ ರತ್ನ ಖಚಿತ ಭಂಡಾರದ ಕೋಣೆಯ ಬಾಗಿಲುಗಳನ್ನು ನಿನ್ನೆ ಸುಮಾರು ಮಧ್ಯಾಹ್ನ 1.48ರ ಶುಭ ಮೂಹರ್ತದಲ್ಲಿ ಓಪನ್ ಮಾಡಿದ್ದು, ಈ ಸುದ್ದಿಯನ್ನು ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!
ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಕೋಣೆಯ 4 ಬಾಗಿಲುಗಳನ್ನ ದೇವಾಲಯ ಸಮಿತಿಯ 16 ಸದಸ್ಯರು, ಸಾಂಪ್ರಾದಾಯಿಕ ಉಡುಗೆ ತೊಟ್ಟು, ಪೂಜೆ ಸಲ್ಲಿಸಿ ಓಪನ್ ಮಾಡಿದ್ದಾರೆ. ದೇವಾಲಯ ಸಮಿತಿಯ ಸದಸ್ಯರಿಗೆ ರತ್ನ ಭಂಡಾರದ ಬಾಗಿಲನ್ನು ಕೀಲಿ ಕೈಯಿಂದ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಟರ್ ಬಳಸಿ ಓಪನ್ ಮಾಡಲಾಗಿದೆ. ರತ್ನ ಭಂಡಾರದ ಬಾಗಿಲು ತೆರೆಯುತ್ತಿದ್ದಂತೆ ಸ್ಥಳದಲ್ಲಿದ್ದ SP ಪಿನಾಕ್ ಮಿರ್ಶಾ ಅವರು ಮೂರ್ಛೆ ಹೋಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಪುರಿ ಜಗನ್ನಾಥ ಸನ್ನಿಧಿಯಲ್ಲಿ ಅಧಿಕಾರಿಗಳಿಗೆ ಕಂಡ ರತ್ನ ಭಂಡಾರದ ಬಗ್ಗೆ ಹಾಗೂ ರಹಸ್ಯ ಕೋಣೆಯ ಬಗ್ಗೆ ಸಾಕಷ್ಟು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.
ರತ್ನ ಭಂಡಾರ ಕೋಣೆಗಿದೆ ನಾಗಬಂಧ ರಕ್ಷಣೆ
ದೇವಾಲಯದ ನಿಧಿಗೆ ಸರ್ಪಗಳ ಕಾವಲಿರುತ್ತೆ ಅನ್ನೋ ನಂಬಿಕೆ ಇದೆ. ದೇವತೆಗಳ ಬೆಲೆಬಾಳುವ ವಸ್ತುಗಳನ್ನ ಸರ್ಪಗಳ ಗುಂಪು ಬಹಳ ನಿಷ್ಠೆಯಿಂದ ಕಾಪಾಡುತ್ತವೆ ಎಂಬ ದಂತಕಥೆಗಳಿವೆ. ಆ ಕಾರಣಕ್ಕೆ ಖಜಾನೆ ತೆರೆಯುವ ಸಂದರ್ಭದಲ್ಲಿ ಉರಗ ತಜ್ಞರು, ವೈದ್ಯರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯ ತಂಡಗಳನ್ನು ಸ್ಟ್ಯಾಂಡ್ಬೈನಲ್ಲಿ ಇರಿಸಿದ್ದು, ರತ್ನ ಭಂಡಾರವನ್ನ ತೆರೆದಿದ್ದಾರೆ. ಈ ಭಂಡಾರದಲ್ಲಿ ಅಮೂಲ್ಯ ಲೋಹಗಳು, ಪುರಾತನ ಆಭರಣಗಳಿವೆ. ಇದಷ್ಟೇ ಅಲ್ಲ, ಪುರಿ ಜಗನ್ನಾಥ ದೇವಾಲಯ ಅಚ್ಚರಿಗಳ ಆಗರ, ವಿಜ್ಞಾನಕ್ಕೆ ಸೆಡ್ಡು ಹೊಡೆಯೋ ವಿಸ್ಮಯಗಳ ತಾಣ ಅಂದ್ರು ತಪ್ಪಾಗಲ್ಲ.
ದೇವಾಲಯದ ಮೇಲಿರುವ ಧ್ವಜ
ಈ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಧ್ವಜವಿದೆ. ಈ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತೆ. ವೈಜ್ಞಾನಿಕ ಸಂಗತಿಗಳಿಗೆ ಸವಾಲನ್ನು ಒಡ್ಡುವ ಈ ಸಂಗತಿಯು, ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿಗೆ ಸಾಕ್ಷಿಯಾಗಿದೆ.
ದೇವಾಲಯ ಮೇಲಿನ ಸುದರ್ಶನ ಚಕ್ರ
ಇನ್ನ, ದೇವಸ್ಥಾನದ ಮೇಲಿರುವ ಸುದರ್ಶನ ಚಕ್ರ 20 ಅಡಿ ಎತ್ತರ ಮತ್ತು ಒಂದು ಟನ್ ತೂಕ ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಏನೆಂದರೆ ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣತ್ತೆ. ಜೊತೆಗೆ ಎಲ್ಲಿಯೇ ನಿಂತು ನೋಡಿದರೂ ಅದರ ಮುಖ ನಿಮ್ಮೆಡೆಗೆ ಇರೋತರಾನೇ ಭಾಸವಾಗತ್ತೆ.
ಹಾರಾಡಲ್ಲ ಹಕ್ಕಿ, ಕೀಟ ಮತ್ತು ವಿಮಾನ
ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನ ಹೊಂದಿರುವ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು, ಸಣ್ಣ ಕೀಟಗಳು, ವಿಮಾನಗಳು ಹಾರೋದಿಲ್ಲ. ಇದೇ ಕಾರಣಕ್ಕೆ ಇದು ಚಕ್ರಕ್ಕೆ ಇರೋ ದೈವ ಶಕ್ತಿ ಅಂತ ನಂಬಲಾಗಿದೆ.
ಮರದ ವಿಗ್ರಹ
ಹೌದು, ಇಷ್ಟು ರತ್ನ ಭಂಡಾರವನ್ನೇ ಹೊಂದಿರುವ ದೇವಾಲಯದ ಒಳಗೆ ಇರುವ ಜಗನ್ನಾಥ ಅಂದ್ರೆ ಸಾಕ್ಷಾತ್ ಕೃಷ್ಣನ ವಿಗ್ರಹ ಮರದಿಂದ ಮಾಡಲಾಗಿರುತ್ತೆ. ಈ ವಿಗ್ರಹವನ್ನ 12 ವರ್ಷಕ್ಕೊಮ್ಮೆ ಬದಲಾವಣೆ ಮಾಡಲಾಗತ್ತೆ. ಅದ್ರಲ್ಲೂ ಈ ವಿಗ್ರಹ ಕೆತ್ತನೆಗೆ ಪವಿತ್ರ ಬೇವಿನ ಮರವನ್ನೇ ಬಳಸಲಾಗತ್ತೆ. 21 ದಿನಗಳ ಅವಧಿಯಲ್ಲಿ ಈ ವಿಗ್ರಹವನ್ನ ಆಯ್ದ ವ್ಯಕ್ತಿಗಳಿಂದಲೇ ಮಾಡಿಸಲಾಗತ್ತೆ. ಅಚ್ಚರಿ ಅಂದ್ರೆ ಈ ವಿಗ್ರಹವನ್ನ ಕೆತ್ತನೆ ಮಾಡಿದವರು ಕೂಡ ನೋಡುವಂತಿಲ್ಲ. ಅವರ ಕಣ್ಣಿಗೆ ಪಟ್ಟಿ ಕಟ್ಟಲಾಗಿರತ್ತೆ. ಜೊತೆಗೆ ಯಾರು ನೋಡಬಾರದು ಎಂಬ ಕಾರಣ ವಿಗ್ರಹ ಪ್ರತಿಷ್ಠಾಪನೆಯ ದಿನ ಕರೆಂಟ್ ಕಟ್ ಮಾಡತ್ತೆ ಇಲ್ಲಿನ ಸರ್ಕಾರ. ಜಗನ್ನಾಥನ ಹೃದಯ ಇಲ್ಲಿ ಹಾಗೆಯೇ ಇದೆ ಎನ್ನಲಾಗಿದ್ದು, ಪ್ರತಿ ಬಾರಿ ಮೂರ್ತಿ ಬದಲಾವಣೆಯ ಸಂಧರ್ಭದಲ್ಲಿ ಆ ಹೃದಯವನ್ನ ಇದರಲ್ಲಿ ಪುನಃ ಪ್ರತಿಷ್ಠಾಪನೆ ಮಾಡಲಾಗತ್ತೆ. ಜೊತೆಗೆ ಹಳೆಯ ಮೂರ್ತಿಯನ್ನ ಹೂಳಲಾಗತ್ತಂತೆ.
ಇದನ್ನೂ ಓದಿ: ಮುಕೇಶ್ ಅಂಬಾನಿ ಅಲ್ಲವೇ ಅಲ್ಲ.. ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಹೆಚ್ಚು ಷೇರು ಹೊಂದಿರೋದು ಯಾರು ಗೊತ್ತೇ..?
ನೆರಳು ಇಲ್ಲ
ರತ್ನ ಭಂಡಾರದ ಜೊತೆಗೆ ಪುರಿ ದೇವಾಲಯದ ಇನ್ನೊಂದು ವಿಶೇಷ ಅಂದ್ರೆ ಇಲ್ಲಿ ನೆರಳು ಬೀಳದೆ ಇರೋದು. ದೇವಾಲಯದ ಒಳಗೆ ಮತ್ತು ಹೊರಗೆ ಯಾವುದೇ ಸಮಯದಲ್ಲಿ ನೆರಳು ಬಿಳೋದಿಲ್ಲ, ಆ ರೀತಿಯಾಗಿ ದೇವಾಲಯದ ವಾಸ್ತುಶಿಲ್ಪ ರಚನೆ ಮಾಡಲಾಗಿದೆ.
ಪ್ರಸಾದದ ಮಹಿಮೆ
ಇನ್ನು, ಇಲ್ಲಿ ಎಷ್ಟೇ ಜನ ಬಂದ್ರು ಪ್ರಸಾದಕ್ಕೆ ಎಂದು ಕೂಡ ಕಡಿಮೆಯಾಗೋದಿಲ್ಲ. ಜೊತೆಗೆ ಪ್ರಸಾದ ತಯಾರಿಸುವ ಪ್ರಕ್ರಿಯೆ ಕೂಡ ತುಂಬಾ ಅಚ್ಚರಿ ಹುಟ್ಟಿಸಿತ್ತೆ. ಸುಮಾರು 7 ಮಣ್ಣಿನ ಮಡಿಕೆಯಲ್ಲಿ ಒಂದರ ಮೇಲೊಂದರಂತೆ ಇರಿಸಲಾಗುತ್ತದೆ. ಬುಡದಲ್ಲಿ ಮಾಯ ಪಾತ್ರೆ ಇರತ್ತೋ ಅದಕ್ಕೆ ಮಾತ್ರ ಬೆಂಕಿಯಲ್ಲಿ ಬೇಯಿಸಲಾಗುತ್ತೆ. ಆದ್ರೆ, ಅಚ್ಚರಿ ಅಂದ್ರೆ ಮೇಲಿರುವ ಪಾತ್ರೆಯಲ್ಲಿ ಪ್ರಸಾದ ಮೊದಲು ಬೇಯುತ್ತದೆ ಆ ನಂತರದಲ್ಲಿ ಬುಡದಲ್ಲಿದ್ದ ಪಾತ್ರೆಯ ಪ್ರಸಾದ ಬೇಯುತ್ತದೆ.
ಅಲೆಗಳ ಶಬ್ಧವಿಲ್ಲ
ಒಮ್ಮೆ ನೀವು ದೇವಾಲಯದ ಒಳಗೆ ಎಂಟ್ರಿ ಕೊಟ್ರೆ ಪಕ್ಕದಲ್ಲೇ ಇರುವ ಸಮುದ್ರದ ಸದ್ದು ಕೂಡ ಕೇಳಿಸುವುದಿಲ್ಲ. ಆ ಮಟ್ಟಿಗೆ ದೇವಾಲಯದ ಒಳಗೆ ಪ್ರಶಾಂತತೆ ಇರಲಿದೆ. ನಿಶಬ್ಧ ಅಂದ್ರೆ ಏನು ಅನ್ನೋದನ್ನ ಜಗನ್ನಾಥನ ಸನ್ನಿಧಿಯಲ್ಲಿ ನೋಡಬಹುದು.
1800 ವರ್ಷಗಳ ಹಳೆಯ ಆಚರಣೆ
ಈ ದೇವಾಲಯದಲ್ಲಿ ಪ್ರತಿದಿನ ಅರ್ಚಕರು ಸುಮಾರು 1000 ಅಡಿ ಎತ್ತರದಲ್ಲಿರುವ ಗೋಪುರಗಳನ್ನು ಹತ್ತಿ, ಬಾವುಟಗಳನ್ನು ಬದಲಿಸುತ್ತಾರೆ. ಈ ಆಚರಣೆಯು 1800 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈ ಆಚರಣೆಯು ಅನಿರೀಕ್ಷಿತವಾಗಿ ತಪ್ಪಿದರೆ ಮುಂದಿನ 18 ವರ್ಷಗಳ ಕಾಲ ದೇವಾಲಯ ಮುಚ್ಚಲ್ಪಡುತ್ತದೆ ಎಂಬ ನಂಬಿಕೆ ಇದೆ. ರಹಸ್ಯ ಕೋಣೆ ಒಂದರಲ್ಲಿ ದೇವಸ್ಥಾನದಲ್ಲಿ ಬಳಸುವ ಆಭರಣಗಳು ಇವೆ.
2ನೇ ಕೋಣೆಯಲ್ಲಿ ಇದೀಗ ಶೋಧ ಕಾರ್ಯ ನಡಿತಾಯಿದೆ. ಈ ಕೋಣೆಯಲ್ಲೇ ರಾಜರು ದಾನವಾಗಿ ಕೊಟ್ಟಿರೋ ಅಪಾರವಾದ ವಜ್ರ-ವೈಡೂರ್ಯಗಳಿವೆ. ರಹಸ್ಯವಾಗಿಯೇ ಉಳಿದಿರೋ ದೇಗುಲದ 3ನೇ ಕೋಣೆಯಲ್ಲಿ, ‘ನಾಗಬಂಧ’ ರಕ್ಷಣೆಯಿದ್ದು, ಇದುವರೆಗೂ ಯಾರ ಪ್ರವೇಶಕ್ಕೂ ಸಾಧ್ಯವಾಗದ ನಿಗೂಢವಾಗಿದೆ. ಈ ಕೋಣೆಯಿಂದ ಸುರಂಗ ಮಾರ್ಗವೂ ಇದೆ ಎಂಬ ನಂಬಿಕೆ ಇದೆ. ಸದ್ಯ ರತ್ನ ಭಂಡಾರದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳಿವೆ ಅನ್ನೋದು ಖಚಿತ. ವಿಶೇಷ ತಂಡ 6 ಪೆಟ್ಟಿಗೆಗಳನ್ನ ತೆಗೆದುಕೊಂಡು ಹೋಗಿದ್ದು, ಕೋಣೆಯಲ್ಲಿ ಶೋಧ ನಡೆಸ್ತಾಯಿದೆ. ಯಾವ ಪ್ರಮಾಣದಲ್ಲಿದೆ ಅನ್ನೋದು ಮುಂದಿನ ದಿನಗಳಲ್ಲಿ ಹೊರಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೇರಳದ ಅನಂತ ಪದ್ಮನಾಭನ ಸಂಪತ್ತಿನ ರೀತಿಯಲ್ಲೇ ಸಂಪತ್ತಿದ್ಯಾ?
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಭಾರೀ ಸಂಪತ್ತು ಇರುವ ಬಗ್ಗೆ ಚರ್ಚೆ
ಕೋಣೆಯಲ್ಲಿದ್ಯಾ ಬಂಗಾರ, ಮುತ್ತು, ರತ್ನ, ಹವಳ, ಬೆಳ್ಳಿ ಸಾಮಾಗ್ರಿಗಳು
ಪುರಿ ಜಗನ್ನಾಥ. ಬಂಗಾಳ ಕೊಲ್ಲಿಯ ಕಡಲತಡಿಯಲ್ಲಿ ನೆಲೆನಿಂತ ಜಗದೋದ್ಧಾರಕ. ಪವಿತ್ರ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಹೋದಧಿಯ ನೆಲ ಇದು. ಈ ಜಗದೊಡೆಯ ಜಗನ್ನಾಥ, ಸಿರಿ ಸಂಪತ್ತಿನಿಂದ ಇಡೀ ಜಗತ್ತನ್ನೇ ಬೆರಗು ಮಾಡ್ತಿದ್ದಾನೆ. ಸದ್ಯ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ ಬಯಲಾಗುವ ಸಮಯ ಬಂದಿದೆ. ಕೋಟ್ಯಂತರ ಭಕ್ತರನ್ನು ಹೊಂದಿರುವ ದೇವಾಲಯ ಇವತ್ತು ಮಹಾ ಪವಾಡಕ್ಕೆ ಸಾಕ್ಷಿಯಾಗಿದೆ. ಅರ್ಥಾರ್ಥ್ ಬರೋಬ್ಬರಿ 46 ವರ್ಷಗಳ ನಂತರ ರಾಜ್ಯ ಬಿಜೆಪಿ ಸರ್ಕಾರ ರತ್ನ ಖಚಿತ ಭಂಡಾರದ ಕೋಣೆಯ ಬಾಗಿಲುಗಳನ್ನು ನಿನ್ನೆ ಸುಮಾರು ಮಧ್ಯಾಹ್ನ 1.48ರ ಶುಭ ಮೂಹರ್ತದಲ್ಲಿ ಓಪನ್ ಮಾಡಿದ್ದು, ಈ ಸುದ್ದಿಯನ್ನು ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!
ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಕೋಣೆಯ 4 ಬಾಗಿಲುಗಳನ್ನ ದೇವಾಲಯ ಸಮಿತಿಯ 16 ಸದಸ್ಯರು, ಸಾಂಪ್ರಾದಾಯಿಕ ಉಡುಗೆ ತೊಟ್ಟು, ಪೂಜೆ ಸಲ್ಲಿಸಿ ಓಪನ್ ಮಾಡಿದ್ದಾರೆ. ದೇವಾಲಯ ಸಮಿತಿಯ ಸದಸ್ಯರಿಗೆ ರತ್ನ ಭಂಡಾರದ ಬಾಗಿಲನ್ನು ಕೀಲಿ ಕೈಯಿಂದ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಟರ್ ಬಳಸಿ ಓಪನ್ ಮಾಡಲಾಗಿದೆ. ರತ್ನ ಭಂಡಾರದ ಬಾಗಿಲು ತೆರೆಯುತ್ತಿದ್ದಂತೆ ಸ್ಥಳದಲ್ಲಿದ್ದ SP ಪಿನಾಕ್ ಮಿರ್ಶಾ ಅವರು ಮೂರ್ಛೆ ಹೋಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಪುರಿ ಜಗನ್ನಾಥ ಸನ್ನಿಧಿಯಲ್ಲಿ ಅಧಿಕಾರಿಗಳಿಗೆ ಕಂಡ ರತ್ನ ಭಂಡಾರದ ಬಗ್ಗೆ ಹಾಗೂ ರಹಸ್ಯ ಕೋಣೆಯ ಬಗ್ಗೆ ಸಾಕಷ್ಟು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.
ರತ್ನ ಭಂಡಾರ ಕೋಣೆಗಿದೆ ನಾಗಬಂಧ ರಕ್ಷಣೆ
ದೇವಾಲಯದ ನಿಧಿಗೆ ಸರ್ಪಗಳ ಕಾವಲಿರುತ್ತೆ ಅನ್ನೋ ನಂಬಿಕೆ ಇದೆ. ದೇವತೆಗಳ ಬೆಲೆಬಾಳುವ ವಸ್ತುಗಳನ್ನ ಸರ್ಪಗಳ ಗುಂಪು ಬಹಳ ನಿಷ್ಠೆಯಿಂದ ಕಾಪಾಡುತ್ತವೆ ಎಂಬ ದಂತಕಥೆಗಳಿವೆ. ಆ ಕಾರಣಕ್ಕೆ ಖಜಾನೆ ತೆರೆಯುವ ಸಂದರ್ಭದಲ್ಲಿ ಉರಗ ತಜ್ಞರು, ವೈದ್ಯರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯ ತಂಡಗಳನ್ನು ಸ್ಟ್ಯಾಂಡ್ಬೈನಲ್ಲಿ ಇರಿಸಿದ್ದು, ರತ್ನ ಭಂಡಾರವನ್ನ ತೆರೆದಿದ್ದಾರೆ. ಈ ಭಂಡಾರದಲ್ಲಿ ಅಮೂಲ್ಯ ಲೋಹಗಳು, ಪುರಾತನ ಆಭರಣಗಳಿವೆ. ಇದಷ್ಟೇ ಅಲ್ಲ, ಪುರಿ ಜಗನ್ನಾಥ ದೇವಾಲಯ ಅಚ್ಚರಿಗಳ ಆಗರ, ವಿಜ್ಞಾನಕ್ಕೆ ಸೆಡ್ಡು ಹೊಡೆಯೋ ವಿಸ್ಮಯಗಳ ತಾಣ ಅಂದ್ರು ತಪ್ಪಾಗಲ್ಲ.
ದೇವಾಲಯದ ಮೇಲಿರುವ ಧ್ವಜ
ಈ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಧ್ವಜವಿದೆ. ಈ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತೆ. ವೈಜ್ಞಾನಿಕ ಸಂಗತಿಗಳಿಗೆ ಸವಾಲನ್ನು ಒಡ್ಡುವ ಈ ಸಂಗತಿಯು, ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿಗೆ ಸಾಕ್ಷಿಯಾಗಿದೆ.
ದೇವಾಲಯ ಮೇಲಿನ ಸುದರ್ಶನ ಚಕ್ರ
ಇನ್ನ, ದೇವಸ್ಥಾನದ ಮೇಲಿರುವ ಸುದರ್ಶನ ಚಕ್ರ 20 ಅಡಿ ಎತ್ತರ ಮತ್ತು ಒಂದು ಟನ್ ತೂಕ ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಏನೆಂದರೆ ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣತ್ತೆ. ಜೊತೆಗೆ ಎಲ್ಲಿಯೇ ನಿಂತು ನೋಡಿದರೂ ಅದರ ಮುಖ ನಿಮ್ಮೆಡೆಗೆ ಇರೋತರಾನೇ ಭಾಸವಾಗತ್ತೆ.
ಹಾರಾಡಲ್ಲ ಹಕ್ಕಿ, ಕೀಟ ಮತ್ತು ವಿಮಾನ
ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನ ಹೊಂದಿರುವ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು, ಸಣ್ಣ ಕೀಟಗಳು, ವಿಮಾನಗಳು ಹಾರೋದಿಲ್ಲ. ಇದೇ ಕಾರಣಕ್ಕೆ ಇದು ಚಕ್ರಕ್ಕೆ ಇರೋ ದೈವ ಶಕ್ತಿ ಅಂತ ನಂಬಲಾಗಿದೆ.
ಮರದ ವಿಗ್ರಹ
ಹೌದು, ಇಷ್ಟು ರತ್ನ ಭಂಡಾರವನ್ನೇ ಹೊಂದಿರುವ ದೇವಾಲಯದ ಒಳಗೆ ಇರುವ ಜಗನ್ನಾಥ ಅಂದ್ರೆ ಸಾಕ್ಷಾತ್ ಕೃಷ್ಣನ ವಿಗ್ರಹ ಮರದಿಂದ ಮಾಡಲಾಗಿರುತ್ತೆ. ಈ ವಿಗ್ರಹವನ್ನ 12 ವರ್ಷಕ್ಕೊಮ್ಮೆ ಬದಲಾವಣೆ ಮಾಡಲಾಗತ್ತೆ. ಅದ್ರಲ್ಲೂ ಈ ವಿಗ್ರಹ ಕೆತ್ತನೆಗೆ ಪವಿತ್ರ ಬೇವಿನ ಮರವನ್ನೇ ಬಳಸಲಾಗತ್ತೆ. 21 ದಿನಗಳ ಅವಧಿಯಲ್ಲಿ ಈ ವಿಗ್ರಹವನ್ನ ಆಯ್ದ ವ್ಯಕ್ತಿಗಳಿಂದಲೇ ಮಾಡಿಸಲಾಗತ್ತೆ. ಅಚ್ಚರಿ ಅಂದ್ರೆ ಈ ವಿಗ್ರಹವನ್ನ ಕೆತ್ತನೆ ಮಾಡಿದವರು ಕೂಡ ನೋಡುವಂತಿಲ್ಲ. ಅವರ ಕಣ್ಣಿಗೆ ಪಟ್ಟಿ ಕಟ್ಟಲಾಗಿರತ್ತೆ. ಜೊತೆಗೆ ಯಾರು ನೋಡಬಾರದು ಎಂಬ ಕಾರಣ ವಿಗ್ರಹ ಪ್ರತಿಷ್ಠಾಪನೆಯ ದಿನ ಕರೆಂಟ್ ಕಟ್ ಮಾಡತ್ತೆ ಇಲ್ಲಿನ ಸರ್ಕಾರ. ಜಗನ್ನಾಥನ ಹೃದಯ ಇಲ್ಲಿ ಹಾಗೆಯೇ ಇದೆ ಎನ್ನಲಾಗಿದ್ದು, ಪ್ರತಿ ಬಾರಿ ಮೂರ್ತಿ ಬದಲಾವಣೆಯ ಸಂಧರ್ಭದಲ್ಲಿ ಆ ಹೃದಯವನ್ನ ಇದರಲ್ಲಿ ಪುನಃ ಪ್ರತಿಷ್ಠಾಪನೆ ಮಾಡಲಾಗತ್ತೆ. ಜೊತೆಗೆ ಹಳೆಯ ಮೂರ್ತಿಯನ್ನ ಹೂಳಲಾಗತ್ತಂತೆ.
ಇದನ್ನೂ ಓದಿ: ಮುಕೇಶ್ ಅಂಬಾನಿ ಅಲ್ಲವೇ ಅಲ್ಲ.. ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಹೆಚ್ಚು ಷೇರು ಹೊಂದಿರೋದು ಯಾರು ಗೊತ್ತೇ..?
ನೆರಳು ಇಲ್ಲ
ರತ್ನ ಭಂಡಾರದ ಜೊತೆಗೆ ಪುರಿ ದೇವಾಲಯದ ಇನ್ನೊಂದು ವಿಶೇಷ ಅಂದ್ರೆ ಇಲ್ಲಿ ನೆರಳು ಬೀಳದೆ ಇರೋದು. ದೇವಾಲಯದ ಒಳಗೆ ಮತ್ತು ಹೊರಗೆ ಯಾವುದೇ ಸಮಯದಲ್ಲಿ ನೆರಳು ಬಿಳೋದಿಲ್ಲ, ಆ ರೀತಿಯಾಗಿ ದೇವಾಲಯದ ವಾಸ್ತುಶಿಲ್ಪ ರಚನೆ ಮಾಡಲಾಗಿದೆ.
ಪ್ರಸಾದದ ಮಹಿಮೆ
ಇನ್ನು, ಇಲ್ಲಿ ಎಷ್ಟೇ ಜನ ಬಂದ್ರು ಪ್ರಸಾದಕ್ಕೆ ಎಂದು ಕೂಡ ಕಡಿಮೆಯಾಗೋದಿಲ್ಲ. ಜೊತೆಗೆ ಪ್ರಸಾದ ತಯಾರಿಸುವ ಪ್ರಕ್ರಿಯೆ ಕೂಡ ತುಂಬಾ ಅಚ್ಚರಿ ಹುಟ್ಟಿಸಿತ್ತೆ. ಸುಮಾರು 7 ಮಣ್ಣಿನ ಮಡಿಕೆಯಲ್ಲಿ ಒಂದರ ಮೇಲೊಂದರಂತೆ ಇರಿಸಲಾಗುತ್ತದೆ. ಬುಡದಲ್ಲಿ ಮಾಯ ಪಾತ್ರೆ ಇರತ್ತೋ ಅದಕ್ಕೆ ಮಾತ್ರ ಬೆಂಕಿಯಲ್ಲಿ ಬೇಯಿಸಲಾಗುತ್ತೆ. ಆದ್ರೆ, ಅಚ್ಚರಿ ಅಂದ್ರೆ ಮೇಲಿರುವ ಪಾತ್ರೆಯಲ್ಲಿ ಪ್ರಸಾದ ಮೊದಲು ಬೇಯುತ್ತದೆ ಆ ನಂತರದಲ್ಲಿ ಬುಡದಲ್ಲಿದ್ದ ಪಾತ್ರೆಯ ಪ್ರಸಾದ ಬೇಯುತ್ತದೆ.
ಅಲೆಗಳ ಶಬ್ಧವಿಲ್ಲ
ಒಮ್ಮೆ ನೀವು ದೇವಾಲಯದ ಒಳಗೆ ಎಂಟ್ರಿ ಕೊಟ್ರೆ ಪಕ್ಕದಲ್ಲೇ ಇರುವ ಸಮುದ್ರದ ಸದ್ದು ಕೂಡ ಕೇಳಿಸುವುದಿಲ್ಲ. ಆ ಮಟ್ಟಿಗೆ ದೇವಾಲಯದ ಒಳಗೆ ಪ್ರಶಾಂತತೆ ಇರಲಿದೆ. ನಿಶಬ್ಧ ಅಂದ್ರೆ ಏನು ಅನ್ನೋದನ್ನ ಜಗನ್ನಾಥನ ಸನ್ನಿಧಿಯಲ್ಲಿ ನೋಡಬಹುದು.
1800 ವರ್ಷಗಳ ಹಳೆಯ ಆಚರಣೆ
ಈ ದೇವಾಲಯದಲ್ಲಿ ಪ್ರತಿದಿನ ಅರ್ಚಕರು ಸುಮಾರು 1000 ಅಡಿ ಎತ್ತರದಲ್ಲಿರುವ ಗೋಪುರಗಳನ್ನು ಹತ್ತಿ, ಬಾವುಟಗಳನ್ನು ಬದಲಿಸುತ್ತಾರೆ. ಈ ಆಚರಣೆಯು 1800 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈ ಆಚರಣೆಯು ಅನಿರೀಕ್ಷಿತವಾಗಿ ತಪ್ಪಿದರೆ ಮುಂದಿನ 18 ವರ್ಷಗಳ ಕಾಲ ದೇವಾಲಯ ಮುಚ್ಚಲ್ಪಡುತ್ತದೆ ಎಂಬ ನಂಬಿಕೆ ಇದೆ. ರಹಸ್ಯ ಕೋಣೆ ಒಂದರಲ್ಲಿ ದೇವಸ್ಥಾನದಲ್ಲಿ ಬಳಸುವ ಆಭರಣಗಳು ಇವೆ.
2ನೇ ಕೋಣೆಯಲ್ಲಿ ಇದೀಗ ಶೋಧ ಕಾರ್ಯ ನಡಿತಾಯಿದೆ. ಈ ಕೋಣೆಯಲ್ಲೇ ರಾಜರು ದಾನವಾಗಿ ಕೊಟ್ಟಿರೋ ಅಪಾರವಾದ ವಜ್ರ-ವೈಡೂರ್ಯಗಳಿವೆ. ರಹಸ್ಯವಾಗಿಯೇ ಉಳಿದಿರೋ ದೇಗುಲದ 3ನೇ ಕೋಣೆಯಲ್ಲಿ, ‘ನಾಗಬಂಧ’ ರಕ್ಷಣೆಯಿದ್ದು, ಇದುವರೆಗೂ ಯಾರ ಪ್ರವೇಶಕ್ಕೂ ಸಾಧ್ಯವಾಗದ ನಿಗೂಢವಾಗಿದೆ. ಈ ಕೋಣೆಯಿಂದ ಸುರಂಗ ಮಾರ್ಗವೂ ಇದೆ ಎಂಬ ನಂಬಿಕೆ ಇದೆ. ಸದ್ಯ ರತ್ನ ಭಂಡಾರದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ಬೆಳ್ಳಿ, ವಜ್ರ ವೈಡೂರ್ಯಗಳಿವೆ ಅನ್ನೋದು ಖಚಿತ. ವಿಶೇಷ ತಂಡ 6 ಪೆಟ್ಟಿಗೆಗಳನ್ನ ತೆಗೆದುಕೊಂಡು ಹೋಗಿದ್ದು, ಕೋಣೆಯಲ್ಲಿ ಶೋಧ ನಡೆಸ್ತಾಯಿದೆ. ಯಾವ ಪ್ರಮಾಣದಲ್ಲಿದೆ ಅನ್ನೋದು ಮುಂದಿನ ದಿನಗಳಲ್ಲಿ ಹೊರಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ