/newsfirstlive-kannada/media/media_files/2025/12/27/siddaramaiah-pinarayi-vijayan-2025-12-27-23-42-31.jpg)
ಕೇರಳದಲ್ಲಿ ಕರ್ನಾಟಕ ಮಾದರಿ ಎಂಬ ನಾಣ್ಯ ಚಲಾವಣೆಯಲ್ಲಿದೆ.. ಅದು ವಯನಾಡು ದುರಂತದಿಂದ ಹಿಡಿದು ಹತ್ತಾರು ವಿಷಯಗಳಲ್ಲಿ ಸಾಬೀತಾಗಿದೆ.. ಅಲ್ಲಿನ ಕಾಂಗ್ರೆಸ್​​ಗೆ ನೀರೆರೆದು ಪೋಷಿಸ್ತಿರುವ ಕರ್ನಾಟಕ ಕಾಂಗ್ರೆಸ್​​​ ವಿರುದ್ಧ ಸ್ಥಳೀಯ ಸಂಸ್ಥೆಗಳಲ್ಲಿ ಹಿನ್ನಡೆಗೆ ಬಿದ್ದ ಪಿಣರಾಯಿಗೆ ಬ್ರಹ್ಮಾಸ್ತ್ರ ಸಿಕ್ಕಿದೆ.. ಕೋಗಿಲು ಲೇಔಟ್​​ನ ತೆರವು ಘಟನೆ, ಹದ್ದಾಗಿ ಕುಕ್ಕುವ ಪ್ಲಾನ್​​​ ಜಾರಿ ಮಾಡಿದ್ದಾರೆ.. ಈ ವಿಚಾರ ಇಂಡಿಯಾ ಕೂಟದ ಒಳಗೇನೆ ರಾಜಕೀಯ ಸಮರಕ್ಕೆ ಕಾರಣವಾಗಿದೆ..
ಇದು ಸೂರು ಕಳೆದುಕೊಂಡು ರಸ್ತೆಯಲ್ಲಿ ನ್ಯಾಯಕ್ಕಾಗಿ ಕೂಗ್ತಿರುವ ನಿರ್ಗತಿಕರ ಬದುಕಿನ ಕಥೆ.. ಈ ಕಥೆಗೆ ಈಗ ರಾಜಕೀಯ ಸೋಂಕು ತಗುಲಿದೆ.. ಅಂದ್ಹಾಗೆ ಇದು ಯಲಹಂಕದ ಕೊಗೀಲು ಲೇಔಟ್​ನಲ್ಲಿದ್ದ 2೦೦ಕ್ಕೂ ಹೆಚ್ಚು ಮನೆಗಳನ್ನ ಜಿಬಿಎ ತೆರವು ಮಾಡಿ ಜನರನ್ನ ಸಂಕಷ್ಟಕ್ಕೆ ದೂಡಿದ ಪರಿ.. ಇದೇ ಪ್ರಕರಣ ರಾಜಕೀಯ ತಿರುವು ಪಡೆದಿದೆ.. ಘಟನೆಗೆ ಸಂಬಂಧಿಸಿದಂತೆ ಕೇರಳದ ಸಿಎಂ ಪಿಣರಾಯ್ ವಿಜಯನ್​​​, ಕರ್ನಾಟಕದಲ್ಲಿ ಉತ್ತರ ಪ್ರದೇಶದ ಬುಲ್ಡೋಜರ್ ನೀತಿ ಅಂತ ಕರೆದಿದ್ದು ಹಸ್ತಪಡೆಯನ್ನೇ ದಂಗು ಬಡಿಸಿದೆ.. ಕೇರಳ ಎಲೆಕ್ಷನ್​ ವರ್ಷದಲ್ಲಿ ಸಿಡಿದ ಧರ್ಮಾಸ್ತ್ರ ಹಸ್ತವನ್ನ ಕಂಗೆಡಿಸಿದೆ.
ಇದನ್ನೂ ಓದಿ: ಜಗತ್ತನ್ನೇ ಬೆರಗುಗೊಳಿಸಿದ ಚೀನಾದ ಹೈಪರ್​ ಲೂಪ್​ ಮ್ಯಾಗ್ಲೆವ್​ ರೈಲು !
ಕೋಗಿಲು ಲೇಔಟ್​ನಲ್ಲಿನ ಮನೆಗಳ ತೆರವಿಗೆ ವಾಗ್ದಾಳಿ ನಡೆಸಿದ್ದಾರೆ.. ಈ ಮೂಲಕ 4-5 ತಿಂಗಳಲ್ಲಿ ಆಗಮಿಸ್ತಿರುವ ಕೇರಳ ವಿಧಾನಸಭೆ ಚುನಾವಣೆಗೆ ಇದನ್ನೇ ಅಸ್ತ್ರವಾಗಿಸಿದ್ದಾರೆ.. ಇದು ಇಷ್ಟಕ್ಕೆ ಸೀಮಿತವಾಗಿಲ್ಲ.. ಪಿಣರಾಯಿ ವಿಜಯನ್​​​ ಪೋಸ್ಟ್ ಬೆನ್ನಲ್ಲೇ ಕೇರಳ ಸಂಸದರ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ..
ಇತ್ತ ಡೆಲ್ಲಿಯಲ್ಲಿ ಮಾತ್ನಾಡಿದ ಸಿಎಂ ಸಿದ್ದರಾಮಯ್ಯ, ಮೊದಲೇ ನೋಟಿಸ್​​ ನೀಡಲಾಗಿತ್ತು ಅಂತ ಸಮರ್ಥಿಸಿದ್ದಾರೆ.. ಬೇರೆ ವ್ಯವಸ್ಥೆ ಮಾಡಲು ಹೇಳಿದ್ದಾಗಿ ತಿಳಿಸಿದ್ರು.. ಇತ್ತ ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ವಾಸ್ತವ ಸ್ಥಿತಿ ತಿಳಿಯದೇ ಮಾತಾಡುವುದು ಸರಿಯಲ್ಲ, ಬುಲ್ಡೋಜರ್​​ ಪದ್ಧತಿ ಬಳಸಿಲ್ಲ ಅಂತ ಟಾಂಗ್​ ಕೊಟ್ರೆ, ಸಚಿವ ಖರ್ಗೆ ದಲಿತಾಸ್ತ್ರ ಜೊತೆಗೆ ಚುನಾವಣೆಯ ಕಾರಣ ಕೊಟ್ಟು ಕೌಂಟರ್​​​ ನೀಡಿದ್ದಾರೆ.
ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಲವರು ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು, ಅದು ಜನ ವಸತಿಗೆ ಯೋಗ್ಯವಾದ ಸ್ಥಳವಾಗಿರಲಿಲ್ಲ. ಅಲ್ಲಿನ ಕುಟುಂಬಗಳಿಗೆ ಹಲವು ಬಾರಿ ಬೇರೆಡೆಗೆ ಸ್ಥಳಾಂತರ ಆಗುವಂತೆ ನೋಟೀಸ್ ನೀಡಿದ್ದರೂ ಅವರು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಆ…
— Siddaramaiah (@siddaramaiah) December 27, 2025
ಮನೆ ತೆರವು ವಿಚಾರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​​ಗೆ ಡಿಕೆ ಶಿವಕುಮಾರ್ ಈ ತೆರವು ಕಾನೂನುಬದ್ಧವಾಗಿ ನಡೆದಿದೆ ಅಂತ ವಿವರವಾದ ವರದಿ ಸಲ್ಲಿಸಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.. ಒಟ್ಟಾರೆ, ಕೇರಳದಲ್ಲಿ ಕರ್ನಾಟಕ ಮಾದರಿ ಪ್ರಭಾವ ಬೀರುವ ಯತ್ನಗಳು ಕಳೆದ 2 ವರ್ಷದಿಂದ ನಡೆದಿದೆ.. ಎಡಪಕ್ಷಗಳ ಆಡಳಿತಕ್ಕೆ ಕೊನೆ ಹಾಡಲು ಸತತ ಯತ್ನಗಳಿಗೆ ಕೋಗಿಲು ಲೇಔಟ್​​ ತೆರವು ಹುಲ್ಲುಕಡ್ಡಿಯ ಆಸರೆ ಸಿಕ್ಕಂತಾಗಿದೆ.
ಇದನ್ನೂ ಓದಿ: ‘ಕರ್ಪೂರ’ ಮನೆಗೆ ರಕ್ಷಾ ಕವಚ.. ಅಬ್ಬಾ ಎಷ್ಟೊಂದು ಲಾಭ ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us