/newsfirstlive-kannada/media/media_files/2026/02/04/bk-hariprasd-vs-siddaramaiah-2026-02-04-14-24-55.jpg)
ಬೆಂಗಳೂರು: ಸಿದ್ದಾಪುರದ ಕಮಲಾಕರ್ ಭಟ್ ಪ್ರಕರಣದಲ್ಲಿ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಬಿ.ಕೆ.ಹರಿಪ್ರಸಾದ್ ಅವರು ಮಾಜಿ ಸಚಿವ ಎಸ್​.ಸುರೇಶ್ ಕುಮಾರ್ ಕುರಿತ ಪೋಸ್ಟ್ ಒಂದನ್ನ ಮಾಡಿದ್ದರು. ಅದಕ್ಕೆ ಈಗ ಸುರೇಶ್ ಕುಮಾರ್ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.
ಇದನ್ನೂ ಓದಿ:ಗಂಡ- ಹೆಂಡತಿ ನಡುವೆ ಫೈಟ್: ಅಡ್ಡ ಬಂದ ವ್ಯಕ್ತಿಯ ಹತ್ಯೆ- ಜ್ಯೋತಿಷಿ ಕಮಲಾಕರ್ ಸೇರಿ 7 ಮಂದಿ ಬಂಧನ
/filters:format(webp)/newsfirstlive-kannada/media/media_files/2026/02/03/astrologer-kamalakar-bhar-arrested-in-murder-case-2026-02-03-17-28-19.jpg)
ಆಗಿದ್ದೇನು..?
2019ರಲ್ಲಿ ಸುರೇಶ್ ಕುಮಾರ್​ ಅವರನ್ನು ಕಮಲಾಕರ್ ಭಟ್ ಭೇಟಿ ಆಗಿದ್ದರಂತೆ. ಆವತ್ತಿನ ಭೇಟಿ ಕ್ಷಣವನ್ನು ಸುರೇಶ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ನಿನ್ನೆ ಕೊಲೆ ಕೇಸ್​ನಲ್ಲಿ ಕಮಲಾಕರ್ ಭಟ್ ಅರೆಸ್ಟ್ ಆದ ಬೆನ್ನಲ್ಲೇ ಜ್ಯೋತಿಷಿ ಜೊತೆ ಸುರೇಶ್ ಕುಮಾರ್ ಇರೋ ಫೋಟೋವನ್ನು ಬಿಕೆ ಹರಿಪ್ರಸಾದ್ ಹಂಚಿಕೊಂಡಿದ್ದಾರೆ.
ಶಾಸಕರ ಫೋಟೋ ಟ್ವೀಟ್ ಮಾಡಿ ಪ್ರಶ್ನಿಸಿರುವ ಬಿ.ಕೆ. ಹರಿಪ್ರಸಾದ್, ಸುರೇಶ್​ರಂತ ಜನಪ್ರತಿನಿಧಿಗಳಂತವರ ಪಾತ್ರ ಇಲ್ವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಸಂಘ ಪರಿವಾರದ ಹಿನ್ನೆಲೆಯಿಂದ ಬಂದ ಬಿಜೆಪಿ ಶಾಸಕ ಸುರೇಶ್, ಅಂಥವರನ್ನ ಬೆಳೆಸಿದ್ದು, ಪ್ರೋತ್ಸಾಹಿಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರ ಅಲ್ಲವೇ? ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರೋದು ದುರಂತ ಎಂದು ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದರು.
ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್ ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ. ಈ ಕ್ರಿಮಿನಲ್ ಪ್ರಕರಣ ನ್ಯಾಯಯುತ ತನಿಖೆಯಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ @nimmasuresh, ಬಿಜೆಪಿಯ ರಾಜ್ಯಾಧ್ಯಕ್ಷ… pic.twitter.com/ne65sof2HX
— Hariprasad.B.K. (@HariprasadBK2) February 4, 2026
ಇದನ್ನೂ ಓದಿ:ಸಂತ್ರಸ್ತ ಕುಟುಂಬಕ್ಕೆ ಕಮಲಾಕರ ಭಟ್ 1 ಕೋಟಿ ಪರಿಹಾರ ನೀಡುವಂತೆ ಪ್ರತಿಭಟನೆ
/filters:format(webp)/newsfirstlive-kannada/media/media_files/2026/02/04/kamalakara-bhat-2026-02-04-08-55-07.jpg)
ಇದಕ್ಕೆ ಪ್ರತಿಯಾಗಿ ಕೌಂಟರ್ ನೀಡಿರುವ ಸುರೇಶ್ ಕುಮಾರ್, ವಿಮಾನ ಪ್ರಯಾಣದ ವೇಳೆ ಕಮಲಾಕರ್ ಭಟ್ ಸಿದ್ದರಾಮಯ್ಯರ ಪಕ್ಕದಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಬಗ್ಗೆ ತಮ್ಮ ಅಭಿಪ್ರಾಯ.? ಈ ಕೊಲೆ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿಯೂ ಭಾಗಿಯೇ? ಕೊಳೆತ ಮನಸ್ಸಿಗೆ ಕೊಳೆತ ವಿಚಾರಗಳೇ ಬರುವುದು ಅಲ್ಲವೇ ಬಿಕೆ ಹರಿಪ್ರಸಾದ್ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ನನ್ನ ಉಳಿಸಲು ಹೋಗಿ ಅಣ್ಣ ಬಲಿಯಾದ -ಕಮಲಾಕರ್ ಭಟ್ ಕೇಸ್​ನಲ್ಲಿ ಸಂತ್ರಸ್ತ ಕಣ್ಣೀರು..!
@HariprasadBK2... ಈ ಫೋಟೋ ಬಗ್ಗೆ ತಮ್ಮ ಅಭಿಪ್ರಾಯ.? ಈ ಕೊಲೆ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿಯೂ ಭಾಗಿಯೇ?
— S.Suresh Kumar (@nimmasuresh) February 4, 2026
ಕೊಳೆತ ಮನಸ್ಸಿಗೆ ಕೊಳೆತ ವಿಚಾರಗಳೇ ಬರುವುದು ಅಲ್ಲವೇ @HariprasadBK2pic.twitter.com/gWaEjcK4o5
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us