ಭಾರತದ ಕನವರಿಕೆಯಲ್ಲಿ ಮುಳುಗಿದ ಪಾಕ್ ತಂಡ
ಭಾರತ ವಿರುದ್ಧ ಸೋಲಬೇಡಿ ಎಂದ ರಮೀಜ್ ರಾಜಾ
ಪಾಕಿಸ್ತಾನಕ್ಕೆ ಶುರುವಾಗಿದೆ ಟೀಮ್ ಇಂಡಿಯಾ ಭಯ
ಟಿ20 ವಿಶ್ವಕಪ್ನಲ್ಲಿ ಎಲ್ಲಾ ತಂಡಗಳು ಗುರಿ ಒಂದೇ. ಕಪ್ ಗೆಲ್ಲೋದು. ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಆದ್ರೆ ಪಾಕಿಸ್ತಾನದ ಗುರಿ ಮಾತ್ರ ಟೀಮ್ ಇಂಡಿಯಾವನ್ನ ಸೋಲಿಸೋದು. ಅದಕ್ಕಾಗಿ ಹಗಲು ರಾತ್ರಿ ಎನ್ನದೇ ಚಿಂತಿಸ್ತಿದೆ. ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ರಿಕೆಟರ್ಸ್ ಕೂಡ ಭಾರತದ ಸೋಲಿಗೆ ಪಣತೊಟ್ಟಿದ್ದಾರೆ.
ಜೂನ್ 9 ರಂದು ಯಾವೊಬ್ಬ ಇಂಡಿಯನ್ ಕ್ರಿಕೆಟ್ ಪ್ರೇಮಿ ಮರೆಯಲಾಗದ ದಿನ. ಅಂದು ಟಿ20 ವಿಶ್ವಕಪ್ ರಣರಂಗದಲ್ಲಿ ಜಾತ್ರೆ ನಡೆಯಲಿದೆ. ಕ್ರಿಕೆಟ್ ಬದ್ಧವೈರಿಗಳು ಅಖಾಡದಲ್ಲಿ ಎದುರಾಗಲಿದ್ದಾರೆ. ಬಲಿಷ್ಠ ಭಾರತ ತಂಡ ಪಾಕಿಸ್ತಾನ ಎದುರಿಸಲಿದ್ದು, ಈ ಬಿಗ್ ಬ್ಯಾಟಲ್ಗೆ ಇನ್ನೂ 3 ದಿನಗಳಷ್ಟೇ ಬಾಕಿ ಇದ್ದು ತೀವ್ರ ಕುತೂಹಲ ಕೆರಳಿಸಿದೆ. ಭಾನುವಾರ ಪಂದ್ಯ ನಡೆಯುತ್ತಿದ್ರೂ ಪಾಕ್ನ ಗಮನ ಟೀಮ್ ಇಂಡಿಯಾ ಮ್ಯಾಚ್ ಮೇಲೆ ಶಿಫ್ಟ್ ಆಗಿದೆ.
ಕುಂತ್ರೂ, ನಿಂತ್ರೂ ಜೂನ್ 9ರ ಮ್ಯಾಚ್ದೇ ಚಿಂತೆ..!
ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಈ ಒತ್ತಡದ ಗೇಮ್ ಅನ್ನ ಪ್ರತಿಯೊಬ್ಬ ಕ್ರಿಕೆಟ್ ಫ್ಯಾನ್ ಕೂಡ ವೀಕ್ಷಿಸ್ತಾನೆ. ಯಾಕಂದ್ರೆ ಇದು ಒಂದು ಮ್ಯಾಚ್ ಅನ್ನೋದಕ್ಕಿಂತ ಹೆಮ್ಮೆಯ ಸಂಗತಿ. ಇಂತಹ ಮೆಗಾ ಬ್ಯಾಟಲ್ ಗೆಲ್ಲೋದು ಉಭಯ ತಂಡಕ್ಕೂ ಪ್ರತಿಷ್ಠೆ ವಿಚಾರ. ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಪಾಕ್ ಸಾಟಿನೇ ಆಗಿಲ್ಲ. ಮೆನ್ ಇನ್ ಬ್ಲೂ ಪಡೆ ಕಂಪ್ಲೀಟ್ ಡಾಮಿನೆಂಟ್ ಸಾಧಿಸಿದೆ. ಈ ಬಾರಿ ಬಲಿಷ್ಠ ಭಾರತವನ್ನ ಸೋಲಿಸಲು ಪಾಕ್ ಹಪಾಹಪಿಸ್ತಿದೆ. ಪಂದ್ಯ ಶುರುವಿಗೆ 3 ದಿನವಿದ್ರೂ ಆಗಲೇ ಭಾರತ ಪಂದ್ಯದ ಚಿಂತನೆಯಲ್ಲಿ ಮುಳುಗಿದೆ.
T20 ವಿಶ್ವಕಪ್ ಗೆಲ್ಲದಿದ್ರೂ ಪರ್ವಾಗಿಲ್ಲ
ಈ ಎರಡು ಲೈನ್ಗಳೇ ಸಾಕು. ಪಾಕಿಸ್ತಾನಿ, ಟೀಮ್ ಇಂಡಿಯಾ ಎದುರಿನ ಮ್ಯಾಚ್ ಬಗ್ಗೆ ಎಷ್ಟೊಂದು ಗಂಭೀರವಾಗಿ ಚಿಂತಿಸ್ತಿದೆ ಅನ್ನೋದಕ್ಕೆ. ಹಾಲಿ ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ಯಾಪ್ಟನ್ ಕೂಡ ಭಾರತ ತಂಡದ ಸೋಲಿಗೆ ಟೊಂಕಕಟ್ಟಿ ನಿಂತಿದ್ದಾರೆ. ನೀವು ವಿಶ್ವಕಪ್ ಗೆಲ್ತಿರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಯಾವುದೇ ಕಾರಣ್ಕಕೂ ಮಾತ್ರ ಟೀಮ್ ಇಂಡಿಯಾ ವಿರುದ್ಧ ಸೋಲಬೇಡಿ ಎಂದು ಪಾಕ್ ಮಾಜಿ ಕ್ಯಾಪ್ಟನ್ ರಮೀಜ್ ರಾಜಾ ಹೇಳಿದ್ದಾರೆ.
ಇದನ್ನೂ ಓದಿ: ಡಿಲೀಟ್, ಡಿಲೀಟ್ ಅಂಡ್ ರಿಸ್ಟೋರ್.. ಏನಿದು ಪಾಂಡ್ಯ ಪತ್ನಿಯ ಹೊಸ ನಾಟಕ..!?
ಭಾರತ ವಿರುದ್ಧ ಸೋಲಬೇಡಿ
ನೀವು ವಿಶ್ವಕಪ್ ಗೆಲ್ಲುತ್ತಿರೋ ಅಥವಾ ಸೋಲುತ್ತಿರೋ ಅದು ಮುಖ್ಯವಲ್ಲ. ಆದ್ರೆ ಯಾವುದೇ ಕರಣಕ್ಕೂ ಟೀಮ್ ಇಂಡಿಯಾ ವಿರುದ್ಧ ಮಾತ್ರ ಸೋಲಬೇಡಿ.
ರಮೀಜ್ ರಾಜಾ, ಮಾಜಿ ಕ್ಯಾಪ್ಟನ್
ಭಾರತವನ್ನ ಮಣಿಸಲು ಕ್ಯಾಪ್ಟನ್ ಬಾಬರ್ ಪಾಠ..!
ಬರೀ ಮಾಜಿ ಕ್ಯಾಪ್ಟನ್ ಮಾತ್ರವಲ್ಲ. ಹಾಲಿ ಕ್ಯಾಪ್ಟನ್ ಬಾಬರ್ ಅಝಂ ಕೂಡ ಟೀಮ್ ಇಂಡಿಯಾವನ್ನ ಸೋಲಿಸಲು ಹಗಲು ರಾತ್ರಿ ಕನವರಿಸ್ತಿದ್ದಾರೆ. ಆಟಗಾರರಿಗೆ ಭಾರತ ವಿರುದ್ಧ ಗೆಲ್ಲಲು ಪಾಠ ಮಾಡಿ, ಹುರಿದುಂಬಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ, ಮಹಾರಾಷ್ಟ್ರ ಅಲ್ಲವೇ ಅಲ್ಲ.. ಪ್ರಧಾನಿ ಮೋದಿ ಕೈ ಹಿಡಿದಿದ್ದು ಈ ಮೂರು ರಾಜ್ಯಗಳು..!
ಜಗತ್ತಿನ ಯಾವ ಮೂಲೆಗೂ ಹೋದರೂ ಭಾರತ-ಪಾಕ್ ಪಂದ್ಯದ ಬಗ್ಗೆ ಚರ್ಚೆ ನಡೆಯುತ್ತೆ. ಪ್ರತಿಯೊಬ್ಬರು ಅವರವರ ದೇಶಕ್ಕೆ ಸಪೋರ್ಟ್ ಮಾಡ್ತಾರೆ. ಸಹಜವಾಗಿ ನರ್ವಸ್ ಇರುತ್ತೆ. ಆದರೆ ನಾವು ನಮ್ಮ ಗಮನ ಅಗತ್ಯ, ಬೇಸಿಕ್ ಮತ್ತು ಸರಳ ಕ್ರಿಕೆಟ್ ಆಡಬೇಕು. ಹೆಚ್ಚು ಒತ್ತಡದ ಗೇಮ್ ಆಗಿರೋದ್ರಿಂದ ಸದಾ ತಾಳ್ಳೆಯಿಂದ ಇರಬೇಕು. ನಿಮ್ಮ ಕೌಶಲ್ಯ ಮತ್ತು ಕಠಿಣ ಅಭ್ಯಾಸದ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಎಲ್ಲ ಸುಲಭವಾಗಲಿದೆ.
ಬಾಬರ್ ಅಝಂ, ಪಾಕ್ ಕ್ಯಾಪ್ಟನ್
ಪಾಕ್ ಕನಸಿಗೆ ತಣ್ಣೀರೆರೆಚುತ್ತಾ ಟೀಮ್ ಇಂಡಿಯಾ..?
ಸದ್ಯಕ್ಕಂತೂ ಪಾಕ್, ಟೀಂ ಇಂಡಿಯಾ ಎದುರಿನ ಪಂದ್ಯಕ್ಕಾಗಿ ಫುಲ್ ಪೋಕಸ್ ಮಾಡ್ತಿದೆ. ಹಾಲಿ ಕ್ಯಾಪ್ಟನ್ ನಿಂದ ಹಿಡಿದು ಮಾಜಿ ಕ್ಯಾಪ್ಟನ್ಸ್ ಉತ್ತೇಜನದ ಮಾತುಗಳನ್ನಾಡಿದ್ದಾರೆ. ಆದ್ರೆ ಭಾರತವನ್ನ ಸೋಲಿಸುವ ಪಾಕ್ ಕನಸಿಗೆ ಟೀಮ್ ಇಂಡಿಯಾ ಕೊಳ್ಳಿಯಿಡುತ್ತಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಟೀಮ್ ಇಂಡಿಯಾ, ಪಾಕ್ ವಿರುದ್ದ ವಿಶ್ವಕಪ್ನಲ್ಲಿ ಇಲ್ಲಿತನಕ ಒಮ್ಮೆ ಮಾತ್ರ ಸೋತಿದೆ. ಆರು ಪಂದ್ಯಗಳಲ್ಲಿ ಪಾರಮ್ಯ ಮೆರೆದಿದೆ. ಇದೇ ಹುಮ್ಮಸ್ಸಿನಲ್ಲಿ ಭಾನುವಾರದ ದಂಗಲ್ನಲ್ಲಿ ಮತ್ತೊಮ್ಮೆ ಪಾಕ್ ಸೊಲ್ಲಡಗಿಸಿದ್ರು ಅಶ್ಚರ್ಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಭಾರತದ ಕನವರಿಕೆಯಲ್ಲಿ ಮುಳುಗಿದ ಪಾಕ್ ತಂಡ
ಭಾರತ ವಿರುದ್ಧ ಸೋಲಬೇಡಿ ಎಂದ ರಮೀಜ್ ರಾಜಾ
ಪಾಕಿಸ್ತಾನಕ್ಕೆ ಶುರುವಾಗಿದೆ ಟೀಮ್ ಇಂಡಿಯಾ ಭಯ
ಟಿ20 ವಿಶ್ವಕಪ್ನಲ್ಲಿ ಎಲ್ಲಾ ತಂಡಗಳು ಗುರಿ ಒಂದೇ. ಕಪ್ ಗೆಲ್ಲೋದು. ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಆದ್ರೆ ಪಾಕಿಸ್ತಾನದ ಗುರಿ ಮಾತ್ರ ಟೀಮ್ ಇಂಡಿಯಾವನ್ನ ಸೋಲಿಸೋದು. ಅದಕ್ಕಾಗಿ ಹಗಲು ರಾತ್ರಿ ಎನ್ನದೇ ಚಿಂತಿಸ್ತಿದೆ. ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ರಿಕೆಟರ್ಸ್ ಕೂಡ ಭಾರತದ ಸೋಲಿಗೆ ಪಣತೊಟ್ಟಿದ್ದಾರೆ.
ಜೂನ್ 9 ರಂದು ಯಾವೊಬ್ಬ ಇಂಡಿಯನ್ ಕ್ರಿಕೆಟ್ ಪ್ರೇಮಿ ಮರೆಯಲಾಗದ ದಿನ. ಅಂದು ಟಿ20 ವಿಶ್ವಕಪ್ ರಣರಂಗದಲ್ಲಿ ಜಾತ್ರೆ ನಡೆಯಲಿದೆ. ಕ್ರಿಕೆಟ್ ಬದ್ಧವೈರಿಗಳು ಅಖಾಡದಲ್ಲಿ ಎದುರಾಗಲಿದ್ದಾರೆ. ಬಲಿಷ್ಠ ಭಾರತ ತಂಡ ಪಾಕಿಸ್ತಾನ ಎದುರಿಸಲಿದ್ದು, ಈ ಬಿಗ್ ಬ್ಯಾಟಲ್ಗೆ ಇನ್ನೂ 3 ದಿನಗಳಷ್ಟೇ ಬಾಕಿ ಇದ್ದು ತೀವ್ರ ಕುತೂಹಲ ಕೆರಳಿಸಿದೆ. ಭಾನುವಾರ ಪಂದ್ಯ ನಡೆಯುತ್ತಿದ್ರೂ ಪಾಕ್ನ ಗಮನ ಟೀಮ್ ಇಂಡಿಯಾ ಮ್ಯಾಚ್ ಮೇಲೆ ಶಿಫ್ಟ್ ಆಗಿದೆ.
ಕುಂತ್ರೂ, ನಿಂತ್ರೂ ಜೂನ್ 9ರ ಮ್ಯಾಚ್ದೇ ಚಿಂತೆ..!
ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಈ ಒತ್ತಡದ ಗೇಮ್ ಅನ್ನ ಪ್ರತಿಯೊಬ್ಬ ಕ್ರಿಕೆಟ್ ಫ್ಯಾನ್ ಕೂಡ ವೀಕ್ಷಿಸ್ತಾನೆ. ಯಾಕಂದ್ರೆ ಇದು ಒಂದು ಮ್ಯಾಚ್ ಅನ್ನೋದಕ್ಕಿಂತ ಹೆಮ್ಮೆಯ ಸಂಗತಿ. ಇಂತಹ ಮೆಗಾ ಬ್ಯಾಟಲ್ ಗೆಲ್ಲೋದು ಉಭಯ ತಂಡಕ್ಕೂ ಪ್ರತಿಷ್ಠೆ ವಿಚಾರ. ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಪಾಕ್ ಸಾಟಿನೇ ಆಗಿಲ್ಲ. ಮೆನ್ ಇನ್ ಬ್ಲೂ ಪಡೆ ಕಂಪ್ಲೀಟ್ ಡಾಮಿನೆಂಟ್ ಸಾಧಿಸಿದೆ. ಈ ಬಾರಿ ಬಲಿಷ್ಠ ಭಾರತವನ್ನ ಸೋಲಿಸಲು ಪಾಕ್ ಹಪಾಹಪಿಸ್ತಿದೆ. ಪಂದ್ಯ ಶುರುವಿಗೆ 3 ದಿನವಿದ್ರೂ ಆಗಲೇ ಭಾರತ ಪಂದ್ಯದ ಚಿಂತನೆಯಲ್ಲಿ ಮುಳುಗಿದೆ.
T20 ವಿಶ್ವಕಪ್ ಗೆಲ್ಲದಿದ್ರೂ ಪರ್ವಾಗಿಲ್ಲ
ಈ ಎರಡು ಲೈನ್ಗಳೇ ಸಾಕು. ಪಾಕಿಸ್ತಾನಿ, ಟೀಮ್ ಇಂಡಿಯಾ ಎದುರಿನ ಮ್ಯಾಚ್ ಬಗ್ಗೆ ಎಷ್ಟೊಂದು ಗಂಭೀರವಾಗಿ ಚಿಂತಿಸ್ತಿದೆ ಅನ್ನೋದಕ್ಕೆ. ಹಾಲಿ ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ಯಾಪ್ಟನ್ ಕೂಡ ಭಾರತ ತಂಡದ ಸೋಲಿಗೆ ಟೊಂಕಕಟ್ಟಿ ನಿಂತಿದ್ದಾರೆ. ನೀವು ವಿಶ್ವಕಪ್ ಗೆಲ್ತಿರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಯಾವುದೇ ಕಾರಣ್ಕಕೂ ಮಾತ್ರ ಟೀಮ್ ಇಂಡಿಯಾ ವಿರುದ್ಧ ಸೋಲಬೇಡಿ ಎಂದು ಪಾಕ್ ಮಾಜಿ ಕ್ಯಾಪ್ಟನ್ ರಮೀಜ್ ರಾಜಾ ಹೇಳಿದ್ದಾರೆ.
ಇದನ್ನೂ ಓದಿ: ಡಿಲೀಟ್, ಡಿಲೀಟ್ ಅಂಡ್ ರಿಸ್ಟೋರ್.. ಏನಿದು ಪಾಂಡ್ಯ ಪತ್ನಿಯ ಹೊಸ ನಾಟಕ..!?
ಭಾರತ ವಿರುದ್ಧ ಸೋಲಬೇಡಿ
ನೀವು ವಿಶ್ವಕಪ್ ಗೆಲ್ಲುತ್ತಿರೋ ಅಥವಾ ಸೋಲುತ್ತಿರೋ ಅದು ಮುಖ್ಯವಲ್ಲ. ಆದ್ರೆ ಯಾವುದೇ ಕರಣಕ್ಕೂ ಟೀಮ್ ಇಂಡಿಯಾ ವಿರುದ್ಧ ಮಾತ್ರ ಸೋಲಬೇಡಿ.
ರಮೀಜ್ ರಾಜಾ, ಮಾಜಿ ಕ್ಯಾಪ್ಟನ್
ಭಾರತವನ್ನ ಮಣಿಸಲು ಕ್ಯಾಪ್ಟನ್ ಬಾಬರ್ ಪಾಠ..!
ಬರೀ ಮಾಜಿ ಕ್ಯಾಪ್ಟನ್ ಮಾತ್ರವಲ್ಲ. ಹಾಲಿ ಕ್ಯಾಪ್ಟನ್ ಬಾಬರ್ ಅಝಂ ಕೂಡ ಟೀಮ್ ಇಂಡಿಯಾವನ್ನ ಸೋಲಿಸಲು ಹಗಲು ರಾತ್ರಿ ಕನವರಿಸ್ತಿದ್ದಾರೆ. ಆಟಗಾರರಿಗೆ ಭಾರತ ವಿರುದ್ಧ ಗೆಲ್ಲಲು ಪಾಠ ಮಾಡಿ, ಹುರಿದುಂಬಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ, ಮಹಾರಾಷ್ಟ್ರ ಅಲ್ಲವೇ ಅಲ್ಲ.. ಪ್ರಧಾನಿ ಮೋದಿ ಕೈ ಹಿಡಿದಿದ್ದು ಈ ಮೂರು ರಾಜ್ಯಗಳು..!
ಜಗತ್ತಿನ ಯಾವ ಮೂಲೆಗೂ ಹೋದರೂ ಭಾರತ-ಪಾಕ್ ಪಂದ್ಯದ ಬಗ್ಗೆ ಚರ್ಚೆ ನಡೆಯುತ್ತೆ. ಪ್ರತಿಯೊಬ್ಬರು ಅವರವರ ದೇಶಕ್ಕೆ ಸಪೋರ್ಟ್ ಮಾಡ್ತಾರೆ. ಸಹಜವಾಗಿ ನರ್ವಸ್ ಇರುತ್ತೆ. ಆದರೆ ನಾವು ನಮ್ಮ ಗಮನ ಅಗತ್ಯ, ಬೇಸಿಕ್ ಮತ್ತು ಸರಳ ಕ್ರಿಕೆಟ್ ಆಡಬೇಕು. ಹೆಚ್ಚು ಒತ್ತಡದ ಗೇಮ್ ಆಗಿರೋದ್ರಿಂದ ಸದಾ ತಾಳ್ಳೆಯಿಂದ ಇರಬೇಕು. ನಿಮ್ಮ ಕೌಶಲ್ಯ ಮತ್ತು ಕಠಿಣ ಅಭ್ಯಾಸದ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಎಲ್ಲ ಸುಲಭವಾಗಲಿದೆ.
ಬಾಬರ್ ಅಝಂ, ಪಾಕ್ ಕ್ಯಾಪ್ಟನ್
ಪಾಕ್ ಕನಸಿಗೆ ತಣ್ಣೀರೆರೆಚುತ್ತಾ ಟೀಮ್ ಇಂಡಿಯಾ..?
ಸದ್ಯಕ್ಕಂತೂ ಪಾಕ್, ಟೀಂ ಇಂಡಿಯಾ ಎದುರಿನ ಪಂದ್ಯಕ್ಕಾಗಿ ಫುಲ್ ಪೋಕಸ್ ಮಾಡ್ತಿದೆ. ಹಾಲಿ ಕ್ಯಾಪ್ಟನ್ ನಿಂದ ಹಿಡಿದು ಮಾಜಿ ಕ್ಯಾಪ್ಟನ್ಸ್ ಉತ್ತೇಜನದ ಮಾತುಗಳನ್ನಾಡಿದ್ದಾರೆ. ಆದ್ರೆ ಭಾರತವನ್ನ ಸೋಲಿಸುವ ಪಾಕ್ ಕನಸಿಗೆ ಟೀಮ್ ಇಂಡಿಯಾ ಕೊಳ್ಳಿಯಿಡುತ್ತಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಟೀಮ್ ಇಂಡಿಯಾ, ಪಾಕ್ ವಿರುದ್ದ ವಿಶ್ವಕಪ್ನಲ್ಲಿ ಇಲ್ಲಿತನಕ ಒಮ್ಮೆ ಮಾತ್ರ ಸೋತಿದೆ. ಆರು ಪಂದ್ಯಗಳಲ್ಲಿ ಪಾರಮ್ಯ ಮೆರೆದಿದೆ. ಇದೇ ಹುಮ್ಮಸ್ಸಿನಲ್ಲಿ ಭಾನುವಾರದ ದಂಗಲ್ನಲ್ಲಿ ಮತ್ತೊಮ್ಮೆ ಪಾಕ್ ಸೊಲ್ಲಡಗಿಸಿದ್ರು ಅಶ್ಚರ್ಯವಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ