/newsfirstlive-kannada/media/media_files/2025/11/06/cm_siddaramaiah_rahul_gandhi_delhi-2025-11-06-08-02-56.jpg)
ಬಿಹಾರ ಎಲೆಕ್ಷನ್​​ ಬಳಿಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಫಲಿತಾಂಶಕ್ಕೂ ಮೊದಲೇ ರಾಹುಲ್​​​ ಯಾತ್ರೆ ಕುತೂಹಲಕ್ಕೆ ಕಾರಣ ಆಗಿದೆ. ನವೆಂಬರ್ 14ರಂದು ಸಂಜೆ ವಿದೇಶಕ್ಕೆ ತೆರಳುವ ಲೋಕಸಭೆ ವಿಪಕ್ಷ ನಾಯಕ ರಾಹುಲ್​​, 22ರ ವರೆಗೆ ಫಿನ್ ಲ್ಯಾಂಡ್​ನಲ್ಲಿರಲಿದ್ದಾರೆ. ಇತ್ತ, ರಾಜ್ಯದ ಕುರ್ಚಿ ಕ್ರಾಂತಿಗೂ ಈ ಪ್ರವಾಸ ಬ್ರೇಕ್​​​ ಹಾಕಿಸಲಿದೆ.
ಅಕ್ಟೋಬರ್​​ ಇಲ್ಲ, ನವೆಂಬರ್​ ಇಲ್ಲ, ಕಾಂಗ್ರೆಸ್​ನಲ್ಲಿ ಕ್ರಾಂತಿ ಕಣ್ಮರೆ ಆಗ್ತಿದ್ದು, ಸಿದ್ದರಾಮಯ್ಯ ಮೊಗದಲ್ಲಿ ಕಾಂತಿ ಹೊಳೆಯುತ್ತಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಮನದ ಕಡಲಲ್ಲಿ ಮಾತ್ರ ಅಶಾಂತಿ. ಸಿಎಂ ಕುರ್ಚಿ ಪಾಲಿಟಿಕ್ಸ್​ನಲ್ಲಿ ಈಗ ಸಂಕ್ರಾಂತಿ ಕಾಲ. ಭ್ರಾಂತಿಗಳು ಮರೆಯಾಗಿದ್ದು, ಸಿದ್ದು ನೆಮ್ಮದಿಯ ನಿಟ್ಟುಸಿರಿಗೆ ಜಾರಿದ್ದಾರೆ. ಈ ಕುರ್ಚಿ ಕದನದ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್, ನಿನ್ನೆ ಸಂಜೆ ದೆಹಲಿಗೆ ತೆರಳಿದ್ದಾರೆ.
/filters:format(webp)/newsfirstlive-kannada/media/media_files/2025/08/26/dk-shivakumar-6-2025-08-26-23-07-18.jpg)
ದೆಹಲಿಗೆ ಹಾರಿದ ಡಿಸಿಎಂ, ಕುರ್ಚಿ ಆಟಕ್ಕೆ ರೆಕ್ಕೆಪುಕ್ಕ!
ಮೇಕೆದಾಟು ತೀರ್ಪು ನೆಪದಲ್ಲಿ ಡಿ.ಕೆ ಶಿವಕುಮಾರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಇದೇ ನೆಪದಲ್ಲೇ ಪಕ್ಷದ ಹೈಕಮಾಂಡ್​​ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಸುರ್ಜೇವಾಲ ಭೇಟಿಗೆ ಟೈಂ ಕೇಳಿದ್ದು, ನಾಯಕತ್ವ ಬದಲಾವಣೆಗೆ ಒತ್ತಡ ಹೇರಲಿದ್ದಾರೆ. ಇನ್ನು, ಬಿಹಾರ ಎಲೆಕ್ಷನ್​ ಪ್ರಚಾರಕ್ಕೆ ತೆರಳುವ ಡಿ.ಕೆ ಶಿವಕುಮಾರ್, ನಾಳೆ ಮತ್ತು ನಾಡಿದ್ದು ಪ್ರಚಾರ ಕಣದಲ್ಲಿ ಅಬ್ಬರಿಸಲಿದ್ದಾರೆ.
ಇನ್ನು, ನವೆಂಬರ್​ 14 ರಂದು ಸಿಎಂ ಸಿದ್ದರಾಮಯ್ಯ ಸಹ ದೆಹಲಿಗೆ ಪ್ರಯಾಣಿಸ್ತಿದ್ದಾರೆ. ನ.15 ಮತ್ತು 16ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್​​ ಭೇಟಿ ಆಗುವ ನಿರೀಕ್ಷೆ ಇದೆ. ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆಗೆ ಒತ್ತಡ ಹೇರುವ ಸಾಧ್ಯತೆ ಇದೆ. ಆದ್ರೆ, ಸಿಎಂ, ಡಿಸಿಎಂ ಲೆಕ್ಕಾಚಾರಗಳನ್ನೇ ರಾಹುಲ್​ ಗಾಂಧಿ ಪಲ್ಟಿ ಮಾಡಿದ್ದಾರೆ.
ಸಂಪುಟ ಪುನಾರಚನೆ ಮತ್ತು ನಾಯಕತ್ವದ ಚರ್ಚೆಗೆ ಬ್ರೇಕ್​
ಡಿಸಿಎಂ ಕ್ಯಾಂಪ್​​​, ನಾಯಕತ್ವ ಬದಲಾವಣೆ ಚರ್ಚೆ ಮುಂದಿಡ್ತಿದೆ. ಆದ್ರೆ, ಸಿಎಂ ಕ್ಯಾಂಪ್​​​ಸಂಪುಟ ಪುನಾರಚನೆ ದಾಳ ಉರುಳಿಸ್ತಿದೆ. ಕರ್ನಾಟಕದ ಕದನ ಗಮನಿಸ್ತಿರುವ ರಾಹುಲ್​​​ ಗಾಂಧಿ, ಬಿಹಾರ ರಿಸಲ್ಟ್​​ ಬರುವ ದಿನವೇ ವಿದೇಶಕ್ಕೆ ಹಾರ್ತಿದ್ದಾರೆ.
ಕ್ರಾಂತಿ ಕಿಚ್ಚಿಗೆ ರಾಹುಲ್​ ಬ್ರೇಕ್​​
- ಸದ್ಯ ಕರ್ನಾಟಕ ಪ್ರವಾಸವನ್ನ ಮುಂದೂಡಿರುವ ರಾಹುಲ್​​
- ನವೆಂಬರ್​ 14 ರಿಂದ 22ರವರೆಗೆ ರಾಹುಲ್​ ವಿದೇಶ ಯಾತ್ರೆ
- ಯುರೋಪ್​ನ ಫಿನ್​ಲ್ಯಾಂಡ್​ಗೆ ರಾಹುಲ್​ ಗಾಂಧಿ ಪ್ರವಾಸ
- ರಾಜ್ಯದ ನ.20ರ ಕಾರ್ಯಕ್ರಮ ಮುಂದೂಡುವಂತೆ ಸೂಚನೆ
- ರಾಹುಲ್​ ಆಗಮನ ತನಕ ಕುರ್ಚಿ ಕ್ರಾಂತಿಗೆ ಅಲ್ಪ ವಿರಾಮ
- ನವೆಂಬರ್​​ 23ರ ಬಳಿಕ ಕುರ್ಚಿ ಕ್ರಾಂತಿಗೆ ಸ್ಪಷ್ಟತೆ ಸಿಗಲಿದೆ
/filters:format(webp)/newsfirstlive-kannada/media/media_files/2025/09/05/rahul-gandhi-and-siddu-2025-09-05-18-47-25.jpg)
ಈ ನಡುವೆ ನವೆಂಬರ್​​​ 14ರಂದು ದೆಹಲಿಗೆ ತೆರಳುವ ಸಿಎಂ ಮತ್ತು ಡಿಸಿಎಂ ಭೇಟಿಗೆ ರಾಹುಲ್​​​ ಟೈಂ ನೀಡಿಲ್ಲ ಅನ್ನೋದು ಗೊತ್ತಾಗಿದೆ. ಆದ್ರೆ, ವಿಪಕ್ಷ ಬಿಜೆಪಿ ಮಾತ್ರ ಚಳಿಗಾಲ ಅಧಿವೇಶನಕ್ಕೆ ಹೊಸ ಸಿಎಂ ಅಂತ ಕಾಂಗ್ರೆಸ್​ನ ಕಾಲೆಳೆಯೋದ್ರಲ್ಲಿ ನಿರತರಾಗಿದ್ದಾರೆ.
ರಾಹುಲ್ ವಿದೇಶಿ ಪ್ರಯಾಣ ಹೊಸದೇನಲ್ಲ, ಆದ್ರೆ, ಪ್ರಮುಖ ರಾಜಕೀಯ ಬೆಳವಣಿಗೆ ಸಂದರ್ಭದಲ್ಲಿ ವಿದೇಶಕ್ಕೆ ತೆರಳ್ತಿರೋದು ಚರ್ಚೆಗೆ ಗ್ರಾಸವಾಗಿದೆ. ಬಿಹಾರ ಎಲೆಕ್ಷನ್​​ ರಿಸಲ್ಟ್​​ ದಿನವೇ ಫಿನ್​​ಲ್ಯಾಂಡ್​​​ಗೆ ಹೋಗ್ತಿರೋದು ಜವಾಬ್ದಾರಿಗೆ ಬೆನ್ನು ತೋರಿಸ್ತಿದ್ದಾರಾ ಅನ್ನೋ ಚರ್ಚೆ ಹುಟ್ಟುಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us