Advertisment

ಹಾವೇರಿಯಲ್ಲಿ ಮಳೆ ಬರ್ತಿಲ್ಲ ಅಂತ ಹೂತಿದ್ದ ಶವಗಳನ್ನ ಹೊರ ತೆಗೆದ ಜನರು! ಏನ್​ ಮಾಡಿದ್ರು ಗೊತ್ತಾ?

author-image
AS Harshith
Updated On
ಹಾವೇರಿಯಲ್ಲಿ ಮಳೆ ಬರ್ತಿಲ್ಲ ಅಂತ ಹೂತಿದ್ದ ಶವಗಳನ್ನ ಹೊರ ತೆಗೆದ ಜನರು! ಏನ್​ ಮಾಡಿದ್ರು ಗೊತ್ತಾ?
Advertisment
  • ಮೂಢನಂಬಿಕೆಗೆ ಜೋತು ಬಿದ್ದ ಹಾವೇರಿ ಜನರು
  • ಸಮರ್ಪಕ‌ವಾಗಿ ಮಳೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಹೀಗೆ ಮಾಡಿದ್ರಾ..
  • ಒಂದೆರಡಲ್ಲ, 8ರಿಂದ 10 ಶವಗಳನ್ನ ಹೊರ ತೆಗೆದು ಜನರು.. ಏನ್​ ಮಾಡಿದ್ರು?

ಹಾವೇರಿ ಜಿಲ್ಲೆಯ ಹಲವೆಡೆ ಸಮರ್ಪಕ‌ವಾಗಿ ಮಳೆಯಾಗುತ್ತಿಲ್ಲ. ಈ ಹಿನ್ನಲೆ ಜನರು ಹೂತಿದ್ದ ಶವಗಳನ್ನ ಹೊರ ತೆಗೆದು ಸುಡುವ ವಿಚಿತ್ರ ಆಚರಣೆಯೊಂದು ಬೆಳಕಿಗೆ ಬಂದಿದೆ.

Advertisment

ಮೂಢನಂಬಿಕೆಗೆ ಜೋತು ಬಿದ್ದಿರುವ ಜನರು ಹೂತಿದ್ದ ಶವಗಳನ್ನ ಹೊರ ತೆಗೆದು ಮತ್ತೆ ಸುಡುತ್ತಿದ್ದಾರೆ. ಆ ಮೂಲಕ ಮತ್ತೆ ಮಳೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: ನೇಣು ಬಿಗಿದುಕೊಂಡು ಪೊಲೀಸ್ ಕಾನ್​ಸ್ಟೇಬಲ್ ಆತ್ಮಹತ್ಯೆ.. ಇದಕ್ಕೆಲ್ಲಾ ಕಾರಣ ಏನು ಗೊತ್ತಾ? 

ಈಗಾಗಲೇ ರೈತರು ಬಿತ್ತನೆ ಮಾಡಿದ್ದು, ಮಳೆಬಾರದಿದ್ದಕ್ಕೆ ಆತಂಕದಲ್ಲಿದ್ದಾರೆ. ಬಿತ್ತನೆ ಆದ ಬಳಿಕ ಜಿಲ್ಲೆಯ ಕೆಲವು ಕಡೆ ಮಳೆಯಾಗದ ಹಿನ್ನಲೆ ಮೂಢನಂಬಿಕೆಯ ಮೊರೆ ಹೋಗಿದ್ದಾರೆ. ಹೀಗಾಗಿ ಚರ್ಮದ ಖಾಯಿಲೆ (ತೊನ್ನು) ಇದ್ದವರು ಮರಣ ಹೊಂದಿದಾಗ ಅವರ ಪಾರ್ಥಿವ ಶರೀರ ಹೂಳದೆ ಸುಡಬೇಕೆಂಬ ಆಚರಣೆಯಿದೆ. ಒಂದು ವೇಳೆ ಮಣ್ಣಲ್ಲಿ ಹೂತಿದ್ದರೆ ಮಳೆಯಾವುದಿಲ್ಲವೆಂಬ ನಂಬಿಕೆಯಿದೆ. ಹೀಗಾಗಿ ಅಂತಹ ಶವಗಳನ್ನ ಹೊರತೆಗೆದು ಸುಟ್ಟರೆ ಮಳೆಯಾಗುತ್ತದೆ ಎಂಬುದು ಇಲ್ಲಿನ ಜನರ ಮೂಢ ನಂಬಿಕೆಯಾಗಿದೆ.

Advertisment

ಇದನ್ನೂ ಓದಿ: ಲೈಫ್ ಸೆಟ್ಲ್ ಮಾಡ್ತೀನಿ, ತೋಟದ ಮನೆಗೆ ಬಾ.. ಸೂರಜ್ ರೇವಣ್ಣ ವಿರುದ್ಧ ಸಂತ್ರಸ್ತನ ಆರೋಪಗಳೇನು?

ಇಂತಹ ನಂಬಿಕೆಯಿಂದಾಗಿಯೇ ಈಗಾಗಲೇ ಹೂತಿದ್ದ 8 ರಿಂದ 10 ಶವಗಳನ್ನ ಜನರು ಹೊರ ತೆಗೆದು ಸುಟ್ಟಿದ್ದಾರೆ. ಶವಗಳನ್ನು ಹೊರ ತೆಗೆಯುತ್ತಿರುವ ವಿಡಿಯೋಗಳು ಎಲ್ಲಡೆ ವೈರಲ್ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment