newsfirstkannada.com

ವಲ್ಡ್​ಕಪ್​ ಸೋತರು ಪರವಾಗಿಲ್ಲ ಟೀಂ ಇಂಡಿಯಾವನ್ನ ಬಿಡಬೇಡಿ.. ಪಾಕ್ ತಂಡಕ್ಕೆ​ ಮಾಜಿ ಕ್ಯಾಪ್ಟನ್​ ಸಲಹೆ!

Share :

Published June 5, 2024 at 11:20am

Update June 5, 2024 at 12:30pm

    ಭಾರತದ ಕನವರಿಕೆಯಲ್ಲಿ ಮುಳುಗಿದ ಪಾಕ್​ ತಂಡ

    ಭಾರತ ವಿರುದ್ಧ ಸೋಲಬೇಡಿ ಎಂದ ರಮೀಜ್​​ ರಾಜಾ

    ಪಾಕಿಸ್ತಾನಕ್ಕೆ ಶುರುವಾಗಿದೆ ಟೀಮ್ ಇಂಡಿಯಾ ಭಯ

ಟಿ20 ವಿಶ್ವಕಪ್​​ನಲ್ಲಿ ಎಲ್ಲಾ ತಂಡಗಳು ಗುರಿ ಒಂದೇ. ಕಪ್​​​​​​​​​​ ಗೆಲ್ಲೋದು. ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಆದ್ರೆ ಪಾಕಿಸ್ತಾನದ ಗುರಿ ಮಾತ್ರ ಟೀಮ್ ಇಂಡಿಯಾವನ್ನ ಸೋಲಿಸೋದು. ಅದಕ್ಕಾಗಿ ಹಗಲು ರಾತ್ರಿ ಎನ್ನದೇ ಚಿಂತಿಸ್ತಿದೆ. ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ರಿಕೆಟರ್ಸ್​ ಕೂಡ ಭಾರತದ ಸೋಲಿಗೆ ಪಣತೊಟ್ಟಿದ್ದಾರೆ.

ಜೂನ್​ 9 ರಂದು ಯಾವೊಬ್ಬ ಇಂಡಿಯನ್ ಕ್ರಿಕೆಟ್ ಪ್ರೇಮಿ ಮರೆಯಲಾಗದ ದಿನ. ಅಂದು ಟಿ20 ವಿಶ್ವಕಪ್​​​​ ರಣರಂಗದಲ್ಲಿ ಜಾತ್ರೆ ನಡೆಯಲಿದೆ. ಕ್ರಿಕೆಟ್​ ಬದ್ಧವೈರಿಗಳು ಅಖಾಡದಲ್ಲಿ ಎದುರಾಗಲಿದ್ದಾರೆ. ಬಲಿಷ್ಠ ಭಾರತ ತಂಡ ಪಾಕಿಸ್ತಾನ ಎದುರಿಸಲಿದ್ದು, ಈ ಬಿಗ್ ಬ್ಯಾಟಲ್​ಗೆ​​ ಇನ್ನೂ 3 ದಿನಗಳಷ್ಟೇ ಬಾಕಿ ಇದ್ದು ತೀವ್ರ ಕುತೂಹಲ ಕೆರಳಿಸಿದೆ. ಭಾನುವಾರ ಪಂದ್ಯ ನಡೆಯುತ್ತಿದ್ರೂ ಪಾಕ್​​​ನ ಗಮನ ಟೀಮ್ ಇಂಡಿಯಾ ಮ್ಯಾಚ್ ಮೇಲೆ ಶಿಫ್ಟ್ ಆಗಿದೆ.

ಕುಂತ್ರೂ, ನಿಂತ್ರೂ ಜೂನ್​​​​ 9ರ ಮ್ಯಾಚ್​​ದೇ ಚಿಂತೆ..!

ಇಂಡೋ-ಪಾಕ್​ ಹೈವೋಲ್ಟೇಜ್​​​​​​​​​​​​​​​​ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಈ ಒತ್ತಡದ ಗೇಮ್​​​​ ಅನ್ನ ಪ್ರತಿಯೊಬ್ಬ ಕ್ರಿಕೆಟ್ ಫ್ಯಾನ್​ ಕೂಡ ವೀಕ್ಷಿಸ್ತಾನೆ. ಯಾಕಂದ್ರೆ ಇದು ಒಂದು ಮ್ಯಾಚ್ ಅನ್ನೋದಕ್ಕಿಂತ ಹೆಮ್ಮೆಯ ಸಂಗತಿ. ಇಂತಹ ಮೆಗಾ ಬ್ಯಾಟಲ್​​​ ಗೆಲ್ಲೋದು ಉಭಯ ತಂಡಕ್ಕೂ ಪ್ರತಿಷ್ಠೆ ವಿಚಾರ. ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ಪಾಕ್​ ಸಾಟಿನೇ ಆಗಿಲ್ಲ. ಮೆನ್​ ಇನ್​ ಬ್ಲೂ ಪಡೆ ಕಂಪ್ಲೀಟ್​​​ ಡಾಮಿನೆಂಟ್ ಸಾಧಿಸಿದೆ. ಈ ಬಾರಿ ಬಲಿಷ್ಠ ಭಾರತವನ್ನ ಸೋಲಿಸಲು ಪಾಕ್​​ ಹಪಾಹಪಿಸ್ತಿದೆ. ಪಂದ್ಯ ಶುರುವಿಗೆ 3 ದಿನವಿದ್ರೂ ಆಗಲೇ ಭಾರತ ಪಂದ್ಯದ ಚಿಂತನೆಯಲ್ಲಿ ಮುಳುಗಿದೆ.

T20 ವಿಶ್ವಕಪ್​ ಗೆಲ್ಲದಿದ್ರೂ ಪರ್ವಾಗಿಲ್ಲ

ಈ ಎರಡು ಲೈನ್​ಗಳೇ ಸಾಕು. ಪಾಕಿಸ್ತಾನಿ, ಟೀಮ್ ಇಂಡಿಯಾ ಎದುರಿನ ಮ್ಯಾಚ್​​ ಬಗ್ಗೆ ಎಷ್ಟೊಂದು ಗಂಭೀರವಾಗಿ ಚಿಂತಿಸ್ತಿದೆ ಅನ್ನೋದಕ್ಕೆ. ಹಾಲಿ ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ಯಾಪ್ಟನ್​ ಕೂಡ ಭಾರತ ತಂಡದ ಸೋಲಿಗೆ ಟೊಂಕಕಟ್ಟಿ ನಿಂತಿದ್ದಾರೆ. ನೀವು ವಿಶ್ವಕಪ್​ ಗೆಲ್ತಿರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಯಾವುದೇ ಕಾರಣ್ಕಕೂ ಮಾತ್ರ ಟೀಮ್ ಇಂಡಿಯಾ ವಿರುದ್ಧ ಸೋಲಬೇಡಿ ಎಂದು ಪಾಕ್​ ಮಾಜಿ ಕ್ಯಾಪ್ಟನ್ ರಮೀಜ್​ ರಾಜಾ ಹೇಳಿದ್ದಾರೆ.

ಇದನ್ನೂ ಓದಿ: ಡಿಲೀಟ್, ಡಿಲೀಟ್ ಅಂಡ್ ರಿಸ್ಟೋರ್​​.. ಏನಿದು ಪಾಂಡ್ಯ ಪತ್ನಿಯ ಹೊಸ ನಾಟಕ..!?

ಭಾರತ ವಿರುದ್ಧ ಸೋಲಬೇಡಿ 

ನೀವು ವಿಶ್ವಕಪ್ ಗೆಲ್ಲುತ್ತಿರೋ ಅಥವಾ ಸೋಲುತ್ತಿರೋ ಅದು ಮುಖ್ಯವಲ್ಲ. ಆದ್ರೆ ಯಾವುದೇ ಕರಣಕ್ಕೂ ಟೀಮ್ ಇಂಡಿಯಾ ವಿರುದ್ಧ ಮಾತ್ರ ಸೋಲಬೇಡಿ.

ರಮೀಜ್​ ರಾಜಾ, ಮಾಜಿ ಕ್ಯಾಪ್ಟನ್​​​​

ಭಾರತವನ್ನ ಮಣಿಸಲು ಕ್ಯಾಪ್ಟನ್​​​ ಬಾಬರ್​​​​​​​​ ಪಾಠ..!

ಬರೀ ಮಾಜಿ ಕ್ಯಾಪ್ಟನ್ ಮಾತ್ರವಲ್ಲ. ಹಾಲಿ ಕ್ಯಾಪ್ಟನ್ ಬಾಬರ್​​ ಅಝಂ ಕೂಡ ಟೀಮ್ ಇಂಡಿಯಾವನ್ನ ಸೋಲಿಸಲು ಹಗಲು ರಾತ್ರಿ ಕನವರಿಸ್ತಿದ್ದಾರೆ. ಆಟಗಾರರಿಗೆ ಭಾರತ ವಿರುದ್ಧ ಗೆಲ್ಲಲು ಪಾಠ ಮಾಡಿ, ಹುರಿದುಂಬಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ, ಮಹಾರಾಷ್ಟ್ರ ಅಲ್ಲವೇ ಅಲ್ಲ.. ಪ್ರಧಾನಿ ಮೋದಿ ಕೈ ಹಿಡಿದಿದ್ದು ಈ ಮೂರು ರಾಜ್ಯಗಳು..!

ಜಗತ್ತಿನ ಯಾವ ಮೂಲೆಗೂ ಹೋದರೂ ಭಾರತ-ಪಾಕ್​​ ಪಂದ್ಯದ ಬಗ್ಗೆ ಚರ್ಚೆ ನಡೆಯುತ್ತೆ. ಪ್ರತಿಯೊಬ್ಬರು ಅವರವರ ದೇಶಕ್ಕೆ ಸಪೋರ್ಟ್​ ಮಾಡ್ತಾರೆ. ಸಹಜವಾಗಿ ನರ್ವಸ್​​​​​​ ಇರುತ್ತೆ. ಆದರೆ ನಾವು ನಮ್ಮ ಗಮನ ಅಗತ್ಯ, ಬೇಸಿಕ್ ಮತ್ತು ಸರಳ ಕ್ರಿಕೆಟ್ ಆಡಬೇಕು. ಹೆಚ್ಚು ಒತ್ತಡದ ಗೇಮ್​ ಆಗಿರೋದ್ರಿಂದ ಸದಾ ತಾಳ್ಳೆಯಿಂದ ಇರಬೇಕು. ನಿಮ್ಮ ಕೌಶಲ್ಯ ಮತ್ತು ಕಠಿಣ ಅಭ್ಯಾಸದ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಎಲ್ಲ ಸುಲಭವಾಗಲಿದೆ.

ಬಾಬರ್​ ಅಝಂ, ಪಾಕ್​ ಕ್ಯಾಪ್ಟನ್

ಪಾಕ್​ ಕನಸಿಗೆ ತಣ್ಣೀರೆರೆಚುತ್ತಾ ಟೀಮ್ ಇಂಡಿಯಾ..?

ಸದ್ಯಕ್ಕಂತೂ ಪಾಕ್​​​​, ಟೀಂ ಇಂಡಿಯಾ ಎದುರಿನ ಪಂದ್ಯಕ್ಕಾಗಿ ಫುಲ್​​ ಪೋಕಸ್ ಮಾಡ್ತಿದೆ. ಹಾಲಿ ಕ್ಯಾಪ್ಟನ್​​​​​​​​​ ನಿಂದ ಹಿಡಿದು ಮಾಜಿ ಕ್ಯಾಪ್ಟನ್ಸ್ ಉತ್ತೇಜನದ ಮಾತುಗಳನ್ನಾಡಿದ್ದಾರೆ. ಆದ್ರೆ ಭಾರತವನ್ನ ಸೋಲಿಸುವ ಪಾಕ್​ ಕನಸಿಗೆ ಟೀಮ್ ಇಂಡಿಯಾ ಕೊಳ್ಳಿಯಿಡುತ್ತಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಟೀಮ್ ಇಂಡಿಯಾ, ಪಾಕ್​ ವಿರುದ್ದ ವಿಶ್ವಕಪ್​ನಲ್ಲಿ ಇಲ್ಲಿತನಕ ಒಮ್ಮೆ ಮಾತ್ರ ಸೋತಿದೆ. ಆರು ಪಂದ್ಯಗಳಲ್ಲಿ ಪಾರಮ್ಯ ಮೆರೆದಿದೆ. ಇದೇ ಹುಮ್ಮಸ್ಸಿನಲ್ಲಿ ಭಾನುವಾರದ ದಂಗಲ್​ನಲ್ಲಿ ಮತ್ತೊಮ್ಮೆ ಪಾಕ್​​​​ ಸೊಲ್ಲಡಗಿಸಿದ್ರು ಅಶ್ಚರ್ಯವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಲ್ಡ್​ಕಪ್​ ಸೋತರು ಪರವಾಗಿಲ್ಲ ಟೀಂ ಇಂಡಿಯಾವನ್ನ ಬಿಡಬೇಡಿ.. ಪಾಕ್ ತಂಡಕ್ಕೆ​ ಮಾಜಿ ಕ್ಯಾಪ್ಟನ್​ ಸಲಹೆ!

https://newsfirstlive.com/wp-content/uploads/2024/05/TEM-INDIA-1.jpg

    ಭಾರತದ ಕನವರಿಕೆಯಲ್ಲಿ ಮುಳುಗಿದ ಪಾಕ್​ ತಂಡ

    ಭಾರತ ವಿರುದ್ಧ ಸೋಲಬೇಡಿ ಎಂದ ರಮೀಜ್​​ ರಾಜಾ

    ಪಾಕಿಸ್ತಾನಕ್ಕೆ ಶುರುವಾಗಿದೆ ಟೀಮ್ ಇಂಡಿಯಾ ಭಯ

ಟಿ20 ವಿಶ್ವಕಪ್​​ನಲ್ಲಿ ಎಲ್ಲಾ ತಂಡಗಳು ಗುರಿ ಒಂದೇ. ಕಪ್​​​​​​​​​​ ಗೆಲ್ಲೋದು. ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಆದ್ರೆ ಪಾಕಿಸ್ತಾನದ ಗುರಿ ಮಾತ್ರ ಟೀಮ್ ಇಂಡಿಯಾವನ್ನ ಸೋಲಿಸೋದು. ಅದಕ್ಕಾಗಿ ಹಗಲು ರಾತ್ರಿ ಎನ್ನದೇ ಚಿಂತಿಸ್ತಿದೆ. ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ರಿಕೆಟರ್ಸ್​ ಕೂಡ ಭಾರತದ ಸೋಲಿಗೆ ಪಣತೊಟ್ಟಿದ್ದಾರೆ.

ಜೂನ್​ 9 ರಂದು ಯಾವೊಬ್ಬ ಇಂಡಿಯನ್ ಕ್ರಿಕೆಟ್ ಪ್ರೇಮಿ ಮರೆಯಲಾಗದ ದಿನ. ಅಂದು ಟಿ20 ವಿಶ್ವಕಪ್​​​​ ರಣರಂಗದಲ್ಲಿ ಜಾತ್ರೆ ನಡೆಯಲಿದೆ. ಕ್ರಿಕೆಟ್​ ಬದ್ಧವೈರಿಗಳು ಅಖಾಡದಲ್ಲಿ ಎದುರಾಗಲಿದ್ದಾರೆ. ಬಲಿಷ್ಠ ಭಾರತ ತಂಡ ಪಾಕಿಸ್ತಾನ ಎದುರಿಸಲಿದ್ದು, ಈ ಬಿಗ್ ಬ್ಯಾಟಲ್​ಗೆ​​ ಇನ್ನೂ 3 ದಿನಗಳಷ್ಟೇ ಬಾಕಿ ಇದ್ದು ತೀವ್ರ ಕುತೂಹಲ ಕೆರಳಿಸಿದೆ. ಭಾನುವಾರ ಪಂದ್ಯ ನಡೆಯುತ್ತಿದ್ರೂ ಪಾಕ್​​​ನ ಗಮನ ಟೀಮ್ ಇಂಡಿಯಾ ಮ್ಯಾಚ್ ಮೇಲೆ ಶಿಫ್ಟ್ ಆಗಿದೆ.

ಕುಂತ್ರೂ, ನಿಂತ್ರೂ ಜೂನ್​​​​ 9ರ ಮ್ಯಾಚ್​​ದೇ ಚಿಂತೆ..!

ಇಂಡೋ-ಪಾಕ್​ ಹೈವೋಲ್ಟೇಜ್​​​​​​​​​​​​​​​​ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಈ ಒತ್ತಡದ ಗೇಮ್​​​​ ಅನ್ನ ಪ್ರತಿಯೊಬ್ಬ ಕ್ರಿಕೆಟ್ ಫ್ಯಾನ್​ ಕೂಡ ವೀಕ್ಷಿಸ್ತಾನೆ. ಯಾಕಂದ್ರೆ ಇದು ಒಂದು ಮ್ಯಾಚ್ ಅನ್ನೋದಕ್ಕಿಂತ ಹೆಮ್ಮೆಯ ಸಂಗತಿ. ಇಂತಹ ಮೆಗಾ ಬ್ಯಾಟಲ್​​​ ಗೆಲ್ಲೋದು ಉಭಯ ತಂಡಕ್ಕೂ ಪ್ರತಿಷ್ಠೆ ವಿಚಾರ. ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ಪಾಕ್​ ಸಾಟಿನೇ ಆಗಿಲ್ಲ. ಮೆನ್​ ಇನ್​ ಬ್ಲೂ ಪಡೆ ಕಂಪ್ಲೀಟ್​​​ ಡಾಮಿನೆಂಟ್ ಸಾಧಿಸಿದೆ. ಈ ಬಾರಿ ಬಲಿಷ್ಠ ಭಾರತವನ್ನ ಸೋಲಿಸಲು ಪಾಕ್​​ ಹಪಾಹಪಿಸ್ತಿದೆ. ಪಂದ್ಯ ಶುರುವಿಗೆ 3 ದಿನವಿದ್ರೂ ಆಗಲೇ ಭಾರತ ಪಂದ್ಯದ ಚಿಂತನೆಯಲ್ಲಿ ಮುಳುಗಿದೆ.

T20 ವಿಶ್ವಕಪ್​ ಗೆಲ್ಲದಿದ್ರೂ ಪರ್ವಾಗಿಲ್ಲ

ಈ ಎರಡು ಲೈನ್​ಗಳೇ ಸಾಕು. ಪಾಕಿಸ್ತಾನಿ, ಟೀಮ್ ಇಂಡಿಯಾ ಎದುರಿನ ಮ್ಯಾಚ್​​ ಬಗ್ಗೆ ಎಷ್ಟೊಂದು ಗಂಭೀರವಾಗಿ ಚಿಂತಿಸ್ತಿದೆ ಅನ್ನೋದಕ್ಕೆ. ಹಾಲಿ ಆಟಗಾರರು ಅಷ್ಟೇ ಅಲ್ಲದೇ ಮಾಜಿ ಕ್ಯಾಪ್ಟನ್​ ಕೂಡ ಭಾರತ ತಂಡದ ಸೋಲಿಗೆ ಟೊಂಕಕಟ್ಟಿ ನಿಂತಿದ್ದಾರೆ. ನೀವು ವಿಶ್ವಕಪ್​ ಗೆಲ್ತಿರೋ, ಬಿಡ್ತಿರೋ ಗೊತ್ತಿಲ್ಲ. ಆದ್ರೆ ಯಾವುದೇ ಕಾರಣ್ಕಕೂ ಮಾತ್ರ ಟೀಮ್ ಇಂಡಿಯಾ ವಿರುದ್ಧ ಸೋಲಬೇಡಿ ಎಂದು ಪಾಕ್​ ಮಾಜಿ ಕ್ಯಾಪ್ಟನ್ ರಮೀಜ್​ ರಾಜಾ ಹೇಳಿದ್ದಾರೆ.

ಇದನ್ನೂ ಓದಿ: ಡಿಲೀಟ್, ಡಿಲೀಟ್ ಅಂಡ್ ರಿಸ್ಟೋರ್​​.. ಏನಿದು ಪಾಂಡ್ಯ ಪತ್ನಿಯ ಹೊಸ ನಾಟಕ..!?

ಭಾರತ ವಿರುದ್ಧ ಸೋಲಬೇಡಿ 

ನೀವು ವಿಶ್ವಕಪ್ ಗೆಲ್ಲುತ್ತಿರೋ ಅಥವಾ ಸೋಲುತ್ತಿರೋ ಅದು ಮುಖ್ಯವಲ್ಲ. ಆದ್ರೆ ಯಾವುದೇ ಕರಣಕ್ಕೂ ಟೀಮ್ ಇಂಡಿಯಾ ವಿರುದ್ಧ ಮಾತ್ರ ಸೋಲಬೇಡಿ.

ರಮೀಜ್​ ರಾಜಾ, ಮಾಜಿ ಕ್ಯಾಪ್ಟನ್​​​​

ಭಾರತವನ್ನ ಮಣಿಸಲು ಕ್ಯಾಪ್ಟನ್​​​ ಬಾಬರ್​​​​​​​​ ಪಾಠ..!

ಬರೀ ಮಾಜಿ ಕ್ಯಾಪ್ಟನ್ ಮಾತ್ರವಲ್ಲ. ಹಾಲಿ ಕ್ಯಾಪ್ಟನ್ ಬಾಬರ್​​ ಅಝಂ ಕೂಡ ಟೀಮ್ ಇಂಡಿಯಾವನ್ನ ಸೋಲಿಸಲು ಹಗಲು ರಾತ್ರಿ ಕನವರಿಸ್ತಿದ್ದಾರೆ. ಆಟಗಾರರಿಗೆ ಭಾರತ ವಿರುದ್ಧ ಗೆಲ್ಲಲು ಪಾಠ ಮಾಡಿ, ಹುರಿದುಂಬಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ, ಮಹಾರಾಷ್ಟ್ರ ಅಲ್ಲವೇ ಅಲ್ಲ.. ಪ್ರಧಾನಿ ಮೋದಿ ಕೈ ಹಿಡಿದಿದ್ದು ಈ ಮೂರು ರಾಜ್ಯಗಳು..!

ಜಗತ್ತಿನ ಯಾವ ಮೂಲೆಗೂ ಹೋದರೂ ಭಾರತ-ಪಾಕ್​​ ಪಂದ್ಯದ ಬಗ್ಗೆ ಚರ್ಚೆ ನಡೆಯುತ್ತೆ. ಪ್ರತಿಯೊಬ್ಬರು ಅವರವರ ದೇಶಕ್ಕೆ ಸಪೋರ್ಟ್​ ಮಾಡ್ತಾರೆ. ಸಹಜವಾಗಿ ನರ್ವಸ್​​​​​​ ಇರುತ್ತೆ. ಆದರೆ ನಾವು ನಮ್ಮ ಗಮನ ಅಗತ್ಯ, ಬೇಸಿಕ್ ಮತ್ತು ಸರಳ ಕ್ರಿಕೆಟ್ ಆಡಬೇಕು. ಹೆಚ್ಚು ಒತ್ತಡದ ಗೇಮ್​ ಆಗಿರೋದ್ರಿಂದ ಸದಾ ತಾಳ್ಳೆಯಿಂದ ಇರಬೇಕು. ನಿಮ್ಮ ಕೌಶಲ್ಯ ಮತ್ತು ಕಠಿಣ ಅಭ್ಯಾಸದ ಮೇಲೆ ನಂಬಿಕೆ ಇಟ್ಟುಕೊಳ್ಳಿ, ಎಲ್ಲ ಸುಲಭವಾಗಲಿದೆ.

ಬಾಬರ್​ ಅಝಂ, ಪಾಕ್​ ಕ್ಯಾಪ್ಟನ್

ಪಾಕ್​ ಕನಸಿಗೆ ತಣ್ಣೀರೆರೆಚುತ್ತಾ ಟೀಮ್ ಇಂಡಿಯಾ..?

ಸದ್ಯಕ್ಕಂತೂ ಪಾಕ್​​​​, ಟೀಂ ಇಂಡಿಯಾ ಎದುರಿನ ಪಂದ್ಯಕ್ಕಾಗಿ ಫುಲ್​​ ಪೋಕಸ್ ಮಾಡ್ತಿದೆ. ಹಾಲಿ ಕ್ಯಾಪ್ಟನ್​​​​​​​​​ ನಿಂದ ಹಿಡಿದು ಮಾಜಿ ಕ್ಯಾಪ್ಟನ್ಸ್ ಉತ್ತೇಜನದ ಮಾತುಗಳನ್ನಾಡಿದ್ದಾರೆ. ಆದ್ರೆ ಭಾರತವನ್ನ ಸೋಲಿಸುವ ಪಾಕ್​ ಕನಸಿಗೆ ಟೀಮ್ ಇಂಡಿಯಾ ಕೊಳ್ಳಿಯಿಡುತ್ತಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಟೀಮ್ ಇಂಡಿಯಾ, ಪಾಕ್​ ವಿರುದ್ದ ವಿಶ್ವಕಪ್​ನಲ್ಲಿ ಇಲ್ಲಿತನಕ ಒಮ್ಮೆ ಮಾತ್ರ ಸೋತಿದೆ. ಆರು ಪಂದ್ಯಗಳಲ್ಲಿ ಪಾರಮ್ಯ ಮೆರೆದಿದೆ. ಇದೇ ಹುಮ್ಮಸ್ಸಿನಲ್ಲಿ ಭಾನುವಾರದ ದಂಗಲ್​ನಲ್ಲಿ ಮತ್ತೊಮ್ಮೆ ಪಾಕ್​​​​ ಸೊಲ್ಲಡಗಿಸಿದ್ರು ಅಶ್ಚರ್ಯವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More