ಸ್ಟೇಜ್​ ಮೇಲೆ ಮೋದಿಗೆ ಕೌಂಟರ್​ ಕೊಟ್ಟ ಸಿಎಂ ಸಿದ್ದರಾಮಯ್ಯ; ಅದಕ್ಕೆ ಪ್ರಧಾನಿಗಳು ಏನಂದ್ರು..?

ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೂರು ವಂದೇ ಭಾರತ್ ಟ್ರೈನ್​, ನಮ್ಮ ಮೆಟ್ರೋದ ಯೆಲ್ಲೋ ಲೈನ್​ಗೆ (Namma metro Yellow line) ಚಾಲನೆ ನೀಡಿದರು. ಇದೇ ವೇಳೆ ಮೆಟ್ರೋ 3ನೇ ಹಂತದ ಫೇಸ್​​ಗೂ ಶಂಕುಸ್ಥಾಪನೆ ನೆರವೇರಿಸಿದರು.

author-image
Ganesh
siddaramaiah narendra modi (1)

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯ

Advertisment

ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೂರು ವಂದೇ ಭಾರತ್ ಟ್ರೈನ್​, ನಮ್ಮ ಮೆಟ್ರೋದ ಯೆಲ್ಲೋ ಲೈನ್​ಗೆ (Namma metro Yellow line) ಚಾಲನೆ ನೀಡಿದರು. ಇದೇ ವೇಳೆ ಮೆಟ್ರೋ 3ನೇ ಹಂತದ ಫೇಸ್​​ಗೂ ಶಂಕುಸ್ಥಾಪನೆ ನೆರವೇರಿಸಿದರು. 

ಯೆಲ್ಲೋ ಲೈನ್​​ಗೆ ಚಾಲನೆ ನೀಡಿದ ಬಳಿಕ ಮೋದಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಶಾಲಾ ಮಕ್ಕಳ ಜೊತೆ ಮೋದಿ ಚರ್ಚೆ ನಡೆಸಿದರು. ಬಳಿಕ ಎಲೆಕ್ಟ್ರಾನಿಕ್ ಸಿಟಿ ಐಐಐಟಿ ಆಡಿಟೋರಿಯಂನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. 

ಇದನ್ನೂ ಓದಿ:ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ

siddaramaiah narendra modi

ವೇದಿಕೆಯಲ್ಲಿ ಕೌಂಟರ್​​​ ಕೊಟ್ಟ ಸಿಎಂ 

ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ (CM Siddaramaiah), ಪ್ರಧಾನಿ ನರೇಂದ್ರ ಮೋದಿಗೆ ಕೌಂಟರ್ ನೀಡಿದರು. ಬೆಂಗಳೂರಿಗೆ ಮೆಟ್ರೋ ತಂದಿದ್ದು ಮನಮೋಹನ್ ಸಿಂಗ್. ಮೆಟ್ರೋಗಾಗಿ ರಾಜ್ಯ ಸರ್ಕಾರ ಹೆಚ್ಚು ಖರ್ಚು ಮಾಡಿದೆ. ಮಹಾರಾಷ್ಟ್ರ, ಗುಜರಾತ್​ನಂತೆ ಕರ್ನಾಟಕಕ್ಕೂ ಒತ್ತು ಕೊಡಿ​ ಎಂದು ಮೋದಿಗೆ ಸಿದ್ದರಾಮಯ್ಯ ವೇದಿಕೆ ಮೇಲೆ ಆಗ್ರಹ ಮಾಡಿದರು. 

ಸಿದ್ದರಾಮಯ್ಯರ ಹೇಳಿಕೆಗೆ ತಿರುಗೇಟು ನೀಡಿರುವ ಮೋದಿ.. ರಾಜ್ಯ, ಕೇಂದ್ರ ಸರ್ಕಾರಗಳು ಇರೋದು ಜನರ ಸೇವೆಗಾಗಿ. ದೇಶದ ಜನರಿಗಾಗಿ ನಾವು ಒಂದಾಗಿ ಕೆಲಸ ಮಾಡಬೇಕು. ಮೇಕ್​ ಇನ್​ ಇಂಡಿಯಾದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು. ಅದಕ್ಕೆ ಬೆಂಗಳೂರು ಹಾಗೂ ಕರ್ನಾಟಕದ ಅವಶ್ಯಕತೆ ಇದೆ. ನಮ್ಮ ವಸ್ತುಗಳು ಶೂನ್ಯ ಡಿಫೆಕ್ಟ್​​​ ಇರದಂತೆ ತಯಾರಿಸಬೇಕು ಎಂದರು. 

ಇದನ್ನೂ ಓದಿ: ‘ನಾನು ಆ ಕ್ಲಾಸ್​ನಲ್ಲಿ ನಿದ್ದೆ ಮಾಡ್ತಿದ್ದೆ’.. ಮೆಟ್ರೋದಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಸ್ವಾರಸ್ಯಕರ ಮಾತು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pm Narendra Modi Namma metro Metro Yellow Line Narendra Modi visit Bangalore,
Advertisment